ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್
ಮೋದಿ ನಿಜವಾದ ಹಿಂದೂ ಆಗಿದ್ರೆ ಕೇಶ ಮುಂಡನ ಮಾಡಿಸಬೇಕಿತ್ತು
ಮೋದಿಯನ್ನ ಟೀಕಿಸೋ ಭರದಲ್ಲಿ ಗಂಭೀರ ಆರೋಪ ಮಾಡಿದ ಲಾಲು
ಬಿಹಾರದ ಮಾಜಿ ಸಿಎಂ, ಆರ್ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸೋ ಬರದಲ್ಲಿ ಗಂಭೀರ ಆರೋಪವನ್ನು ಮಾಡಿದ್ದು, ಲಾಲೂ ಪ್ರಸಾದ್ ಹೇಳಿಕೆಗೆ ಭಾರೀ ಆಕ್ರೋಷ ವ್ಯಕ್ತವಾಗಿದೆ..
ಬಿಹಾರದ ಮಾಜಿ ಸಿಎಂ, RJD ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಇವರು ಈಗ ಮತ್ತೊಂದು ವಿವಾದ ತಲೆ ಮೇಲೆ ಎಳೆದುಕೊಂಡಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸುವ ಬರದಲ್ಲಿ ತಾಯಿ ಹೀರಾಬೆನ್ ನಿಧನವನ್ನು ರಾಜಕೀಯಕ್ಕೆ ಎಳೆತಂದು ವಿವಾದ ಎಬ್ಬಿಸಿದ್ದಾರೆ.
ಪ್ರಧಾನಿ ಬಗ್ಗೆ ಲಾಲು ಪ್ರಸಾದ್ ಯಾದವ್ ವಿವಾದ
ಇಂಡಿಯಾ ಮೈತ್ರಿಕೂಟ ಪಾಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಹಿಂದೂ ಆಗಿದ್ದರೆ, ಅವರ ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಯಾಕೆ ಅಂತ ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.
ಮೋದಿ ನಿಜವಾದ ಹಿಂದೂ ಅಲ್ಲ, ತಾಯಿ ನಿಧನರಾದಾಗ ಪ್ರತಿ ಹಿಂದೂ ತಲೆ ಬೋಳಿಸುತ್ತಾರೆ. ದಾಡಿ ತೆಗೆಸುತ್ತಾರೆ. ಆದ್ರೆ ಪ್ರಧಾನಿ ಮೋದಿ ಇದನ್ನು ಯಾಕೆ ಮಾಡಿಸಿಲ್ಲಾ?.
ಲಾಲು ಪ್ರಸಾದ್ ಯಾದವ್, ಬಿಹಾರ ಮಾಜಿ ಮುಖ್ಯಮಂತ್ರಿ
ಇನ್ನು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಲಾಲು ಪ್ರಸಾದ್ ಹೇಳಿಕೆಗೆ ಆಕ್ರೋಷ ವ್ಯಕ್ತಪಡಿಸಿ ಕ್ಷಮೆ ಕೇಳಬೇಕಂದು ಆಗ್ರಹಿಸಿದ್ದಾರೆ.
Lalu Prasad Yadav cornered Narendra Modi on familyism and false Hindutva.
Lalu Prasad Yadav got kidney transplant, he was sent behind the bars, had to face ED and CBI.
This person is still fighting BJP with the same passion and said that he will not stoop against communalism. pic.twitter.com/kZejUhynUn
— Gautam Nautiyal (@Gnukpcc) March 3, 2024
ಬಿಹಾರದಲ್ಲಿ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನ
ಇನ್ನು ಪಾಟ್ನಾದಲ್ಲಿ ನಡೆದ ಜನ ವಿಶ್ವಾಸ್ ಯಾತ್ರೆಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷದ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡು ಬಿಜೆಪಿಯನ್ನು ಸೋಲಿಸುವುದಾಗಿ ಶಪಥ ಮಾಡಿದ್ದಾರೆ.
