ಆರ್ಸಿಬಿ vs ಮುಂಬೈ, ವಾಂಖೆಡೆ ವಾರ್ಗೆ ಕೌಂಟ್ಡೌನ್
ಗೆಲುವಿನ ಹಳಿಗೆ ಮರಳಲು ಬದಲಾವಣೆ ಅನಿವಾರ್ಯ
ಆರ್ಸಿಬಿಯಲ್ಲಿ ಏನೆಲ್ಲಾ ಬದಲಾಗಬೇಕು? ಕಂಪ್ಲೀಟ್ ಮಾಹಿತಿ
ಆರ್ಸಿಬಿ vs ಮುಂಬೈ, ವಾಂಖೆಡೆ ವಾರ್ಗೆ ಕೌಂಟ್ಡೌನ್ ಶುರುವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಆರ್ಸಿಬಿ ಗೆಲುವಿನ ಹಳಿಗೆ ಮರಳಬೇಕಂದ್ರೆ, ಬದಲಾವಣೆ ಅನಿವಾರ್ಯವಾಗಿದೆ. ಹಾಗಾದ್ರೆ, ಆರ್ಸಿಬಿ ತಂಡದಲ್ಲಿ ಏನೆಲ್ಲಾ ಬದಲಾಗಬೇಕು? ಯಾವ ಬದಲಾವಣೆಯಿಂದ ಗೆಲುವು ಸಾಧ್ಯ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.
ಆರ್ಸಿಬಿ vs ಮುಂಬೈ ಬಿಗ್ ಬ್ಯಾಟಲ್ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಹೈವೋಲ್ಟೆಜ್ ಕದನ ನಡೆಯಲಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿರೋ ಮುಂಬೈ ಇಂಡಿಯನ್ಸ್, ‘ರಾಯಲ್ ಚಾಲೆಂಜ್’ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಆದ್ರೆ ಸೋಲಿನಿಂದ ಕಂಗೆಟ್ಟಿರೋ ಅರ್ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚಾಗಿದೆ. ಆರ್ಸಿಬಿ ಇಂದು ಗೆಲ್ಲಬೇಕು ಕೆಲ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು.
ಇದನ್ನೂ ಓದಿ: ತಾಪ್ಸಿ ಪನ್ನು ಯಾಕೆ ಮದುವೆ ಗುಟ್ಟು ಮುಚ್ಚಿಟ್ಟಿದ್ದರು..? ಅಸಲಿ ಸತ್ಯ ತಿಳಿಸಿದ ಸ್ಟಾರ್ ನಟಿ..!
ಫಾಫ್ ಡುಪ್ಲೆಸಿ-ವಿಲ್ ಜಾಕ್ಸ್ ಓಪನಿಂಗ್ ಮಾಡ್ಬೇಕು
ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ಎಲ್ಲರೂ ನಿರೀಕ್ಷೆ ಮಾಡ್ತಿರೋ ಮೊದಲ ಬದಲಾವಣೆಯೇ ಇದು. ಪರ್ಫಾಮ್ ಮಾಡಲು ತಿಣುಕಾಡ್ತಿರೋ ಕ್ಯಾಮರೂನ್ ಗ್ರೀನ್ ಕಿತ್ತು ಬಿಸಾಕಿ ವಿಲ್ ಜಾಕ್ಸ್ಗೆ ಚಾನ್ಸ್ ನೀಡಬೇಕು ಅನ್ನೋದು ಫ್ಯಾನ್ಸ್ ಆಗ್ರಹವಾಗಿದೆ. ವಿಲ್ ಜಾಕ್ಸ್, ಫಾಫ್ ಡುಪ್ಲೆಸಿ ಜೊತೆ ಇನ್ನಿಂಗ್ಸ್ ಓಪನ್ ಮಾಡಿದ್ರೆ ತಂಡಕ್ಕೆ ಅದ್ದೂರಿ ಆರಂಭ ಸಿಗುತ್ತೆ ಅನ್ನೋ ನಿರೀಕ್ಷೆಯಿದೆ.
