ಬಿಜೆಪಿ ಟಿಕೆಟ್ ಕೊಡದಿದ್ದಕ್ಕೆ ಪ್ರಚಾರಕ್ಕೆ ಬಾರದ ಅನಂತ್ ಕುಮಾರ್ ಹೆಗಡೆ
ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದಿಂದ ದೂರ, ದೂರ?
ಬಿಜೆಪಿಗೆ ಭಾವನಾತ್ಮಕ ಪತ್ರ ಬರೆದ ತೇಜಸ್ವಿನಿ, ಸದಸ್ಯತ್ವ ಸ್ಥಾನಕ್ಕೆ ಗುಡ್ ಬೈ
ಎಲೆಕ್ಷನ್ ಬಂದಾಗೊಮ್ಮೆ ಬಂಡಾಯ ಅನ್ನೋದು ಕಾಮನ್. ಹಾಗಂತ ಅದನ್ನ ನಿರ್ಲಕ್ಷಿಸುವ ಹಾಗೂ ಇಲ್ಲ. ಬಂಡಾಯಕ್ಕೆ ಪಕ್ಷಭೇದವಿಲ್ಲ. ಸದ್ಯ ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಇದೇ ವಾತವರಣ ಇದೆ. ಅದರಲ್ಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರೆಬೆಲ್ಗಳ ಆಟ, ಪ್ರಾಣಸಂಕಟಕ್ಕೆ ದೂಡಿದೆ.
ಕಾಲಿಟ್ಟ ಕ್ಷೇತ್ರಗಳಲ್ಲೆಲ್ಲ ಬಂಡಾಯ. ಸಿದ್ಧಾಂತಕ್ಕೆ ಬದ್ಧವಾದ ಕ್ಷೇತ್ರಗಳಲ್ಲೂ ಅಸಮಾಧಾನ. ಎಲ್ಲೆಲ್ಲೂ ಕುಟುಂಬ ರಾಜಕಾರಣ. ಕಾರ್ಯಕರ್ತರ ಅವಿರತ ಶ್ರಮವೆಲ್ಲ ಗೌಣ. ಇದು 2024ರ ಲೋಕಸಭಾ ಎಲೆಕ್ಷನ್ ಚದುರಂಗದಲ್ಲಿ ಕಾಣಿಸ್ತಿರುವ ಚಿತ್ರಣ. ಹೌದು.. ಈ ಚಿತ್ರಣವೇ ಅಸಮಾಧಾನ ಸ್ಫೋಟಿಸುವಂತೆ ಮಾಡಿದೆ.. ಉತ್ತರದ ಬೀದರ್ನಿಂದ ದಕ್ಷಿಣದ ಚಾಮರಾಜನಗರ, ಪೂರ್ವದ ಕೋಲಾರದಿಂದ ಪಶ್ಚಿಮದ ಉತ್ತರ ಕನ್ನಡದ ವರೆಗೂ ಕಾಣಿಸ್ತಿರೋದು ಬರೀ ಬಂಡಾಯದ ಬಾವುಟ.
ಚಿತ್ರದುರ್ಗದ ಕಮಲದಲ್ಲಿ ಭಿನ್ನಮತ ಸ್ಫೋಟ, ಏ.3ಕ್ಕೆ ನಾಮಿನೇಷನ್!
ಮಧ್ಯ ಕರ್ನಾಟಕದ ಚಿತ್ರದುರ್ಗದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ಕೈತಪ್ಪುತ್ತಿದ್ದಂತೆ ಶಾಸಕ ಎಂ.ಚಂದ್ರಪ್ಪ & ಪುತ್ರ ರಘುಚಂದನ್ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ನಿನ್ನೆ ಬೆಂಬಲಿಗರ ಸಭೆ ಕರೆದಿದ್ದ ಎಂ ಚಂದ್ರಪ್ಪ, ಪಕ್ಷ ಮತ್ತು ಅವರ ನಿರ್ಧಾರಕ್ಕಿಂತ ಕ್ಷೇತ್ರದ ಜನತೆ ಮುಖ್ಯ. ಏಪ್ರಿಲ್ 3ಕ್ಕೆ ನಾಮಪತ್ರ ಸಲ್ಲಿಕೆ ಫಿಕ್ಸ್ ಅಂತ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಟೆನ್ಶನ್ ತಂದೊಡ್ಡಿದ್ದಾರೆ.
ಇಕ್ಬಾಲ್ ಅನ್ಸಾರಿ ಜೊತೆಗೆ ಸಿಎಂ ರಹಸ್ಯ ಮೀಟಿಂಗ್!
