ಪರೀಕ್ಷಾ ದೃಷ್ಟಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆ
ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಶಾಂತ ಮನಸ್ಥಿತಿಯಲ್ಲಿ ಇರಬೇಕೆಂದು ಯೋಚಿಸಿದರು ಆಗುವುದಿಲ್ಲ
- ವ್ಯಾಪಾರ ವ್ಯವಹಾರದಲ್ಲಿ ಲಾಭ
- ದಾಂಪತ್ಯ ಜೀವನದಲ್ಲಿ ಕೋಪ ಬೇಡ
- ಮನೆಯವರು ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
- ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ
- ಕಿರಿಯರು ನಿಮ್ಮನ್ನ ಭಯದಿಂದ ಗೌರವಿಸಬಹುದು
- ಧ್ಯಾನದ ಮೊರೆ ಹೋಗಿ
ವೃಷಭ
- ಆರೋಗ್ಯದ ಬಗ್ಗೆ ಗಮನಿಸಿ
- ಸುಮಾರು ವರ್ಷಗಳಿಂದ ಅನುಭವಿಸುತ್ತಿರುವ ಕಾಲು ನೋವು ತೊಂದ್ರೆ ಮಾಡಬಹುದು
- ಹೊಸ ವಾಹನ ಖರೀದಿಯ ಮಾತು ಬರುತ್ತದೆ
- ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ
- ಆತುರದ ಕೆಲಸದಿಂದ ವಸ್ತು ನಷ್ಟ
- ನಿಮ್ಮ ಕೋಪ ಮಕ್ಕಳ ಮೇಲೆ ಬೇಡ, ತೊಂದರೆಯಾಗಬಹುದು
- ಇಂದ್ರಾಕ್ಷಿ ಸ್ತೋತ್ರ ಪಠಿಸಿ
ಮಿಥುನ
- ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ
- ಮಕ್ಕಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ಹಣಕಾತ್ಯ ವಿಚಾರ ಮನೆಯಲ್ಲಿಯೇ ವಾತಾವರಣವಾಗಬಹುದು
- ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ
- ಆಧ್ಯಾತ್ಮಿಕ ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು
- ನಿಮ್ಮ ಆಲೋಚನೆ ಬೇರೆ ನಡೆಯುವುದೇ ಬೇರೆ ಅದರಿಂದ ಬೇಸರ
- ಅನುಕೂಲವಾದಾಗ ಪುಣ್ಯಕ್ಷೇತ್ರಗಳ ದರ್ಶನ ಮಾಡಿ
ಕಟಕ
- ಭಾವನಾತ್ಮಕ ವಿಷಯ ವಾತಾವರಣ ಬೇಡ
- ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
- ಬೇರೆ ದಿನಕ್ಕಿಂತ ನಿಮ್ಮ ವೃತ್ತಿಯಲ್ಲಿ ಪ್ರಗತಿ
- ನಿಮ್ಮ ಆಸಕ್ತಿ ಹೆಚ್ಚಿದಷ್ಟು ಕೆಲಸದಿಂದ ಆದಾಯವಿದೆ
- ಮನೆಯವರ ಪ್ರೀತಿ ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
- ಕೆಲಸ ಮಾಡುತ್ತೀರಿ ಆದರೆ ಧೈರ್ಯ ಕಡಿಮೆ ಇರಬಹುದು
- ಮಾರುತಿಯನ್ನು ಉಪಾಸನೆ ಮಾಡಿ
ಸಿಂಹ
- ಭಾವನಾತ್ಮಕ ವಿಷಯ ವಾತಾವರಣ ಬೇಡ
- ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
- ಬೇರೆ ದಿನಕ್ಕಿಂತ ನಿಮ್ಮ ವೃತ್ತಿಯಲ್ಲಿ ಪ್ರಗತಿ
- ನಿಮ್ಮ ಆಸಕ್ತಿ ಹೆಚ್ಚಿದಷ್ಟು ಕೆಲಸದಿಂದ ಆದಾಯವಿದೆ
- ಮನೆಯವರ ಪ್ರೀತಿ ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
- ಕೆಲಸ ಮಾಡುತ್ತೀರಿ ಆದರೆ ಧೈರ್ಯ ಕಡಿಮೆ ಇರಬಹುದು
- ಮಾರುತಿಯನ್ನು ಉಪಾಸನೆ ಮಾಡಿ
ಕನ್ಯಾ
- ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸು ಇರುವುದಿಲ್ಲ ಆದರೆ ಅನಿವಾರ್ಯ
- ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಬಹುದು
- ಪರೀಕ್ಷಾ ದೃಷ್ಟಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನೆಡೆ
- ಇಂದು ಭಾವನೆಗಳು ಕೆಲಸಕ್ಕೆ ಬರುವುದಿಲ್ಲ
- ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು
- ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನೆಡೆ ಕಾಣಬಹುದು
