ಸತತ 5 ಪಂದ್ಯಗಳಲ್ಲಿ ಹೀನಾಯ ಸೋಲುಂಡ ಆರ್ಸಿಬಿ
7 ಪಂದ್ಯ, 6 ಸೋಲು, 1 ಗೆಲುವು.. ಕಪ್ ಕನಸೇ!
ಟಿ20 ತಂಡಕ್ಕೆ ‘ಟೆಸ್ಟ್ ಸ್ಪೆಷಲಿಸ್ಟ್’ ಬ್ಯಾಟಿಂಗ್ ಕೋಚ್!
ಐಪಿಎಲ್ ಸೀಸನ್ 17ರಲ್ಲಿ ಆರ್ಸಿಬಿಯ ಹೀನಾಯ ಸೋಲಿಗೆ ಬ್ಯಾಟ್ಸ್ಮನ್ಗಳು ಕಾರಣ. ಬೌಲರ್ಗಳು ಕಾರಣ. ಟೀಮ್ ಮ್ಯಾನೇಜ್ಮೆಂಟ್ ಕಾರಣ. ಹೀಗೆ ಸಾಕಷ್ಟು ಕಥೆ ಕೇಳಿರ್ತಿರಾ. ನಿಜಕ್ಕೂ ರಾಯಲ್ ಚಾಲೆಂಜರ್ಸ್ನ ದುಸ್ಥಿತಿಗೆ ಕಾರಣ ಈ ಇಬ್ಬರು.
ಆಡಿದ 7 ಪಂದ್ಯಗಳಲ್ಲಿ ಜಸ್ಟ್ 1 ಪಂದ್ಯ ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ನೀಡಿರುವ ಪರ್ಫಾಮೆನ್ಸ್ ನೋಡಿದ್ರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲುತ್ತೆ ಅನ್ನೋ ನಿರೀಕ್ಷೆಯೂ ಇಲ್ಲ ಬಿಡಿ. ಈ ಹೀನಾಯ ಪರ್ಫಾಮೆನ್ಸ್ನ ಬೆನ್ನಲ್ಲೇ, ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. ಹೌದು.. ಆರ್ಸಿಬಿ ತಂಡದ ಸೋಲಿನಲ್ಲಿ ಮ್ಯಾನೇಜ್ಮೆಂಟ್ ಪಾತ್ರ ಪ್ರಮುಖವಾದದ್ದು. ಅದ್ರ ಜೊತೆಗೆ ಈ ಇಬ್ಬರನ್ನ ಆಯ್ಕೆ ಮಾಡಿದ್ದು ಕೂಡ ದುಸ್ಥಿತಿಗೆ ಕಾರಣ.
ಇದನ್ನೂ ಓದಿ:11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ
RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ನೀಲ್ ಮೆಕೆಂಝಿ ಆರ್ಸಿಬಿಯ ಬ್ಯಾಟಿಂಗ್ ಕೋಚ್.. ಆ್ಯಡಂ ಗ್ರಿಫಿತ್ ಆರ್ಸಿಬಿಯ ಬೌಲಿಂಗ್ ಕೋಚ್. ಆರ್ಸಿಬಿ ಸೋಲಿಗೆ ಇವರಿಬ್ಬರು ಕಾರಣ ಎಂಬ ಕಿಡಿ ಹೊತ್ತಿಕೊಂಡಿದೆ. ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಝಿ ಬೇರೆ ಯಾರೂ ಅಲ್ಲ. ಸೌತ್ ಆಫ್ರಿಕಾ ತಂಡದ ಮಾಜಿ ‘ಟೆಸ್ಟ್’ ಕ್ರಿಕೆಟಿಗ. ಟೆಸ್ಟ್ ಸ್ಪೆಷಲಿಸ್ಟ್ನ ತಂದು ಟಿ20 ಬ್ಯಾಟಿಂಗ್ ಕೋಚ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ? ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಿರನ್ ಪೊಲಾರ್ಡ್, ಸಿಎಸ್ಕೆಯಲ್ಲಿ ಮೈಕಲ್ ಹಸ್ಸಿಯಂತಹ ಟಿ20 ಲೆಜೆಂಡ್ಸ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಆದ್ರೆ ನಮ್ಮ ಆರ್ಸಿಬಿ ಡಿಫರೆಂಟ್. ಅದ್ಕೆ ಟೆಸ್ಟ್ ಸ್ಪೆಷಲಿಸ್ಟ್ ಕರೆದುಕೊಂಡು ಬಂದು ಟಿ20 ತಂಡಕ್ಕೆ ಬ್ಯಾಟಿಂಗ್ ಪಾಠ ಮಾಡೋಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ‘ಮಗಳ ಸಾವಿಗೆ ನ್ಯಾಯ ಕೊಡಿ..’ ನೇಹಾ ಹಿರೇಮಠ್ ತಾಯಿ ಕಣ್ಣೀರು
ಕೊಹ್ಲಿ, ಮ್ಯಾಕ್ಸ್ವೆಲ್, ಡುಪ್ಲೆಸಿಗೆ ಏನ್ ಟಿಪ್ಸ್ ಕೊಡೋಕೆ ಸಾಧ್ಯ?