ಒಂದ್ಕಡೆ ಕೋಲಾರ ಬಂಡಾಯ, ಇನ್ನೊಂದ್ಕಡೆ ಕೊಪ್ಪಳ ಕಲಹ.. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹಣ್ಣುಗಾಯಿ ನೀರು ಗಾಯಿ ಮಾಡ್ತಿದೆ. ಕೊಪ್ಪಳದಿಂದ ರಾಜಶೇಖರ್ ಹಿಟ್ನಾಳ್ಗೆ ಟಿಕೆಟ್ ನೀಡಲಾಗಿದ್ದು, ಇದು ಕುಟುಂಬ ರಾಜಕಾರಣ ಅಂತ ಕೆಲವರು ಸಿಡಿದೆದ್ದಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮೌನಕ್ಕೆ ಜಾರಿದ್ದು, ಬೆಂಬಲಿಗರನ್ನ ಪ್ರಚಾರಕ್ಕೆ ತೆರಳದಂತೆ ತಡೆ ಹಿಡಿದ್ದಾರೆ ಎನ್ನಲಾಗಿದೆ.. ಈ ಎಲ್ಲ ಕೋಪತಾಪ ಸಿಎಂ ಕಿವಿಗೂ ಬಿದ್ದಿದ್ದು, ಸಚಿವ ತಂಗಡಗಿಗೆ ಅಸಮಾಧಾನದ ಶಮನದ ಹೊಣೆ ನೀಡಲಾಗಿದೆ. ಅಲ್ಲದೆ, ಸ್ವತಃ ಸಿಎಂ ಸಹ ಅನ್ಸಾರಿ ಕರೆದು ಮಾತ್ನಾಡಿದ್ದರೂ ಸಿಟ್ಟು ಬೂದಿಮುಚ್ಚಿದ ಕೆಂಡವಾಗಿದೆ.
ಪ್ರಚಾರಕ್ಕೆ ಹೆಗಡೆ ಬರ್ತಿಲ್ಲ, ಹೆಬ್ಬಾರ್ ಎಲ್ಲೂ ಕಾಣಿಸ್ತಿಲ್ಲ!
ಇತ್ತ, ಉತ್ತರ ಕನ್ನಡದಲ್ಲಿ ಅಖಾಡ ಗರಿಗೆದರಿದೆ.. ಆದ್ರೆ ಮಾತಿನಶೂರ ಬಿಜೆಪಿ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು ಮನೆಯಿಂದ ಹೊರಗೆ ಬಾರದೆ ಭೂಗತರಾಗಿದ್ದಾರೆ. ಇತ್ತ ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕದೇ ಕೈ ಕೊಟ್ಟಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸಹ ಪಕ್ಷಕ್ಕೆ ಕೈ ಕೊಡ್ತಿರುವಂತೆ ಕಾಣಿಸ್ತಿದೆ.. ಸದ್ಯಕ್ಕೆ ತಟಸ್ಥರಾಗಿರೋ ಹೆಬ್ಬಾರ್, ಎಲೆಕ್ಷನ್ ಪೂರ್ವಭಾವಿ ಸಭೆಗೂ ಗೈರಾಗಿ ಶಾಕ್ ನೀಡಿದ್ದಾರೆ.
ಇನ್ನು, ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಡಾ.ತೇಜಸ್ವಿನಿಗೌಡ ಶಾಕ್ ನೀಡಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ಬೈ ಹೇಳಿದ್ದಾರೆ. ಒಂದು ಪುಟದ ಭಾವನಾತ್ಮಕ ಪತ್ರ ಬರೆದು, ಪಕ್ಷದಲ್ಲಿನ ಆಂತರಿಕ ವಿಚಾರ ಉಲ್ಲೇಖಿಸಿ ತೇಜಸ್ವಿನಿಗೌಡ ಕಮಲಕ್ಕೆ ಕೊನೆ ಹಾಡಿದ್ದಾರೆ. ತೇಜಸ್ವಿನಿಗೌಡ ನಡೆ ಬಗ್ಗೆ ನ್ಯೂಸ್ಫಸ್ಟ್ ಸರಿಯಾಗಿ ತಿಂಗಳ ಹಿಂದೇ ನಿಖರ ವರದಿ ಬಿತ್ತರಿಸಿತ್ತು.
ಮೂರು ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ.. ಪ್ರಚಾರಕ್ಕೆ ಬಾರದೇ, ಪಕ್ಷದ ಸಭೆಗೂ ಭಾಗವಹಿಸದೇ ಕೆಲವರು ದೂರ ಉಳಿದ್ರೆ, ಇನ್ನು ಕೆಲವರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ.. ಈ ಎಲ್ಲ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಎಲೆಕ್ಷನ್ನಲ್ಲಿ ಯಾವ ಮಟ್ಟಿಗೆ ವೋಟ್ಗೆ ಕತ್ತರಿ ಹಾಕಿಲಿದೆ ಅನ್ನೋದು ಕಾದುನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಜೆಪಿ ಟಿಕೆಟ್ ಕೊಡದಿದ್ದಕ್ಕೆ ಪ್ರಚಾರಕ್ಕೆ ಬಾರದ ಅನಂತ್ ಕುಮಾರ್ ಹೆಗಡೆ
ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದಿಂದ ದೂರ, ದೂರ?
