ಎಸ್ಆರ್ಆರ್ ಲೇಔಟ್ನಲ್ಲಿ ಪತ್ತೆಯಾಯ್ತು ಚಿರತೆ ಹೆಜ್ಜೆಯ ಗುರುತು
ಲೇಔಟ್ನ ಸುತ್ತಮುತ್ತಲಿನ ಕಡೆ ಚಿರತೆ ಓಡಾಟ ನಡೆಸಿದ ಬಗ್ಗೆ ಶಂಕೆ
ಚಿರತೆ ಯಾವ ಕಡೆ ಹೋಗಿದೆ ಅಂತ ಅರಣ್ಯ ಅಧಿಕಾರಿಗಳಿಂದ ಶೋಧ
ಬೆಂಗಳೂರು: ಚಿರತೆ ಹೋಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಮತ್ತೆ ಚಿರತೆ ಹಾವಳಿ ಎದುರಾಗಿದೆ. ಎಸ್ಆರ್ಆರ್ ಲೇಔಟ್ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಆನೇಕಲ್ನ ನಿವಾಸಿಗಳಿಗೆ ಮತ್ತೆ ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ: ತಲೆಗೆ ದುಪ್ಪಟ ಕಟ್ಟಿ ಮೊಬೈಲ್ನಲ್ಲಿ ಟಾಕಿಂಗ್ ಟ್ರಾವೆಲ್; ಬೆಂಗಳೂರು ಪೊಲೀಸರಿಂದ ಮಹಿಳೆಗೆ 5000 ರೂ ದಂಡ..!
ಆನೇಕಲ್ ಪಟ್ಟಣದ ಚಂದಾಪುರ ಮುಖ್ಯ ರಸ್ತೆಯ ಎಸ್ಆರ್ಆರ್ ಲೇಔಟ್ನಲ್ಲಿ ನಾಯಿ ಬೇಟೆಗೆ ಚಿರತೆ ಬಂದಿದ್ದ ಹೆಜ್ಜೆ ಗುರುತು ಪತ್ತೆಯಾಗಿದೆ. ಇದೇ ಲೇಔಟ್ನ ಸುತ್ತಮುತ್ತಲಿನ ಕಡೆ ಚಿರತೆ ಓಡಾಟ ನಡೆಸಿದೆ ಎಂದು ಮತ್ತೆ ಹಚ್ಚಲಾಗಿದೆ. ಹೀಗಾಗಿ ಅಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಅಲ್ಲಿನ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹೆಜ್ಜೆ ಗುರುತುಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆ ಯಾವ ಕಡೆಗೆ ತೆರಳಿದೆ ಎನ್ನುವ ಬಗ್ಗೆ ಕಾರ್ಯಾಚರಣೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಸ್ಆರ್ಆರ್ ಲೇಔಟ್ನಲ್ಲಿ ಪತ್ತೆಯಾಯ್ತು ಚಿರತೆ ಹೆಜ್ಜೆಯ ಗುರುತು
ಲೇಔಟ್ನ ಸುತ್ತಮುತ್ತಲಿನ ಕಡೆ ಚಿರತೆ ಓಡಾಟ ನಡೆಸಿದ ಬಗ್ಗೆ ಶಂಕೆ
ಚಿರತೆ ಯಾವ ಕಡೆ ಹೋಗಿದೆ ಅಂತ ಅರಣ್ಯ ಅಧಿಕಾರಿಗಳಿಂದ ಶೋಧ
ಬೆಂಗಳೂರು: ಚಿರತೆ ಹೋಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಮತ್ತೆ ಚಿರತೆ ಹಾವಳಿ ಎದುರಾಗಿದೆ. ಎಸ್ಆರ್ಆರ್ ಲೇಔಟ್ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಆನೇಕಲ್ನ ನಿವಾಸಿಗಳಿಗೆ ಮತ್ತೆ ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ: ತಲೆಗೆ ದುಪ್ಪಟ ಕಟ್ಟಿ ಮೊಬೈಲ್ನಲ್ಲಿ ಟಾಕಿಂಗ್ ಟ್ರಾವೆಲ್; ಬೆಂಗಳೂರು ಪೊಲೀಸರಿಂದ ಮಹಿಳೆಗೆ 5000 ರೂ ದಂಡ..!
ಆನೇಕಲ್ ಪಟ್ಟಣದ ಚಂದಾಪುರ ಮುಖ್ಯ ರಸ್ತೆಯ ಎಸ್ಆರ್ಆರ್ ಲೇಔಟ್ನಲ್ಲಿ ನಾಯಿ ಬೇಟೆಗೆ ಚಿರತೆ ಬಂದಿದ್ದ ಹೆಜ್ಜೆ ಗುರುತು ಪತ್ತೆಯಾಗಿದೆ. ಇದೇ ಲೇಔಟ್ನ ಸುತ್ತಮುತ್ತಲಿನ ಕಡೆ ಚಿರತೆ ಓಡಾಟ ನಡೆಸಿದೆ ಎಂದು ಮತ್ತೆ ಹಚ್ಚಲಾಗಿದೆ. ಹೀಗಾಗಿ ಅಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಅಲ್ಲಿನ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹೆಜ್ಜೆ ಗುರುತುಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆ ಯಾವ ಕಡೆಗೆ ತೆರಳಿದೆ ಎನ್ನುವ ಬಗ್ಗೆ ಕಾರ್ಯಾಚರಣೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