ಟೆಸ್ಟ್ ಸ್ಪೆಷಲಿಸ್ಟ್ ನೀಲ್ ಮೆಕೆಂಝಿ ವೈಟ್ ಬಾಲ್ ಕ್ರಿಕೆಟ್ ಆಡಿಲ್ಲ ಅಂತಿಲ್ಲ. ಈತ ಒನ್ ಡೇ ಆಡಿದ್ದಾರೆ. ಅಲ್ಲಿ ಸ್ಟ್ರೈಕ್ರೇಟ್ ಎಷ್ಟಿದೆ ಗೊತ್ತಾ.? 70ಕ್ಕಿಂತ ಕಡಿಮೆ. ಕೇವಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರೋ ಅನುಭವ ಈತನಿಗಿದೆ. ಇಂತಾ ಟ್ರ್ಯಾಕ್ ರೆಕಾರ್ಡ್ ಹೊಂದಿರೋ ನೀಲ್ ಮೆಕೆಂಝಿ, 100ಕ್ಕೂ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯ ಆಡಿರೋ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಈಗಾಗಲೇ ಟಿ20 ಲೆಜೆಂಡ್ಗಳಾಗಿ ಬೆಳೆದಿರೋ ಫಾಫ್ ಡುಪ್ಲೆಸಿ, ದಿನೇಶ್ ಕಾರ್ತಿಕ್ರಂತವರಿಗೆ ಏನು ತಾನೆ ಹೇಳಿಕೊಡೋಕೆ ಸಾಧ್ಯ ಹೇಳಿ?
ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ..!
ಬೌಲಿಂಗ್ ಕೋಚ್ ಇಂಟರ್ನ್ಯಾಷನಲ್ ಪಂದ್ಯವನ್ನೇ ಆಡಿಲ್ಲ
ಆ್ಯಡಂ ಗ್ರಿಫಿತ್.. ಈತ ಆಸ್ಟ್ರೇಲಿಯನ್ ಡೊಮೆಸ್ಟಿಕ್ ಕ್ರಿಕೆಟರ್.. ಅಂತಾರಾಷ್ಟ್ರೀಯ ಪಂದ್ಯ ಆಡಿರೋ ಅನುಭವವೇ ಇಲ್ಲ.. ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ ಆಡಿರೋ ಈತನ ಸಾಧನೆ ಅಷ್ಟಕಷ್ಟೇ. ಈತ ಆರ್ಸಿಬಿ ಬೌಲಿಂಗ್ ಕೋಚ್. ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಕ್ರಿಕೆಟ್ ಆಡೇ ಇರದ ಈತ ಆರ್ಸಿಬಿಯಲ್ಲಿರೋ ಬೌಲರ್ಸ್ಗೆ ಏನ್ ಪಾಠ ಮಾಡೋಕೆ ಸಾಧ್ಯ?
ಆ್ಯಡಂ ಗ್ರಿಫಿತ್.. ಟೀಮ್ಗೆ ಬಂದು ಸುಮಾರು 3 ವರ್ಷ ಆಯ್ತು. ಆದ್ರೆ ಏನ್ ಪ್ರಯೋಜನ. ಆರ್ಸಿಬಿ ಪ್ರತಿ ಸೀಸನ್ ಸೋಲೋದಕ್ಕೆ ಕಾರಣಾನೆ ಬೌಲಿಂಗ್ ವೈಫಲ್ಯ. ಪರ್ಫಾಮೆನ್ಸ್ ಬಿಟ್ ಬಿಡಿ. ಆಕ್ಷನ್ನಲ್ಲಿ ಒಳ್ಳೆ ಬೌಲರ್ನ ಕೇಳೋ ರೈಟ್ಸ್ ಈ ಬೌಲಿಂಗ್ ಕೋಚ್ಗಿದೆ. ಮ್ಯಾನೇಜ್ಮೆಂಟ್ಗೆ ಪಿಕ್ ಮಾಡಿರುವ ಬೌಲರ್ಸ್ ನೋಡಿದ್ರೆ, ಈತ ಆಕ್ಷನ್ ವೇಳೆ ತನಗೆ ಬೇಕಾದ ಬೌಲರ್ ಬಗ್ಗೆ ಹೇಳಿರೋದು ಅನುಮಾನವೇ.