3ನೇ ಕ್ರಮಾಂಕದಲ್ಲಿ ಕಿಂಗ್ ಕೊಹ್ಲಿ ಆಡ್ಬೇಕು
ನಂಬರ್ 3 ವಿರಾಟ್ ಕೊಹ್ಲಿ ಫೇವರಿಟ್ ಸ್ಲಾಟ್. ಈ ಕ್ರಮಾಂಕದಲ್ಲಿ ಕೊಹ್ಲಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಸದ್ಯ ಸಾಲಿಡ್ ಫಾರ್ಮ್ನಲ್ಲಿರೋ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ರೆ, ಆರ್ಸಿಬಿಯ ಮಿಡಲ್ ಆರ್ಡರ್ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಲಿದೆ.
ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?
ನಂ.4ರಲ್ಲಿ ಎಡಗೈ ಬ್ಯಾಟರ್ ಅನುಜ್ ರಾವತ್ಗೆ ಚಾನ್ಸ್
ವೈಫಲ್ಯದ ಸುಳಿಗೆ ಸಿಲುಕಿರೋ ರಜತ್ ಪಟಿದಾರ್ಗೆ ಗೇಟ್ ಪಾಸ್ ನೀಡಿ ಲೆಫ್ಟ್ ಆರ್ಮ್ ಬ್ಯಾಟರ್ ಅನುಜ್ ರಾವತ್ಗೆ ಚಾನ್ಸ್ ನೀಡಬೇಕಿದೆ. 4ನೇ ಕ್ರಮಾಂಕದಲ್ಲಿ ಅನುಜ್ ರಾವತ್ ಕಣಕ್ಕಿಳಿದ್ರೆ, ಬ್ಯಾಟಿಂಗ್ ಲೈನ್ ಅಪ್ಗೆ ಅಡ್ವಾಂಟೇಜ್ ಆಗಲಿದೆ. ಮಿಡಲ್ ಆರ್ಡರ್ಗೆ ಲೆಫ್ಟ್ – ರೈಟ್ ಕಾಂಬಿನೇಶನ್ನ ಬಲ ಬರಲಿದೆ.
ಲೋವರ್ ಆರ್ಡರ್ನಲ್ಲಿ ಮ್ಯಾಕ್ಸಿ-ಡಿಕೆ ಆಡ್ಬೇಕು..!
ಲೋವರ್ ಆರ್ಡರ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಆಡಿದ್ರೆ, ಆರ್ಬಿಯ ಬಲ ದುಪ್ಪಟ್ಟಾಗಲಿದೆ. ಅನುಭವಿಗಳಾದ ಇಬ್ಬರೂ ಒತ್ತಡವನ್ನ ನಿಭಾಯಿಸಬಲ್ಲರು. ಫಿನಿಷರ್ ರೋಲ್ ಪ್ಲೇ ಮಾಡುವ ಕಲೆ ಇಬ್ಬರಲ್ಲೂ ಇದ್ದು, ಡೆತ್ ಓವರ್ಗಳಲ್ಲಿ ರನ್ ಕೊಳ್ಳೆ ಹೊಡೆಯಬಲ್ಲರು.
ಇದನ್ನೂ ಓದಿ: ಆರ್ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್ ಸವಾಲ್; ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ?
ಅನುಭವಿ ಸ್ಪಿನ್ನರ್ ಕರಣ್ ಶರ್ಮಾಗೆ ಚಾನ್ಸ್ ಕೊಡಿ
ಒಂದು ಪಂದ್ಯ ಆಡಿ ಬಳಿಕ ಬೆಂಚ್ಗೆ ಸೀಮಿತವಾಗಿರುವ ಕರಣ್ ಶರ್ಮಾಗೆ ಮತ್ತೆ ಅವಕಾಶ ನೀಡಬೇಕು. ಅನುಭವಿ ಸ್ಪಿನ್ನರ್ ಕಮ್ಬ್ಯಾಕ್ ಸ್ಪಿನ್ ವಿಭಾಗದ ಬಲ ಹೆಚ್ಚಿಸಲಿದೆ. ಮಯಾಂಕ್ ಡಾಗಾರ್ಗಿಂತ ಕರಣ್ ಶರ್ಮಾ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ.
