ಬಿಡುಗಡೆಗೆ ರೆಡಿಯಾಗಿರುವ ಬಹು ನಿರೀಕ್ಷಿತ ಕರಟಕ ದಮನಕ
ಶಿವರಾಜ್ಕುಮಾರ್ಗೆ ಸ್ಟೆಪ್ಸ್ ಹೇಳಿ ಕೊಟ್ಟ ನಟ ಪ್ರಭುದೇವ
ಯೋಗರಾಜ್ ಭಟ್ ಲಿರಿಕ್ಸ್ಗೆ ಧ್ವನಿಗೂಡಿಸಿದ ರಾಜೇಶ್ ಕೃಷ್ಣ
ಕರಟಕ ದಮನಕ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಇಂಡಿಯಾದ ಮೈಕಲ್ ಜಾಕ್ಸನ್ ಪ್ರಭುದೇವ ಸೇರಿ ಒಟ್ಟಿಗೆ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಸಾಂಗ್ಸ್ ಫುಲ್ ಹಿಟ್ ಆಗಿದ್ದು ಇದರ ಜೊತೆಗೆ ಚಿತ್ರತಂಡ ಇನ್ನೊಂದು ರೊಮ್ಯಾಂಟಿಕ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಶಿವಣ್ಣ ಇನ್ನು ಫುಲ್ ಯಂಗ್ ಆಗಿ ಪ್ರಿಯಾ ಆನಂದ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.
ಸದ್ಯ ಕರಟಕ ದಮನಕ ಸಿನಿಮಾದ ‘ಮೀಟದೇನೆ ವೀಣೆ’ ಎನ್ನುವ ಲಿರಿಕ್ಸ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಹಾಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟಿ ಪ್ರಿಯಾ ಆನಂದ್ ಬೊಂಬಾಟ್ ಆಗಿ ಡ್ಯಾನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಇನ್ನು ಹಾಡಿಗೆ ಪ್ರಭುದೇವ್ ಅವರು ಕೋರಿಯಾಗ್ರಾಫ್ ಮಾಡಿರುವುದು ಮನಮೋಹಕವಾಗಿದೆ.
https://twitter.com/i/status/1761226402697744527
ಈ ಹಾಡಿನ ಸಾಹಿತ್ಯವನ್ನು ಯೋಗರಾಜ್ ಭಟ್ ಬರೆದಿದ್ದು, ಗಾಯಕ ರಾಜೇಶ್ ಕೃಷ್ಣ ಅವರು ಸುಮಧುರವಾಗಿ ಹಾಡಿದ್ದಾರೆ. ಇದರ ಜೊತೆಗೆ ವಿ.ಹರಿಕೃಷ್ಣ ಅವರು ಅಷ್ಟೇ ಸೊಗಸಾಗಿ ಮ್ಯೂಸಿಕ್ ನೀಡಿದ್ದರಿಂದ ಅದ್ಭುತವಾಗಿ ಹಾಡು ಹಿಂಪಾಗಿ ಮೂಡಿ ಬಂದಿದೆ. ರಾಕ್ಲೈನ್ ವೆಂಕಟೇಶ್ ಅವರು ಈ ಮೂವಿಗೆ ಬಂಡವಾಳ ಹೂಡಿದ್ದು ಚಿತ್ರವು ಪಂಚತಂತ್ರದ ಪ್ರಮುಖ ಪಾತ್ರಗಳಾದ ಕರಟಕ ದಮನಕದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಇನ್ನೇನು ಮಾರ್ಚ್ 8ಕ್ಕೆ ‘ಕರಟಕ ದಮನಕ’ ಬಿಡುಗಡೆ ಆಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಡುಗಡೆಗೆ ರೆಡಿಯಾಗಿರುವ ಬಹು ನಿರೀಕ್ಷಿತ ಕರಟಕ ದಮನಕ
ಶಿವರಾಜ್ಕುಮಾರ್ಗೆ ಸ್ಟೆಪ್ಸ್ ಹೇಳಿ ಕೊಟ್ಟ ನಟ ಪ್ರಭುದೇವ
ಯೋಗರಾಜ್ ಭಟ್ ಲಿರಿಕ್ಸ್ಗೆ ಧ್ವನಿಗೂಡಿಸಿದ ರಾಜೇಶ್ ಕೃಷ್ಣ
ಕರಟಕ ದಮನಕ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಇಂಡಿಯಾದ ಮೈಕಲ್ ಜಾಕ್ಸನ್ ಪ್ರಭುದೇವ ಸೇರಿ ಒಟ್ಟಿಗೆ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಸಾಂಗ್ಸ್ ಫುಲ್ ಹಿಟ್ ಆಗಿದ್ದು ಇದರ ಜೊತೆಗೆ ಚಿತ್ರತಂಡ ಇನ್ನೊಂದು ರೊಮ್ಯಾಂಟಿಕ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಶಿವಣ್ಣ ಇನ್ನು ಫುಲ್ ಯಂಗ್ ಆಗಿ ಪ್ರಿಯಾ ಆನಂದ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.
ಸದ್ಯ ಕರಟಕ ದಮನಕ ಸಿನಿಮಾದ ‘ಮೀಟದೇನೆ ವೀಣೆ’ ಎನ್ನುವ ಲಿರಿಕ್ಸ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಹಾಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟಿ ಪ್ರಿಯಾ ಆನಂದ್ ಬೊಂಬಾಟ್ ಆಗಿ ಡ್ಯಾನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಇನ್ನು ಹಾಡಿಗೆ ಪ್ರಭುದೇವ್ ಅವರು ಕೋರಿಯಾಗ್ರಾಫ್ ಮಾಡಿರುವುದು ಮನಮೋಹಕವಾಗಿದೆ.
https://twitter.com/i/status/1761226402697744527
ಈ ಹಾಡಿನ ಸಾಹಿತ್ಯವನ್ನು ಯೋಗರಾಜ್ ಭಟ್ ಬರೆದಿದ್ದು, ಗಾಯಕ ರಾಜೇಶ್ ಕೃಷ್ಣ ಅವರು ಸುಮಧುರವಾಗಿ ಹಾಡಿದ್ದಾರೆ. ಇದರ ಜೊತೆಗೆ ವಿ.ಹರಿಕೃಷ್ಣ ಅವರು ಅಷ್ಟೇ ಸೊಗಸಾಗಿ ಮ್ಯೂಸಿಕ್ ನೀಡಿದ್ದರಿಂದ ಅದ್ಭುತವಾಗಿ ಹಾಡು ಹಿಂಪಾಗಿ ಮೂಡಿ ಬಂದಿದೆ. ರಾಕ್ಲೈನ್ ವೆಂಕಟೇಶ್ ಅವರು ಈ ಮೂವಿಗೆ ಬಂಡವಾಳ ಹೂಡಿದ್ದು ಚಿತ್ರವು ಪಂಚತಂತ್ರದ ಪ್ರಮುಖ ಪಾತ್ರಗಳಾದ ಕರಟಕ ದಮನಕದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಇನ್ನೇನು ಮಾರ್ಚ್ 8ಕ್ಕೆ ‘ಕರಟಕ ದಮನಕ’ ಬಿಡುಗಡೆ ಆಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