ದೇಶದಲ್ಲಿ ಭಾರೀ ಸಂಚಲ ಮೂಡಿಸಿದೆ ಜೋಡಿ ಕೊಲೆ ಕೇಸ್
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿ ಎನ್ಕೌಂಟರ್
ಹಿಂದೂಪರ ಸಂಘಟನೆಗಳಿಂದ ಕೃತ್ಯ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ
ಉತ್ತರ ಪ್ರದೇಶ: ಕ್ಷೌರಿಕನೋರ್ವ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಕೊಂದ ಘಟನೆ ಬುಡೌನ್ನಲ್ಲಿ ನಡೆದಿದೆ. ಮಕ್ಕಳನ್ನು ಕೊಂದು ಪರಾರಿಯಾಗಲು ಯತ್ನಿಸುತ್ತಿದ್ದ ಕ್ಷೌರಿಕ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ.
ಸಾಲ ಕೇಳಿದ್ದ ಕ್ಷೌರಿಕ
ಮಂಗಳವಾರ ಸಂಜೆ ನಡೆದ ಘಟನೆ ಇದಾಗಿದೆ. ಸಾಜಿದ್ ಎಂಬ ಕ್ಷೌರಿಕ ತನ್ನ ಅಂಗಡಿ ಎದುರು ವಾಸಿಸುತ್ತಿದ್ದ ಮನೆಗೆ ಹೋಗಿದ್ದಾನೆ. ಆ ಮನೆಯಲ್ಲಿ ವಿನೋದ್ ಎಂಬಾತನ ಪರಿಚಯವಿದ್ದ ಕಾರಣ ಆತನ ಬಳಿ 5 ಸಾವಿರ ರೂಪಾಯಿ ಸಾಲ ಕೇಳಿದ್ದನು. ಆದರೆ ಮನೆಯಲ್ಲಿ ವಿನೋದ್ ಇಲ್ಲದ ಕಾರಣ ಆತನ ಪತ್ನಿ ಮತ್ತು ಮೂವರು ಮಕ್ಕಳು ಇದ್ದರು. ಈ ವೇಳೆ ವಿನೋದ್ ಪತ್ನಿ ಆತನನಿಗೆ ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ ಕ್ಷೌರಿಕ ನೇರವಾಗಿ ಮಹಡಿಗೆ ಹೋಗಿದ್ದಾನೆ.
ಮಹಡಿಯಲ್ಲಿದ್ದ ಮಕ್ಕಳನ್ನು ಕೊಂದ
ಮಹಡಿಗೆ ಹೋದ ಕ್ಷೌರಿಕ ಸಾಜಿದ್ ವಿನೋದ್ ಮಕ್ಕಳಾದ ಆಯುಷ್ (11), ಪಿಯೂಷ್ (7) ಮತ್ತು ಅಹಾನ್ (6) ಮೇಲೆ ಹಲ್ಲೆ ಮಾಡಿದ್ದಾನೆ. ಅದರಲ್ಲಿ ಆಯುಷ್ ಮತ್ತು ಅಹಾನ್ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಅಲ್ಲಿಂದ ಓಡಲು ಯತ್ನಿಸುವ ವೇಳೆ ಪಿಯೂಷ್ಗೂ ಗಾಯಗೊಳಿಸಿ ತಪ್ಪಿಸಿಕೊಂಡಿದ್ದಾನೆ. ಪರಿಣಾಮ ಆಯುಷ್ ಮತ್ತು ಅಹಾನ್ ಮೃತಪಟ್ಟರೆ, ಪಿಯೂಷ್ ಗಂಭೀರ ಗಾಯಗೊಂಡಿದ್ದಾನೆ.
ಎನ್ಕೌಂಟರ್
ಪೊಲೀಸರಿಗೆ ಈ ವಿಚಾರ ತಿಳಿದು ಕ್ಷೌರಿಕ ಸಾಜಿದ್ನನ್ನು ಹುಡುಕಾಡಿದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಅವರ ಮೇಲೂ ದಾಳಿ ಮಾಡಲು ಮುಂದಾಗಿದ್ದಾನೆ. ಹಲ್ಲೆ ಮಾಡಲು ಮುಂದಾದ ಸಾಜಿದ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.
ನನಗೂ ಆತನನಿಗೆ ಯಾವುದೇ ಮನಸ್ತಾಪವಿರಲಿಲ್ಲ
ಇನ್ನು ಘಟನೆ ಬಗ್ಗೆ ವಿನೋದ್ ವಿವರಿಸಿದ್ದು, ‘‘ನನಗೆ ಮತ್ತು ಆತನಿಗೆ ಯಾವುದೇ ಮನಸ್ತಾಪವಿರಲಿಲ್ಲ. ಆತ ಮನೆಗೆ ಬಂದಾಗ ನಾನು ಕೆಲಸ ನಿಮಿತ್ತ ಹೊರಗೆ ಹೋಗಿದ್ದೆ. ಆತ 5 ಸಾವಿರ ಸಾಲ ಕೇಳಿದ್ದನು. ನನ್ನ ಹೆಂಡತಿ ಆತನಿಗೆ ಹಣ ನೀಡಿದ್ದಾಳೆ. ನನ್ನ ಮಗ ಆತನ ದಾಳಿಯಿಂದ ತಪ್ಪಸಿಕೊಂಡ ನನ್ನ ಪತ್ನಿ ಬಳಿ ಓದಿ ಬಂದಿದ್ದಾನೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದೇಶದಲ್ಲಿ ಭಾರೀ ಸಂಚಲ ಮೂಡಿಸಿದೆ ಜೋಡಿ ಕೊಲೆ ಕೇಸ್
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿ ಎನ್ಕೌಂಟರ್
ಹಿಂದೂಪರ ಸಂಘಟನೆಗಳಿಂದ ಕೃತ್ಯ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ
ಉತ್ತರ ಪ್ರದೇಶ: ಕ್ಷೌರಿಕನೋರ್ವ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಕೊಂದ ಘಟನೆ ಬುಡೌನ್ನಲ್ಲಿ ನಡೆದಿದೆ. ಮಕ್ಕಳನ್ನು ಕೊಂದು ಪರಾರಿಯಾಗಲು ಯತ್ನಿಸುತ್ತಿದ್ದ ಕ್ಷೌರಿಕ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ.