ವೇಗದ ವಿಭಾಗಕ್ಕೂ ಸರ್ಜರಿ ಅಗತ್ಯ..!
ಆರ್ಸಿಬಿಯ ಬೌಲಿಂಗ್ ಡಿಪಾರ್ಟ್ಮೆಂಟ್ಗೆ ಸರ್ಜರಿ ಮಾಡ್ಲೇಬೇಕಿದೆ. ಮೊಹಮ್ಮದ್ ಸಿರಾಜ್, ರೀಸಿ ಟೋಪ್ಲಿ ಜೊತೆಗೆ ವೇಗಿ ವೈಶಾಖ್ ವಿಜಯ್ ಕುಮಾರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಬೇಕಿದೆ. ಮೂವರು ವೇಗಿಗಳ ಬಲ ಬೌಲಿಂಗ್ ವಿಭಾಗದ ಸ್ಟ್ರೆಂಥ್ ಹೆಚ್ಚಿಸಲಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!
ಮಹಿಪಾಲ್ ಲೋಮ್ರೋರ್, ಯಶ್ ದಯಾಳ್ರನ್ನ ಇಂಪ್ಯಾಕ್ಟ್ ಪ್ಲೇಯರ್ ಅವಕಾಶದಲ್ಲಿ ಟಾಸ್ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಡಿಸಬೇಕಿದೆ. ಮೊದಲು ಬ್ಯಾಟಿಂಗ್ ಆದ್ರೆ ಲೋಮ್ರೋರ್, ಬೌಲಿಂಗ್ ಆದ್ರೆ ಯಶ್ ದಯಾಳ್ರನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸಿ, ಇನ್ನಿಂಗ್ಸ್ ಅಂತ್ಯದ ಬಳಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದ್ರೆ, ಗೆಲುವಿನ ಹಳಿಗೆ ಮರಳೋದು ಆರ್ಸಿಬಿಗೆ ಕಷ್ಟದ ವಿಚಾರವೇನಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಆರ್ಸಿಬಿ vs ಮುಂಬೈ, ವಾಂಖೆಡೆ ವಾರ್ಗೆ ಕೌಂಟ್ಡೌನ್
ಗೆಲುವಿನ ಹಳಿಗೆ ಮರಳಲು ಬದಲಾವಣೆ ಅನಿವಾರ್ಯ
ಆರ್ಸಿಬಿಯಲ್ಲಿ ಏನೆಲ್ಲಾ ಬದಲಾಗಬೇಕು? ಕಂಪ್ಲೀಟ್ ಮಾಹಿತಿ
ಆರ್ಸಿಬಿ vs ಮುಂಬೈ, ವಾಂಖೆಡೆ ವಾರ್ಗೆ ಕೌಂಟ್ಡೌನ್ ಶುರುವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಆರ್ಸಿಬಿ ಗೆಲುವಿನ ಹಳಿಗೆ ಮರಳಬೇಕಂದ್ರೆ, ಬದಲಾವಣೆ ಅನಿವಾರ್ಯವಾಗಿದೆ. ಹಾಗಾದ್ರೆ, ಆರ್ಸಿಬಿ ತಂಡದಲ್ಲಿ ಏನೆಲ್ಲಾ ಬದಲಾಗಬೇಕು? ಯಾವ ಬದಲಾವಣೆಯಿಂದ ಗೆಲುವು ಸಾಧ್ಯ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.
ಆರ್ಸಿಬಿ vs ಮುಂಬೈ ಬಿಗ್ ಬ್ಯಾಟಲ್ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಹೈವೋಲ್ಟೆಜ್ ಕದನ ನಡೆಯಲಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿರೋ ಮುಂಬೈ ಇಂಡಿಯನ್ಸ್, ‘ರಾಯಲ್ ಚಾಲೆಂಜ್’ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಆದ್ರೆ ಸೋಲಿನಿಂದ ಕಂಗೆಟ್ಟಿರೋ ಅರ್ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚಾಗಿದೆ. ಆರ್ಸಿಬಿ ಇಂದು ಗೆಲ್ಲಬೇಕು ಕೆಲ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು.
