ಟಿ-20 ವಿಶ್ವಕಪ್ ತಂಡ ಪ್ರಕಟಣೆಗೆ ಕೌಂಟ್ಡೌನ್
ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ವರಸೆ ಏನು ಗೊತ್ತಾ?
ವಿಶ್ವಕಪ್ಗೆ ಸೆಲೆಕ್ಟ್ ಆಗ್ತಾರಾ ಮಾಸ್ ಮಹಾರಾಜರು..?
ಇಬ್ಬರು ಬ್ಲಾಕ್ಬಸ್ಟರ್ ಬ್ಯಾಟ್ಸ್ಮನ್ಗಳು. ಒಬ್ಬರು ಆಲ್ರೆಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಇನ್ನೋರ್ವ ನಿವೃತ್ತಿಯ ಸಂಧ್ಯಾಕಾಲದಲ್ಲಿದ್ದಾರೆ. ಜಗಮೆಚ್ಚಿದ ಇಬ್ಬರು ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೀತಾರಾ ಡಿಬೇಟ್ ನಡೀತಿದೆ. ಹಾಗೊಂದು ಈ ಬೆಂಕಿ-ಬಿರುಗಾಳಿ ಸೆಲೆಕ್ಟ್ ಆಗಿದ್ದೆ ಆದ್ರೆ ಟೀಮ್ ಇಂಡಿಯಾವನ್ನ ಮುಟ್ಟೋದೆ ಕಷ್ಟವಾಗಲಿದೆ.
T20 ವಿಶ್ವಕಪ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೀತಾರೆ? ಉತ್ತರ ನಿಗೂಢವಾಗಿದೆ. ಈ ಬಗ್ಗೆ ಸಿರೀಸ್ ಆಗಿ ಚರ್ಚೆ ಅಂತೂ ನಡೀತಿದೆ. ಶೀಘ್ರದಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಹೆಡ್ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಆಯ್ಕೆ ಕುರಿತು ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಯಾರೊಬ್ಬರು ನಿರೀಕ್ಷಿಸದ ಆ ಇಬ್ಬರು ಬೆಂಕಿ-ಬಿರುಗಾಳಿ ಬ್ಯಾಟರ್ ಟಿ20 ವಿಶ್ವಕಪ್ನಲ್ಲಿ ಆಡಬೇಕೆಂದು ಬಯಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್ಕೆ ಫ್ಯಾನ್ಸ್ಗೆ ಇದು ನೋವಿನ ಸುದ್ದಿ
ರೋಹಿತ್ ಶರ್ಮಾಗೆ ಬೇಕಂತೆ ಧೋನಿ-ಡಿಕೆ
ಮೇ 1ರ ಒಳಗಾಗಿ ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸಲು ಐಸಿಸಿ ಡೆಡ್ಲೈನ್ ನೀಡಿದೆ. ಗಡುವು ಸಮೀಪಿಸಿದ ಬೆನ್ನಲ್ಲೆ ಮಾಸ್ ಮಾಸ್ ಕಾ ಬಾಸ್ ಮಹೇಂದ್ರ ಸಿಂಗ್ ಧೋನಿ ಹಾಗೂ ಡಿಸ್ಟ್ರಕ್ಟಿವ್ ಡಿಕೆ, ಅಂದ್ರೆ ದಿನೇಶ್ ಕಾರ್ತಿಕ್ ವಿಶ್ವಕಪ್ನಲ್ಲಿ ಅಚ್ಚರಿ ರೀತಿಯಲ್ಲಿ ಸ್ಥಾನ ಪಡೀತಾರಾ ಅನ್ನೋ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆಲ್ಲಾ ರೋಹಿತ್ ಶರ್ಮಾ ಹೇಳಿದ ಆ ಒಂದು ಮಾತೇ ಕಾರಣ.