ಐಪಿಎಲ್ ಅಂದ್ರೆ ಫಾರಿನ್ ಕೋಚ್ಗಳಿಗೆಲ್ಲಾ ಒಂತರಾ ಟ್ರಿಪ್ಗೆ ಬಂದು ಹೋದಂಗೆ. 45 ದಿನ ಬರ್ತಾರೆ. ಐಷಾರಾಮಿ ಹೋಟೆಲ್, ಅದ್ದೂರಿ ಟ್ರೀಟ್ಮೆಂಟ್, ಜಾಮ್ ಜುಮ್ ಅಂತಾ ದಿನ ಕಳೀತಾರೆ. ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಂಡು ಹೋಗ್ತಾರೆ. ಮುಂದಿನ ವರ್ಷ ಅವ್ರು ಇರ್ತಾರೋ ಇಲ್ವೋ ಅವ್ರಿಗೆ ಗೊತ್ತಿರಲ್ಲ. ಅದ್ಕೆ ಸಿಕ್ಕ ಅವಕಾಶದಲ್ಲಿ ಏನ್ ಬೇಕೋ ಅದು ಮಾಡ್ಕೊಂದು ಹೋಗ್ತಾರೆ. ಟೀಮ್ ಪರ್ಫಾಮೆನ್ಸ್ ಕಟ್ಟಿಕೊಂಡು ಅವ್ರಿಗೆ ಏನ್ ಆಗ್ಬೇಕು. ಇವ್ರನಲ್ಲ. ಇಂತವರನ್ನ ಸೆಲೆಕ್ಟ್ ಮಾಡಿ. ಆ ಜಾಗದಲ್ಲಿ ಕೂರಿಸಿರೋ ಆ ಮ್ಯಾನೇಜ್ಮೆಂಟ್ನವರು ಅವರು ಎಂತಹ ಬುದ್ಧಿವಂತರಿರಬೇಕು ಅಲ್ವಾ?
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸತತ 5 ಪಂದ್ಯಗಳಲ್ಲಿ ಹೀನಾಯ ಸೋಲುಂಡ ಆರ್ಸಿಬಿ
7 ಪಂದ್ಯ, 6 ಸೋಲು, 1 ಗೆಲುವು.. ಕಪ್ ಕನಸೇ!
ಟಿ20 ತಂಡಕ್ಕೆ ‘ಟೆಸ್ಟ್ ಸ್ಪೆಷಲಿಸ್ಟ್’ ಬ್ಯಾಟಿಂಗ್ ಕೋಚ್!
ಐಪಿಎಲ್ ಸೀಸನ್ 17ರಲ್ಲಿ ಆರ್ಸಿಬಿಯ ಹೀನಾಯ ಸೋಲಿಗೆ ಬ್ಯಾಟ್ಸ್ಮನ್ಗಳು ಕಾರಣ. ಬೌಲರ್ಗಳು ಕಾರಣ. ಟೀಮ್ ಮ್ಯಾನೇಜ್ಮೆಂಟ್ ಕಾರಣ. ಹೀಗೆ ಸಾಕಷ್ಟು ಕಥೆ ಕೇಳಿರ್ತಿರಾ. ನಿಜಕ್ಕೂ ರಾಯಲ್ ಚಾಲೆಂಜರ್ಸ್ನ ದುಸ್ಥಿತಿಗೆ ಕಾರಣ ಈ ಇಬ್ಬರು.
ಆಡಿದ 7 ಪಂದ್ಯಗಳಲ್ಲಿ ಜಸ್ಟ್ 1 ಪಂದ್ಯ ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ನೀಡಿರುವ ಪರ್ಫಾಮೆನ್ಸ್ ನೋಡಿದ್ರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲುತ್ತೆ ಅನ್ನೋ ನಿರೀಕ್ಷೆಯೂ ಇಲ್ಲ ಬಿಡಿ. ಈ ಹೀನಾಯ ಪರ್ಫಾಮೆನ್ಸ್ನ ಬೆನ್ನಲ್ಲೇ, ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. ಹೌದು.. ಆರ್ಸಿಬಿ ತಂಡದ ಸೋಲಿನಲ್ಲಿ ಮ್ಯಾನೇಜ್ಮೆಂಟ್ ಪಾತ್ರ ಪ್ರಮುಖವಾದದ್ದು. ಅದ್ರ ಜೊತೆಗೆ ಈ ಇಬ್ಬರನ್ನ ಆಯ್ಕೆ ಮಾಡಿದ್ದು ಕೂಡ ದುಸ್ಥಿತಿಗೆ ಕಾರಣ.