- ಪಾರಿಜಾತ ಸರಸ್ವತಿಯನ್ನು ಆರಾಧಿಸಿ
ತುಲಾ
- ಕುಟುಂಬ ಕಲಹ ಮಿತಿ ಮೀರಬಹುದು
- ಯಾವುದೇ ವಿಚಾರದಲ್ಲಿ ಅನುಮಾನ ಬೇಡ, ಪರಾಮರ್ಶಿಸಿ
- ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗುತ್ತೀರಿ
- ನಿಮ್ಮ ಮಾತು ಕೆಟ್ಟು ಪರಿಣಾಮ ಬೀರುತ್ತದೆ
- ನಿಮ್ಮ ಮಾತು ಕೆಟ್ಟ ಪರಿಣಾಮ ಬೀರುತ್ತದೆ
- ಏಕನಕ್ಷತ್ರ ಏಕರಾಶಿ ದಂಪತಿಗಳ ವೈಯಕ್ತಿಕ ವಿಚಾರ ಕಹಿಯಾಗಿರುತ್ತದೆ
- ಅಗತ್ಯವಾಗಿ ಜಾತಕ ಪರೀಕ್ಷಿಸಿಕೊಳ್ಳುವುದು ಉತ್ತಮ
ವೃಶ್ಚಿಕ
- ಮನೆಯ ಹೊಸ ವಸ್ತು ತಂದು ನಷ್ಟವಾಗಬಹುದು, ಅಧಿಕ ಬೆಲೆ
- ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ
- ಇಂದು ಮಾನಸಿಕ ಸಮಾಧಾನ ಇರುವುದಿಲ್ಲ
- ಏನು ಮಾಡಿದರೂ ಎಷ್ಟು ಗಳಿಸಿದರು ತೃಪ್ತಿ ಇರದ ದಿನ
- ಮನೆಗೆ ಬಂಧುಗಳ ಆಗಮನವಾಗಬಹುದು
- ಪ್ರೇಮ ವಿವಾಹದ ವಿಚಾರದಿಂದ ಮನೆಯಲ್ಲಿ ಅಲ್ಲೋಲಕಲ್ಲೋಲ, ಜಗಳ
- ಶ್ರೀಸೂಕ್ತದ 16 ಮಂತ್ರಗಳನ್ನು ಶ್ರವಣ ಅಥವಾ ಪಠನೆ ಮಾಡಿ
ಧನುಸ್ಸು
- ಅನೇಕ ಕೆಲಸಗಳಲ್ಲಿ ತುಂಬಾ ಗಮನ ಕೊಟ್ಟು ವ್ಯವಹರಿಸಬೇಕು
- ಎದುರಾಳಿಗಳ, ಶತ್ರುಗಳ ಬಲ ತಿಳಿದು ವ್ಯವಹರಿಸಿ
- ಬೇರೆಯವರ ತಪ್ಪನ್ನು ಹೇಳಬೇಡಿ
- ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನೆಡೆ
- ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
- ಮನಸ್ಸಿನ ಗೊಂದಲಗಳು ದೂರವಾದರೆ ನಿಂತ ಕೆಲಸಗಳು ಚಾಲನೆ ಪಡೆಯುತ್ತವೆ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ
ಮಕರ
- ನಿಮ್ಮ ಉದಾರ ಸ್ವಭಾವ ಬೇರೆಯವರಿಗೆ ಅನುಕೂಲ ಇರುತ್ತದೆ
- ಅನಗತ್ಯ ಸಲಹೆ, ಮಾತಿನಿಂದ ಅವಮಾನಿತರಾಗಬಹುದು
- ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ಮಾತಾಡಬೇಡಿ ಅವಮಾನವಿದೆ
- ಉನ್ನತ ಶಿಕ್ಷಣ ಪಡೆಯಬೇಕಾದವರಿಗೆ ಸಮಸ್ಯೆಗಳು, ಮಾಹಿತಿ ಕೊರತೆ
- ಕುಟುಂಬದ ಜವಾಬ್ದಾರಿಯನ್ನ ನಿಷ್ಠೆಯಿಂದ ಪೂರೈಸಬಾರದು
- ಋಣಾತ್ಮಕ ವಿಷಯಗಳಿಂದ ದುಃಖ ಉಂಟಾಗಬಹುದು
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ತಪ್ಪುಗಳೇ ನಿಮಗೆ ಶತ್ರುಗಳಾಗಬಹುದು
- ಸ್ವಂತಿಕೆಯಿಂದ ಯೋಚಿಸಿ ನಿರ್ಧಾರ ಮಾಡಿ ಆಗ ಯಶಸ್ವಿದೆ
- ಬೇರೆಯವರನ್ನು ಅನುಸರಿಸಿ ಅನುಕರಿಸಬೇಡಿ
- ನಿಮ್ಮ ಪ್ರಮಾಣಿಕತೆ, ದಕ್ಷತೆ ಗಟ್ಟಿಯಾಗಬೇಕು
- ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನೆಡೆ ಭಯ ಇರುತ್ತದೆ
- ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು
- ತಾಪಸ ಮನ್ಯುವನ್ನು ಉಪಾಸನೆ ಮಾಡಿ
ಮೀನ
- ಬೇರೆಯವರ ವಿಚಾರಕ್ಕೆ ಹೋಗಬಾರದು
- ನಿಮ್ಮ ದಿನಚರಿಯಲ್ಲಿ ಬದಲಾವಣೆ, ಬೇಸರ
- ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು
- ಯಾವುದೇ ಒತ್ತಡಗಳಿಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ
- ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಣಬಹುದು ಎಚ್ಚರಿಕೆ ಇರಲಿ
- ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ
- ದಂಪತಿಗಳಲ್ಲಿ ಜಗಳ ಬೇಡ
- ಸ್ವಯಂವರ ಪಾರ್ವತಿ ಜಪ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