ಬಿಜೆಪಿಗೆ ಭಾವನಾತ್ಮಕ ಪತ್ರ ಬರೆದ ತೇಜಸ್ವಿನಿ, ಸದಸ್ಯತ್ವ ಸ್ಥಾನಕ್ಕೆ ಗುಡ್ ಬೈ
ಎಲೆಕ್ಷನ್ ಬಂದಾಗೊಮ್ಮೆ ಬಂಡಾಯ ಅನ್ನೋದು ಕಾಮನ್. ಹಾಗಂತ ಅದನ್ನ ನಿರ್ಲಕ್ಷಿಸುವ ಹಾಗೂ ಇಲ್ಲ. ಬಂಡಾಯಕ್ಕೆ ಪಕ್ಷಭೇದವಿಲ್ಲ. ಸದ್ಯ ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಇದೇ ವಾತವರಣ ಇದೆ. ಅದರಲ್ಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರೆಬೆಲ್ಗಳ ಆಟ, ಪ್ರಾಣಸಂಕಟಕ್ಕೆ ದೂಡಿದೆ.
ಕಾಲಿಟ್ಟ ಕ್ಷೇತ್ರಗಳಲ್ಲೆಲ್ಲ ಬಂಡಾಯ. ಸಿದ್ಧಾಂತಕ್ಕೆ ಬದ್ಧವಾದ ಕ್ಷೇತ್ರಗಳಲ್ಲೂ ಅಸಮಾಧಾನ. ಎಲ್ಲೆಲ್ಲೂ ಕುಟುಂಬ ರಾಜಕಾರಣ. ಕಾರ್ಯಕರ್ತರ ಅವಿರತ ಶ್ರಮವೆಲ್ಲ ಗೌಣ. ಇದು 2024ರ ಲೋಕಸಭಾ ಎಲೆಕ್ಷನ್ ಚದುರಂಗದಲ್ಲಿ ಕಾಣಿಸ್ತಿರುವ ಚಿತ್ರಣ. ಹೌದು.. ಈ ಚಿತ್ರಣವೇ ಅಸಮಾಧಾನ ಸ್ಫೋಟಿಸುವಂತೆ ಮಾಡಿದೆ.. ಉತ್ತರದ ಬೀದರ್ನಿಂದ ದಕ್ಷಿಣದ ಚಾಮರಾಜನಗರ, ಪೂರ್ವದ ಕೋಲಾರದಿಂದ ಪಶ್ಚಿಮದ ಉತ್ತರ ಕನ್ನಡದ ವರೆಗೂ ಕಾಣಿಸ್ತಿರೋದು ಬರೀ ಬಂಡಾಯದ ಬಾವುಟ.
ಚಿತ್ರದುರ್ಗದ ಕಮಲದಲ್ಲಿ ಭಿನ್ನಮತ ಸ್ಫೋಟ, ಏ.3ಕ್ಕೆ ನಾಮಿನೇಷನ್!
ಮಧ್ಯ ಕರ್ನಾಟಕದ ಚಿತ್ರದುರ್ಗದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ಕೈತಪ್ಪುತ್ತಿದ್ದಂತೆ ಶಾಸಕ ಎಂ.ಚಂದ್ರಪ್ಪ & ಪುತ್ರ ರಘುಚಂದನ್ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ನಿನ್ನೆ ಬೆಂಬಲಿಗರ ಸಭೆ ಕರೆದಿದ್ದ ಎಂ ಚಂದ್ರಪ್ಪ, ಪಕ್ಷ ಮತ್ತು ಅವರ ನಿರ್ಧಾರಕ್ಕಿಂತ ಕ್ಷೇತ್ರದ ಜನತೆ ಮುಖ್ಯ. ಏಪ್ರಿಲ್ 3ಕ್ಕೆ ನಾಮಪತ್ರ ಸಲ್ಲಿಕೆ ಫಿಕ್ಸ್ ಅಂತ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಟೆನ್ಶನ್ ತಂದೊಡ್ಡಿದ್ದಾರೆ.
ಇಕ್ಬಾಲ್ ಅನ್ಸಾರಿ ಜೊತೆಗೆ ಸಿಎಂ ರಹಸ್ಯ ಮೀಟಿಂಗ್!
