ಟೆಸ್ಟ್ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಬಂಪರ್, ವಿಶೇಷ ಗೌರವ
ಸೆಮಿಫೈನಲ್ ಪಂದ್ಯವನ್ನಾಡಲು ಶ್ರೇಯಸ್ ಅಯ್ಯರ್ ರೆಡಿ
ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ ಕರ್ನಾಟಕ ತಂಡ
ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್
ನೋಯ್ಡಾದಲ್ಲಿ ನಡೆಯುತ್ತಿರುವ ಇಂಡಿಯನ್ ವೆಟ್ರನ್ ಪ್ರೀಮಿಯರ್ ಲೀಗ್ನಲ್ಲಿ ಕೆರಬಿಯನ್ ದೈತ್ಯ ಕ್ರಿಸ್ ಗೇಲ್ ಘರ್ಜಿಸಿದ್ದಾರೆ. ಸುರೇಶ್ ರೈನಾ ನೇತೃತ್ವದ ಉತ್ತರ ಪ್ರದೇಶ ತಂಡದ ಎದುರು 10 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಉತ್ತರ ಪ್ರದೇಶ 6 ವಿಕೆಟ್ ನಷ್ಟಕ್ಕೆ 269 ರನ್ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ತೆಲಂಗಾಣ ಟೈಗರ್ಸ್ ಪರ ಗೇಲ್, 46 ಎಸೆತಗಳಲ್ಲಿ 3 ಬೌಂಡರಿ, 10 ಸಿಕ್ಸರ್ ಸಹಿತ 94 ರನ್ ಸಿಡಿಸಿದ್ರು. ಈ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ತೆಲಂಗಾಣ 45 ರನ್ಗಳ ಸೋಲುಂಡಿತು. ಕ್ರಿಸ್ ಗೇಲ್ 94 ರನ್ಗಳಿಸಿ ಮಿಂಚಿದರು.
ಟೆಸ್ಟ್ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಬಂಪರ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್ ನೀಡಲು ಬಿಸಿಸಿಐ ಮುಂದಾಗಿದೆ. ಟೆಸ್ಟ್ ಪಂದ್ಯಗಳ ಮ್ಯಾಚ್ ಫೀ ಹೆಚ್ಚಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಟೆಸ್ಟ್ ಕ್ರಿಕೆಟ್ ಬಿಟ್ಟು ಕೆಲ ಆಟಗಾರರು ಐಪಿಎಲ್ನತ್ತ ಹೆಚ್ಚು ಗಮನ ಹರಿಸ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಚ್ ಫೀ ಹೆಚ್ಚಿಸೋ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ. ಜೊತೆಗೆ ವರ್ಷ ಪೂರ್ತಿ ನಡೆಯೋ ಎಲ್ಲಾ ಟೆಸ್ಟ್ ಸರಣಿಗಳನ್ನು ಆಡೋ ಆಟಗಾರರಿಗೂ ವಿಶೇಷ ಗೌರವಧನ ನೀಡಲು ಬಿಸಿಸಿಐ ಚಿಂತಿಸಿದೆ.
ಸೆಮಿಫೈನಲ್ ಪಂದ್ಯವನ್ನಾಡಲು ಶ್ರೇಯಸ್ ರೆಡಿ..!
ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮುಂಬೈ ತಂಡಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಫುಲ್ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಬೆನ್ನು ನೋವಿನ ಕಾರಣ ನೀಡಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಶ್ರೇಯಸ್ ಅಯ್ಯರ್ ಹೊರಗುಳಿದಿದ್ರು. ಇದೀಗ ಫುಲ್ ಫಿಟ್ ಆಗಿದ್ದು, ತಮಿಳು ನಾಡು ವಿರುದ್ಧ ಸೆಮಿಫೈನಲ್ ಆಡಲಿದ್ದಾರೆ ಎನ್ನಲಾಗಿದೆ.
