ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಟಿ
ದಶಕ ಕಳೆದರೂ ರುಕ್ಮಿಣಿಯನ್ನು ಮರೆತ್ತಿಲ್ಲ ವೀಕ್ಷಕ ಪ್ರಭುಗಳು
ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ಅಂಜನಾ
ಕೃಷ್ಣ-ರುಕ್ಮಿಣಿ ಟೈಟಲ್ ಹೇಳಿದ ತಕ್ಷಣ ಥಟ್ ಅಂತ ನೆನಪಾಗುವುದು ಆ ಕಥೆ. ಕೂಡಲೇ ಕಲಾವಿದರು ಒಂದು ಕ್ಷಣ ಕಣ್ಮುಂದೆ ಬರುತ್ತಾರೆ. ಇವತ್ತಿಗೂ ಆ ಸೀರಿಯಲ್ ವೀಕ್ಷಕರ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಡಾರ್ಲಿಂಗ್ ಕೃಷ್ಣ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡ್ತಿರೋ ನಟ.
ಇದನ್ನೂ ಓದಿ: VIDEO: ಪ್ರೇಮಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್ ಮೇಲೆ ಹಲ್ಲೆ ಮಾಡಿದ್ರಾ ಸಚಿನ್? ಏನಿದು ಟ್ವಿಸ್ಟ್!
ನಮ್ಮ ಕಣ್ಮುಂದೆನೇ ಇದ್ದಾರೆ. ಆದ್ರೇ ನಾಯಕಿ ಎಲ್ಲಿಗೆ ಹೋದ್ರು? ಎಂಬ ಪ್ರಶ್ನೆ ಸೀರಿಯಲ್ ಅಭಿಮಾನಿಗಳನ್ನು ಕಾಡಿರುತ್ತದೆ. ಆದರೆ ವೇಗದ ಬದುಕಲ್ಲಿ ತಡಕಾಡೋ ಪ್ರಯತ್ನ ಮಾಡಿರಲ್ಲ. ಸದ್ಯ ಫ್ಯಾನ್ಸ್ ಖುಷಿಪಡೋ ವಿಚಾರ ಇದೆ. ನಿಮ್ಮ ನೆಚ್ಚಿನ ರುಕ್ಮಿಣಿ ಕನ್ನಡಕ್ಕೆ ಮರಳಿದ್ದಾರೆ. ಹೌದು, ರುಕ್ಮಿಣಿ ಪಾತ್ರದ ಮೂಲಕ ಕನ್ನಡದ ಭರವಸೆ ನಟಿಯಾಗಿದ್ದವರು ಅಂಜನಾ ಶ್ರೀನಿವಾಸ್. ದಶಕ ಕಳೆದರೂ ವೀಕ್ಷಕರು ರುಕ್ಮಿಣಿಯನ್ನು ಮರೆತ್ತಿಲ್ಲ. ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ಇವರು.
ಕೃಷ್ಣ-ರುಕ್ಮಿಣಿ ಸೀರಿಯಲ್ ಯಶಸ್ಸಿನ ನಂತರ ಪಕ್ಕದ ರಾಜ್ಯಗಳಿಗೆ ಪ್ರಯಾಣ ಬೆಳಿಸಿದ್ರು ನಟಿ ಅಂಜನಾ. ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ. ಹಲವು ರಿಯಾಲಿಟಿ ಶೋಗಳು ಸೇರಿದಂತೆ ಯಶಸ್ವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಸೀರಿಯಲ್ ಬರ್ತಿದೆ. ಜಾನಕಿ ಸಂಸಾರ ಫಸ್ಟ್ ಪ್ರೋಮೋ ಬಿಡುಗಡೆಯಾಗಿದೆ. ಮುಖ್ಯ ಪಾತ್ರದಲ್ಲಿ ಕುಲವಧು, ಯಾರೇ ನೀ ಮೂಹಿನಿ, ಗೃಹಪ್ರವೇಶ ಖ್ಯಾತಿಯ ನಟ ಸೂರಜ್ ಹೊಳಲು ಹಾಗೂ ಅಂಜನಾ ಶ್ರೀನಿವಾಸ ಜೋಡಿಯಾಗಿದ್ದಾರೆ. ನಮ್ಮ ಲಚ್ಚಿ ಖ್ಯಾತಿಯ ರಿಯಾ ಪಾತ್ರಧಾರಿ ಪುಟಾಣಿ ಶ್ರೀದಿಶಾ, ಗುಂಡ್ಯಾನ್ ಹೆಂಡತಿ ಖ್ಯಾತಿಯ ಸಮೀಪ್ ಆಚಾರ್ಯ ಕೂಡ ಇದ್ದಾರೆ. ಒಟ್ಟಿನಲ್ಲಿ ತುಂಬು ಕುಟುಂಬದ ಏಳುಬೀಳುಗಳನ್ನ ಕಟ್ಟಿಕೊಡಲಿದೆ ಜಾನಕಿ ಸಂಸಾರ. ರಿಲೀಸ್ ಆದ ಪ್ರೋಮೋ ವಿಶೇಷವಾಗಿದ್ದು, ಅಂಜನಾ ಅವರು ಸೀರಿಯಲ್ನ ಸ್ಪೆಷಲ್ ಅಟ್ರ್ಯಾಕ್ಷನ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಟಿ
ದಶಕ ಕಳೆದರೂ ರುಕ್ಮಿಣಿಯನ್ನು ಮರೆತ್ತಿಲ್ಲ ವೀಕ್ಷಕ ಪ್ರಭುಗಳು
ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ಅಂಜನಾ
ಕೃಷ್ಣ-ರುಕ್ಮಿಣಿ ಟೈಟಲ್ ಹೇಳಿದ ತಕ್ಷಣ ಥಟ್ ಅಂತ ನೆನಪಾಗುವುದು ಆ ಕಥೆ. ಕೂಡಲೇ ಕಲಾವಿದರು ಒಂದು ಕ್ಷಣ ಕಣ್ಮುಂದೆ ಬರುತ್ತಾರೆ. ಇವತ್ತಿಗೂ ಆ ಸೀರಿಯಲ್ ವೀಕ್ಷಕರ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಡಾರ್ಲಿಂಗ್ ಕೃಷ್ಣ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡ್ತಿರೋ ನಟ.
