ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್ ಕಾಲ್ಸ್ ಬಂದಿವೆ
ಹೆಂಡತಿ ಫೋಟೋ, ನಂಬರ್ ಹಾಕಿ ಸೇಡು ತಿರಿಸಿಕೊಂಡ್ನಾ ಪತಿರಾಯ
ಕೃತ್ಯ ಎಸೆಗಿ ತಲೆಮರೆಸಿಕೊಂಡಿರುವ ಗಂಡ, ಪೊಲೀಸರಿಂದ ತನಿಖೆ
ಬೆಂಗಳೂರು: ಹೆಂಡತಿ ಡಿವೋರ್ಸ್ಗೆ ಅರ್ಜಿ ಹಾಕಿದ್ದಕ್ಕೆ ಕೋಪಗೊಂಡ ಗಂಡ ಸೋಷಿಯಲ್ ಮೀಡಿಯಾದಲ್ಲಿ ಕಾಲ್ಗರ್ಲ್ ಅಂತ ಫೋನ್ ನಂಬರ್, ಫೋಟೋ ಹಾಕಿ ಪೋಸ್ಟ್ ಶೇರ್ ಮಾಡಿರುವ ಘಟನೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?
ಕರಿ ಸತ್ಯನಾರಾಯಣ ರೆಡ್ಡಿ ಎನ್ನುವ ವ್ಯಕ್ತಿಯು ಕಲಾಶಶಿ ಎಂಬ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ತನ್ನ ಹೆಂಡತಿಯ ಫೋನ್ ನಂಬರ್ ಮತ್ತು ಫೋಟೋ ಶೇರ್ ಮಾಡಿದ್ದಾನೆ. ಕಾಲ್ಗರ್ಲ್ ಬೇಕಾಗಿದ್ದರೆ ಕರೆ ಮಾಡಿ ಎಂದು ಫೋಸ್ಟ್ ಶೇರ್ ಮಾಡಿದ್ದಾನೆ. ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್ ಕಾಲ್ಸ್ ಬರಲು ಪ್ರಾರಂಭಿಸಿವೆ. ಅಲ್ಲದೇ ಪೋಸ್ಟ್ನಲ್ಲಿ ಹೆಂಡತಿಯ ಸಹೋದರನ ನಂಬರ್ ಕೂಡ ಆತ ಹಾಕಿದ್ದಾನೆ. ಸದ್ಯ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಪತಿರಾಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!
2019ರಲ್ಲಿ ಸತ್ಯನಾರಾಯಣ ಹಾಗೂ ಶಶಿಕಲಾ ಮದುವೆಯಾಗಿದ್ದರು. ಆದರೆ 1 ವರ್ಷದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದ್ದನು. ಇದರಿಂದ ಬೇಸತ್ತಿದ್ದ ಹೆಂಡತಿ ಡಿವೋರ್ಸ್ಗೆ ಅರ್ಜಿ ಹಾಕಿದ್ದಳು. ಇದಕ್ಕೆ ಕೋಪಗೊಂಡು ಪತಿರಾಯ ಸೋಷಿಯಲ್ ಮೀಡಿಯಾ ಮೂಲಕ ಸೇಡು ತಿರಿಸಿಕೊಂಡಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್ ಕಾಲ್ಸ್ ಬಂದಿವೆ
ಹೆಂಡತಿ ಫೋಟೋ, ನಂಬರ್ ಹಾಕಿ ಸೇಡು ತಿರಿಸಿಕೊಂಡ್ನಾ ಪತಿರಾಯ
ಕೃತ್ಯ ಎಸೆಗಿ ತಲೆಮರೆಸಿಕೊಂಡಿರುವ ಗಂಡ, ಪೊಲೀಸರಿಂದ ತನಿಖೆ
ಬೆಂಗಳೂರು: ಹೆಂಡತಿ ಡಿವೋರ್ಸ್ಗೆ ಅರ್ಜಿ ಹಾಕಿದ್ದಕ್ಕೆ ಕೋಪಗೊಂಡ ಗಂಡ ಸೋಷಿಯಲ್ ಮೀಡಿಯಾದಲ್ಲಿ ಕಾಲ್ಗರ್ಲ್ ಅಂತ ಫೋನ್ ನಂಬರ್, ಫೋಟೋ ಹಾಕಿ ಪೋಸ್ಟ್ ಶೇರ್ ಮಾಡಿರುವ ಘಟನೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?
ಕರಿ ಸತ್ಯನಾರಾಯಣ ರೆಡ್ಡಿ ಎನ್ನುವ ವ್ಯಕ್ತಿಯು ಕಲಾಶಶಿ ಎಂಬ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ತನ್ನ ಹೆಂಡತಿಯ ಫೋನ್ ನಂಬರ್ ಮತ್ತು ಫೋಟೋ ಶೇರ್ ಮಾಡಿದ್ದಾನೆ. ಕಾಲ್ಗರ್ಲ್ ಬೇಕಾಗಿದ್ದರೆ ಕರೆ ಮಾಡಿ ಎಂದು ಫೋಸ್ಟ್ ಶೇರ್ ಮಾಡಿದ್ದಾನೆ. ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್ ಕಾಲ್ಸ್ ಬರಲು ಪ್ರಾರಂಭಿಸಿವೆ. ಅಲ್ಲದೇ ಪೋಸ್ಟ್ನಲ್ಲಿ ಹೆಂಡತಿಯ ಸಹೋದರನ ನಂಬರ್ ಕೂಡ ಆತ ಹಾಕಿದ್ದಾನೆ. ಸದ್ಯ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಪತಿರಾಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!
2019ರಲ್ಲಿ ಸತ್ಯನಾರಾಯಣ ಹಾಗೂ ಶಶಿಕಲಾ ಮದುವೆಯಾಗಿದ್ದರು. ಆದರೆ 1 ವರ್ಷದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದ್ದನು. ಇದರಿಂದ ಬೇಸತ್ತಿದ್ದ ಹೆಂಡತಿ ಡಿವೋರ್ಸ್ಗೆ ಅರ್ಜಿ ಹಾಕಿದ್ದಳು. ಇದಕ್ಕೆ ಕೋಪಗೊಂಡು ಪತಿರಾಯ ಸೋಷಿಯಲ್ ಮೀಡಿಯಾ ಮೂಲಕ ಸೇಡು ತಿರಿಸಿಕೊಂಡಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