ವೇಗದ ಶತಕ ಸಿಡಿಸಿದ ನಿಕೋಲ್ ಲೋಫ್ಟಿ
ನಮೀಬಿಯಾ ಕ್ರಿಕೆಟರ್ ತಂಡದ ಬ್ಯಾಟ್ಸ್ಮನ್ ನಿಕೋಲ್ ಲೋಫ್ಟಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ನಿಕೋಲ್ ಲೋಫ್ಟಿ ಸೆಂಚುರಿ ಸಿಡಿಸಿದ್ದಾರೆ. ಇನ್ನಿಂಗ್ಸ್ನಲ್ಲಿ 11 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದಾರೆ. ಇದಕ್ಕೂ ಮುನ್ನ ವೇಗದ ಶತಕದ ದಾಖಲೆ ನೇಪಾಳದ ಕುಶಾಲ್ ಮಲ್ಲಾ ಹೆಸರಲ್ಲಿತ್ತು. ಕುಶಾಲ್ ಮಲ್ಲಾ 34 ಎಸೆತಗಳಲ್ಲಿ ಈ ಸಾಧನೆ ಮಾಡಿದ್ರೆ, ಭಾರತದ ರೋಹಿತ್ ಶರ್ಮಾ ಹಾಗೂ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಪೂರೈಸಿದ್ರು.
ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ ಕರ್ನಾಟಕ
ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲುಂಡಿದೆ. ವಿದರ್ಭ ತಂಡದ ನೀಡಿದ್ದ 371 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ತಂಡ ಕೇವಲ 243 ರನ್ಗಳಿಗೆ ಆಲೌಟ್ ಆಯ್ತು. ನಾಯಕ ಮಯಾಂಕ್ ಅಗರ್ವಾಲ್ ಹೊರತುಪಡಿಸಿದ್ರೆ, ಉಳಿದ್ಯಾವ ಆಟಗಾರರು ಅರ್ದಶತಕದ ಗಡಿ ದಾಟಲಿಲ್ಲ. 243 ರನ್ಗಳಿಗೆ ಆಲೌಟ್ ಆಗಿ ಕರ್ನಾಟದಕ ಟೂರ್ನಿಯಿಂದ ಹೊರ ಬಿದ್ರೆ, ಗೆದ್ದ ವಿದರ್ಭ ಸೆಮಿಫೈನಲ್ಗೆ ಪ್ರವೇಶಿಸಿತು.
ದಾಖಲೆಯ ಶತಕ ಸಿಡಿಸಿದ ಮುಂಬೈಕರ್ಸ್
ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ತನುಶ್ ಕೊಟ್ಯಾನ್ ಹಾಗೂ ತುಶಾರ್ ದೇಶಪಾಂಡೆ ಇತಿಹಾಸ ನಿರ್ಮಿಸಿದ್ದಾರೆ. ಬರೋಡ ವಿರುದ್ಧದ ಪಂದ್ಯದಲ್ಲಿ 10 ಕ್ರಮಾಂಕದಲ್ಲಿ ಕಣಕ್ಕಿಳಿದ ತನುಶ್ ಕೊಟ್ಯಾನ್ ಹಾಗೂ 11ನೇ ಕ್ರಮಾಂಕದಲ್ಲಿ ಆಡಿದ ತುಷಾರ್ ದೇಶಪಾಂಡೆ ಇಬ್ಬರೂ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ 78 ವರ್ಷಗಳ ಫಸ್ಟ್ ಕ್ಲಾಸ್ ಕ್ರಿಕೆಟ್ನ ಇತಿಹಾಸದಲ್ಲಿ 10 ಹಾಗೂ 11ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ ಬ್ಯಾಟ್ಸ್ಮನ್ಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನುಷ್ 120 ರನ್ ಸಿಡಿಸಿದ್ರೆ, ತುಷಾರ್ 123 ರನ್ ಸಿಡಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೆಸ್ಟ್ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಬಂಪರ್, ವಿಶೇಷ ಗೌರವ
ಸೆಮಿಫೈನಲ್ ಪಂದ್ಯವನ್ನಾಡಲು ಶ್ರೇಯಸ್ ಅಯ್ಯರ್ ರೆಡಿ
ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ ಕರ್ನಾಟಕ ತಂಡ
ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್
ನೋಯ್ಡಾದಲ್ಲಿ ನಡೆಯುತ್ತಿರುವ ಇಂಡಿಯನ್ ವೆಟ್ರನ್ ಪ್ರೀಮಿಯರ್ ಲೀಗ್ನಲ್ಲಿ ಕೆರಬಿಯನ್ ದೈತ್ಯ ಕ್ರಿಸ್ ಗೇಲ್ ಘರ್ಜಿಸಿದ್ದಾರೆ. ಸುರೇಶ್ ರೈನಾ ನೇತೃತ್ವದ ಉತ್ತರ ಪ್ರದೇಶ ತಂಡದ ಎದುರು 10 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಉತ್ತರ ಪ್ರದೇಶ 6 ವಿಕೆಟ್ ನಷ್ಟಕ್ಕೆ 269 ರನ್ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ತೆಲಂಗಾಣ ಟೈಗರ್ಸ್ ಪರ ಗೇಲ್, 46 ಎಸೆತಗಳಲ್ಲಿ 3 ಬೌಂಡರಿ, 10 ಸಿಕ್ಸರ್ ಸಹಿತ 94 ರನ್ ಸಿಡಿಸಿದ್ರು. ಈ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ತೆಲಂಗಾಣ 45 ರನ್ಗಳ ಸೋಲುಂಡಿತು. ಕ್ರಿಸ್ ಗೇಲ್ 94 ರನ್ಗಳಿಸಿ ಮಿಂಚಿದರು.
ಟೆಸ್ಟ್ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಬಂಪರ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್ ನೀಡಲು ಬಿಸಿಸಿಐ ಮುಂದಾಗಿದೆ. ಟೆಸ್ಟ್ ಪಂದ್ಯಗಳ ಮ್ಯಾಚ್ ಫೀ ಹೆಚ್ಚಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಟೆಸ್ಟ್ ಕ್ರಿಕೆಟ್ ಬಿಟ್ಟು ಕೆಲ ಆಟಗಾರರು ಐಪಿಎಲ್ನತ್ತ ಹೆಚ್ಚು ಗಮನ ಹರಿಸ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಚ್ ಫೀ ಹೆಚ್ಚಿಸೋ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ. ಜೊತೆಗೆ ವರ್ಷ ಪೂರ್ತಿ ನಡೆಯೋ ಎಲ್ಲಾ ಟೆಸ್ಟ್ ಸರಣಿಗಳನ್ನು ಆಡೋ ಆಟಗಾರರಿಗೂ ವಿಶೇಷ ಗೌರವಧನ ನೀಡಲು ಬಿಸಿಸಿಐ ಚಿಂತಿಸಿದೆ.
ಸೆಮಿಫೈನಲ್ ಪಂದ್ಯವನ್ನಾಡಲು ಶ್ರೇಯಸ್ ರೆಡಿ..!
ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮುಂಬೈ ತಂಡಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಫುಲ್ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಬೆನ್ನು ನೋವಿನ ಕಾರಣ ನೀಡಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಶ್ರೇಯಸ್ ಅಯ್ಯರ್ ಹೊರಗುಳಿದಿದ್ರು. ಇದೀಗ ಫುಲ್ ಫಿಟ್ ಆಗಿದ್ದು, ತಮಿಳು ನಾಡು ವಿರುದ್ಧ ಸೆಮಿಫೈನಲ್ ಆಡಲಿದ್ದಾರೆ ಎನ್ನಲಾಗಿದೆ.
