ವಾರ್ಷಿಕ ಒಪ್ಪಂದದಿಂದ ಕೊಕ್ ನೀಡಿದ್ದ ಬಿಸಿಸಿಐ
ಇಶಾನ್-ಶ್ರೇಯಸ್ ಭವಿಷ್ಯದ ಬಗ್ಗೆ ದ್ರಾವಿಡ್ ಉತ್ತರ
ಇಬ್ಬರಿಗೂ ಕೋಚ್ ದ್ರಾವಿಡ್ ಗುಡ್ನ್ಯೂಸ್ ನೀಡಿದ್ದಾರೆ
ಇಶಾನ್ ಕಿಶನ್ ಅಂಡ್ ಶ್ರೇಯಸ್ ಅಯ್ಯರ್.. ಕಳೆದ ಒಂದೆರಡು ತಿಂಗಳಿಂದ ಚರ್ಚೆಯಲ್ಲಿರುವ ಆಟಗಾರರು. ಇವರಿಬ್ಬರ ವಿಚಾರದಲ್ಲಿ ಬಿಸಿಸಿಐ ತೆಗೆದುಕೊಂಡ ನಡೆಯಿಂದ, ಇವರ ಕರಿಯರ್ ಅಂತ್ಯವಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಥ ಹೊತ್ತಲ್ಲೇ ಕೋಚ್ ದ್ರಾವಿಡ್ ಗುಡ್ನ್ಯೂಸ್ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಟೀಮ್ ಇಂಡಿಯಾ, ಸರಣಿಯಲ್ಲಿ ಗೆದ್ದು ಬೀಗಿದೆ. ಈ ಸರಣಿಯಲ್ಲಿ ಯುವ ಆಟಗಾರರ ಅದ್ಭುತ ಪ್ರದರ್ಶನದ ಟೆಸ್ಟ್ಗೆ ಹೊಸ ಮೆರಗು ತಂದಿದೆ. ಆದ್ರೆ, ಈ ಟೆಸ್ಟ್ ಸರಣಿಯ ನಡು ನಡುವೆಯೇ ಸದ್ದು ಮಾಡಿದ್ದು ಮಾತ್ರ.. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್.
ಟೆಸ್ಟ್ ಸರಣಿಯ ನಡುವೆ ಹೆಚ್ಚು ಸುದ್ದಿಯಾಗಿದ್ದು, ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದು, ವ್ಯಾಪಕ ಚರ್ಚೆಗೆ ಆಸ್ಪದವೂ ಮಾಡಿಕೊಟ್ಟಿತ್ತು. ಪರ-ವಿರೋಧದ ಡಿಬೇಟ್ಗೂ ಕಾರಣವಾಗಿತ್ತು. ಇದಕ್ಕೆಲ್ಲಾ ಕಾರಣ ಜಾರ್ಖಂಡ್ ವಿಕೆಟ್ ಕೀಪರ್ ಇಶಾನ್ ಕಿಶನ್ ಆ್ಯಂಡ್ ಮುಂಬೈಕರ್ ಶ್ರೇಯಸ್ ಅಯ್ಯರ್ ವಿರುದ್ಧ ಬಿಸಿಸಿಐ ತೆಗೆದುಕೊಂಡ ಕಠಿಣ ಕ್ರಮವೇ ಆಗಿತ್ತು.
ವಾರ್ಷಿಕ ಒಪ್ಪಂದದಿಂದ ಕೊಕ್ ನೀಡಿದ್ದ ಬಿಸಿಸಿಐ
ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ, ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟಿಸಿತ್ತು. ರಣಜಿ ಟ್ರೋಫಿಯಲ್ಲಿ ಭಾವವಹಿಸದ ಕಾರಣ, ವಾರ್ಷಿಕ ಒಪ್ಪಂದಿಂದ ಇಶಾನ್ ಹಾಗೂ ಶ್ರೇಯಸ್ ಅಯ್ಯರ್ನ ಕೈಬಿ ಬಿಸಿಸಿಐ ಶಾಕ್ ನೀಡಿತ್ತು. ಇದು ಬಿಸಿಸಿಐ ನಡೆ ಜೊತೆಗೆ ರಾಜಕೀಯ ಕೈವಾಡದ ಆರೋಪಕ್ಕೂ ಗುರಿ ಮಾಡಿತ್ತು. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ವಿರುದ್ಧ ಟೀಕೆ, ಟಿಪ್ಪಣೆಗಳು ಕಾರಣವಾಗಿತ್ತು. ಈ ಕುರಿತು ಇಷ್ಟು ದಿನ ಮೌನವಾಗಿದ್ದ ಕೋಚ್ ರಾಹುಲ್ ದ್ರಾವಿಡ್, ಇದೀಗ ಮೌನ ಮುರಿದಿದ್ದಾರೆ.
