newsfirstkannada.com

VIDEO: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಸುತ್ತ ಅನುಮಾನ.. ಅಸಲಿಗೆ ನಡೆದಿದ್ದೇನು?

Share :

Published April 14, 2024 at 1:22pm

    ಮನೆಯಲ್ಲಿ ನೇಣಿಗೆ ಶರಣಾಗಿದ ನಿರ್ಮಾಪಕ ಸೌಂದರ್ಯ ಜಗದೀಶ್

    ಬೆಳಗ್ಗೆ 9 ಗಂಟೆಗೆ ಸುಗುಣ ಆಸ್ಪತ್ರೆಗೆ ಕರೆದುಕೊಂಡು ಬಂದ ಕುಟುಂಬಸ್ಥರು

    ಸೌಂದರ್ಯ ಜಗದೀಶ್‌ಗೆ ಹೃದಯಾಘಾತ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು?

ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಸೌಂದರ್ಯ ಜಗದೀಶ್ ಅವರು ಮೃತ ದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಏನು ಅನ್ನೋದರ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ.. ಆಪ್ತ ಸ್ನೇಹಿತ ಶ್ರೇಯಸ್‌ ಬಿಚ್ಚಿಟ್ರು ಅಸಲಿ ವಿಷಯ

ಇಂದು ಬೆಳಗ್ಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಬೆಳಗ್ಗೆ 9 ಗಂಟೆಗೆ ಅವರನ್ನು ಸುಗುಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯ ವೈದ್ಯರು ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಸೌಂದರ್ಯ ಜಗದೀಶ್ ಅವರ ಆಪ್ತ ಸ್ನೇಹಿತ ಶ್ರೇಯಸ್ ಅವರು ಮಾಹಿತಿ ನೀಡಿದರು. ಜಗದೀಶ್‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಅವರ ಸಾವಿಗೆ ಹೃದಯಾಘಾತ ಕಾರಣ ಅಂತ ನಾವ್ಯಾರು ಹೇಳಿಲ್ಲ. ಸಾವಿಗೆ ಕಾರಣ ಸದ್ಯ ಗೊತ್ತಾಗಿಲ್ಲ. ಪೋಸ್ಟ್ ಮಾರ್ಟಮ್‌ ಮುಗಿದು ತನಿಖೆ ನಡೆದ ಮೇಲೆ ಸತ್ಯವಾದ ಸಂಗತಿ ಗೊತ್ತಾಗಲಿದೆ. ಆ ಮೇಲೆ ನಾವು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಎಂದು ಶ್ರೇಯಸ್ ಅವರು ಹೇಳಿದರು.

ಇನ್ನು, ಸೌಂದರ್ಯ ಜಗದೀಶ್ ಅವರಿಗೆ ಯಾವುದೇ ಗಂಭೀರ ಆರೋಗ್ಯದ ಸಮಸ್ಯೆ ಇರಲಿಲ್ಲ. ಬ್ಯುಸಿನೆಸ್‌ನಲ್ಲಿ ಲಾಸ್‌ ಆಗಿದೆ ಅನ್ನೋದಕ್ಕೂ ಇದಕ್ಕೂ ಸಂಬಂಧವಿಲ್ಲ. ಆತ್ಮಹತ್ಯೆ ಯತ್ನಿಸಿದ ಕೂಡಲೇ ನಾವು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಹೃದಯಾಘಾತ ಅಂತ ನಾವು ಯಾರಿಗೂ ಹೇಳಿಲ್ಲ. ಬೇರೆ ಯಾವ ಕಾರಣವೂ ಗೊತ್ತಿಲ್ಲ. ನಾವ್ಯಾರು ತಪ್ಪು ಮಾಹಿತಿ ನೀಡಿಲ್ಲ. ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಆದ ಮೇಲೆ ಅಂತ್ಯಕ್ರಿಯೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಶ್ರೇಯಸ್ ತಿಳಿಸಿದ್ದಾರೆ.

