ಇನ್ಸ್ಟಾದಲ್ಲಿ ಟ್ರೆಂಡ್ ಆಗುತ್ತಿದೆ ‘ಮರ್ಯಾದೆ ಪ್ರಶ್ನೆ’
ಹೀಗೆ ತಲೆಕೆಟ್ಟು ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟವರ್ಯಾರು?
‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ ಅಂತಾಳೆ ಈ ನಟಿ
ಅಯ್ಯೋ, ಮರ್ಯಾದೆ ಪ್ರಶ್ನೆ ಗುರು!. ಹೀಗಂತ ಸ್ಯಾಂಡಲ್ವುಡ್ ತಾರೆಗಳು ಒಬ್ಬರೊಬ್ಬರಂತೆ ಸಾಮಾಜಿಕ ಜಾಲತಾಣದ ಮೂಲಕ ಹೇಳುತ್ತಿದ್ದಾರೆ. ಅಷ್ಟಕ್ಕೂ ಅವರ ಮರ್ಯಾದೆ ಪ್ರಶ್ನೆ ಏನು? ಮರ್ಯಾದೆ ಪ್ರಶ್ನೆ ಕಳೆದುಕೊಳ್ಳದಂತೆ ಅಂಥದ್ದೇನು ಮಾಡೋಕೆ ಹೊರಟಿದ್ದಾರೆ?. ಈ ವಿಚಾರ ಟ್ರೆಂಡ್ ಯಾಕೆ ಆಗುತ್ತಿದೆ?. ಹೀಗೆ ತಲೆಕೆಟ್ಟು ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟವರ್ಯಾರು? ಇವೆಲ್ಲದಕ್ಕೆ ಉತ್ತರ ಇಲ್ಲಿದೆ ನೋಡಿ.
ಇನ್ಸ್ಟಾಗ್ರಾಂ ತೆರೆದರೆ ಸಾಕು ‘ಮರ್ಯಾದೆ ಪ್ರಶ್ನೆ’ ಎಂಬ ಪೋಸ್ಟ್ ಕಾಣಸಿಗುತ್ತದೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ‘ಮರ್ಯಾದೆ ಪ್ರಶ್ನೆ’ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಸಿಂಪಲ್ ಸುನಿ, ಶೈನ್ ಶೆಟ್ಟಿ, ಸಂಯುಕ್ತಾ ಹೊರನಾಡು, ನಿಶ್ವಿಕಾ ನಾಯ್ಡು, ಜಿಮ್ ಟ್ರೇನರ್ ಶ್ರೀನಿವಾಸ ಗೌಡ ತಮ್ಮ ಖಾತೆಯಲ್ಲಿ ‘ಮರ್ಯಾದೆ ಪ್ರಶ್ನೆ’ ಅಂತ ಬರೆದುಕೊಂಡಿದ್ದಾರೆ. ಇವರ ಪೋಸ್ಟ್ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’
ಮಾಜಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಶೈನ್ ಹಾಕಿರುವ ಪೋಸ್ಟ್ ನೋಡಿ ಇದು ದೀಪಿಕಾ ದಾಸ್ ಮದುವೆಗೆ ಸಂಬಂಧಪಟ್ಟಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
ಇತ್ತೀಚೆಗೆ ನಟಿ ದೀಪಿಕಾ ದಾಸ್ ತಮ್ಮ ಗೆಳಯನ ಜೊತೆಗೆ ವಿವಾಹವಾದರು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ನಟಿ ಬೆಂಗಳೂರಿನಲ್ಲಿ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದರು.
‘ಟಗರು ಪಲ್ಯ ಹಿಟ್ ಆಯ್ತು ವಿದ್ಯಾಪತಿನೂ ಹಿಟ್ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’
ನಟ ನಾಗಭೂಷನ್ ಕೂಡ ‘ಟಗರು ಪಲ್ಯ ಹಿಟ್ ಆಯ್ತು ವಿದ್ಯಾಪತಿನೂ ಹಿಟ್ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.
