‘ಜೈಲಿನಲ್ಲಿ ಕೇಜ್ರಿವಾಲ್ಗೆ ಸರಿಯಾಗಿ ಇನ್ಸುಲಿನ್ ಕೊಡುತ್ತಿಲ್ಲ’
ಇದು ಜೈಲಿನಲ್ಲಿಟ್ಟು ಕೊಲ್ಲುವ ಪ್ಲಾನ್ ಎಂದ ಸಚಿವೆ ಅತಿಷಿ
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ಕೇಜ್ರಿವಾಲ್
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಕೇಜ್ರಿವಾಲ್ ಬಂಧನ ಆಗಿದ್ದು ತಿಹಾರ್ ಜೈಲು ಸೇರಿದ್ದಾರೆ. ಕೇಜ್ರಿವಾಲ್ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಿದ್ದು ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ರನ್ನು ಕಳೆದ ಮಾರ್ಚ್ 21ರಂದು ಇ.ಡಿ ಅಧಿಕಾರಿಗಳು ಬಂಧಿಸಿದ್ದರು.. ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯುತ್ತಿರುವ ಕೇಜ್ರಿವಾಲ್ ಇದೊಂದು ರಾಜಕೀಯ ಪಿತೂರಿ ಅಂತ ಹೇಳುತ್ತಲೇ ಬಂದಿದ್ದಾರೆ. ಈ ಬೆನ್ನಲ್ಲೇ ಆಪ್ ಸರ್ಕಾರದ ಸಚಿವೆ ಆತಿಷಿ ಮರ್ಲೇನಾ ಸಿಂಗ್ ಕೂಡ ಬಿಜೆಪಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮಹುವಾ ಮೊಯಿತ್ರಾ ಹೇಳಿದ್ದು ಸೆಕ್ಸ್ ಅಲ್ಲ, ಮತ್ತೇನು..? ಹೊಸ ವಿವಾದದಲ್ಲಿ ಟಿಎಂಸಿ ನಾಯಕಿ..!
ಜೈಲಿನಲ್ಲೇ ಕೇಜ್ರಿವಾಲ್ ಹತ್ಯೆಗೆ ನಡೆದಿತ್ತಾ ಸಂಚು?
ತಿಹಾರ್ ಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಕೊಲ್ಲುವ ಸಂಚು ರೂಪಿಸಲಾಗಿದೆ ಅಂತ ದೆಹಲಿಯ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಸಿಂಗ್ ಆರೋಪಿಸಿದ್ದಾರೆ. ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಜೀವ ತೆಗೆಯಲು ಷಡ್ಯಂತ್ರ ರೂಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ದೆಹಲಿಯ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಎದುರಿಸಲಾಗದ ಬಿಜೆಪಿ ಕೇಜ್ರಿವಾಲ್ರನ್ನು ಜೈಲಿನಲ್ಲಿಟ್ಟು ಕೊಲ್ಲಲು ಸಂಚು ರೂಪಿಸಿದೆ-ಆತಿಶಿ, ದೆಹಲಿ ಸಚಿವೆ
ಇದು ಜೈಲಿನಲ್ಲಿಟ್ಟು ಕೊಲ್ಲುವ ಪ್ಲಾನ್ ಎಂದ ಸಚಿವೆ ಅತಿಷಿ
ಕೇಜ್ರಿವಾಲ್ಗೆ ಟೈಪ್-2 ಡಯಾಬಿಟಿಸ್ ಇದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಜೈಲಿನಲ್ಲಿ ಪದೇ ಪದೆ ಮನವಿ ಮಾಡಿದ್ರೂ ಇನ್ಸುಲಿನ್ ಕೊಡದೇ ಅವರನ್ನು ಕೊಲ್ಲುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಆತಿಷಿ ಕಿಡಿಕಾರಿದ್ದಾರೆ. ಅರವಿಂದ್ ಕೇಜ್ರಿವಾಲ್ ತೀವ್ರ ಡಯಾಬಿಟಿಸ್ ಹೊಂದಿದ್ದು ಕಳೆದ 30 ವರ್ಷಗಳಿಂದ ಅವರಿಗೆ ಈ ಸಕ್ಕರೆ ಕಾಯಿಲೆ ಇದೆ.. ಕೇಜ್ರಿವಾಲ್ ಶುಗರ್ ಕಂಟ್ರೋಲ್ನಲ್ಲಿಡಲು ಪ್ರತಿದಿನ 46ರಿಂದ 54 ಯುನಿಟ್ವರೆಗೆ ಇನ್ಸುಲಿನ್ ಪಡೆಯುತ್ತಾರೆ. ಯಾವುದೇ ವೈದ್ಯರನ್ನು ಕೇಳಿ 54 ಯುನಿಟ್ ಇನ್ಸುಲಿನ್ ಪಡೆಯುವ ವ್ಯಕ್ತಿ ತೀವ್ರ ಡಯಾಬಿಟಿಸ್ ಎದುರಿಸುತ್ತಿರುವ ವ್ಯಕ್ತಿ ಅಂತ ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ..!