ಕಾಂಟ್ರಾಕ್ಟ್ ನಿರ್ಧರಿಸುವವನು ನಾನಲ್ಲ. ಗುತ್ತಿಗೆಯನ್ನ ನಿರ್ಧರಿಸುವುದು ಆಯ್ಕೆ ಮಂಡಳಿ ಹಾಗೂ ಬೋರ್ಡ್. ಒಪ್ಪಂದದ ಮಾನದಂಡಗಳು ನನಗೆ ತಿಳಿದಿಲ್ಲ. 15 ಆಟಗಾರರ ಆಯ್ಕೆ ವೇಳೆ ಮಾತ್ರ ನನ್ನ ಅಭಿಪ್ರಾಯ ತೆಗೆದುಕೊಳ್ಳಲಾಗುತ್ತೆ. ನಂತರ ನಾನು ರೋಹಿತ್ ಪ್ಲೇಯಿಂಗ್-XI ಆಯ್ಕೆ ಮಾಡುತ್ತೇವೆ. ಇದು ಬಿಟ್ಟರೆ ಆಟಗಾರರು ಒಪ್ಪಂದ ಹೊಂದಿದ್ದಾರೆಯೇ? ಇಲ್ಲವೇ ಎಂಬುವುದನ್ನ ಚರ್ಚಿಸಲ್ಲ-ರಾಹುಲ್ ದ್ರಾವಿಡ್, ಹೆಡ್ ಕೋಚ್
ರನ್ ಮಾಡಿ.. ಸೆಲೆಕ್ಟರ್ಸ್ ಮೇಲೆ ಒತ್ತಡ ಹಾಕಿ..!
ಬಿಸಿಸಿಐ ನಡೆಯಿಂದ ಇಶಾನ್ ಹಾಗೂ ಶ್ರೇಯಸ್, ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡ್ತಾರಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ಭವಿಷ್ಯದ ಪ್ರಶ್ನೆಗೂ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.
ಯಾರೂ ತಂಡದಿಂದ ಹೊರಗಿಲ್ಲ. ತಂಡಕ್ಕೆ ಹಿಂತಿರುಗಲು ಪ್ರಶ್ನೆ ಬಂದಾಗ ಫಿಟ್ ಆಗಿರಬೇಕು, ಕ್ರಿಕೆಟ್ ಆಡಬೇಕು. ರನ್ ಗಳಿಸಿ ಆಯ್ಕೆದಾರರ ಮೇಲೆ ಒತ್ತಡ ಹೇರಬೇಕು-ರಾಹುಲ್ ದ್ರಾವಿಡ್, ಹೆಡ್ ಕೋಚ್
ಕೋಚ್ ದ್ರಾವಿಡ್ ನೀಡಿರುವ ಈ ಹೇಳಿಕೆ ಇಶಾನ್ ಹಾಗೂ ಶ್ರೇಯಸ್ ಅಯ್ಯರ್ಗೆ ಶುಭಸೂಚನೆಯೇ ಆಗಿದೆ. ಅತ್ತ ರಣಜಿ ಫೈನಲ್ ಆಡ್ತಿರೋ ಶ್ರೇಯಸ್, ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಇದು ಸಹಜವಾಗೇ ಅಯ್ಯರ್ ಪಾಲಿಗೆ ಮುಳ್ಳಾಗಿದೆ. ಒಟ್ನಲ್ಲಿ.! ಭವಿಷ್ಯದ ಚಿಂತನೆಯಲ್ಲಿರುವ ಶ್ರೇಯಸ್ ಆ್ಯಂಡ್ ಕಿಶನ್ಗೆ ದ್ರಾವಿಡ್ ಶುಭಸುದ್ದಿಯನ್ನೇ ನೀಡಿದ್ದು, ಆಟದ ಮೂಲಕ ಉತ್ತರ ನೀಡಬೇಕಾದ ಜವಾಬ್ದಾರಿ ಇಬ್ಬರ ಮುಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ವಾರ್ಷಿಕ ಒಪ್ಪಂದದಿಂದ ಕೊಕ್ ನೀಡಿದ್ದ ಬಿಸಿಸಿಐ
ಇಶಾನ್-ಶ್ರೇಯಸ್ ಭವಿಷ್ಯದ ಬಗ್ಗೆ ದ್ರಾವಿಡ್ ಉತ್ತರ
ಇಬ್ಬರಿಗೂ ಕೋಚ್ ದ್ರಾವಿಡ್ ಗುಡ್ನ್ಯೂಸ್ ನೀಡಿದ್ದಾರೆ
