ಉಪನಾಯಕ ಹಾರ್ದಿಕ್ ಪಾಂಡ್ಯಗೆ ಆಯ್ಕೆ ಸಮಿತಿ ಎಚ್ಚರಿಕೆ
ದ್ರಾವಿಡ್, ರೋಹಿತ್ ಸಮ್ಮುಖದಲ್ಲಿ ನಡೆದ ಬಿಸಿಸಿಐ ಸಭೆ
ಟಿ-20 ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಚರ್ಚೆ
ಐಪಿಎಲ್ ಬೆನ್ನಲ್ಲೇ ಟಿ-20 ವಿಶ್ವಕಪ್ ಟೂರ್ನಿ ಎದುರಾಗಲಿದೆ. ಅದೇ ಕಾರಣಕ್ಕೆ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಳ್ತಿದ್ದು, ಬಲಿಷ್ಠ ತಂಡ ಕಟ್ಟಲು ಸರ್ಕಸ್ ಮಾಡ್ತಿದೆ. ಅದರಂತೆ ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಕಳೆದ ವಾರದ ಸಭೆ ನಡೆದಿತ್ತು. ಕೋಚ್ ರಾಹುಲ್ ದ್ರಾವಿಡ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ಸಭೆ ನಡೆದಿದ್ದು, ಹಾರ್ದಿಕ್ ಆಯ್ಕೆಯ ಬಗ್ಗೆ ಪ್ರಸ್ತಾಪ ಆಗಿದೆ.
ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪರ್ಫಾರ್ಮೆನ್ಸ್ ಬಗ್ಗೆ ಚರ್ಚೆ ಮಾಡಲಾಗಿದೆ. ಒಂದು ವೇಳೆ ಪಾಂಡ್ಯ ಮತ್ತೆ ಪುಟಿದೇಳದಿದ್ದರೆ ಟಿ-20 ವಿಶ್ವಕಪ್ಗೆ ಆಯ್ಕೆ ಆಗೋದು ಬಹುತೇಕ ಡೌಟ್ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್ನಲ್ಲಿ ಫಿನಿಶರ್ ರೋಲ್ ಮಾಡಲು ಕಾರ್ತಿಕ್ಗೆ ಇಬ್ಬರು ಆಗಾರರು ಅಡ್ಡಿ..!
ಇಲ್ಲಿವರೆಗೆ ಐಪಿಎಲ್ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿರುವ ಪಾಂಡ್ಯ, ಕೇವಲ 131 ರನ್ಗಳಿಸಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿ ಜವಾಬ್ದಾರಿಯನ್ನೂ ಸರಿಯಾಗಿ ಮಾಡ್ತಿಲ್ಲ. ಕೇವಲ 4 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, ಬ್ಯಾಟರ್ಗಳು ಸರಿಯಾಗಿ ಬೆಂಡೆತ್ತಿದ್ದಾರೆ. ನಿಯಮಿತವಾಗಿ ಬೌಲಿಂಗ್ ಮಾಡದಿರುವ ಬಗ್ಗೆಯೂ ಚರ್ಚೆ ಆಗಿದೆ. ವಿವಿಧ ಹಂತಗಳಲ್ಲಿ ಬೌಲಿಂಗ್ ಮಾಡಿರುವ ಅವರು, ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದಾರೆ. ಪವರ್ಪ್ಲೇ ಬೌಲರ್ ಆಗಿ, 4 ಓವರ್ಗಳಲ್ಲಿ 44 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಮಿಡಲ್ ಆರ್ಡರ್ನಲ್ಲಿ 6 ಓವರ್ ಮಾಡಿ 62 ರನ್ ನೀಡಿದ್ದಾರೆ. ಡೆತ್ ಬೌಲರ್ನಲ್ಲಿ 1 ಓವರ್ ಮಾಡಿ 26 ರನ್ ನೀಡಿದ್ದಾರೆ. ಹೀಗಾಗಿ ಮುಂದಿನ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಿಸಿಸಿಐನ ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇದನ್ನೂ ಓದಿ:ಶೀಘ್ರದಲ್ಲೇ ಆರ್ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
ಹಾರ್ದಿಕ್ ಜಾಗಕ್ಕೆ ಶಿವಂ ದುಬೆ ಹೆಸರು ಅಗ್ರಸ್ಥಾನದಲ್ಲಿದೆ. ದುಬೆ ಅವರನ್ನು ಸಿಎಸ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ತಿದೆ. ಆಲ್ರೌಂಡರ್ ಆಗಿರುವ ದುಬೆಯನ್ನು ಬೌಲಿಂಗ್ಗೆ ಬಳಸಿಕೊಳ್ಳದೇ ಇರೋದು ದುಬೆಗೆ ಹೊಡೆತ ನೀಡಿದೆ. ಆದರೂ, ಸ್ಪಿನ್ನರ್ಗಳ ವಿರುದ್ಧ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡ್ತಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್ಗೆ ಪಾಂಡ್ಯ ಬದಲಾಗಿ ದುಬೆ ಆಯ್ಕೆಯಾದರೂ ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉಪನಾಯಕ ಹಾರ್ದಿಕ್ ಪಾಂಡ್ಯಗೆ ಆಯ್ಕೆ ಸಮಿತಿ ಎಚ್ಚರಿಕೆ
ದ್ರಾವಿಡ್, ರೋಹಿತ್ ಸಮ್ಮುಖದಲ್ಲಿ ನಡೆದ ಬಿಸಿಸಿಐ ಸಭೆ
ಟಿ-20 ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಚರ್ಚೆ
ಐಪಿಎಲ್ ಬೆನ್ನಲ್ಲೇ ಟಿ-20 ವಿಶ್ವಕಪ್ ಟೂರ್ನಿ ಎದುರಾಗಲಿದೆ. ಅದೇ ಕಾರಣಕ್ಕೆ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಳ್ತಿದ್ದು, ಬಲಿಷ್ಠ ತಂಡ ಕಟ್ಟಲು ಸರ್ಕಸ್ ಮಾಡ್ತಿದೆ. ಅದರಂತೆ ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಕಳೆದ ವಾರದ ಸಭೆ ನಡೆದಿತ್ತು. ಕೋಚ್ ರಾಹುಲ್ ದ್ರಾವಿಡ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ಸಭೆ ನಡೆದಿದ್ದು, ಹಾರ್ದಿಕ್ ಆಯ್ಕೆಯ ಬಗ್ಗೆ ಪ್ರಸ್ತಾಪ ಆಗಿದೆ.
ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪರ್ಫಾರ್ಮೆನ್ಸ್ ಬಗ್ಗೆ ಚರ್ಚೆ ಮಾಡಲಾಗಿದೆ. ಒಂದು ವೇಳೆ ಪಾಂಡ್ಯ ಮತ್ತೆ ಪುಟಿದೇಳದಿದ್ದರೆ ಟಿ-20 ವಿಶ್ವಕಪ್ಗೆ ಆಯ್ಕೆ ಆಗೋದು ಬಹುತೇಕ ಡೌಟ್ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್ನಲ್ಲಿ ಫಿನಿಶರ್ ರೋಲ್ ಮಾಡಲು ಕಾರ್ತಿಕ್ಗೆ ಇಬ್ಬರು ಆಗಾರರು ಅಡ್ಡಿ..!
ಇಲ್ಲಿವರೆಗೆ ಐಪಿಎಲ್ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿರುವ ಪಾಂಡ್ಯ, ಕೇವಲ 131 ರನ್ಗಳಿಸಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿ ಜವಾಬ್ದಾರಿಯನ್ನೂ ಸರಿಯಾಗಿ ಮಾಡ್ತಿಲ್ಲ. ಕೇವಲ 4 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, ಬ್ಯಾಟರ್ಗಳು ಸರಿಯಾಗಿ ಬೆಂಡೆತ್ತಿದ್ದಾರೆ. ನಿಯಮಿತವಾಗಿ ಬೌಲಿಂಗ್ ಮಾಡದಿರುವ ಬಗ್ಗೆಯೂ ಚರ್ಚೆ ಆಗಿದೆ. ವಿವಿಧ ಹಂತಗಳಲ್ಲಿ ಬೌಲಿಂಗ್ ಮಾಡಿರುವ ಅವರು, ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದಾರೆ. ಪವರ್ಪ್ಲೇ ಬೌಲರ್ ಆಗಿ, 4 ಓವರ್ಗಳಲ್ಲಿ 44 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಮಿಡಲ್ ಆರ್ಡರ್ನಲ್ಲಿ 6 ಓವರ್ ಮಾಡಿ 62 ರನ್ ನೀಡಿದ್ದಾರೆ. ಡೆತ್ ಬೌಲರ್ನಲ್ಲಿ 1 ಓವರ್ ಮಾಡಿ 26 ರನ್ ನೀಡಿದ್ದಾರೆ. ಹೀಗಾಗಿ ಮುಂದಿನ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಿಸಿಸಿಐನ ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇದನ್ನೂ ಓದಿ:ಶೀಘ್ರದಲ್ಲೇ ಆರ್ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
ಹಾರ್ದಿಕ್ ಜಾಗಕ್ಕೆ ಶಿವಂ ದುಬೆ ಹೆಸರು ಅಗ್ರಸ್ಥಾನದಲ್ಲಿದೆ. ದುಬೆ ಅವರನ್ನು ಸಿಎಸ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ತಿದೆ. ಆಲ್ರೌಂಡರ್ ಆಗಿರುವ ದುಬೆಯನ್ನು ಬೌಲಿಂಗ್ಗೆ ಬಳಸಿಕೊಳ್ಳದೇ ಇರೋದು ದುಬೆಗೆ ಹೊಡೆತ ನೀಡಿದೆ. ಆದರೂ, ಸ್ಪಿನ್ನರ್ಗಳ ವಿರುದ್ಧ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡ್ತಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್ಗೆ ಪಾಂಡ್ಯ ಬದಲಾಗಿ ದುಬೆ ಆಯ್ಕೆಯಾದರೂ ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