ಈ ಆರೋಪಗಳಿಗೆ ಇ.ಡಿ ಅಧಿಕಾರಿಗಳು ಹೇಳ್ತಿರೋದೇ ಬೇರೆ.. ಕೇಜ್ರಿವಾಲ್ ಮಾವಿನಹಣ್ಣು ಹಾಗೂ ಸಿಹಿತಿಂಡಿಗಳನ್ನ ಹೆಚ್ಚಾಗಿ ತಿನ್ನುತ್ತಾರೆ ಜೊತೆಗೆ ಸಕ್ಕರೆ ಇರುವ ಚಹಾ ಕೂಡ ಸೇವಿಸ್ತಾರೆ, ಹೀಗಾಗಿ ಅವರಿಗೆ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದಿದ್ದಾರೆ. ಈ ಬೆನ್ನಲ್ಲೇ ಸಚಿವೆ ಆತಿಷಿ ಹೊಸ ಬಾಂಬ್ ಸಿಡಿಸಿರೋದು ಸಂಚಲನಕ್ಕೆ ಕಾರಣ ಆಗಿದೆ.
ಇದನ್ನೂ ಓದಿ:ಇಂದು ಮೊದಲ ಹಂತದ ಮತದಾನ; ಅಣ್ಣಾಮಲೈ ಸೇರಿ ಅಖಾಡದಲ್ಲಿರೋ ಘಟಾನುಘಟಿಗಳು ಯಾಱರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
‘ಜೈಲಿನಲ್ಲಿ ಕೇಜ್ರಿವಾಲ್ಗೆ ಸರಿಯಾಗಿ ಇನ್ಸುಲಿನ್ ಕೊಡುತ್ತಿಲ್ಲ’
ಇದು ಜೈಲಿನಲ್ಲಿಟ್ಟು ಕೊಲ್ಲುವ ಪ್ಲಾನ್ ಎಂದ ಸಚಿವೆ ಅತಿಷಿ
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ಕೇಜ್ರಿವಾಲ್
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಕೇಜ್ರಿವಾಲ್ ಬಂಧನ ಆಗಿದ್ದು ತಿಹಾರ್ ಜೈಲು ಸೇರಿದ್ದಾರೆ. ಕೇಜ್ರಿವಾಲ್ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಿದ್ದು ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ರನ್ನು ಕಳೆದ ಮಾರ್ಚ್ 21ರಂದು ಇ.ಡಿ ಅಧಿಕಾರಿಗಳು ಬಂಧಿಸಿದ್ದರು.. ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯುತ್ತಿರುವ ಕೇಜ್ರಿವಾಲ್ ಇದೊಂದು ರಾಜಕೀಯ ಪಿತೂರಿ ಅಂತ ಹೇಳುತ್ತಲೇ ಬಂದಿದ್ದಾರೆ. ಈ ಬೆನ್ನಲ್ಲೇ ಆಪ್ ಸರ್ಕಾರದ ಸಚಿವೆ ಆತಿಷಿ ಮರ್ಲೇನಾ ಸಿಂಗ್ ಕೂಡ ಬಿಜೆಪಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮಹುವಾ ಮೊಯಿತ್ರಾ ಹೇಳಿದ್ದು ಸೆಕ್ಸ್ ಅಲ್ಲ, ಮತ್ತೇನು..? ಹೊಸ ವಿವಾದದಲ್ಲಿ ಟಿಎಂಸಿ ನಾಯಕಿ..!
ಜೈಲಿನಲ್ಲೇ ಕೇಜ್ರಿವಾಲ್ ಹತ್ಯೆಗೆ ನಡೆದಿತ್ತಾ ಸಂಚು?
