ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
ವಿದ್ಯಾರ್ಥಿಗಳು ಓದು ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ
ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಿವ ಸಾಧ್ಯತೆ ಹೆಚ್ಚು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಸಾಧನೆ ಮಾಡಬೇಕೆಂದು ಬೇರೆಯವರ ಸಹಾಯದ ನಿರೀಕ್ಷೆಯಲ್ಲಿರೋದಿಂದ್ರ ಆ ನಿರೀಕ್ಷೆ ಹುಸಿಯಾಗುತ್ತೆ
- ಸಹಾಯ ಮಾಡದೆ ಇದ್ದಾಗ ತಾಳ್ಮೆ ಕೆಡುತ್ತದೆ, ಅವರ ಜೊತೆ ಕೂಗಾಟ, ಸಿಟ್ಟು ಮಾಡಿಕೊಳ್ಳುತ್ತೀರ ಇದರಿಂದ ಕೆಲಸಕ್ಕೆ ಭಂಗವಾಗುತ್ತೆ
- ಬೇರೆಯವರು ಸ್ಪಂದಿಸಿದರು ನಿಮಗೆ ಸಮಾಧಾನವಿಲ್ಲ
- ಆದರೂ ಆ ರೀತಿಯ ಬೇಸರವನ್ನು ಹೊಂದುತ್ತೀರಿ
- ಇಂದು ಮನಸ್ಸಿಗೆ ತೃಪ್ತಿಯಿರುವುದಿಲ್ಲ
- ನಿಮ್ಮನ್ನ ಸೋಲಿಸಲು ಪ್ರತಿ ಸ್ಪರ್ಧಿಗಳು ಕಾಯ್ತಾ ಇರ್ತಾರೆ ಜಾಗ್ರತೆಯಿರಲಿ
- ಸಂಪೂರ್ಣವಾಗಿ ಬೇರೆಯವರ ಆಶ್ರಯದಿಂದ ತಮ್ಮ ಕೆಲಸಗಳನ್ನ ಮಾಡಿಕೊಳ್ಳುತ್ತೇನೆ ಅನ್ನೋ ಸಂಕಲ್ಪ ಬೇಡ
- ಧ್ಯಾನಾಸಕ್ತನಾದ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಭೂ ಸಂಬಂಧಿ ವ್ಯವಹಾರಗಳಿಗೆ ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ
- ದಾಖಲಾತಿಗಳಲ್ಲಿ ವ್ಯತ್ಯಯಗಳಾಗಿ ಗ್ರಾಹಕರಿಂದ ಆಕ್ಷೇಪಣೆ ವ್ಯಕ್ತ ಪಡಿಸುತ್ತಾರೆ
- ಖರೀದಿಗೆ ಬಂದ ಗ್ರಾಹಕರು ವ್ಯವಹಾರವನ್ನು ಮಾಡದೆ ಹಿಂತಿರುಗುತ್ತಾರೆ ಜಾಗ್ರತೆ
- ನೀವು ಸರಿಯಾದ ಮಾಹಿತಿಯನ್ನು, ದಾಖಲಾತಿಗಳನ್ನಿಟ್ಟುಕೊಂಡು ಗ್ರಾಹಕರೊಂದಿಗೆ ವ್ಯವಹರಿಸಿ
- ವಿದ್ಯಾರ್ಥಿಗಳಿಗೆ ಶುಭವಿದೆ
- ಲಕ್ಷ್ಮೀ-ಸರಸ್ವತಿಯರಿಬ್ಬರನ್ನು ಆರಾಧಿಸಿ
ಮಿಥುನ
- ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ
- ಮನೆಯಿಂದ ಹೊರಗೆ ಹೋದಾಗ ನಿಮಗೆ ಬೆಲೆ, ಗೌರವ ಸಿಗುತ್ತದೆ
- ಮನೆಗೆ ಮಾರಿ, ಪರರಿಗೆ ಉಪಕಾರಿ ಎಂಬ ಮಾತನ್ನು ಕುಟುಂಬದ ಸದಸ್ಯರು ನಿಮಗೆ ಹೇಳ್ತಾರೆ
- ಮನೆಯಲ್ಲಿ ಕುಟುಂಬದ ನಿರ್ವಹಣೆ ಮಾಡಿ, ಸಮಾಜಮುಖಿ ಕೆಲಸವನ್ನು ಮಾಡಿ
- ಮನೆಯವರನ್ನ ಸಮಾಧಾನ ಮಾಡಲು ಹಲವಾರು ಪ್ರಯತ್ನ ಮಾಡುತ್ತೀರಿ
- ತಟಸ್ಥ ನೀತಿಯನ್ನು ಅನುಭವಿಸುತ್ತೀರಿ
- ಆರೋಗ್ಯದಲ್ಲಿ ಏರುಪೇರಾಗಬಹುದು
- ನಿಮ್ಮ ಕೂಗಾಟ, ಸಿಟ್ಟು ಇಲ್ಲಿ ಕೆಲಸ ಮಾಡೋದಿಲ್ಲ
- ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಕುಲದೇವತಾ ಪ್ರಾರ್ಥನೆ ಮಾಡಿ
ಕಟಕ
- ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಿವ ಸಾಧ್ಯತೆ ಹೆಚ್ಚು
- ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
- ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
- ತಂದೆ ಮಕ್ಕಳ ಮಧ್ಯೆ, ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯೆ ಬಿರುಕು ಕಾಣಬಹುದು
- ಇಂದು ನಿಮಗೆ ತಾಳ್ಮೆಯಿರಲಿ
- ವಿದ್ಯಾರ್ಥಿಗಳು, ಮಕ್ಕಳು ದೊಡ್ಡವರ ಮಾತಿಗೆ ಗೌರವ ಕೊಡಿ
- ತಾಯಿ ಶಾರದೆಯನ್ನು ಪ್ರಾರ್ಥಿಸಿ
ಸಿಂಹ
- ಪದಾರ್ಥಗಳನ್ನ ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
- ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೇಳಿ, ಒತ್ತಡ ಹೇರಬೇಡಿ
- ಹೊಸ ವಾಹನ ಖರೀದಿಯ ಯೋಗವಿದೆ
- ಯಾವುದಕ್ಕೂ ದಿಢೀರ್ ನಿರ್ಧಾರ ತೆಗೆದುಕೊಳ್ಳಬೇಡಿ
- ಐಷಾರಾಮಿ ಜೀವನಕ್ಕೆ ಅವಕಾಶವಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ
- ಯಾರಿಗೆ ಆಹಾರದ, ಸಹಾಯದ ಅಗತ್ಯವಿದೆಯೊ ಅವರಿಗೆ ಸಹಾಯವನ್ನು ಮಾಡಿ
- ನಿಮ್ಮ ಮನೆ ದೇವರ ದರ್ಶನ ಮಾಡಿ
ಕನ್ಯಾ
- ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
- ವಿದ್ಯಾರ್ಥಿಗಳು ಓದು ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ
- ಇಂದು ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗತ್ತೆ
- ಇಂದು ವಿರಾಮ ತೆಗೆದುಕೊಳ್ಳಲು ಸಮಯವಿರುವುದಿಲ್ಲ
- ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
- ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ
ತುಲಾ
- ಈ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗುತ್ತೆ
- ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
- ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
- ತಂದೆ-ತಾಯಿಯವರ ಆಶೀರ್ವಾದ ಪಡೆಯಿರಿ
- ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
- ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
- ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ
ವೃಶ್ಚಿಕ
- ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರ ಸಾಹಸ ಪಡಬೇಕಾಗುತ್ತದೆ
- ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
- ಮನೆಯನ್ನು ನವೀಕರಿಸುವ ಯೋಗವಿದೆ
- ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ
- ಇಂದು ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆವಹಿಸಿ
- ಹನುಮಾನ್ ಚಾಲೀಸ್ ಪಠಿಸಿ
ಧನುಸ್ಸು
- ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂಪರ್ಕ ದೊರೆಯಬಹುದು
- ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನ ಕೈಗೊಳ್ಳಿ
- ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡುತ್ತೆ
- ಐಟಿ ಕ್ಷೇತ್ರದವರಿಗೆ ಸಿಹಿ ಸುದ್ದಿ ವಿದೇಶದಲ್ಲಿ ಹಣ ಹೂಡಿಕೆ ಮಾಡುತ್ತೀರಿ
- ಉದ್ಯೋಗದಲ್ಲಿ ನಿಮಗೆ ಬೋನಸ್ ಸಿಗಬಹುದು
- ಗಣಪತಿಯನ್ನು ಆರಾಧನೆ ಮಾಡಿ
ಮಕರ
- ಅವಿವಾಹಿತರು ವಿವಾಹ ಮಂಗಳ ಕಾರ್ಯಕ್ಕೆ ಪ್ರಯತ್ನ ಪಡುತ್ತೀರಿ
- ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ
- ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು
- ಕಬ್ಬಿಣದ ವಸ್ತುವನ್ನು ಉಪಯೋಗಿಸಬೇಡಿ
- ಸಂಜೆಯ ವೇಳೆ ಮದುವೆಯ ವಿಚಾರದಲ್ಲಿ ಬೇಸರ ಪಡುತ್ತೀರಿ
- ಶ್ರೀನಿವಾಸ ಕಲ್ಯಾಣ ಮಾಡಿಸಿ
ಕುಂಭ
- ವಕೀಲರಿಗೆ ಇಂದು ಶುಭದಿನ
- ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
- ಹೊರಗಿನಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತದೆ
- ನಿಮ್ಮ ಕೆಲಸದಲ್ಲಿ ತೃಪ್ತಿ ಹೊಂದುತ್ತೀರಿ
- ಪುಣ್ಯಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಫಲತೆ ಕಾಣುತ್ತೀರಿ
- ಜನಬಲ-ಹಣಬಲ ಎರಡೂ ನಿಮ್ಮದಾಗುತ್ತದೆ
- ನಿಮಗೆ ಶತ್ರುಗಳು ಹೆಚ್ಚಾಗಬಹುದು
- ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಿ
- ಭವಾನಿ ಸ್ತೋತ್ರ ಪಠಿಸಿ
ಮೀನ
- ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
- ಕುಟುಂಬದವರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
- ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗಲಿದೆ
- ನಿಮ್ಮ ಪ್ರತಿಭೆಗೆ ಸದಾಕಾಲ ಬೆಲೆ ಇರುತ್ತದೆ
- ಗೌರಿ ದೇವಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