ಇದನ್ನೂ ಓದಿ:11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ
RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ನೀಲ್ ಮೆಕೆಂಝಿ ಆರ್ಸಿಬಿಯ ಬ್ಯಾಟಿಂಗ್ ಕೋಚ್.. ಆ್ಯಡಂ ಗ್ರಿಫಿತ್ ಆರ್ಸಿಬಿಯ ಬೌಲಿಂಗ್ ಕೋಚ್. ಆರ್ಸಿಬಿ ಸೋಲಿಗೆ ಇವರಿಬ್ಬರು ಕಾರಣ ಎಂಬ ಕಿಡಿ ಹೊತ್ತಿಕೊಂಡಿದೆ. ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಝಿ ಬೇರೆ ಯಾರೂ ಅಲ್ಲ. ಸೌತ್ ಆಫ್ರಿಕಾ ತಂಡದ ಮಾಜಿ ‘ಟೆಸ್ಟ್’ ಕ್ರಿಕೆಟಿಗ. ಟೆಸ್ಟ್ ಸ್ಪೆಷಲಿಸ್ಟ್ನ ತಂದು ಟಿ20 ಬ್ಯಾಟಿಂಗ್ ಕೋಚ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ? ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಿರನ್ ಪೊಲಾರ್ಡ್, ಸಿಎಸ್ಕೆಯಲ್ಲಿ ಮೈಕಲ್ ಹಸ್ಸಿಯಂತಹ ಟಿ20 ಲೆಜೆಂಡ್ಸ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಆದ್ರೆ ನಮ್ಮ ಆರ್ಸಿಬಿ ಡಿಫರೆಂಟ್. ಅದ್ಕೆ ಟೆಸ್ಟ್ ಸ್ಪೆಷಲಿಸ್ಟ್ ಕರೆದುಕೊಂಡು ಬಂದು ಟಿ20 ತಂಡಕ್ಕೆ ಬ್ಯಾಟಿಂಗ್ ಪಾಠ ಮಾಡೋಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ‘ಮಗಳ ಸಾವಿಗೆ ನ್ಯಾಯ ಕೊಡಿ..’ ನೇಹಾ ಹಿರೇಮಠ್ ತಾಯಿ ಕಣ್ಣೀರು
ಕೊಹ್ಲಿ, ಮ್ಯಾಕ್ಸ್ವೆಲ್, ಡುಪ್ಲೆಸಿಗೆ ಏನ್ ಟಿಪ್ಸ್ ಕೊಡೋಕೆ ಸಾಧ್ಯ?
ಟೆಸ್ಟ್ ಸ್ಪೆಷಲಿಸ್ಟ್ ನೀಲ್ ಮೆಕೆಂಝಿ ವೈಟ್ ಬಾಲ್ ಕ್ರಿಕೆಟ್ ಆಡಿಲ್ಲ ಅಂತಿಲ್ಲ. ಈತ ಒನ್ ಡೇ ಆಡಿದ್ದಾರೆ. ಅಲ್ಲಿ ಸ್ಟ್ರೈಕ್ರೇಟ್ ಎಷ್ಟಿದೆ ಗೊತ್ತಾ.? 70ಕ್ಕಿಂತ ಕಡಿಮೆ. ಕೇವಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರೋ ಅನುಭವ ಈತನಿಗಿದೆ. ಇಂತಾ ಟ್ರ್ಯಾಕ್ ರೆಕಾರ್ಡ್ ಹೊಂದಿರೋ ನೀಲ್ ಮೆಕೆಂಝಿ, 100ಕ್ಕೂ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯ ಆಡಿರೋ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಈಗಾಗಲೇ ಟಿ20 ಲೆಜೆಂಡ್ಗಳಾಗಿ ಬೆಳೆದಿರೋ ಫಾಫ್ ಡುಪ್ಲೆಸಿ, ದಿನೇಶ್ ಕಾರ್ತಿಕ್ರಂತವರಿಗೆ ಏನು ತಾನೆ ಹೇಳಿಕೊಡೋಕೆ ಸಾಧ್ಯ ಹೇಳಿ?
ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ..!