ಇದನ್ನೂ ಓದಿ: ತಾಪ್ಸಿ ಪನ್ನು ಯಾಕೆ ಮದುವೆ ಗುಟ್ಟು ಮುಚ್ಚಿಟ್ಟಿದ್ದರು..? ಅಸಲಿ ಸತ್ಯ ತಿಳಿಸಿದ ಸ್ಟಾರ್ ನಟಿ..!
ಫಾಫ್ ಡುಪ್ಲೆಸಿ-ವಿಲ್ ಜಾಕ್ಸ್ ಓಪನಿಂಗ್ ಮಾಡ್ಬೇಕು
ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ಎಲ್ಲರೂ ನಿರೀಕ್ಷೆ ಮಾಡ್ತಿರೋ ಮೊದಲ ಬದಲಾವಣೆಯೇ ಇದು. ಪರ್ಫಾಮ್ ಮಾಡಲು ತಿಣುಕಾಡ್ತಿರೋ ಕ್ಯಾಮರೂನ್ ಗ್ರೀನ್ ಕಿತ್ತು ಬಿಸಾಕಿ ವಿಲ್ ಜಾಕ್ಸ್ಗೆ ಚಾನ್ಸ್ ನೀಡಬೇಕು ಅನ್ನೋದು ಫ್ಯಾನ್ಸ್ ಆಗ್ರಹವಾಗಿದೆ. ವಿಲ್ ಜಾಕ್ಸ್, ಫಾಫ್ ಡುಪ್ಲೆಸಿ ಜೊತೆ ಇನ್ನಿಂಗ್ಸ್ ಓಪನ್ ಮಾಡಿದ್ರೆ ತಂಡಕ್ಕೆ ಅದ್ದೂರಿ ಆರಂಭ ಸಿಗುತ್ತೆ ಅನ್ನೋ ನಿರೀಕ್ಷೆಯಿದೆ.
3ನೇ ಕ್ರಮಾಂಕದಲ್ಲಿ ಕಿಂಗ್ ಕೊಹ್ಲಿ ಆಡ್ಬೇಕು
ನಂಬರ್ 3 ವಿರಾಟ್ ಕೊಹ್ಲಿ ಫೇವರಿಟ್ ಸ್ಲಾಟ್. ಈ ಕ್ರಮಾಂಕದಲ್ಲಿ ಕೊಹ್ಲಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಸದ್ಯ ಸಾಲಿಡ್ ಫಾರ್ಮ್ನಲ್ಲಿರೋ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ರೆ, ಆರ್ಸಿಬಿಯ ಮಿಡಲ್ ಆರ್ಡರ್ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಲಿದೆ.
ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?
ನಂ.4ರಲ್ಲಿ ಎಡಗೈ ಬ್ಯಾಟರ್ ಅನುಜ್ ರಾವತ್ಗೆ ಚಾನ್ಸ್
ವೈಫಲ್ಯದ ಸುಳಿಗೆ ಸಿಲುಕಿರೋ ರಜತ್ ಪಟಿದಾರ್ಗೆ ಗೇಟ್ ಪಾಸ್ ನೀಡಿ ಲೆಫ್ಟ್ ಆರ್ಮ್ ಬ್ಯಾಟರ್ ಅನುಜ್ ರಾವತ್ಗೆ ಚಾನ್ಸ್ ನೀಡಬೇಕಿದೆ. 4ನೇ ಕ್ರಮಾಂಕದಲ್ಲಿ ಅನುಜ್ ರಾವತ್ ಕಣಕ್ಕಿಳಿದ್ರೆ, ಬ್ಯಾಟಿಂಗ್ ಲೈನ್ ಅಪ್ಗೆ ಅಡ್ವಾಂಟೇಜ್ ಆಗಲಿದೆ. ಮಿಡಲ್ ಆರ್ಡರ್ಗೆ ಲೆಫ್ಟ್ – ರೈಟ್ ಕಾಂಬಿನೇಶನ್ನ ಬಲ ಬರಲಿದೆ.
