‘ಮದ್ಯ ನೀತಿಗೆ ಸಂಬಂಧಿಸಿ ನಾನು ಎರಡು ಬಾರಿ ಪತ್ರ ಬರೆದೆ’
‘ಸಿಸೋಡಿಯಾ, ಕೇಜ್ರಿವಾಲ್ ನನ್ನ ಮಾತನ್ನು ಕೇಳಲಿಲ್ಲ’
‘ಸರ್ಕಾರ, ಕಾನೂನು ಏನು ಮಾಡಬೇಕೋ ಅದನ್ನೇ ಮಾಡಲಿ’
ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಷ್ಟು ಸಂಕಷ್ಟುಗಳು ಎದುರಾಗುತ್ತಿದೆ. ಕೇಜ್ರಿವಾಲ್ ಬಂಧನ ತಿಳಿದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ, ನನಗೆ ಯಾವುದೇ ವಿಷಾದ ಇಲ್ಲ ಎಂದಿದ್ದಾರೆ.
ಕೇಜ್ರಿವಾಲ್ ನನ್ನ ಮಾತು ಕೇಳಿಲ್ಲ. ಕೇಜ್ರಿವಾಲ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಹೊಸ ಮಧ್ಯನೀತಿ ವಿರೋಧಿಸಿ ಎರಡು ಬಾರಿ ಪತ್ರ ಬರೆದಿದ್ದೆ. ನನ್ನ ಮಾತು ಅವರು ಕೇಳಲಿಲ್ಲ. ಈಗ ಬಂಧನಕ್ಕೆ ಒಳಗಾಗಿದ್ದಾರೆ. ಕೇಜ್ರಿವಾಲ್, ಸಿಸೋಡಿಯಾ ನನ್ನ ಜೊತೆ ಇದ್ದಾಗ ಅವರಿಗೆ ದೇಶ ಕಲ್ಯಾಣಕ್ಕೆ ಕೆಲಸ ಮಾಡಿ ಎಂದು ಹೇಳುತ್ತಿದ್ದೆ. ಆದರೆ ಅವರು ನಾನು ಹೇಳಿದ್ದನ್ನು ತಲೆಯಲ್ಲಿ ಇಟ್ಟುಕೊಳ್ಳಲಿಲ್ಲ ಎಂದಿದ್ದಾರೆ.
ಇದೀಗ ಅವರು ಅನುಭವಿಸುತ್ತಿದ್ದಾರೆ. ನಾನು ಅವರಿಗೆ ಯಾವುದೇ ಸಲಹೆ ನೀಡುವುದಿಲ್ಲ. ಕಾನೂನು ಮತ್ತ ಸರ್ಕಾರ ಏನು ಮಾಡಬೇಕೋ ಅದನ್ನೇ ಮಾಡಲಿ. ಸ್ವಯಂ ಕೃತ್ಯಗಳಿಂದಾಗಿ ಬಂಧನಕ್ಕೆ ಒಳಗಾಗಿದ್ದಾರೆ. ಕೇಜ್ರಿವಾಲ್ ವಿಚಾರದಲ್ಲಿ ನನಗೆ ತುಂಬಾ ಬೇಸರ ಇದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
‘ಮದ್ಯ ನೀತಿಗೆ ಸಂಬಂಧಿಸಿ ನಾನು ಎರಡು ಬಾರಿ ಪತ್ರ ಬರೆದೆ’
‘ಸಿಸೋಡಿಯಾ, ಕೇಜ್ರಿವಾಲ್ ನನ್ನ ಮಾತನ್ನು ಕೇಳಲಿಲ್ಲ’
‘ಸರ್ಕಾರ, ಕಾನೂನು ಏನು ಮಾಡಬೇಕೋ ಅದನ್ನೇ ಮಾಡಲಿ’
ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಷ್ಟು ಸಂಕಷ್ಟುಗಳು ಎದುರಾಗುತ್ತಿದೆ. ಕೇಜ್ರಿವಾಲ್ ಬಂಧನ ತಿಳಿದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ, ನನಗೆ ಯಾವುದೇ ವಿಷಾದ ಇಲ್ಲ ಎಂದಿದ್ದಾರೆ.
ಕೇಜ್ರಿವಾಲ್ ನನ್ನ ಮಾತು ಕೇಳಿಲ್ಲ. ಕೇಜ್ರಿವಾಲ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಹೊಸ ಮಧ್ಯನೀತಿ ವಿರೋಧಿಸಿ ಎರಡು ಬಾರಿ ಪತ್ರ ಬರೆದಿದ್ದೆ. ನನ್ನ ಮಾತು ಅವರು ಕೇಳಲಿಲ್ಲ. ಈಗ ಬಂಧನಕ್ಕೆ ಒಳಗಾಗಿದ್ದಾರೆ. ಕೇಜ್ರಿವಾಲ್, ಸಿಸೋಡಿಯಾ ನನ್ನ ಜೊತೆ ಇದ್ದಾಗ ಅವರಿಗೆ ದೇಶ ಕಲ್ಯಾಣಕ್ಕೆ ಕೆಲಸ ಮಾಡಿ ಎಂದು ಹೇಳುತ್ತಿದ್ದೆ. ಆದರೆ ಅವರು ನಾನು ಹೇಳಿದ್ದನ್ನು ತಲೆಯಲ್ಲಿ ಇಟ್ಟುಕೊಳ್ಳಲಿಲ್ಲ ಎಂದಿದ್ದಾರೆ.
ಇದೀಗ ಅವರು ಅನುಭವಿಸುತ್ತಿದ್ದಾರೆ. ನಾನು ಅವರಿಗೆ ಯಾವುದೇ ಸಲಹೆ ನೀಡುವುದಿಲ್ಲ. ಕಾನೂನು ಮತ್ತ ಸರ್ಕಾರ ಏನು ಮಾಡಬೇಕೋ ಅದನ್ನೇ ಮಾಡಲಿ. ಸ್ವಯಂ ಕೃತ್ಯಗಳಿಂದಾಗಿ ಬಂಧನಕ್ಕೆ ಒಳಗಾಗಿದ್ದಾರೆ. ಕೇಜ್ರಿವಾಲ್ ವಿಚಾರದಲ್ಲಿ ನನಗೆ ತುಂಬಾ ಬೇಸರ ಇದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