ಹಿರಿಯ ರಾಜಕೀಯ ಮುತ್ಸದಿ ಅಂತಲೇ ಕರೆಸಿಕೊಳ್ಳುವ ಲಾಲು ಪ್ರಸಾದ್ ಯಾದವ್ ಟೀಕಿಸೋ ಬರದಲ್ಲಿ ಪ್ರಧಾನಿ ಮೋದಿ ಅವರನ್ನು ಹಿಂದೂ ಅಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ. ಲೋಕಸಮರದ ಹೊತ್ತಲ್ಲಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್
ಮೋದಿ ನಿಜವಾದ ಹಿಂದೂ ಆಗಿದ್ರೆ ಕೇಶ ಮುಂಡನ ಮಾಡಿಸಬೇಕಿತ್ತು
ಮೋದಿಯನ್ನ ಟೀಕಿಸೋ ಭರದಲ್ಲಿ ಗಂಭೀರ ಆರೋಪ ಮಾಡಿದ ಲಾಲು
ಬಿಹಾರದ ಮಾಜಿ ಸಿಎಂ, ಆರ್ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸೋ ಬರದಲ್ಲಿ ಗಂಭೀರ ಆರೋಪವನ್ನು ಮಾಡಿದ್ದು, ಲಾಲೂ ಪ್ರಸಾದ್ ಹೇಳಿಕೆಗೆ ಭಾರೀ ಆಕ್ರೋಷ ವ್ಯಕ್ತವಾಗಿದೆ..
ಬಿಹಾರದ ಮಾಜಿ ಸಿಎಂ, RJD ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಇವರು ಈಗ ಮತ್ತೊಂದು ವಿವಾದ ತಲೆ ಮೇಲೆ ಎಳೆದುಕೊಂಡಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸುವ ಬರದಲ್ಲಿ ತಾಯಿ ಹೀರಾಬೆನ್ ನಿಧನವನ್ನು ರಾಜಕೀಯಕ್ಕೆ ಎಳೆತಂದು ವಿವಾದ ಎಬ್ಬಿಸಿದ್ದಾರೆ.
ಪ್ರಧಾನಿ ಬಗ್ಗೆ ಲಾಲು ಪ್ರಸಾದ್ ಯಾದವ್ ವಿವಾದ
ಇಂಡಿಯಾ ಮೈತ್ರಿಕೂಟ ಪಾಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಹಿಂದೂ ಆಗಿದ್ದರೆ, ಅವರ ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಯಾಕೆ ಅಂತ ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.
ಮೋದಿ ನಿಜವಾದ ಹಿಂದೂ ಅಲ್ಲ, ತಾಯಿ ನಿಧನರಾದಾಗ ಪ್ರತಿ ಹಿಂದೂ ತಲೆ ಬೋಳಿಸುತ್ತಾರೆ. ದಾಡಿ ತೆಗೆಸುತ್ತಾರೆ. ಆದ್ರೆ ಪ್ರಧಾನಿ ಮೋದಿ ಇದನ್ನು ಯಾಕೆ ಮಾಡಿಸಿಲ್ಲಾ?.
ಲಾಲು ಪ್ರಸಾದ್ ಯಾದವ್, ಬಿಹಾರ ಮಾಜಿ ಮುಖ್ಯಮಂತ್ರಿ
ಇನ್ನು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಲಾಲು ಪ್ರಸಾದ್ ಹೇಳಿಕೆಗೆ ಆಕ್ರೋಷ ವ್ಯಕ್ತಪಡಿಸಿ ಕ್ಷಮೆ ಕೇಳಬೇಕಂದು ಆಗ್ರಹಿಸಿದ್ದಾರೆ.
Lalu Prasad Yadav cornered Narendra Modi on familyism and false Hindutva.
Lalu Prasad Yadav got kidney transplant, he was sent behind the bars, had to face ED and CBI.
This person is still fighting BJP with the same passion and said that he will not stoop against communalism. pic.twitter.com/kZejUhynUn
— Gautam Nautiyal (@Gnukpcc) March 3, 2024
ಬಿಹಾರದಲ್ಲಿ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನ
ಇನ್ನು ಪಾಟ್ನಾದಲ್ಲಿ ನಡೆದ ಜನ ವಿಶ್ವಾಸ್ ಯಾತ್ರೆಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷದ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡು ಬಿಜೆಪಿಯನ್ನು ಸೋಲಿಸುವುದಾಗಿ ಶಪಥ ಮಾಡಿದ್ದಾರೆ.
ಹಿರಿಯ ರಾಜಕೀಯ ಮುತ್ಸದಿ ಅಂತಲೇ ಕರೆಸಿಕೊಳ್ಳುವ ಲಾಲು ಪ್ರಸಾದ್ ಯಾದವ್ ಟೀಕಿಸೋ ಬರದಲ್ಲಿ ಪ್ರಧಾನಿ ಮೋದಿ ಅವರನ್ನು ಹಿಂದೂ ಅಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ. ಲೋಕಸಮರದ ಹೊತ್ತಲ್ಲಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