ಇದನ್ನೂ ಓದಿ: VIDEO: ಪ್ರೇಮಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್ ಮೇಲೆ ಹಲ್ಲೆ ಮಾಡಿದ್ರಾ ಸಚಿನ್? ಏನಿದು ಟ್ವಿಸ್ಟ್!
ನಮ್ಮ ಕಣ್ಮುಂದೆನೇ ಇದ್ದಾರೆ. ಆದ್ರೇ ನಾಯಕಿ ಎಲ್ಲಿಗೆ ಹೋದ್ರು? ಎಂಬ ಪ್ರಶ್ನೆ ಸೀರಿಯಲ್ ಅಭಿಮಾನಿಗಳನ್ನು ಕಾಡಿರುತ್ತದೆ. ಆದರೆ ವೇಗದ ಬದುಕಲ್ಲಿ ತಡಕಾಡೋ ಪ್ರಯತ್ನ ಮಾಡಿರಲ್ಲ. ಸದ್ಯ ಫ್ಯಾನ್ಸ್ ಖುಷಿಪಡೋ ವಿಚಾರ ಇದೆ. ನಿಮ್ಮ ನೆಚ್ಚಿನ ರುಕ್ಮಿಣಿ ಕನ್ನಡಕ್ಕೆ ಮರಳಿದ್ದಾರೆ. ಹೌದು, ರುಕ್ಮಿಣಿ ಪಾತ್ರದ ಮೂಲಕ ಕನ್ನಡದ ಭರವಸೆ ನಟಿಯಾಗಿದ್ದವರು ಅಂಜನಾ ಶ್ರೀನಿವಾಸ್. ದಶಕ ಕಳೆದರೂ ವೀಕ್ಷಕರು ರುಕ್ಮಿಣಿಯನ್ನು ಮರೆತ್ತಿಲ್ಲ. ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ಇವರು.
ಕೃಷ್ಣ-ರುಕ್ಮಿಣಿ ಸೀರಿಯಲ್ ಯಶಸ್ಸಿನ ನಂತರ ಪಕ್ಕದ ರಾಜ್ಯಗಳಿಗೆ ಪ್ರಯಾಣ ಬೆಳಿಸಿದ್ರು ನಟಿ ಅಂಜನಾ. ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ. ಹಲವು ರಿಯಾಲಿಟಿ ಶೋಗಳು ಸೇರಿದಂತೆ ಯಶಸ್ವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಸೀರಿಯಲ್ ಬರ್ತಿದೆ. ಜಾನಕಿ ಸಂಸಾರ ಫಸ್ಟ್ ಪ್ರೋಮೋ ಬಿಡುಗಡೆಯಾಗಿದೆ. ಮುಖ್ಯ ಪಾತ್ರದಲ್ಲಿ ಕುಲವಧು, ಯಾರೇ ನೀ ಮೂಹಿನಿ, ಗೃಹಪ್ರವೇಶ ಖ್ಯಾತಿಯ ನಟ ಸೂರಜ್ ಹೊಳಲು ಹಾಗೂ ಅಂಜನಾ ಶ್ರೀನಿವಾಸ ಜೋಡಿಯಾಗಿದ್ದಾರೆ. ನಮ್ಮ ಲಚ್ಚಿ ಖ್ಯಾತಿಯ ರಿಯಾ ಪಾತ್ರಧಾರಿ ಪುಟಾಣಿ ಶ್ರೀದಿಶಾ, ಗುಂಡ್ಯಾನ್ ಹೆಂಡತಿ ಖ್ಯಾತಿಯ ಸಮೀಪ್ ಆಚಾರ್ಯ ಕೂಡ ಇದ್ದಾರೆ. ಒಟ್ಟಿನಲ್ಲಿ ತುಂಬು ಕುಟುಂಬದ ಏಳುಬೀಳುಗಳನ್ನ ಕಟ್ಟಿಕೊಡಲಿದೆ ಜಾನಕಿ ಸಂಸಾರ. ರಿಲೀಸ್ ಆದ ಪ್ರೋಮೋ ವಿಶೇಷವಾಗಿದ್ದು, ಅಂಜನಾ ಅವರು ಸೀರಿಯಲ್ನ ಸ್ಪೆಷಲ್ ಅಟ್ರ್ಯಾಕ್ಷನ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