ಗೀತಾ ಗೆಲ್ಲಿಸಿ ಆಗ 24 ಗಂಟೆ ಬಂದು ಹಾಡು ಹೇಳ್ತೇನೆ, ಡ್ಯಾನ್ಸ್ ಮಾಡುತ್ತೇನೆ
ಶಿವಮೊಗ್ಗದಲ್ಲಿ ಪತ್ನಿ ಗೆಲುವಿಗೆ ಶಿವರಾಜ್ ಕುಮಾರ್ ಶತಾಯಗತಾಯ ಪಣ
ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಿನಿಮಾ ಶೂಟಿಂಗ್ ಡೌಟ್!
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಎಲೆಕ್ಷನ್ ಜಿದ್ದಾಜಿದ್ದಿನ ಕದನವಾಗಿದೆ. ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಬಂಡಾಯ ಒಂದು ಕಡೆಯಾದ್ರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪರ ಖುದ್ದು ಹ್ಯಾಟ್ರಿಕ್ ಹೀರೋ ಶಿವಣ್ಣನೇ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ನಾಯಕರ ಅಬ್ಬರದ ಪ್ರಚಾರದಿಂದ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ತಮ್ಮ ತಂತ್ರಗಾರಿಕೆ ಹೆಣೆದಿದ್ದಾರೆ.
ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟ ಶಿವರಾಜ್ಕುಮಾರ್ ಅವರು ಕಾರ್ಯಕರ್ತರ ಬೈಕ್ನಲ್ಲಿ ಕುಳಿತು ತಮ್ಮ ಮತಬೇಟೆ ಆರಂಭಿಸಿದರು. ಶಿವಮೊಗ್ಗದ ಏರ್ಪೋರ್ಟ್ನಿಂದ ಸಂತೆಕಡೂರಿನವರೆಗೂ ಶಿವಣ್ಣ ಬೈಕ್ ಱಲಿ ನಡೆಸಿ ಅಭಿಮಾನಿಗಳ ಗಮನ ಸೆಳೆದರು.
ಇದನ್ನೂ ಓದಿ: ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚಾ ಸುದೀಪ್? ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರನ್ನ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಮತಯಾಚನೆ ಮಾಡಿದ ನಟ ಶಿವರಾಜ್ ಕುಮಾರ್, ಶಿವಮೊಗ್ಗ ಕ್ಷೇತ್ರದಲ್ಲಿ ರೆಸ್ಪಾನ್ಸ್ ಸಖತ್ ಆಗಿದೆ. ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಕೆಲಸದ ಮೇಲೆ ನಂಬಿಕೆ ಇರುವ ಹಾಗೆ ಜನರಿಗೆ ತಮ್ಮ ಕೆಲಸದ ಮೇಲೆಯೂ ನಂಬಿಕೆ ಇರಬೇಕು. ರಾಜ್ಯದಲ್ಲಿ ಮಹಿಳಾ ರಾಜಕಾರಣಿಗಳ ಸಂಖ್ಯೆ ಕಡಿಮೆ ಇದೆ. ರಾಜಕಾರಣಕ್ಕೆ ಮಹಿಳೆಯರು ಬರಬೇಕು ಎಂದು ಕರೆ ಕೊಟ್ಟರು.
ಸಂತೆಕಡೂರು ಪ್ರಚಾರ ಸಭೆಯಲ್ಲಿ ಅಭಿಮಾನಿಗಳು ಸಿನಿಮಾ ಹಾಡು ಹಾಡುವಂತೆ ಒತ್ತಾಯ ಮಾಡಿದರು. ಆಗ ಖಡಕ್ ಡೈಲಾಗ್ ಹೊಡೆದ ಶಿವರಾಜ್ ಕುಮಾರ್ ಅವರು ಹೇ ಬರ್ಕೋಳಯ್ಯ, ಶಿವಮೊಗ್ಗ ನಂದು. ಇಲ್ಲಿರುವವರು ಶಿವಮೊಗ್ಗ ಹುಲಿಗಳು. ಗೀತಾ ಗೆಲ್ಲಿಸಿ ಆಗ ನಾನು 24 ಗಂಟೆ ಬಂದು ಹಾಡು ಹೇಳ್ತೇನೆ, ಡ್ಯಾನ್ಸ್ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.
