ರೈಲಿನಡಿಗೆ ಬಿದ್ದು ತಾಯಿ-ಮಗ ಆತ್ಮಹತ್ಯೆ
ವಿಚಾರ ತಿಳಿದು ಮನೆಯಲ್ಲಿ ಅಕ್ಕ ಆತ್ಮಹತ್ಯೆ
ಸಾಲಬಾಧೆಯಿಂದ ಮನನೊಂದು ಮೂವರು ಸಾವು
ಗದಗ: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ಸಾಲದ ವಿಷಯವಾಗಿ ಮನಸ್ಥಾಪವಾಗಿ ರೇಣುಕಾ ತೇಲಿ (49) ರೈಲು ಹಳಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ. ತಾಯಿಯನ್ನ ಕಾಪಾಡಲು ಹೋಗಿ ಮಂಜುನಾಥ್ (22) ಹಳಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಅಮ್ಮ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಕುಟುಂಬಸ್ಥರು ಜಗಳವಾಡಿಕೊಂಡಿದ್ದಾರೆ. ಸಾವಕ್ಕ, ರೇಣುಕಾ ಮಧ್ಯ ಟ್ರ್ಯಾಕ್ಟರ್ ಸಾಲದ ವಿಚಾರವಾಗಿ ಗಲಾಟೆ ನಡೆದಿತ್ತು. ಬ್ಯಾಂಕ್ ನಿಂದ 4 ಲಕ್ಷ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಕೂಡು ಕುಟುಂಬದಲ್ಲಿ ಟ್ರ್ಯಾಕ್ಟರ್ ಕಂತು ವಿಚಾರವಾಗಿ ಗಲಾಟೆ ನಡೆದು ಕೊನೆಗೆ ಮೂವರು ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೈಲಿನಡಿಗೆ ಬಿದ್ದು ತಾಯಿ-ಮಗ ಆತ್ಮಹತ್ಯೆ
ವಿಚಾರ ತಿಳಿದು ಮನೆಯಲ್ಲಿ ಅಕ್ಕ ಆತ್ಮಹತ್ಯೆ
ಸಾಲಬಾಧೆಯಿಂದ ಮನನೊಂದು ಮೂವರು ಸಾವು
ಗದಗ: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ಸಾಲದ ವಿಷಯವಾಗಿ ಮನಸ್ಥಾಪವಾಗಿ ರೇಣುಕಾ ತೇಲಿ (49) ರೈಲು ಹಳಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ. ತಾಯಿಯನ್ನ ಕಾಪಾಡಲು ಹೋಗಿ ಮಂಜುನಾಥ್ (22) ಹಳಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಅಮ್ಮ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಕುಟುಂಬಸ್ಥರು ಜಗಳವಾಡಿಕೊಂಡಿದ್ದಾರೆ. ಸಾವಕ್ಕ, ರೇಣುಕಾ ಮಧ್ಯ ಟ್ರ್ಯಾಕ್ಟರ್ ಸಾಲದ ವಿಚಾರವಾಗಿ ಗಲಾಟೆ ನಡೆದಿತ್ತು. ಬ್ಯಾಂಕ್ ನಿಂದ 4 ಲಕ್ಷ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಕೂಡು ಕುಟುಂಬದಲ್ಲಿ ಟ್ರ್ಯಾಕ್ಟರ್ ಕಂತು ವಿಚಾರವಾಗಿ ಗಲಾಟೆ ನಡೆದು ಕೊನೆಗೆ ಮೂವರು ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