ಲೋವರ್ ಆರ್ಡರ್ನಲ್ಲಿ ಮ್ಯಾಕ್ಸಿ-ಡಿಕೆ ಆಡ್ಬೇಕು..!
ಲೋವರ್ ಆರ್ಡರ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಆಡಿದ್ರೆ, ಆರ್ಬಿಯ ಬಲ ದುಪ್ಪಟ್ಟಾಗಲಿದೆ. ಅನುಭವಿಗಳಾದ ಇಬ್ಬರೂ ಒತ್ತಡವನ್ನ ನಿಭಾಯಿಸಬಲ್ಲರು. ಫಿನಿಷರ್ ರೋಲ್ ಪ್ಲೇ ಮಾಡುವ ಕಲೆ ಇಬ್ಬರಲ್ಲೂ ಇದ್ದು, ಡೆತ್ ಓವರ್ಗಳಲ್ಲಿ ರನ್ ಕೊಳ್ಳೆ ಹೊಡೆಯಬಲ್ಲರು.
ಇದನ್ನೂ ಓದಿ: ಆರ್ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್ ಸವಾಲ್; ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ?
ಅನುಭವಿ ಸ್ಪಿನ್ನರ್ ಕರಣ್ ಶರ್ಮಾಗೆ ಚಾನ್ಸ್ ಕೊಡಿ
ಒಂದು ಪಂದ್ಯ ಆಡಿ ಬಳಿಕ ಬೆಂಚ್ಗೆ ಸೀಮಿತವಾಗಿರುವ ಕರಣ್ ಶರ್ಮಾಗೆ ಮತ್ತೆ ಅವಕಾಶ ನೀಡಬೇಕು. ಅನುಭವಿ ಸ್ಪಿನ್ನರ್ ಕಮ್ಬ್ಯಾಕ್ ಸ್ಪಿನ್ ವಿಭಾಗದ ಬಲ ಹೆಚ್ಚಿಸಲಿದೆ. ಮಯಾಂಕ್ ಡಾಗಾರ್ಗಿಂತ ಕರಣ್ ಶರ್ಮಾ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ.
ವೇಗದ ವಿಭಾಗಕ್ಕೂ ಸರ್ಜರಿ ಅಗತ್ಯ..!
ಆರ್ಸಿಬಿಯ ಬೌಲಿಂಗ್ ಡಿಪಾರ್ಟ್ಮೆಂಟ್ಗೆ ಸರ್ಜರಿ ಮಾಡ್ಲೇಬೇಕಿದೆ. ಮೊಹಮ್ಮದ್ ಸಿರಾಜ್, ರೀಸಿ ಟೋಪ್ಲಿ ಜೊತೆಗೆ ವೇಗಿ ವೈಶಾಖ್ ವಿಜಯ್ ಕುಮಾರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಬೇಕಿದೆ. ಮೂವರು ವೇಗಿಗಳ ಬಲ ಬೌಲಿಂಗ್ ವಿಭಾಗದ ಸ್ಟ್ರೆಂಥ್ ಹೆಚ್ಚಿಸಲಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!
ಮಹಿಪಾಲ್ ಲೋಮ್ರೋರ್, ಯಶ್ ದಯಾಳ್ರನ್ನ ಇಂಪ್ಯಾಕ್ಟ್ ಪ್ಲೇಯರ್ ಅವಕಾಶದಲ್ಲಿ ಟಾಸ್ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಡಿಸಬೇಕಿದೆ. ಮೊದಲು ಬ್ಯಾಟಿಂಗ್ ಆದ್ರೆ ಲೋಮ್ರೋರ್, ಬೌಲಿಂಗ್ ಆದ್ರೆ ಯಶ್ ದಯಾಳ್ರನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸಿ, ಇನ್ನಿಂಗ್ಸ್ ಅಂತ್ಯದ ಬಳಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದ್ರೆ, ಗೆಲುವಿನ ಹಳಿಗೆ ಮರಳೋದು ಆರ್ಸಿಬಿಗೆ ಕಷ್ಟದ ವಿಚಾರವೇನಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್