ಪತ್ನಿ ಗೀತಾ ಗೆಲುವಿಗೆ ಶಿವಣ್ಣ ಪಣ!
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಪತ್ನಿ ಗೀತಾ ಗೆಲುವಿಗೆ ಶಿವರಾಜ್ ಕುಮಾರ್ ಶತಾಯಗತಾಯ ಪಣ ತೊಟ್ಟಿದ್ದಾರೆ. ಶಿವಮೊಗ್ಗದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ನಿರ್ಧಾರ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ತೀರ್ಥಹಳ್ಳಿ ಸೊರಬದ ಪ್ರತಿ ಗ್ರಾಮಕ್ಕೂ ಶಿವಣ್ಣ ಹಾಗೂ ಗೀತಾ ಭೇಟಿ ನೀಡಲು ನಿರ್ಧರಿಸಿದ್ದಾರೆ.
ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿರುವ ನಟ ಶಿವರಾಜ್ ಕುಮಾರ್ ಅವರು ಮಾರ್ಚ್ 28 ರವರೆಗೂ ಶಿವಮೊಗ್ಗದಲ್ಲೇ ಇದ್ದು ಪತ್ನಿ ಪರ ಪ್ರಚಾರ ಮಾಡಲಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಿನಿಮಾ ಶೂಟಿಂಗ್ಗೆ ಶಿವಣ್ಣ ಕಾಲ್ ಶೀಟ್ ಕೊಡೋದು ಡೌಟ್ ಎನ್ನಲಾಗಿದೆ. ಶಿವಣ್ಣ, ಗೀತಾ ಅವರ ಅಬ್ಬರದ ಪ್ರಚಾರಕ್ಕೆ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ಸಾಥ್ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗೀತಾ ಗೆಲ್ಲಿಸಿ ಆಗ 24 ಗಂಟೆ ಬಂದು ಹಾಡು ಹೇಳ್ತೇನೆ, ಡ್ಯಾನ್ಸ್ ಮಾಡುತ್ತೇನೆ
ಶಿವಮೊಗ್ಗದಲ್ಲಿ ಪತ್ನಿ ಗೆಲುವಿಗೆ ಶಿವರಾಜ್ ಕುಮಾರ್ ಶತಾಯಗತಾಯ ಪಣ
ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಿನಿಮಾ ಶೂಟಿಂಗ್ ಡೌಟ್!
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಎಲೆಕ್ಷನ್ ಜಿದ್ದಾಜಿದ್ದಿನ ಕದನವಾಗಿದೆ. ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಬಂಡಾಯ ಒಂದು ಕಡೆಯಾದ್ರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪರ ಖುದ್ದು ಹ್ಯಾಟ್ರಿಕ್ ಹೀರೋ ಶಿವಣ್ಣನೇ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ನಾಯಕರ ಅಬ್ಬರದ ಪ್ರಚಾರದಿಂದ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ತಮ್ಮ ತಂತ್ರಗಾರಿಕೆ ಹೆಣೆದಿದ್ದಾರೆ.
ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟ ಶಿವರಾಜ್ಕುಮಾರ್ ಅವರು ಕಾರ್ಯಕರ್ತರ ಬೈಕ್ನಲ್ಲಿ ಕುಳಿತು ತಮ್ಮ ಮತಬೇಟೆ ಆರಂಭಿಸಿದರು. ಶಿವಮೊಗ್ಗದ ಏರ್ಪೋರ್ಟ್ನಿಂದ ಸಂತೆಕಡೂರಿನವರೆಗೂ ಶಿವಣ್ಣ ಬೈಕ್ ಱಲಿ ನಡೆಸಿ ಅಭಿಮಾನಿಗಳ ಗಮನ ಸೆಳೆದರು.