VIDEO: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಸುತ್ತ ಅನುಮಾನ.. ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/04/Soundarya-Jagadish-1.jpg

    ಮನೆಯಲ್ಲಿ ನೇಣಿಗೆ ಶರಣಾಗಿದ ನಿರ್ಮಾಪಕ ಸೌಂದರ್ಯ ಜಗದೀಶ್

    ಬೆಳಗ್ಗೆ 9 ಗಂಟೆಗೆ ಸುಗುಣ ಆಸ್ಪತ್ರೆಗೆ ಕರೆದುಕೊಂಡು ಬಂದ ಕುಟುಂಬಸ್ಥರು

    ಸೌಂದರ್ಯ ಜಗದೀಶ್‌ಗೆ ಹೃದಯಾಘಾತ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು?

ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಸೌಂದರ್ಯ ಜಗದೀಶ್ ಅವರು ಮೃತ ದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಏನು ಅನ್ನೋದರ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ.. ಆಪ್ತ ಸ್ನೇಹಿತ ಶ್ರೇಯಸ್‌ ಬಿಚ್ಚಿಟ್ರು ಅಸಲಿ ವಿಷಯ

ಇಂದು ಬೆಳಗ್ಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಬೆಳಗ್ಗೆ 9 ಗಂಟೆಗೆ ಅವರನ್ನು ಸುಗುಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯ ವೈದ್ಯರು ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಸೌಂದರ್ಯ ಜಗದೀಶ್ ಅವರ ಆಪ್ತ ಸ್ನೇಹಿತ ಶ್ರೇಯಸ್ ಅವರು ಮಾಹಿತಿ ನೀಡಿದರು. ಜಗದೀಶ್‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಅವರ ಸಾವಿಗೆ ಹೃದಯಾಘಾತ ಕಾರಣ ಅಂತ ನಾವ್ಯಾರು ಹೇಳಿಲ್ಲ. ಸಾವಿಗೆ ಕಾರಣ ಸದ್ಯ ಗೊತ್ತಾಗಿಲ್ಲ. ಪೋಸ್ಟ್ ಮಾರ್ಟಮ್‌ ಮುಗಿದು ತನಿಖೆ ನಡೆದ ಮೇಲೆ ಸತ್ಯವಾದ ಸಂಗತಿ ಗೊತ್ತಾಗಲಿದೆ. ಆ ಮೇಲೆ ನಾವು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಎಂದು ಶ್ರೇಯಸ್ ಅವರು ಹೇಳಿದರು.

ಇನ್ನು, ಸೌಂದರ್ಯ ಜಗದೀಶ್ ಅವರಿಗೆ ಯಾವುದೇ ಗಂಭೀರ ಆರೋಗ್ಯದ ಸಮಸ್ಯೆ ಇರಲಿಲ್ಲ. ಬ್ಯುಸಿನೆಸ್‌ನಲ್ಲಿ ಲಾಸ್‌ ಆಗಿದೆ ಅನ್ನೋದಕ್ಕೂ ಇದಕ್ಕೂ ಸಂಬಂಧವಿಲ್ಲ. ಆತ್ಮಹತ್ಯೆ ಯತ್ನಿಸಿದ ಕೂಡಲೇ ನಾವು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಹೃದಯಾಘಾತ ಅಂತ ನಾವು ಯಾರಿಗೂ ಹೇಳಿಲ್ಲ. ಬೇರೆ ಯಾವ ಕಾರಣವೂ ಗೊತ್ತಿಲ್ಲ. ನಾವ್ಯಾರು ತಪ್ಪು ಮಾಹಿತಿ ನೀಡಿಲ್ಲ. ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಆದ ಮೇಲೆ ಅಂತ್ಯಕ್ರಿಯೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಶ್ರೇಯಸ್ ತಿಳಿಸಿದ್ದಾರೆ.

Load More