ಟೈಯರ್ ಬ್ಲಾಸ್ಟ್ ಆಗಿ ಪಾದಚಾರಿಗಳ ಮೇಲೆ ಬಿದ್ದ ಟಿಪ್ಪರ್ ವಾಹನ
ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದವರು ಮಸಣಕ್ಕೆ
ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಲ್ಲಿ ಭಯಾನಕ ದುರಂತ ಸಂಭವಿಸಿದೆ. ಟೈಯರ್ ಬ್ಲಾಸ್ಟ್ ಆದ ಟಿಪ್ಪರ್ ಪಲ್ಟಿ ಹೊಡೆದಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮೃತರೆಲ್ಲಾ ಬಾದರದಿನ್ನಿ ಗ್ರಾಮದವರು ಎನ್ನಲಾಗಿದೆ.
ಟಿಪ್ಪರ್ ವಾಹನದ ಟೈಯರ್ ಬ್ಲಾಸ್ಟ್ ಆಗಿ ಪಾದಚಾರಿಗಳ ಮೇಲೆ ಉರುಳಿದೆ. ಮೃತರೆಲ್ಲರೂ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದರು. ರಸ್ತೆ ಬದಿ ನಡೆದುಕೊಂಡು ಹೋಗುವಾಗ ಗರಸು ತುಂಬಿದ್ದ ಟಿಪ್ಪರ್ನ ಮುಂದಿನ ಟೈಯರ್ ಬ್ಲಾಸ್ಟ್ ಆಗಿದೆ. ನಡೆದುಕೊಂಡ ಹೊರಟಿದ್ದವರ ಮೇಲೆ ಟಿಪ್ಪರ್ ಬಿದ್ದಿದೆ. ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರಾಗಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಆಪ್ತ ನಿರ್ಮಾಪಕ.. ಸ್ನೇಹ ಜೀವಿಯಾಗಿದ್ದ ಸೌಂದರ್ಯ ಜಗದೀಶ್ ಬದುಕಲ್ಲಿ ಆಗಿದ್ದೇನು?
ಐವರು ಮೃತರ ವಿವರ
ಯಂಕಪ್ಪ ಶಿವಪ್ಪ ತೋಳಮಟ್ಟಿ (70)
ಯಲ್ಲವ್ವ ಯಂಕಪ್ಪ ತೋಳಮಟ್ಟಿ (ಪತ್ನಿ) (60)
ಪುಂಡಲೀಕ್ ಯಂಕಪ್ಪ ತೋಳಮಟ್ಟಿ (ಮಗ)(35)
ನಾಗವ್ವ ಅಶೋಕ ಬಮ್ಮಣ್ಣವರ (ಯಂಕಪ್ಪ ಅವರ ಮಗಳು) (45)
ಅಶೋಕ ನಿಂಗಪ್ಪ ಬಮ್ಮಣ್ಣವರ (ಅಳಿಯ- ಮಗಳ ಗಂಡ) (50)
ಬಾಗಲಕೋಟೆ ಜಿಲ್ಲೆಯ ಬಾದರದಿನ್ನಿ ಗ್ರಾಮದಲ್ಲಿ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಈ ದುರಂತ ಸಂಭವಿಸಿದೆ. ಹೊನ್ಯಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮಾಹಿತಿ ಕಲೆ ಹಾಕುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೈಯರ್ ಬ್ಲಾಸ್ಟ್ ಆಗಿ ಪಾದಚಾರಿಗಳ ಮೇಲೆ ಬಿದ್ದ ಟಿಪ್ಪರ್ ವಾಹನ
ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದವರು ಮಸಣಕ್ಕೆ
ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಲ್ಲಿ ಭಯಾನಕ ದುರಂತ ಸಂಭವಿಸಿದೆ. ಟೈಯರ್ ಬ್ಲಾಸ್ಟ್ ಆದ ಟಿಪ್ಪರ್ ಪಲ್ಟಿ ಹೊಡೆದಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮೃತರೆಲ್ಲಾ ಬಾದರದಿನ್ನಿ ಗ್ರಾಮದವರು ಎನ್ನಲಾಗಿದೆ.
ಟಿಪ್ಪರ್ ವಾಹನದ ಟೈಯರ್ ಬ್ಲಾಸ್ಟ್ ಆಗಿ ಪಾದಚಾರಿಗಳ ಮೇಲೆ ಉರುಳಿದೆ. ಮೃತರೆಲ್ಲರೂ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದರು. ರಸ್ತೆ ಬದಿ ನಡೆದುಕೊಂಡು ಹೋಗುವಾಗ ಗರಸು ತುಂಬಿದ್ದ ಟಿಪ್ಪರ್ನ ಮುಂದಿನ ಟೈಯರ್ ಬ್ಲಾಸ್ಟ್ ಆಗಿದೆ. ನಡೆದುಕೊಂಡ ಹೊರಟಿದ್ದವರ ಮೇಲೆ ಟಿಪ್ಪರ್ ಬಿದ್ದಿದೆ. ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರಾಗಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಆಪ್ತ ನಿರ್ಮಾಪಕ.. ಸ್ನೇಹ ಜೀವಿಯಾಗಿದ್ದ ಸೌಂದರ್ಯ ಜಗದೀಶ್ ಬದುಕಲ್ಲಿ ಆಗಿದ್ದೇನು?
ಐವರು ಮೃತರ ವಿವರ
ಯಂಕಪ್ಪ ಶಿವಪ್ಪ ತೋಳಮಟ್ಟಿ (70)
ಯಲ್ಲವ್ವ ಯಂಕಪ್ಪ ತೋಳಮಟ್ಟಿ (ಪತ್ನಿ) (60)
ಪುಂಡಲೀಕ್ ಯಂಕಪ್ಪ ತೋಳಮಟ್ಟಿ (ಮಗ)(35)
ನಾಗವ್ವ ಅಶೋಕ ಬಮ್ಮಣ್ಣವರ (ಯಂಕಪ್ಪ ಅವರ ಮಗಳು) (45)
ಅಶೋಕ ನಿಂಗಪ್ಪ ಬಮ್ಮಣ್ಣವರ (ಅಳಿಯ- ಮಗಳ ಗಂಡ) (50)
ಬಾಗಲಕೋಟೆ ಜಿಲ್ಲೆಯ ಬಾದರದಿನ್ನಿ ಗ್ರಾಮದಲ್ಲಿ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಈ ದುರಂತ ಸಂಭವಿಸಿದೆ. ಹೊನ್ಯಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮಾಹಿತಿ ಕಲೆ ಹಾಕುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