ಇದನ್ನೂ ಓದಿ: ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚಾ ಸುದೀಪ್? ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರನ್ನ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಮತಯಾಚನೆ ಮಾಡಿದ ನಟ ಶಿವರಾಜ್ ಕುಮಾರ್, ಶಿವಮೊಗ್ಗ ಕ್ಷೇತ್ರದಲ್ಲಿ ರೆಸ್ಪಾನ್ಸ್ ಸಖತ್ ಆಗಿದೆ. ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಕೆಲಸದ ಮೇಲೆ ನಂಬಿಕೆ ಇರುವ ಹಾಗೆ ಜನರಿಗೆ ತಮ್ಮ ಕೆಲಸದ ಮೇಲೆಯೂ ನಂಬಿಕೆ ಇರಬೇಕು. ರಾಜ್ಯದಲ್ಲಿ ಮಹಿಳಾ ರಾಜಕಾರಣಿಗಳ ಸಂಖ್ಯೆ ಕಡಿಮೆ ಇದೆ. ರಾಜಕಾರಣಕ್ಕೆ ಮಹಿಳೆಯರು ಬರಬೇಕು ಎಂದು ಕರೆ ಕೊಟ್ಟರು.
ಸಂತೆಕಡೂರು ಪ್ರಚಾರ ಸಭೆಯಲ್ಲಿ ಅಭಿಮಾನಿಗಳು ಸಿನಿಮಾ ಹಾಡು ಹಾಡುವಂತೆ ಒತ್ತಾಯ ಮಾಡಿದರು. ಆಗ ಖಡಕ್ ಡೈಲಾಗ್ ಹೊಡೆದ ಶಿವರಾಜ್ ಕುಮಾರ್ ಅವರು ಹೇ ಬರ್ಕೋಳಯ್ಯ, ಶಿವಮೊಗ್ಗ ನಂದು. ಇಲ್ಲಿರುವವರು ಶಿವಮೊಗ್ಗ ಹುಲಿಗಳು. ಗೀತಾ ಗೆಲ್ಲಿಸಿ ಆಗ ನಾನು 24 ಗಂಟೆ ಬಂದು ಹಾಡು ಹೇಳ್ತೇನೆ, ಡ್ಯಾನ್ಸ್ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.
ಪತ್ನಿ ಗೀತಾ ಗೆಲುವಿಗೆ ಶಿವಣ್ಣ ಪಣ!
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಪತ್ನಿ ಗೀತಾ ಗೆಲುವಿಗೆ ಶಿವರಾಜ್ ಕುಮಾರ್ ಶತಾಯಗತಾಯ ಪಣ ತೊಟ್ಟಿದ್ದಾರೆ. ಶಿವಮೊಗ್ಗದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ನಿರ್ಧಾರ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ತೀರ್ಥಹಳ್ಳಿ ಸೊರಬದ ಪ್ರತಿ ಗ್ರಾಮಕ್ಕೂ ಶಿವಣ್ಣ ಹಾಗೂ ಗೀತಾ ಭೇಟಿ ನೀಡಲು ನಿರ್ಧರಿಸಿದ್ದಾರೆ.
ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿರುವ ನಟ ಶಿವರಾಜ್ ಕುಮಾರ್ ಅವರು ಮಾರ್ಚ್ 28 ರವರೆಗೂ ಶಿವಮೊಗ್ಗದಲ್ಲೇ ಇದ್ದು ಪತ್ನಿ ಪರ ಪ್ರಚಾರ ಮಾಡಲಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಿನಿಮಾ ಶೂಟಿಂಗ್ಗೆ ಶಿವಣ್ಣ ಕಾಲ್ ಶೀಟ್ ಕೊಡೋದು ಡೌಟ್ ಎನ್ನಲಾಗಿದೆ. ಶಿವಣ್ಣ, ಗೀತಾ ಅವರ ಅಬ್ಬರದ ಪ್ರಚಾರಕ್ಕೆ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ಸಾಥ್ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