ಬೌಲಿಂಗ್ ಕೋಚ್ ಇಂಟರ್ನ್ಯಾಷನಲ್ ಪಂದ್ಯವನ್ನೇ ಆಡಿಲ್ಲ
ಆ್ಯಡಂ ಗ್ರಿಫಿತ್.. ಈತ ಆಸ್ಟ್ರೇಲಿಯನ್ ಡೊಮೆಸ್ಟಿಕ್ ಕ್ರಿಕೆಟರ್.. ಅಂತಾರಾಷ್ಟ್ರೀಯ ಪಂದ್ಯ ಆಡಿರೋ ಅನುಭವವೇ ಇಲ್ಲ.. ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ ಆಡಿರೋ ಈತನ ಸಾಧನೆ ಅಷ್ಟಕಷ್ಟೇ. ಈತ ಆರ್ಸಿಬಿ ಬೌಲಿಂಗ್ ಕೋಚ್. ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಕ್ರಿಕೆಟ್ ಆಡೇ ಇರದ ಈತ ಆರ್ಸಿಬಿಯಲ್ಲಿರೋ ಬೌಲರ್ಸ್ಗೆ ಏನ್ ಪಾಠ ಮಾಡೋಕೆ ಸಾಧ್ಯ?
ಆ್ಯಡಂ ಗ್ರಿಫಿತ್.. ಟೀಮ್ಗೆ ಬಂದು ಸುಮಾರು 3 ವರ್ಷ ಆಯ್ತು. ಆದ್ರೆ ಏನ್ ಪ್ರಯೋಜನ. ಆರ್ಸಿಬಿ ಪ್ರತಿ ಸೀಸನ್ ಸೋಲೋದಕ್ಕೆ ಕಾರಣಾನೆ ಬೌಲಿಂಗ್ ವೈಫಲ್ಯ. ಪರ್ಫಾಮೆನ್ಸ್ ಬಿಟ್ ಬಿಡಿ. ಆಕ್ಷನ್ನಲ್ಲಿ ಒಳ್ಳೆ ಬೌಲರ್ನ ಕೇಳೋ ರೈಟ್ಸ್ ಈ ಬೌಲಿಂಗ್ ಕೋಚ್ಗಿದೆ. ಮ್ಯಾನೇಜ್ಮೆಂಟ್ಗೆ ಪಿಕ್ ಮಾಡಿರುವ ಬೌಲರ್ಸ್ ನೋಡಿದ್ರೆ, ಈತ ಆಕ್ಷನ್ ವೇಳೆ ತನಗೆ ಬೇಕಾದ ಬೌಲರ್ ಬಗ್ಗೆ ಹೇಳಿರೋದು ಅನುಮಾನವೇ.
ಐಪಿಎಲ್ ಅಂದ್ರೆ ಫಾರಿನ್ ಕೋಚ್ಗಳಿಗೆಲ್ಲಾ ಒಂತರಾ ಟ್ರಿಪ್ಗೆ ಬಂದು ಹೋದಂಗೆ. 45 ದಿನ ಬರ್ತಾರೆ. ಐಷಾರಾಮಿ ಹೋಟೆಲ್, ಅದ್ದೂರಿ ಟ್ರೀಟ್ಮೆಂಟ್, ಜಾಮ್ ಜುಮ್ ಅಂತಾ ದಿನ ಕಳೀತಾರೆ. ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಂಡು ಹೋಗ್ತಾರೆ. ಮುಂದಿನ ವರ್ಷ ಅವ್ರು ಇರ್ತಾರೋ ಇಲ್ವೋ ಅವ್ರಿಗೆ ಗೊತ್ತಿರಲ್ಲ. ಅದ್ಕೆ ಸಿಕ್ಕ ಅವಕಾಶದಲ್ಲಿ ಏನ್ ಬೇಕೋ ಅದು ಮಾಡ್ಕೊಂದು ಹೋಗ್ತಾರೆ. ಟೀಮ್ ಪರ್ಫಾಮೆನ್ಸ್ ಕಟ್ಟಿಕೊಂಡು ಅವ್ರಿಗೆ ಏನ್ ಆಗ್ಬೇಕು. ಇವ್ರನಲ್ಲ. ಇಂತವರನ್ನ ಸೆಲೆಕ್ಟ್ ಮಾಡಿ. ಆ ಜಾಗದಲ್ಲಿ ಕೂರಿಸಿರೋ ಆ ಮ್ಯಾನೇಜ್ಮೆಂಟ್ನವರು ಅವರು ಎಂತಹ ಬುದ್ಧಿವಂತರಿರಬೇಕು ಅಲ್ವಾ?
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್