ದಿಗ್ಗಜ ಧೋನಿ ಮನವೊಲಿಕೆ ಕಷ್ಟ ಕಷ್ಟ..!
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿರೋ ಕ್ಯಾಪ್ಟನ್ ರೋಹಿತ್, ಸರ್ವಶ್ರೇಷ್ಠ ಕ್ಯಾಪ್ಟನ್ ಎಂಎಸ್ ಧೋನಿ ಹಾಗೂ ಫಿನಿಶರ್ ದಿನೇಶ್ ಕಾರ್ತಿಕ್ ಹೆಸರನ್ನ ಎತ್ತಿದ್ದಾರೆ. ಟಿ20 ವಿಶ್ವಕಪ್ ಆಡುವಂತೆ ಮಾಸ್ಟರ್ಮೈಂಡ್ ಧೋನಿಯನ್ನ ಮನವೊಲಿಸುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಡಿಕೆಯನ್ನ CONVINCE ಮಾಡಿದ್ರೆ ಆತ ಆಡಬಹುದು ಎಂದು ಹೇಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್ರನ್ನು ಕೊಂದ ಆರೋಪಿ ಯಾರು?
ಎಂ.ಎಸ್ ಧೋನಿಯನ್ನ ವೆಸ್ಟ್ಇಂಡೀಸ್ಗೆ ಬರುವಂತೆ ಮನವೊಲಿಸುವುದು ನಿಜಕ್ಕೂ ಕಷ್ಟ. ನನಗೆ ಅನ್ನಿಸುತ್ತೆ, ಅವರಿಗೆ ಹುಷಾರಿಲ್ಲ ಮತ್ತು ಆಯಾಸಗೊಂಡಿದ್ದಾರೆ. ಅವರು ಯುಎಸ್ಗೆ ನಮ್ಮ ಜೊತೆ ಬೇರೆ ವಿಚಾರಕ್ಕೆ ಬರಬಹುದು. ಅದೇನಂದ್ರೆ ಗಾಲ್ಫ್ ಆಡಲು. ಆದರೆ ಡಿಕೆಯನ್ನ ಸುಲಭವಾಗಿ ಮನವೊಲಿಕೆ ಮಾಡಬಹುದು-ರೋಹಿತ್ ಶರ್ಮಾ, ಭಾರತ ತಂಡದ ನಾಯಕ
T20 ವಿಶ್ವಕಪ್ನಲ್ಲಿ ಲೆಜೆಂಡ್ರಿ ಧೋನಿ-ಡಿಕೆ ಯಾಕೆ ಆಡಬೇಕು..?
ಕ್ಯಾಪ್ಟನ್ ರೋಹಿತ್ ಶರ್ಮಾ ಧೋನಿ ಹಾಗೂ ಡಿಕೆ ಟಿ20 ವಿಶ್ವಕಪ್ ಸಮಯದಲ್ಲಿ ನೆನೆಯಲು ಬಲವಾದ ಕಾರಣವಿದೆ. ಪ್ರಸಕ್ತ ಐಪಿಎಲ್ನಲ್ಲಿ ಇಬ್ಬರು ಹ್ಯೂಜ್ ಇಂಫ್ಯಾಕ್ಟ್ ಮಾಡ್ತಿದ್ದಾರೆ. ಕಣಕ್ಕಿಳಿದಾಗಲೆಲ್ಲಾ ಸಿಕ್ಸರ್-ಬೌಂಡ್ರಿಗಳ ಸರಮಾಲೆಯನ್ನ ಕಟ್ಟುತ್ತಿದ್ದು, ಇದಕ್ಕೆ ಹಿಟ್ಮ್ಯಾನ್ ಫಿದಾ ಆಗಿದ್ದಾರೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ಪ್ರದರ್ಶನ ಗಮನಾರ್ಹವಾಗಿದೆ. ವಿಶೇಷವಾಗಿ ದಿನೇಶ್ ಕಾರ್ತಿಕ್ ಆಟಕ್ಕೆ. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜತೆಗೆ ಧೋನಿ ಕೂಡ. ಅವರು ನಾಲ್ಕು ಎಸೆತ ಇರುವಾಗ ಬರ್ತಾರೆ, ಆದರೆ ದೊಡ್ಡ ಇಂಫ್ಯಾಕ್ಟ್ ಮಾಡುತ್ತಾರೆ. 20-22 ರನ್ ಗಳಿಸುತ್ತಾರೆ. ಇದು ಕೊನೆಯಲ್ಲಿ ತುಂಬಾ ವ್ಯತ್ಯಾಸ ಮಾಡುತ್ತೆ-ರೋಹಿತ್ ಶರ್ಮಾ, ಭಾರತ ತಂಡದ ನಾಯಕ
ಒಟ್ಟಿನಲ್ಲಿ ಟಿ20 ವಿಶ್ವಕಪ್ ತಂಡ ಪ್ರಕಟಣೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ್ಲೆ ಕ್ಯಾಪ್ಟನ್ ರೋಹಿತ್ ಶರ್ಮಾ, ಧೋನಿ ಹಾಗೂ ಡಿಕೆ ಹೊಗಳಿದ್ದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ನಿವೃತ್ತಿ ಹಿಂಪಡೆದು ಮಹಿ ಮತ್ತೆ ಟಿ20 ವಿಶ್ವಕಪ್ ಆಡೋಕೆ ಸಾಧ್ಯನಾ? ಐಪಿಎಲ್ನಲ್ಲಿ ಆರ್ಭಟಿಸ್ತಿರೋ ಫಿನಿಶರ್ ಡಿಕೆ ಮತ್ತೆ ಅಚ್ಚರಿ ರೀತಿಯಲ್ಲಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೀತಾರಾ? ಎಲ್ಲಾ ಪ್ರಶ್ನೆಗಳಿಗೂ ಶೀಘ್ರದಲ್ಲೇ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟಿ-20 ವಿಶ್ವಕಪ್ ತಂಡ ಪ್ರಕಟಣೆಗೆ ಕೌಂಟ್ಡೌನ್
ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ವರಸೆ ಏನು ಗೊತ್ತಾ?
ವಿಶ್ವಕಪ್ಗೆ ಸೆಲೆಕ್ಟ್ ಆಗ್ತಾರಾ ಮಾಸ್ ಮಹಾರಾಜರು..?
ಇಬ್ಬರು ಬ್ಲಾಕ್ಬಸ್ಟರ್ ಬ್ಯಾಟ್ಸ್ಮನ್ಗಳು. ಒಬ್ಬರು ಆಲ್ರೆಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಇನ್ನೋರ್ವ ನಿವೃತ್ತಿಯ ಸಂಧ್ಯಾಕಾಲದಲ್ಲಿದ್ದಾರೆ. ಜಗಮೆಚ್ಚಿದ ಇಬ್ಬರು ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೀತಾರಾ ಡಿಬೇಟ್ ನಡೀತಿದೆ. ಹಾಗೊಂದು ಈ ಬೆಂಕಿ-ಬಿರುಗಾಳಿ ಸೆಲೆಕ್ಟ್ ಆಗಿದ್ದೆ ಆದ್ರೆ ಟೀಮ್ ಇಂಡಿಯಾವನ್ನ ಮುಟ್ಟೋದೆ ಕಷ್ಟವಾಗಲಿದೆ.
