newsfirstkannada.com

ನಿರ್ಮಾಪಕ ಸೌಂದರ್ಯ ಜಗದೀಶ್ ಮನೆಯಲ್ಲಿ ಸಾಲು, ಸಾಲು ದುರಂತ.. ಲವ್ಲಿಸ್ಟಾರ್ ಪ್ರೇಮ್ ಭಾವುಕ

Share :

Published April 14, 2024 at 2:30pm

    ಸೌಂದರ್ಯ ಜಗದೀಶ್ ಕಷ್ಟ ಅಂತ ಯಾವತ್ತೂ ಹೇಳಿಕೊಂಡವರಲ್ಲ

    ಜಗದೀಶ್ ಅವರಿಗೆ ಹಣಕಾಸಿನ ಸಮಸ್ಯೆ ಇರಲಿಲ್ಲ ಎಂದ ನಟ ಪ್ರೇಮ್‌

    ಸೌಂದರ್ಯ ಜಗದೀಶ್ ಸಾವಿನ ಸುದ್ದಿ ಕೇಳಿ ಶಾಕ್‌ ಆದ ಸ್ಯಾಂಡಲ್‌ವುಡ್

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಸ್ಯಾಂಡಲ್‌ವುಡ್‌ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಆಪ್ತರು, ಸ್ನೇಹಿತರು, ನಟರು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

ನಟ ಲವ್ಲಿಸ್ಟಾರ್ ಪ್ರೇಮ್ ಅವರು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸೌಂದರ್ಯ ಜಗದೀಶ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಪ್ರೇಮ್ ಅವರು, ಇತ್ತೀಚೆಗೆ ಅವರ ಆತ್ಮೀಯ ಡ್ರೈವರ್ ನಿಧನರಾಗಿದ್ದರು. ಅವರ ಅತ್ತೆ ಕೂಡ ತೀರಿಕೊಂಡಿದ್ರು. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯ್ತು. ಮೊನ್ನೆ ತಾನೇ ಮಗಳ ಮದುವೆ ಅದ್ದೂರಿಯಾಗಿ ಮಾಡಿದ್ರು. ಮದುವೆಯಲ್ಲಿ ಖುಷಿ, ಖುಷಿಯಾಗಿ ಇದ್ದರು.

ಇದನ್ನೂ ಓದಿ: VIDEO: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಸುತ್ತ ಅನುಮಾನ.. ಅಸಲಿಗೆ ನಡೆದಿದ್ದೇನು?

ಸೌಂದರ್ಯ ಜಗದೀಶ್ ಅವರು ಕಷ್ಟ ಅಂತ ಯಾವತ್ತೂ ಹೇಳಿಕೊಂಡವರಲ್ಲ. ಎಲ್ಲರಿಗೂ ಸಹಾಯ ಮಾಡುತ್ತಿದ್ದ ವ್ಯಕ್ತಿ. ನಾಳೆ ಸಂಜೆ ಮನೆಗೆ ಬನ್ನಿ ಮೀಟ್ ಆಗೋಣ ಅಂತ ಹೇಳಿದ್ದರು. ಅವರಿಗೆ ಹಣಕಾಸಿನ ಸಮಸ್ಯೆ ಏನು ಇರಲಿಲ್ಲ. ಕಷ್ಟ ಅಂತ ಬಂದ್ರೆ ಸಹಾಯ ಮಾಡುತ್ತಿದ್ದರು. ಸೌಂದರ್ಯ ಜಗದೀಶ್ ಅವರ ಕುಟುಂಬಕ್ಕೆ ಈ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟ ಪ್ರೇಮ್ ಹೇಳಿದ್ದಾರೆ.