ತಿಹಾರ್ ಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಕೊಲ್ಲುವ ಸಂಚು ರೂಪಿಸಲಾಗಿದೆ ಅಂತ ದೆಹಲಿಯ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಸಿಂಗ್ ಆರೋಪಿಸಿದ್ದಾರೆ. ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಜೀವ ತೆಗೆಯಲು ಷಡ್ಯಂತ್ರ ರೂಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ದೆಹಲಿಯ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಎದುರಿಸಲಾಗದ ಬಿಜೆಪಿ ಕೇಜ್ರಿವಾಲ್ರನ್ನು ಜೈಲಿನಲ್ಲಿಟ್ಟು ಕೊಲ್ಲಲು ಸಂಚು ರೂಪಿಸಿದೆ-ಆತಿಶಿ, ದೆಹಲಿ ಸಚಿವೆ
ಇದು ಜೈಲಿನಲ್ಲಿಟ್ಟು ಕೊಲ್ಲುವ ಪ್ಲಾನ್ ಎಂದ ಸಚಿವೆ ಅತಿಷಿ
ಕೇಜ್ರಿವಾಲ್ಗೆ ಟೈಪ್-2 ಡಯಾಬಿಟಿಸ್ ಇದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಜೈಲಿನಲ್ಲಿ ಪದೇ ಪದೆ ಮನವಿ ಮಾಡಿದ್ರೂ ಇನ್ಸುಲಿನ್ ಕೊಡದೇ ಅವರನ್ನು ಕೊಲ್ಲುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಆತಿಷಿ ಕಿಡಿಕಾರಿದ್ದಾರೆ. ಅರವಿಂದ್ ಕೇಜ್ರಿವಾಲ್ ತೀವ್ರ ಡಯಾಬಿಟಿಸ್ ಹೊಂದಿದ್ದು ಕಳೆದ 30 ವರ್ಷಗಳಿಂದ ಅವರಿಗೆ ಈ ಸಕ್ಕರೆ ಕಾಯಿಲೆ ಇದೆ.. ಕೇಜ್ರಿವಾಲ್ ಶುಗರ್ ಕಂಟ್ರೋಲ್ನಲ್ಲಿಡಲು ಪ್ರತಿದಿನ 46ರಿಂದ 54 ಯುನಿಟ್ವರೆಗೆ ಇನ್ಸುಲಿನ್ ಪಡೆಯುತ್ತಾರೆ. ಯಾವುದೇ ವೈದ್ಯರನ್ನು ಕೇಳಿ 54 ಯುನಿಟ್ ಇನ್ಸುಲಿನ್ ಪಡೆಯುವ ವ್ಯಕ್ತಿ ತೀವ್ರ ಡಯಾಬಿಟಿಸ್ ಎದುರಿಸುತ್ತಿರುವ ವ್ಯಕ್ತಿ ಅಂತ ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ..!
ಈ ಆರೋಪಗಳಿಗೆ ಇ.ಡಿ ಅಧಿಕಾರಿಗಳು ಹೇಳ್ತಿರೋದೇ ಬೇರೆ.. ಕೇಜ್ರಿವಾಲ್ ಮಾವಿನಹಣ್ಣು ಹಾಗೂ ಸಿಹಿತಿಂಡಿಗಳನ್ನ ಹೆಚ್ಚಾಗಿ ತಿನ್ನುತ್ತಾರೆ ಜೊತೆಗೆ ಸಕ್ಕರೆ ಇರುವ ಚಹಾ ಕೂಡ ಸೇವಿಸ್ತಾರೆ, ಹೀಗಾಗಿ ಅವರಿಗೆ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದಿದ್ದಾರೆ. ಈ ಬೆನ್ನಲ್ಲೇ ಸಚಿವೆ ಆತಿಷಿ ಹೊಸ ಬಾಂಬ್ ಸಿಡಿಸಿರೋದು ಸಂಚಲನಕ್ಕೆ ಕಾರಣ ಆಗಿದೆ.
ಇದನ್ನೂ ಓದಿ:ಇಂದು ಮೊದಲ ಹಂತದ ಮತದಾನ; ಅಣ್ಣಾಮಲೈ ಸೇರಿ ಅಖಾಡದಲ್ಲಿರೋ ಘಟಾನುಘಟಿಗಳು ಯಾಱರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