ಇಶಾನ್ ಕಿಶನ್ ಅಂಡ್ ಶ್ರೇಯಸ್ ಅಯ್ಯರ್.. ಕಳೆದ ಒಂದೆರಡು ತಿಂಗಳಿಂದ ಚರ್ಚೆಯಲ್ಲಿರುವ ಆಟಗಾರರು. ಇವರಿಬ್ಬರ ವಿಚಾರದಲ್ಲಿ ಬಿಸಿಸಿಐ ತೆಗೆದುಕೊಂಡ ನಡೆಯಿಂದ, ಇವರ ಕರಿಯರ್ ಅಂತ್ಯವಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಥ ಹೊತ್ತಲ್ಲೇ ಕೋಚ್ ದ್ರಾವಿಡ್ ಗುಡ್ನ್ಯೂಸ್ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಟೀಮ್ ಇಂಡಿಯಾ, ಸರಣಿಯಲ್ಲಿ ಗೆದ್ದು ಬೀಗಿದೆ. ಈ ಸರಣಿಯಲ್ಲಿ ಯುವ ಆಟಗಾರರ ಅದ್ಭುತ ಪ್ರದರ್ಶನದ ಟೆಸ್ಟ್ಗೆ ಹೊಸ ಮೆರಗು ತಂದಿದೆ. ಆದ್ರೆ, ಈ ಟೆಸ್ಟ್ ಸರಣಿಯ ನಡು ನಡುವೆಯೇ ಸದ್ದು ಮಾಡಿದ್ದು ಮಾತ್ರ.. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್.
ಟೆಸ್ಟ್ ಸರಣಿಯ ನಡುವೆ ಹೆಚ್ಚು ಸುದ್ದಿಯಾಗಿದ್ದು, ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದು, ವ್ಯಾಪಕ ಚರ್ಚೆಗೆ ಆಸ್ಪದವೂ ಮಾಡಿಕೊಟ್ಟಿತ್ತು. ಪರ-ವಿರೋಧದ ಡಿಬೇಟ್ಗೂ ಕಾರಣವಾಗಿತ್ತು. ಇದಕ್ಕೆಲ್ಲಾ ಕಾರಣ ಜಾರ್ಖಂಡ್ ವಿಕೆಟ್ ಕೀಪರ್ ಇಶಾನ್ ಕಿಶನ್ ಆ್ಯಂಡ್ ಮುಂಬೈಕರ್ ಶ್ರೇಯಸ್ ಅಯ್ಯರ್ ವಿರುದ್ಧ ಬಿಸಿಸಿಐ ತೆಗೆದುಕೊಂಡ ಕಠಿಣ ಕ್ರಮವೇ ಆಗಿತ್ತು.
ವಾರ್ಷಿಕ ಒಪ್ಪಂದದಿಂದ ಕೊಕ್ ನೀಡಿದ್ದ ಬಿಸಿಸಿಐ
ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ, ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟಿಸಿತ್ತು. ರಣಜಿ ಟ್ರೋಫಿಯಲ್ಲಿ ಭಾವವಹಿಸದ ಕಾರಣ, ವಾರ್ಷಿಕ ಒಪ್ಪಂದಿಂದ ಇಶಾನ್ ಹಾಗೂ ಶ್ರೇಯಸ್ ಅಯ್ಯರ್ನ ಕೈಬಿ ಬಿಸಿಸಿಐ ಶಾಕ್ ನೀಡಿತ್ತು. ಇದು ಬಿಸಿಸಿಐ ನಡೆ ಜೊತೆಗೆ ರಾಜಕೀಯ ಕೈವಾಡದ ಆರೋಪಕ್ಕೂ ಗುರಿ ಮಾಡಿತ್ತು. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ವಿರುದ್ಧ ಟೀಕೆ, ಟಿಪ್ಪಣೆಗಳು ಕಾರಣವಾಗಿತ್ತು. ಈ ಕುರಿತು ಇಷ್ಟು ದಿನ ಮೌನವಾಗಿದ್ದ ಕೋಚ್ ರಾಹುಲ್ ದ್ರಾವಿಡ್, ಇದೀಗ ಮೌನ ಮುರಿದಿದ್ದಾರೆ.
