ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಪೊಲೀಸ್ ಅಧಿಕಾರಿಗಳಿಂದ ಸ್ಥಳ ಮಹಜರು
2 ಫೋನ್ಗಳನ್ನ FSLಗೆ ರವಾನಿಸಿ ಡೇಟಾ ರಿಟ್ರೀವಲ್ ಮಾಡಲಿರೋ ಪೊಲೀಸರು
ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್ ಕಾಲ್ಗಳ ಬಗ್ಗೆ ತಪಾಸಣೆ
ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಸ್ಯಾಂಡಲ್ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಆಪ್ತರು, ಸ್ನೇಹಿತರು, ನಟರು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಮನೆಯಲ್ಲಿ ಸಾಲು, ಸಾಲು ದುರಂತ.. ಲವ್ಲಿಸ್ಟಾರ್ ಪ್ರೇಮ್ ಭಾವುಕ
ಇದೀಗ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಪೊಲೀಸರು ಸೌಂದರ್ಯ ಜಗದೀಶ್ ಅವರ ಮೊಬೈಲ್ ಸೀಜ್ ಮಾಡಿದ್ದಾರೆ. ಸೌಂದರ್ಯ ಜಗದೀಶ್ರಿಗೆ ಸೇರಿದ ಎರಡು ಫೋನ್ಗಳನ್ನು ಪೊಲೀಸರು ಈಗಾಗಲೇ ಸೀಜ್ ಮಾಡಿಕೊಂಡಿದ್ದಾರೆ. ನಂತರ ಪೊಲೀಸರು ಎಫ್.ಎಸ್.ಎಲ್ಗೆ ಮೊಬೈಲ್ ರವಾನಿಸಿ ಅದರಲ್ಲಿರೋ ಡೇಟಾ ರಿಟ್ರೀವಲ್ ಮಾಡಿಸಲಿದ್ದಾರಂತೆ. ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್ ಕಾಲ್ಗಳ ಬಗ್ಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಸದ್ಯ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್ನ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲಾಗುತ್ತದೆ. ಸುಗುಣ ಆಸ್ಪತ್ರೆ ವೈದ್ಯರ ಮೆಮೊ ಆಧರಿಸಿ ದೂರು ದಾಖಲಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ನಿರ್ಮಾಪಕ್ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಕೇಸ್ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಪೊಲೀಸ್ ಅಧಿಕಾರಿಗಳಿಂದ ಸ್ಥಳ ಮಹಜರು
2 ಫೋನ್ಗಳನ್ನ FSLಗೆ ರವಾನಿಸಿ ಡೇಟಾ ರಿಟ್ರೀವಲ್ ಮಾಡಲಿರೋ ಪೊಲೀಸರು
ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್ ಕಾಲ್ಗಳ ಬಗ್ಗೆ ತಪಾಸಣೆ
ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಸ್ಯಾಂಡಲ್ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಆಪ್ತರು, ಸ್ನೇಹಿತರು, ನಟರು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಮನೆಯಲ್ಲಿ ಸಾಲು, ಸಾಲು ದುರಂತ.. ಲವ್ಲಿಸ್ಟಾರ್ ಪ್ರೇಮ್ ಭಾವುಕ
ಇದೀಗ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಪೊಲೀಸರು ಸೌಂದರ್ಯ ಜಗದೀಶ್ ಅವರ ಮೊಬೈಲ್ ಸೀಜ್ ಮಾಡಿದ್ದಾರೆ. ಸೌಂದರ್ಯ ಜಗದೀಶ್ರಿಗೆ ಸೇರಿದ ಎರಡು ಫೋನ್ಗಳನ್ನು ಪೊಲೀಸರು ಈಗಾಗಲೇ ಸೀಜ್ ಮಾಡಿಕೊಂಡಿದ್ದಾರೆ. ನಂತರ ಪೊಲೀಸರು ಎಫ್.ಎಸ್.ಎಲ್ಗೆ ಮೊಬೈಲ್ ರವಾನಿಸಿ ಅದರಲ್ಲಿರೋ ಡೇಟಾ ರಿಟ್ರೀವಲ್ ಮಾಡಿಸಲಿದ್ದಾರಂತೆ. ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್ ಕಾಲ್ಗಳ ಬಗ್ಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಸದ್ಯ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್ನ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲಾಗುತ್ತದೆ. ಸುಗುಣ ಆಸ್ಪತ್ರೆ ವೈದ್ಯರ ಮೆಮೊ ಆಧರಿಸಿ ದೂರು ದಾಖಲಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ನಿರ್ಮಾಪಕ್ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಕೇಸ್ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