T20 ವಿಶ್ವಕಪ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೀತಾರೆ? ಉತ್ತರ ನಿಗೂಢವಾಗಿದೆ. ಈ ಬಗ್ಗೆ ಸಿರೀಸ್ ಆಗಿ ಚರ್ಚೆ ಅಂತೂ ನಡೀತಿದೆ. ಶೀಘ್ರದಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಹೆಡ್ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಆಯ್ಕೆ ಕುರಿತು ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಯಾರೊಬ್ಬರು ನಿರೀಕ್ಷಿಸದ ಆ ಇಬ್ಬರು ಬೆಂಕಿ-ಬಿರುಗಾಳಿ ಬ್ಯಾಟರ್ ಟಿ20 ವಿಶ್ವಕಪ್ನಲ್ಲಿ ಆಡಬೇಕೆಂದು ಬಯಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್ಕೆ ಫ್ಯಾನ್ಸ್ಗೆ ಇದು ನೋವಿನ ಸುದ್ದಿ
ರೋಹಿತ್ ಶರ್ಮಾಗೆ ಬೇಕಂತೆ ಧೋನಿ-ಡಿಕೆ
ಮೇ 1ರ ಒಳಗಾಗಿ ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸಲು ಐಸಿಸಿ ಡೆಡ್ಲೈನ್ ನೀಡಿದೆ. ಗಡುವು ಸಮೀಪಿಸಿದ ಬೆನ್ನಲ್ಲೆ ಮಾಸ್ ಮಾಸ್ ಕಾ ಬಾಸ್ ಮಹೇಂದ್ರ ಸಿಂಗ್ ಧೋನಿ ಹಾಗೂ ಡಿಸ್ಟ್ರಕ್ಟಿವ್ ಡಿಕೆ, ಅಂದ್ರೆ ದಿನೇಶ್ ಕಾರ್ತಿಕ್ ವಿಶ್ವಕಪ್ನಲ್ಲಿ ಅಚ್ಚರಿ ರೀತಿಯಲ್ಲಿ ಸ್ಥಾನ ಪಡೀತಾರಾ ಅನ್ನೋ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆಲ್ಲಾ ರೋಹಿತ್ ಶರ್ಮಾ ಹೇಳಿದ ಆ ಒಂದು ಮಾತೇ ಕಾರಣ.
ದಿಗ್ಗಜ ಧೋನಿ ಮನವೊಲಿಕೆ ಕಷ್ಟ ಕಷ್ಟ..!
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿರೋ ಕ್ಯಾಪ್ಟನ್ ರೋಹಿತ್, ಸರ್ವಶ್ರೇಷ್ಠ ಕ್ಯಾಪ್ಟನ್ ಎಂಎಸ್ ಧೋನಿ ಹಾಗೂ ಫಿನಿಶರ್ ದಿನೇಶ್ ಕಾರ್ತಿಕ್ ಹೆಸರನ್ನ ಎತ್ತಿದ್ದಾರೆ. ಟಿ20 ವಿಶ್ವಕಪ್ ಆಡುವಂತೆ ಮಾಸ್ಟರ್ಮೈಂಡ್ ಧೋನಿಯನ್ನ ಮನವೊಲಿಸುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಡಿಕೆಯನ್ನ CONVINCE ಮಾಡಿದ್ರೆ ಆತ ಆಡಬಹುದು ಎಂದು ಹೇಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್ರನ್ನು ಕೊಂದ ಆರೋಪಿ ಯಾರು?
ಎಂ.ಎಸ್ ಧೋನಿಯನ್ನ ವೆಸ್ಟ್ಇಂಡೀಸ್ಗೆ ಬರುವಂತೆ ಮನವೊಲಿಸುವುದು ನಿಜಕ್ಕೂ ಕಷ್ಟ. ನನಗೆ ಅನ್ನಿಸುತ್ತೆ, ಅವರಿಗೆ ಹುಷಾರಿಲ್ಲ ಮತ್ತು ಆಯಾಸಗೊಂಡಿದ್ದಾರೆ. ಅವರು ಯುಎಸ್ಗೆ ನಮ್ಮ ಜೊತೆ ಬೇರೆ ವಿಚಾರಕ್ಕೆ ಬರಬಹುದು. ಅದೇನಂದ್ರೆ ಗಾಲ್ಫ್ ಆಡಲು. ಆದರೆ ಡಿಕೆಯನ್ನ ಸುಲಭವಾಗಿ ಮನವೊಲಿಕೆ ಮಾಡಬಹುದು-ರೋಹಿತ್ ಶರ್ಮಾ, ಭಾರತ ತಂಡದ ನಾಯಕ
T20 ವಿಶ್ವಕಪ್ನಲ್ಲಿ ಲೆಜೆಂಡ್ರಿ ಧೋನಿ-ಡಿಕೆ ಯಾಕೆ ಆಡಬೇಕು..?