ವೇಗದ ಶತಕ ಸಿಡಿಸಿದ ನಿಕೋಲ್ ಲೋಫ್ಟಿ
ನಮೀಬಿಯಾ ಕ್ರಿಕೆಟರ್ ತಂಡದ ಬ್ಯಾಟ್ಸ್ಮನ್ ನಿಕೋಲ್ ಲೋಫ್ಟಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ನಿಕೋಲ್ ಲೋಫ್ಟಿ ಸೆಂಚುರಿ ಸಿಡಿಸಿದ್ದಾರೆ. ಇನ್ನಿಂಗ್ಸ್ನಲ್ಲಿ 11 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದಾರೆ. ಇದಕ್ಕೂ ಮುನ್ನ ವೇಗದ ಶತಕದ ದಾಖಲೆ ನೇಪಾಳದ ಕುಶಾಲ್ ಮಲ್ಲಾ ಹೆಸರಲ್ಲಿತ್ತು. ಕುಶಾಲ್ ಮಲ್ಲಾ 34 ಎಸೆತಗಳಲ್ಲಿ ಈ ಸಾಧನೆ ಮಾಡಿದ್ರೆ, ಭಾರತದ ರೋಹಿತ್ ಶರ್ಮಾ ಹಾಗೂ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಪೂರೈಸಿದ್ರು.
ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ ಕರ್ನಾಟಕ
ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲುಂಡಿದೆ. ವಿದರ್ಭ ತಂಡದ ನೀಡಿದ್ದ 371 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ತಂಡ ಕೇವಲ 243 ರನ್ಗಳಿಗೆ ಆಲೌಟ್ ಆಯ್ತು. ನಾಯಕ ಮಯಾಂಕ್ ಅಗರ್ವಾಲ್ ಹೊರತುಪಡಿಸಿದ್ರೆ, ಉಳಿದ್ಯಾವ ಆಟಗಾರರು ಅರ್ದಶತಕದ ಗಡಿ ದಾಟಲಿಲ್ಲ. 243 ರನ್ಗಳಿಗೆ ಆಲೌಟ್ ಆಗಿ ಕರ್ನಾಟದಕ ಟೂರ್ನಿಯಿಂದ ಹೊರ ಬಿದ್ರೆ, ಗೆದ್ದ ವಿದರ್ಭ ಸೆಮಿಫೈನಲ್ಗೆ ಪ್ರವೇಶಿಸಿತು.
ದಾಖಲೆಯ ಶತಕ ಸಿಡಿಸಿದ ಮುಂಬೈಕರ್ಸ್
ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ತನುಶ್ ಕೊಟ್ಯಾನ್ ಹಾಗೂ ತುಶಾರ್ ದೇಶಪಾಂಡೆ ಇತಿಹಾಸ ನಿರ್ಮಿಸಿದ್ದಾರೆ. ಬರೋಡ ವಿರುದ್ಧದ ಪಂದ್ಯದಲ್ಲಿ 10 ಕ್ರಮಾಂಕದಲ್ಲಿ ಕಣಕ್ಕಿಳಿದ ತನುಶ್ ಕೊಟ್ಯಾನ್ ಹಾಗೂ 11ನೇ ಕ್ರಮಾಂಕದಲ್ಲಿ ಆಡಿದ ತುಷಾರ್ ದೇಶಪಾಂಡೆ ಇಬ್ಬರೂ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ 78 ವರ್ಷಗಳ ಫಸ್ಟ್ ಕ್ಲಾಸ್ ಕ್ರಿಕೆಟ್ನ ಇತಿಹಾಸದಲ್ಲಿ 10 ಹಾಗೂ 11ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ ಬ್ಯಾಟ್ಸ್ಮನ್ಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನುಷ್ 120 ರನ್ ಸಿಡಿಸಿದ್ರೆ, ತುಷಾರ್ 123 ರನ್ ಸಿಡಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್