View this post on Instagram
‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’
ಯೋಗರಾಜ್ ಭಟ್ ನಿರ್ದೇಶನ ‘ಕರಟಕ ದಮನಕ’ ಸಿನಿಮದ ‘ಹಿತ್ತಲಕ ಕರಿಬ್ಯಾಡ ಮಾಮ’ ಹಾಡು ಭಾರೀ ಸೌಂಡ್ ಮಾಡಿತ್ತು. ನಿಶ್ವಿಕಾ ನಾಯ್ಡು ಮತ್ತು ಪ್ರಭುದೇವ ಈ ಹಾಡಿಗೆ ಕುಡಿದಿದ್ದರು. ಅನೇಕ ಮನಗೆದ್ದ ಈ ಹಾಡಿನ ಕುರಿತಾಗಿ ನಿಶ್ವಿಕಾ ‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದರು.
‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು ಮರ್ಯಾದೆ ಪ್ರಶ್ನೆ’
ನಿರ್ದೇಶಕ ಸಿಂಪಲ್ ಸುನಿ ಕೂಡ ಮರ್ಯಾದೆ ಪ್ರಶ್ನೆ ಅಂತ ಪೋಸ್ಟ್ ಹಂಚಿಕೊಂಡಿದ್ದಾರೆ. ಅವತಾರ ಪುರುಷ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 22ರಂದು ತೆರೆ ಮೇಲೆ ಬರಲು ರೆಡಿಯಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಸುನಿ ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು ಮರ್ಯಾದೆ ಪ್ರಶ್ನೆ’ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಮರ್ಯಾದೆ.. ಮರ್ಯಾದೆ.. ಮರ್ಯಾದೆ.. ಪ್ರಶ್ನೆ
ಇವಿರಿಷ್ಟೇ ಅಲ್ಲ, ಸಂಯುಕ್ತಾ ಹೊರನಾಡು ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡರೆ, ಜಿಮ್ ಟ್ರೇನರ್ ಶ್ರೀನಿವಾಸ್ ಗೌಡ ‘ಜಿಮ್ ಸೇರ್ತೀರಾ, ಕಾಸು ಕೊಡ್ತೀರ, ಆದ್ರೆ ಜಿಮ್ಗೆ ಬರೋದೆ ಇಲ್ಲ. ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣ ಅದರಲ್ಲೂ ಇನ್ಸ್ಟಾದಲ್ಲಿ ‘ಮರ್ಯಾದೆ ಪ್ರಶ್ನೆ’ ವೈರಲ್ ಆಗುತ್ತಿರೋದು ನಿಜ. ಆದರೆ ಇದು ಸಿನಿಮಾನಾ? ಎಲ್ಲರಿಗೂ ಮೂಡುತ್ತಿರೋ ಪ್ರಶ್ನೆನಾ? ಎಂದು ಕಾಡುತ್ತಿರೋದಂತು ನಿಜ. ಅದರಲ್ಲೂ ಈ ‘ಮರ್ಯಾದೆ ಪ್ರಶ್ನೆ’ ಹುಟ್ಟಿದ್ದೆಲ್ಲಿಂದ. ಇದನ್ನ ಹುಟ್ಟುಹಾಕಿದ ಪುಣ್ಯಾತ್ಮ ಯಾರು? ಎಂಬುದನ್ನು ಹುಡುಕಾಡುತ್ತಿದ್ದಾರೆ ಜನರು. ಒಂದು ವೇಳೆ ಆತ ಸಿಕ್ಕಿದ್ದಲ್ಲಿ ಆತನ ಮಾರ್ಯಾದೆಯನ್ನು ಜಾಲಾಡಿಸಿತ್ತಾರೋ? ಕೊಂಡಾಡುತ್ತಾರೋ? ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇನ್ಸ್ಟಾದಲ್ಲಿ ಟ್ರೆಂಡ್ ಆಗುತ್ತಿದೆ ‘ಮರ್ಯಾದೆ ಪ್ರಶ್ನೆ’
ಹೀಗೆ ತಲೆಕೆಟ್ಟು ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟವರ್ಯಾರು?
‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ ಅಂತಾಳೆ ಈ ನಟಿ
ಅಯ್ಯೋ, ಮರ್ಯಾದೆ ಪ್ರಶ್ನೆ ಗುರು!. ಹೀಗಂತ ಸ್ಯಾಂಡಲ್ವುಡ್ ತಾರೆಗಳು ಒಬ್ಬರೊಬ್ಬರಂತೆ ಸಾಮಾಜಿಕ ಜಾಲತಾಣದ ಮೂಲಕ ಹೇಳುತ್ತಿದ್ದಾರೆ. ಅಷ್ಟಕ್ಕೂ ಅವರ ಮರ್ಯಾದೆ ಪ್ರಶ್ನೆ ಏನು? ಮರ್ಯಾದೆ ಪ್ರಶ್ನೆ ಕಳೆದುಕೊಳ್ಳದಂತೆ ಅಂಥದ್ದೇನು ಮಾಡೋಕೆ ಹೊರಟಿದ್ದಾರೆ?. ಈ ವಿಚಾರ ಟ್ರೆಂಡ್ ಯಾಕೆ ಆಗುತ್ತಿದೆ?. ಹೀಗೆ ತಲೆಕೆಟ್ಟು ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟವರ್ಯಾರು? ಇವೆಲ್ಲದಕ್ಕೆ ಉತ್ತರ ಇಲ್ಲಿದೆ ನೋಡಿ.
ಇನ್ಸ್ಟಾಗ್ರಾಂ ತೆರೆದರೆ ಸಾಕು ‘ಮರ್ಯಾದೆ ಪ್ರಶ್ನೆ’ ಎಂಬ ಪೋಸ್ಟ್ ಕಾಣಸಿಗುತ್ತದೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ‘ಮರ್ಯಾದೆ ಪ್ರಶ್ನೆ’ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಸಿಂಪಲ್ ಸುನಿ, ಶೈನ್ ಶೆಟ್ಟಿ, ಸಂಯುಕ್ತಾ ಹೊರನಾಡು, ನಿಶ್ವಿಕಾ ನಾಯ್ಡು, ಜಿಮ್ ಟ್ರೇನರ್ ಶ್ರೀನಿವಾಸ ಗೌಡ ತಮ್ಮ ಖಾತೆಯಲ್ಲಿ ‘ಮರ್ಯಾದೆ ಪ್ರಶ್ನೆ’ ಅಂತ ಬರೆದುಕೊಂಡಿದ್ದಾರೆ. ಇವರ ಪೋಸ್ಟ್ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’
ಮಾಜಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಶೈನ್ ಹಾಕಿರುವ ಪೋಸ್ಟ್ ನೋಡಿ ಇದು ದೀಪಿಕಾ ದಾಸ್ ಮದುವೆಗೆ ಸಂಬಂಧಪಟ್ಟಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
ಇತ್ತೀಚೆಗೆ ನಟಿ ದೀಪಿಕಾ ದಾಸ್ ತಮ್ಮ ಗೆಳಯನ ಜೊತೆಗೆ ವಿವಾಹವಾದರು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ನಟಿ ಬೆಂಗಳೂರಿನಲ್ಲಿ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದರು.
‘ಟಗರು ಪಲ್ಯ ಹಿಟ್ ಆಯ್ತು ವಿದ್ಯಾಪತಿನೂ ಹಿಟ್ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’
ನಟ ನಾಗಭೂಷನ್ ಕೂಡ ‘ಟಗರು ಪಲ್ಯ ಹಿಟ್ ಆಯ್ತು ವಿದ್ಯಾಪತಿನೂ ಹಿಟ್ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.
