ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದರು
ಕ್ರಿಕೆಟ್ ಟೂರ್ನಿ ವೇಳೆ ಹಠಾತ್ ಹೃದಯಘಾತದಿಂದ ಸಾವು
ಕೂಡಲೇ ಹೊಯ್ಸಳರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲು
ಬೆಂಗಳೂರು: ಇತ್ತೀಚೆಗ ಕ್ರಿಕೆಟ್ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ. ಕರ್ನಾಟಕದ ವೇಗಿ ಕೆ ಹೊಯ್ಸಳ ಅವರು ಹಠಾತ್ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಏಜಿಸ್ ಸೌತ್ ಝೋನ್ ಟೂರ್ನಿಯ ವೇಳೆ ಈ ಘಟನೆ ನಡೆದಿದೆ.
ಹೊಯ್ಸಳ ಅವರು ಕರ್ನಾಟಕ ಏಜಿಸ್ ತಂಡದ ಪರ ಆಡುತ್ತಿದ್ದರು. ತಮಿಳುನಾಡು ವಿರುದ್ಧ ಗೆದ್ದ ಬಳಿಕ ತಂಡದ ಸಭೆ ನಡೆದಿತ್ತು. ಈ ವೇಳೆ ಕೆ ಹೊಯ್ಸಳ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ತಂಡದ ವೈದ್ಯರು ಹೊಯ್ಸಳರನ್ನ ಉಳಿಸಲು ಪ್ರಯತ್ನ ಪಟ್ಟಿದ್ದು, ನಂತರ ಅವರನ್ನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಅಲ್ಲಿನ ವೈದ್ಯರು ತಪಾಸಣೆ ನಡೆಸಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೆ ಹೊಯ್ಸಳ ಅವರು ಮಧ್ಯಮ ವೇಗಿ ಆಗಿದ್ದು, ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ನಮ್ಮ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದಾರೆ. ಕರ್ನಾಟಕ ಜೂನಿಯರ್ ತಂಡದ ಪರ ಕೂಡ ಆಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದರು
ಕ್ರಿಕೆಟ್ ಟೂರ್ನಿ ವೇಳೆ ಹಠಾತ್ ಹೃದಯಘಾತದಿಂದ ಸಾವು
ಕೂಡಲೇ ಹೊಯ್ಸಳರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲು
ಬೆಂಗಳೂರು: ಇತ್ತೀಚೆಗ ಕ್ರಿಕೆಟ್ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ. ಕರ್ನಾಟಕದ ವೇಗಿ ಕೆ ಹೊಯ್ಸಳ ಅವರು ಹಠಾತ್ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಏಜಿಸ್ ಸೌತ್ ಝೋನ್ ಟೂರ್ನಿಯ ವೇಳೆ ಈ ಘಟನೆ ನಡೆದಿದೆ.
ಹೊಯ್ಸಳ ಅವರು ಕರ್ನಾಟಕ ಏಜಿಸ್ ತಂಡದ ಪರ ಆಡುತ್ತಿದ್ದರು. ತಮಿಳುನಾಡು ವಿರುದ್ಧ ಗೆದ್ದ ಬಳಿಕ ತಂಡದ ಸಭೆ ನಡೆದಿತ್ತು. ಈ ವೇಳೆ ಕೆ ಹೊಯ್ಸಳ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ತಂಡದ ವೈದ್ಯರು ಹೊಯ್ಸಳರನ್ನ ಉಳಿಸಲು ಪ್ರಯತ್ನ ಪಟ್ಟಿದ್ದು, ನಂತರ ಅವರನ್ನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಅಲ್ಲಿನ ವೈದ್ಯರು ತಪಾಸಣೆ ನಡೆಸಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೆ ಹೊಯ್ಸಳ ಅವರು ಮಧ್ಯಮ ವೇಗಿ ಆಗಿದ್ದು, ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ನಮ್ಮ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದಾರೆ. ಕರ್ನಾಟಕ ಜೂನಿಯರ್ ತಂಡದ ಪರ ಕೂಡ ಆಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