ಸದ್ಯ ಸೌಂದರ್ಯ ಜಗದೀಶ್ ಅವರ ಮನೆ ಬಳಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟ್‌ ಮುಗಿದ ಮೇಲೆ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿರ್ಮಾಪಕ ಸೌಂದರ್ಯ ಜಗದೀಶ್ ಮನೆಯಲ್ಲಿ ಸಾಲು, ಸಾಲು ದುರಂತ.. ಲವ್ಲಿಸ್ಟಾರ್ ಪ್ರೇಮ್ ಭಾವುಕ

https://newsfirstlive.com/wp-content/uploads/2024/04/Lovely-Star-Prem.jpg

    ಸೌಂದರ್ಯ ಜಗದೀಶ್ ಕಷ್ಟ ಅಂತ ಯಾವತ್ತೂ ಹೇಳಿಕೊಂಡವರಲ್ಲ

    ಜಗದೀಶ್ ಅವರಿಗೆ ಹಣಕಾಸಿನ ಸಮಸ್ಯೆ ಇರಲಿಲ್ಲ ಎಂದ ನಟ ಪ್ರೇಮ್‌

    ಸೌಂದರ್ಯ ಜಗದೀಶ್ ಸಾವಿನ ಸುದ್ದಿ ಕೇಳಿ ಶಾಕ್‌ ಆದ ಸ್ಯಾಂಡಲ್‌ವುಡ್

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಸ್ಯಾಂಡಲ್‌ವುಡ್‌ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಆಪ್ತರು, ಸ್ನೇಹಿತರು, ನಟರು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

ನಟ ಲವ್ಲಿಸ್ಟಾರ್ ಪ್ರೇಮ್ ಅವರು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸೌಂದರ್ಯ ಜಗದೀಶ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಪ್ರೇಮ್ ಅವರು, ಇತ್ತೀಚೆಗೆ ಅವರ ಆತ್ಮೀಯ ಡ್ರೈವರ್ ನಿಧನರಾಗಿದ್ದರು. ಅವರ ಅತ್ತೆ ಕೂಡ ತೀರಿಕೊಂಡಿದ್ರು. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯ್ತು. ಮೊನ್ನೆ ತಾನೇ ಮಗಳ ಮದುವೆ ಅದ್ದೂರಿಯಾಗಿ ಮಾಡಿದ್ರು. ಮದುವೆಯಲ್ಲಿ ಖುಷಿ, ಖುಷಿಯಾಗಿ ಇದ್ದರು.

ಇದನ್ನೂ ಓದಿ: VIDEO: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಸುತ್ತ ಅನುಮಾನ.. ಅಸಲಿಗೆ ನಡೆದಿದ್ದೇನು?

ಸೌಂದರ್ಯ ಜಗದೀಶ್ ಅವರು ಕಷ್ಟ ಅಂತ ಯಾವತ್ತೂ ಹೇಳಿಕೊಂಡವರಲ್ಲ. ಎಲ್ಲರಿಗೂ ಸಹಾಯ ಮಾಡುತ್ತಿದ್ದ ವ್ಯಕ್ತಿ. ನಾಳೆ ಸಂಜೆ ಮನೆಗೆ ಬನ್ನಿ ಮೀಟ್ ಆಗೋಣ ಅಂತ ಹೇಳಿದ್ದರು. ಅವರಿಗೆ ಹಣಕಾಸಿನ ಸಮಸ್ಯೆ ಏನು ಇರಲಿಲ್ಲ. ಕಷ್ಟ ಅಂತ ಬಂದ್ರೆ ಸಹಾಯ ಮಾಡುತ್ತಿದ್ದರು. ಸೌಂದರ್ಯ ಜಗದೀಶ್ ಅವರ ಕುಟುಂಬಕ್ಕೆ ಈ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟ ಪ್ರೇಮ್ ಹೇಳಿದ್ದಾರೆ.

ಸದ್ಯ ಸೌಂದರ್ಯ ಜಗದೀಶ್ ಅವರ ಮನೆ ಬಳಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟ್‌ ಮುಗಿದ ಮೇಲೆ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More