ಕ್ಯಾಪ್ಟನ್ ರೋಹಿತ್ ಶರ್ಮಾ ಧೋನಿ ಹಾಗೂ ಡಿಕೆ ಟಿ20 ವಿಶ್ವಕಪ್ ಸಮಯದಲ್ಲಿ ನೆನೆಯಲು ಬಲವಾದ ಕಾರಣವಿದೆ. ಪ್ರಸಕ್ತ ಐಪಿಎಲ್ನಲ್ಲಿ ಇಬ್ಬರು ಹ್ಯೂಜ್ ಇಂಫ್ಯಾಕ್ಟ್ ಮಾಡ್ತಿದ್ದಾರೆ. ಕಣಕ್ಕಿಳಿದಾಗಲೆಲ್ಲಾ ಸಿಕ್ಸರ್-ಬೌಂಡ್ರಿಗಳ ಸರಮಾಲೆಯನ್ನ ಕಟ್ಟುತ್ತಿದ್ದು, ಇದಕ್ಕೆ ಹಿಟ್ಮ್ಯಾನ್ ಫಿದಾ ಆಗಿದ್ದಾರೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ಪ್ರದರ್ಶನ ಗಮನಾರ್ಹವಾಗಿದೆ. ವಿಶೇಷವಾಗಿ ದಿನೇಶ್ ಕಾರ್ತಿಕ್ ಆಟಕ್ಕೆ. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜತೆಗೆ ಧೋನಿ ಕೂಡ. ಅವರು ನಾಲ್ಕು ಎಸೆತ ಇರುವಾಗ ಬರ್ತಾರೆ, ಆದರೆ ದೊಡ್ಡ ಇಂಫ್ಯಾಕ್ಟ್ ಮಾಡುತ್ತಾರೆ. 20-22 ರನ್ ಗಳಿಸುತ್ತಾರೆ. ಇದು ಕೊನೆಯಲ್ಲಿ ತುಂಬಾ ವ್ಯತ್ಯಾಸ ಮಾಡುತ್ತೆ-ರೋಹಿತ್ ಶರ್ಮಾ, ಭಾರತ ತಂಡದ ನಾಯಕ
ಒಟ್ಟಿನಲ್ಲಿ ಟಿ20 ವಿಶ್ವಕಪ್ ತಂಡ ಪ್ರಕಟಣೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ್ಲೆ ಕ್ಯಾಪ್ಟನ್ ರೋಹಿತ್ ಶರ್ಮಾ, ಧೋನಿ ಹಾಗೂ ಡಿಕೆ ಹೊಗಳಿದ್ದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ನಿವೃತ್ತಿ ಹಿಂಪಡೆದು ಮಹಿ ಮತ್ತೆ ಟಿ20 ವಿಶ್ವಕಪ್ ಆಡೋಕೆ ಸಾಧ್ಯನಾ? ಐಪಿಎಲ್ನಲ್ಲಿ ಆರ್ಭಟಿಸ್ತಿರೋ ಫಿನಿಶರ್ ಡಿಕೆ ಮತ್ತೆ ಅಚ್ಚರಿ ರೀತಿಯಲ್ಲಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೀತಾರಾ? ಎಲ್ಲಾ ಪ್ರಶ್ನೆಗಳಿಗೂ ಶೀಘ್ರದಲ್ಲೇ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್