ಸಾಲ ಕೇಳಿದ್ದ ಕ್ಷೌರಿಕ
ಮಂಗಳವಾರ ಸಂಜೆ ನಡೆದ ಘಟನೆ ಇದಾಗಿದೆ. ಸಾಜಿದ್ ಎಂಬ ಕ್ಷೌರಿಕ ತನ್ನ ಅಂಗಡಿ ಎದುರು ವಾಸಿಸುತ್ತಿದ್ದ ಮನೆಗೆ ಹೋಗಿದ್ದಾನೆ. ಆ ಮನೆಯಲ್ಲಿ ವಿನೋದ್ ಎಂಬಾತನ ಪರಿಚಯವಿದ್ದ ಕಾರಣ ಆತನ ಬಳಿ 5 ಸಾವಿರ ರೂಪಾಯಿ ಸಾಲ ಕೇಳಿದ್ದನು. ಆದರೆ ಮನೆಯಲ್ಲಿ ವಿನೋದ್ ಇಲ್ಲದ ಕಾರಣ ಆತನ ಪತ್ನಿ ಮತ್ತು ಮೂವರು ಮಕ್ಕಳು ಇದ್ದರು. ಈ ವೇಳೆ ವಿನೋದ್ ಪತ್ನಿ ಆತನನಿಗೆ ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ ಕ್ಷೌರಿಕ ನೇರವಾಗಿ ಮಹಡಿಗೆ ಹೋಗಿದ್ದಾನೆ.
ಮಹಡಿಯಲ್ಲಿದ್ದ ಮಕ್ಕಳನ್ನು ಕೊಂದ
ಮಹಡಿಗೆ ಹೋದ ಕ್ಷೌರಿಕ ಸಾಜಿದ್ ವಿನೋದ್ ಮಕ್ಕಳಾದ ಆಯುಷ್ (11), ಪಿಯೂಷ್ (7) ಮತ್ತು ಅಹಾನ್ (6) ಮೇಲೆ ಹಲ್ಲೆ ಮಾಡಿದ್ದಾನೆ. ಅದರಲ್ಲಿ ಆಯುಷ್ ಮತ್ತು ಅಹಾನ್ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಅಲ್ಲಿಂದ ಓಡಲು ಯತ್ನಿಸುವ ವೇಳೆ ಪಿಯೂಷ್ಗೂ ಗಾಯಗೊಳಿಸಿ ತಪ್ಪಿಸಿಕೊಂಡಿದ್ದಾನೆ. ಪರಿಣಾಮ ಆಯುಷ್ ಮತ್ತು ಅಹಾನ್ ಮೃತಪಟ್ಟರೆ, ಪಿಯೂಷ್ ಗಂಭೀರ ಗಾಯಗೊಂಡಿದ್ದಾನೆ.
ಎನ್ಕೌಂಟರ್
ಪೊಲೀಸರಿಗೆ ಈ ವಿಚಾರ ತಿಳಿದು ಕ್ಷೌರಿಕ ಸಾಜಿದ್ನನ್ನು ಹುಡುಕಾಡಿದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಅವರ ಮೇಲೂ ದಾಳಿ ಮಾಡಲು ಮುಂದಾಗಿದ್ದಾನೆ. ಹಲ್ಲೆ ಮಾಡಲು ಮುಂದಾದ ಸಾಜಿದ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.
ನನಗೂ ಆತನನಿಗೆ ಯಾವುದೇ ಮನಸ್ತಾಪವಿರಲಿಲ್ಲ
ಇನ್ನು ಘಟನೆ ಬಗ್ಗೆ ವಿನೋದ್ ವಿವರಿಸಿದ್ದು, ‘‘ನನಗೆ ಮತ್ತು ಆತನಿಗೆ ಯಾವುದೇ ಮನಸ್ತಾಪವಿರಲಿಲ್ಲ. ಆತ ಮನೆಗೆ ಬಂದಾಗ ನಾನು ಕೆಲಸ ನಿಮಿತ್ತ ಹೊರಗೆ ಹೋಗಿದ್ದೆ. ಆತ 5 ಸಾವಿರ ಸಾಲ ಕೇಳಿದ್ದನು. ನನ್ನ ಹೆಂಡತಿ ಆತನಿಗೆ ಹಣ ನೀಡಿದ್ದಾಳೆ. ನನ್ನ ಮಗ ಆತನ ದಾಳಿಯಿಂದ ತಪ್ಪಸಿಕೊಂಡ ನನ್ನ ಪತ್ನಿ ಬಳಿ ಓದಿ ಬಂದಿದ್ದಾನೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