ಕಾಂಟ್ರಾಕ್ಟ್ ನಿರ್ಧರಿಸುವವನು ನಾನಲ್ಲ. ಗುತ್ತಿಗೆಯನ್ನ ನಿರ್ಧರಿಸುವುದು ಆಯ್ಕೆ ಮಂಡಳಿ ಹಾಗೂ ಬೋರ್ಡ್. ಒಪ್ಪಂದದ ಮಾನದಂಡಗಳು ನನಗೆ ತಿಳಿದಿಲ್ಲ. 15 ಆಟಗಾರರ ಆಯ್ಕೆ ವೇಳೆ ಮಾತ್ರ ನನ್ನ ಅಭಿಪ್ರಾಯ ತೆಗೆದುಕೊಳ್ಳಲಾಗುತ್ತೆ. ನಂತರ ನಾನು ರೋಹಿತ್ ಪ್ಲೇಯಿಂಗ್-XI ಆಯ್ಕೆ ಮಾಡುತ್ತೇವೆ. ಇದು ಬಿಟ್ಟರೆ ಆಟಗಾರರು ಒಪ್ಪಂದ ಹೊಂದಿದ್ದಾರೆಯೇ? ಇಲ್ಲವೇ ಎಂಬುವುದನ್ನ ಚರ್ಚಿಸಲ್ಲ-ರಾಹುಲ್ ದ್ರಾವಿಡ್, ಹೆಡ್ ಕೋಚ್
ರನ್ ಮಾಡಿ.. ಸೆಲೆಕ್ಟರ್ಸ್ ಮೇಲೆ ಒತ್ತಡ ಹಾಕಿ..!
ಬಿಸಿಸಿಐ ನಡೆಯಿಂದ ಇಶಾನ್ ಹಾಗೂ ಶ್ರೇಯಸ್, ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡ್ತಾರಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ಭವಿಷ್ಯದ ಪ್ರಶ್ನೆಗೂ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.
ಯಾರೂ ತಂಡದಿಂದ ಹೊರಗಿಲ್ಲ. ತಂಡಕ್ಕೆ ಹಿಂತಿರುಗಲು ಪ್ರಶ್ನೆ ಬಂದಾಗ ಫಿಟ್ ಆಗಿರಬೇಕು, ಕ್ರಿಕೆಟ್ ಆಡಬೇಕು. ರನ್ ಗಳಿಸಿ ಆಯ್ಕೆದಾರರ ಮೇಲೆ ಒತ್ತಡ ಹೇರಬೇಕು-ರಾಹುಲ್ ದ್ರಾವಿಡ್, ಹೆಡ್ ಕೋಚ್
ಕೋಚ್ ದ್ರಾವಿಡ್ ನೀಡಿರುವ ಈ ಹೇಳಿಕೆ ಇಶಾನ್ ಹಾಗೂ ಶ್ರೇಯಸ್ ಅಯ್ಯರ್ಗೆ ಶುಭಸೂಚನೆಯೇ ಆಗಿದೆ. ಅತ್ತ ರಣಜಿ ಫೈನಲ್ ಆಡ್ತಿರೋ ಶ್ರೇಯಸ್, ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಇದು ಸಹಜವಾಗೇ ಅಯ್ಯರ್ ಪಾಲಿಗೆ ಮುಳ್ಳಾಗಿದೆ. ಒಟ್ನಲ್ಲಿ.! ಭವಿಷ್ಯದ ಚಿಂತನೆಯಲ್ಲಿರುವ ಶ್ರೇಯಸ್ ಆ್ಯಂಡ್ ಕಿಶನ್ಗೆ ದ್ರಾವಿಡ್ ಶುಭಸುದ್ದಿಯನ್ನೇ ನೀಡಿದ್ದು, ಆಟದ ಮೂಲಕ ಉತ್ತರ ನೀಡಬೇಕಾದ ಜವಾಬ್ದಾರಿ ಇಬ್ಬರ ಮುಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್