ದ್ರಾವಿಡ್, ಅಗರ್ಕರ್ ಮಾತಿಗೆ ಸೊಪ್ಪು ಹಾಕದ ಕ್ರಿಕೆಟರ್ ಇಶಾನ್
ಗುತ್ತಿಗೆಯಿಂದ ತೆಗೆದು ಇಶಾನ್ ಕಿಶನ್ಗೆ ಬಿಗ್ ಶಾಕ್ ಕೊಟ್ಟಿದ್ದ ಬಿಸಿಸಿಐ
ಕೊನೆಗೂ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಇಶಾನ್ ಕಿಶನ್!
ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದ ಸ್ಟಾರ್ ಕ್ರಿಕೆಟರ್ ಇಶಾನ್ ಕಿಶನ್ಗೆ ಬಿಸಿಸಿಐ ಬಿಗ್ ಶಾಕ್ ಕೊಟ್ಟಿತ್ತು. ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್ಗೆ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕಿತ್ತೆಸೆಯಲಾಗಿದೆ.
ಬಿಸಿಸಿಐ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇಶನ್ ಕಿಶನ್ ಅವರನ್ನು ವಾರ್ಷಿಕ 1 ಕೋಟಿ ರೂ. ನೀಡುವ ಸಿ ಗ್ರೇಡ್ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಆದರೆ, ಈ ವರ್ಷದ ಗುತ್ತಿಗೆ ಅನೌನ್ಸ್ ಆಗಿದ್ದು, ಇಶಾನ್ಗೆ ಕೊಕ್ ಕೊಡಲಾಗಿತ್ತು. ರಣಜಿ ಕ್ರಿಕೆಟ್ ಆಡದ ಕಾರಣದಿಂದಲೇ ಇಶಾನ್ ಕಿಶನ್ಗೆ ಒಪ್ಪಂದಿಂದ ಕೈ ಬಿಡಲಾಗಿತ್ತು. ಈ ಬಗ್ಗೆ ಕೊನೆಗೂ ಇಶಾನ್ ಮೌನಮುರಿದಿದ್ದಾರೆ.
ನಾನು ಈ ಹಿಂದೆ ಬ್ರೇಕ್ ತೆಗೆದುಕೊಂಡಿದ್ದೆ. ಅದರ ಮಧ್ಯೆ ಪ್ರಾಕ್ಟೀಸ್ ಕೂಡ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಏನೇನೋ ಬರೆಯಲಾಗಿತ್ತು. ನಮ್ಮ ಕೈಯಲ್ಲಿ ಏನು ಇರಲ್ಲ. ಸಾಕಷ್ಟು ನಡೆಯಿತು, ನಾನು ಅದರಿಂದ ಬಹಳಷ್ಟು ಕಳೆದುಕೊಂಡೆ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ರು.
ನನ್ನ ಸಮಯವನ್ನು ನಾನು ಪ್ರಾಪರ್ ಆಗಿ ಉಪಯೋಗ ಮಾಡಿಕೊಂಡಿದ್ದೇನೆ. ನಾನು ಬೇಕಾಬಿಟ್ಟಿ ಬ್ಯಾಟಿಂಗ್ ಮಾಡಲ್ಲ. ಟಿ20 ಕೂಡ ಬಿಗ್ ಗೇಮ್ ಎಂದು ಭಾವಿಸಿ ಸಮಯ ತೆಗೆದುಕೊಂಡು ಬಳಿಕ ಟಾರ್ಗೆಟ್ ಮಾಡುತ್ತೇನೆ. ಏಕಾಏಕಿ ಬಿಗ್ ಶಾಟ್ಗಳಿಗೆ ಕೈ ಹಾಕಲ್ಲ ಎಂದರು.