ಒಂದ್ಕಡೆ ಕೋಲಾರ ಬಂಡಾಯ, ಇನ್ನೊಂದ್ಕಡೆ ಕೊಪ್ಪಳ ಕಲಹ.. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹಣ್ಣುಗಾಯಿ ನೀರು ಗಾಯಿ ಮಾಡ್ತಿದೆ. ಕೊಪ್ಪಳದಿಂದ ರಾಜಶೇಖರ್ ಹಿಟ್ನಾಳ್ಗೆ ಟಿಕೆಟ್ ನೀಡಲಾಗಿದ್ದು, ಇದು ಕುಟುಂಬ ರಾಜಕಾರಣ ಅಂತ ಕೆಲವರು ಸಿಡಿದೆದ್ದಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮೌನಕ್ಕೆ ಜಾರಿದ್ದು, ಬೆಂಬಲಿಗರನ್ನ ಪ್ರಚಾರಕ್ಕೆ ತೆರಳದಂತೆ ತಡೆ ಹಿಡಿದ್ದಾರೆ ಎನ್ನಲಾಗಿದೆ.. ಈ ಎಲ್ಲ ಕೋಪತಾಪ ಸಿಎಂ ಕಿವಿಗೂ ಬಿದ್ದಿದ್ದು, ಸಚಿವ ತಂಗಡಗಿಗೆ ಅಸಮಾಧಾನದ ಶಮನದ ಹೊಣೆ ನೀಡಲಾಗಿದೆ. ಅಲ್ಲದೆ, ಸ್ವತಃ ಸಿಎಂ ಸಹ ಅನ್ಸಾರಿ ಕರೆದು ಮಾತ್ನಾಡಿದ್ದರೂ ಸಿಟ್ಟು ಬೂದಿಮುಚ್ಚಿದ ಕೆಂಡವಾಗಿದೆ.
ಪ್ರಚಾರಕ್ಕೆ ಹೆಗಡೆ ಬರ್ತಿಲ್ಲ, ಹೆಬ್ಬಾರ್ ಎಲ್ಲೂ ಕಾಣಿಸ್ತಿಲ್ಲ!
ಇತ್ತ, ಉತ್ತರ ಕನ್ನಡದಲ್ಲಿ ಅಖಾಡ ಗರಿಗೆದರಿದೆ.. ಆದ್ರೆ ಮಾತಿನಶೂರ ಬಿಜೆಪಿ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು ಮನೆಯಿಂದ ಹೊರಗೆ ಬಾರದೆ ಭೂಗತರಾಗಿದ್ದಾರೆ. ಇತ್ತ ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕದೇ ಕೈ ಕೊಟ್ಟಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸಹ ಪಕ್ಷಕ್ಕೆ ಕೈ ಕೊಡ್ತಿರುವಂತೆ ಕಾಣಿಸ್ತಿದೆ.. ಸದ್ಯಕ್ಕೆ ತಟಸ್ಥರಾಗಿರೋ ಹೆಬ್ಬಾರ್, ಎಲೆಕ್ಷನ್ ಪೂರ್ವಭಾವಿ ಸಭೆಗೂ ಗೈರಾಗಿ ಶಾಕ್ ನೀಡಿದ್ದಾರೆ.
ಇನ್ನು, ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಡಾ.ತೇಜಸ್ವಿನಿಗೌಡ ಶಾಕ್ ನೀಡಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ಬೈ ಹೇಳಿದ್ದಾರೆ. ಒಂದು ಪುಟದ ಭಾವನಾತ್ಮಕ ಪತ್ರ ಬರೆದು, ಪಕ್ಷದಲ್ಲಿನ ಆಂತರಿಕ ವಿಚಾರ ಉಲ್ಲೇಖಿಸಿ ತೇಜಸ್ವಿನಿಗೌಡ ಕಮಲಕ್ಕೆ ಕೊನೆ ಹಾಡಿದ್ದಾರೆ. ತೇಜಸ್ವಿನಿಗೌಡ ನಡೆ ಬಗ್ಗೆ ನ್ಯೂಸ್ಫಸ್ಟ್ ಸರಿಯಾಗಿ ತಿಂಗಳ ಹಿಂದೇ ನಿಖರ ವರದಿ ಬಿತ್ತರಿಸಿತ್ತು.
ಮೂರು ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ.. ಪ್ರಚಾರಕ್ಕೆ ಬಾರದೇ, ಪಕ್ಷದ ಸಭೆಗೂ ಭಾಗವಹಿಸದೇ ಕೆಲವರು ದೂರ ಉಳಿದ್ರೆ, ಇನ್ನು ಕೆಲವರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ.. ಈ ಎಲ್ಲ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಎಲೆಕ್ಷನ್ನಲ್ಲಿ ಯಾವ ಮಟ್ಟಿಗೆ ವೋಟ್ಗೆ ಕತ್ತರಿ ಹಾಕಿಲಿದೆ ಅನ್ನೋದು ಕಾದುನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