View this post on Instagram
‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’
ಯೋಗರಾಜ್ ಭಟ್ ನಿರ್ದೇಶನ ‘ಕರಟಕ ದಮನಕ’ ಸಿನಿಮದ ‘ಹಿತ್ತಲಕ ಕರಿಬ್ಯಾಡ ಮಾಮ’ ಹಾಡು ಭಾರೀ ಸೌಂಡ್ ಮಾಡಿತ್ತು. ನಿಶ್ವಿಕಾ ನಾಯ್ಡು ಮತ್ತು ಪ್ರಭುದೇವ ಈ ಹಾಡಿಗೆ ಕುಡಿದಿದ್ದರು. ಅನೇಕ ಮನಗೆದ್ದ ಈ ಹಾಡಿನ ಕುರಿತಾಗಿ ನಿಶ್ವಿಕಾ ‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದರು.
‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು ಮರ್ಯಾದೆ ಪ್ರಶ್ನೆ’
ನಿರ್ದೇಶಕ ಸಿಂಪಲ್ ಸುನಿ ಕೂಡ ಮರ್ಯಾದೆ ಪ್ರಶ್ನೆ ಅಂತ ಪೋಸ್ಟ್ ಹಂಚಿಕೊಂಡಿದ್ದಾರೆ. ಅವತಾರ ಪುರುಷ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 22ರಂದು ತೆರೆ ಮೇಲೆ ಬರಲು ರೆಡಿಯಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಸುನಿ ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು ಮರ್ಯಾದೆ ಪ್ರಶ್ನೆ’ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಮರ್ಯಾದೆ.. ಮರ್ಯಾದೆ.. ಮರ್ಯಾದೆ.. ಪ್ರಶ್ನೆ
ಇವಿರಿಷ್ಟೇ ಅಲ್ಲ, ಸಂಯುಕ್ತಾ ಹೊರನಾಡು ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡರೆ, ಜಿಮ್ ಟ್ರೇನರ್ ಶ್ರೀನಿವಾಸ್ ಗೌಡ ‘ಜಿಮ್ ಸೇರ್ತೀರಾ, ಕಾಸು ಕೊಡ್ತೀರ, ಆದ್ರೆ ಜಿಮ್ಗೆ ಬರೋದೆ ಇಲ್ಲ. ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣ ಅದರಲ್ಲೂ ಇನ್ಸ್ಟಾದಲ್ಲಿ ‘ಮರ್ಯಾದೆ ಪ್ರಶ್ನೆ’ ವೈರಲ್ ಆಗುತ್ತಿರೋದು ನಿಜ. ಆದರೆ ಇದು ಸಿನಿಮಾನಾ? ಎಲ್ಲರಿಗೂ ಮೂಡುತ್ತಿರೋ ಪ್ರಶ್ನೆನಾ? ಎಂದು ಕಾಡುತ್ತಿರೋದಂತು ನಿಜ. ಅದರಲ್ಲೂ ಈ ‘ಮರ್ಯಾದೆ ಪ್ರಶ್ನೆ’ ಹುಟ್ಟಿದ್ದೆಲ್ಲಿಂದ. ಇದನ್ನ ಹುಟ್ಟುಹಾಕಿದ ಪುಣ್ಯಾತ್ಮ ಯಾರು? ಎಂಬುದನ್ನು ಹುಡುಕಾಡುತ್ತಿದ್ದಾರೆ ಜನರು. ಒಂದು ವೇಳೆ ಆತ ಸಿಕ್ಕಿದ್ದಲ್ಲಿ ಆತನ ಮಾರ್ಯಾದೆಯನ್ನು ಜಾಲಾಡಿಸಿತ್ತಾರೋ? ಕೊಂಡಾಡುತ್ತಾರೋ? ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