ಇದನ್ನೂ ಓದಿ: ಇಂದು, ನಾಳೆ ರಾಜ್ಯದಲ್ಲಿ ವರುಣನ ಆರ್ಭಟ; ಈ ಜಿಲ್ಲೆಗಳಲ್ಲಿ ಭಾರೀ ಮಳೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದ್ರಾವಿಡ್, ಅಗರ್ಕರ್ ಮಾತಿಗೆ ಸೊಪ್ಪು ಹಾಕದ ಕ್ರಿಕೆಟರ್ ಇಶಾನ್
ಗುತ್ತಿಗೆಯಿಂದ ತೆಗೆದು ಇಶಾನ್ ಕಿಶನ್ಗೆ ಬಿಗ್ ಶಾಕ್ ಕೊಟ್ಟಿದ್ದ ಬಿಸಿಸಿಐ
ಕೊನೆಗೂ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಇಶಾನ್ ಕಿಶನ್!
ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದ ಸ್ಟಾರ್ ಕ್ರಿಕೆಟರ್ ಇಶಾನ್ ಕಿಶನ್ಗೆ ಬಿಸಿಸಿಐ ಬಿಗ್ ಶಾಕ್ ಕೊಟ್ಟಿತ್ತು. ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್ಗೆ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕಿತ್ತೆಸೆಯಲಾಗಿದೆ.
ಬಿಸಿಸಿಐ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇಶನ್ ಕಿಶನ್ ಅವರನ್ನು ವಾರ್ಷಿಕ 1 ಕೋಟಿ ರೂ. ನೀಡುವ ಸಿ ಗ್ರೇಡ್ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಆದರೆ, ಈ ವರ್ಷದ ಗುತ್ತಿಗೆ ಅನೌನ್ಸ್ ಆಗಿದ್ದು, ಇಶಾನ್ಗೆ ಕೊಕ್ ಕೊಡಲಾಗಿತ್ತು. ರಣಜಿ ಕ್ರಿಕೆಟ್ ಆಡದ ಕಾರಣದಿಂದಲೇ ಇಶಾನ್ ಕಿಶನ್ಗೆ ಒಪ್ಪಂದಿಂದ ಕೈ ಬಿಡಲಾಗಿತ್ತು. ಈ ಬಗ್ಗೆ ಕೊನೆಗೂ ಇಶಾನ್ ಮೌನಮುರಿದಿದ್ದಾರೆ.
ನಾನು ಈ ಹಿಂದೆ ಬ್ರೇಕ್ ತೆಗೆದುಕೊಂಡಿದ್ದೆ. ಅದರ ಮಧ್ಯೆ ಪ್ರಾಕ್ಟೀಸ್ ಕೂಡ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಏನೇನೋ ಬರೆಯಲಾಗಿತ್ತು. ನಮ್ಮ ಕೈಯಲ್ಲಿ ಏನು ಇರಲ್ಲ. ಸಾಕಷ್ಟು ನಡೆಯಿತು, ನಾನು ಅದರಿಂದ ಬಹಳಷ್ಟು ಕಳೆದುಕೊಂಡೆ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ರು.
ನನ್ನ ಸಮಯವನ್ನು ನಾನು ಪ್ರಾಪರ್ ಆಗಿ ಉಪಯೋಗ ಮಾಡಿಕೊಂಡಿದ್ದೇನೆ. ನಾನು ಬೇಕಾಬಿಟ್ಟಿ ಬ್ಯಾಟಿಂಗ್ ಮಾಡಲ್ಲ. ಟಿ20 ಕೂಡ ಬಿಗ್ ಗೇಮ್ ಎಂದು ಭಾವಿಸಿ ಸಮಯ ತೆಗೆದುಕೊಂಡು ಬಳಿಕ ಟಾರ್ಗೆಟ್ ಮಾಡುತ್ತೇನೆ. ಏಕಾಏಕಿ ಬಿಗ್ ಶಾಟ್ಗಳಿಗೆ ಕೈ ಹಾಕಲ್ಲ ಎಂದರು.
ಇದನ್ನೂ ಓದಿ: ಇಂದು, ನಾಳೆ ರಾಜ್ಯದಲ್ಲಿ ವರುಣನ ಆರ್ಭಟ; ಈ ಜಿಲ್ಲೆಗಳಲ್ಲಿ ಭಾರೀ ಮಳೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