ಐಪಿಎಲ್ ಟ್ರೋಫಿ ಗೆಲ್ಲಿಸುವತ್ತ ಪ್ಯಾಟ್ ಕಮಿನ್ಸ್ ಹೆಜ್ಜೆ
ದಾಖಲೆ ಮೊತ್ತಕ್ಕೆ ಖರೀದಿ.. ನಾಯಕತ್ವ.. ಟೀಕೆಗೆ ಉತ್ತರ
ಮಂಕಾಗಿದ್ದ ಎಸ್ಆರ್ಹೆಚ್ನಲ್ಲಿ ಅಟ್ಯಾಕಿಂಗ್ ಅಪ್ರೋಚ್
ಒಬ್ಬ ಸರಿಯಾದ ಲೀಡರ್ ಸಿಕ್ರೆ ಪಾತಾಳಕ್ಕೆ ಕುಸಿದ ತಂಡ ಕೂಡ ಪುಟಿದೇಳುತ್ತೆ ಅನ್ನೋ ಮಾತಿಗೆ ಸನ್ರೈಸರ್ಸ್ ಹೈದ್ರಾಬಾದ್ ಬೆಸ್ಟ್ ಎಕ್ಸಾಂಪಲ್. ಈ ಸಕ್ಸಸ್ ಹಿಂದಿನ ಸೂತ್ರದಾರ ಪ್ಯಾಟ್ ಕಮಿನ್ಸ್. ಹಳಿ ತಪ್ಪಿ ಹೋಗಿದ್ದ ಸನ್ ರೈಸರ್ಸ್ಗೆ ಹೊಸ ದಾರಿ ತೋರಿಸಿರುವ ಕಮಿನ್ಸ್, ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡುವ ಭರವಸೆ ಹುಟ್ಟು ಹಾಕಿದ್ದಾರೆ. ದಂಡನಾಯಕ ಕಮಿನ್ಸ್ ಸಕ್ಸಸ್ ಕಂಡಿದ್ದೇಗೆ?
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅದೆಷ್ಟೋ ನಾಯಕರು ಬಂದಿದ್ದಾರೆ. ಹೋಗಿದ್ದಾರೆ. ಆದ್ರೆ ಕೆಲವೇ ಕೆಲ ನಾಯಕರಷ್ಟೇ ನೆನಪಿನಲ್ಲಿ ಇರ್ತಾರೆ. ಈ ಪೈಕಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹಿಟ್ಮ್ಯಾನ್ ರೋಹಿತ್ ಶರ್ಮಾ ಮೊದಲ ಪಂಕ್ತಿಯಲ್ಲಿ ಇದ್ದಾರೆ. ಐದು ಬಾರಿ ತಂಡವನ್ನ ಚಾಂಪಿಯನ್ ಮಾಡಿರೋ ಹೆಗ್ಗಳಿಕೆ ಇವ್ರದ್ದು. ಐಪಿಎಲ್ನಲ್ಲಿ ಮೊದಲ ಬಾರಿಗೆ ತಂಡವನ್ನ ಮುನ್ನಡೆಸ್ತಿರೋ ಪ್ಯಾಟ್ ಕಮಿನ್ಸ್ ಇವ್ರ ಸಾಲು ಸೇರಿದ್ದಾರೆ.
ಇದನ್ನೂ ಓದಿ: ಇವರು ಆಡಿದ್ದು ಕೇವಲ ಎರಡು ಟಿ-20I ಪಂದ್ಯ ಮಾತ್ರ..! RCBಯಲ್ಲಿ ಕೊಹ್ಲಿ, ಮ್ಯಾಕ್ಸಿಗೆ ಏನ್ ಟಿಪ್ಸ್ ಕೊಟ್ಟಾರು..?
ದಾಖಲೆ ಮೊತ್ತಕ್ಕೆ ಖರೀದಿ.. ನಾಯಕತ್ವ.. ಟೀಕೆಗೆ ಉತ್ತರ
ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2023ರ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಬೆನ್ನಲ್ಲೇ ಐಪಿಎಲ್ ಹರಾಜಿನಲ್ಲಿ ದಾಖಲೆಯ 20.5 ಕೋಟಿಗೆ ಪ್ಯಾಟ್ ಕಮಿನ್ಸ್ನ ಸನ್ ರೈಸರ್ಸ್ ಹೈದ್ರಾಬಾದ್ ಖರೀದಿಸಿತು. ಆಗ ಕೋಟಿ ಕೋಟಿ ಹಣವನ್ನ ಸುರಿದ ಬಗ್ಗೆ ಭಾರೀ ಟೀಕೆಗಳೇ ವ್ಯಕ್ತವಾಗಿತ್ತು. ಸೀಸನ್ಗೂ ಮುನ್ನ ನಾಯಕನ ಪಟ್ಟವನ್ನು ಕಟ್ಟಿತು. ಆಗ ಟೀಕೆಗಳು ಮತ್ತಷ್ಟು ಹೆಚ್ಚಾಗಿದ್ವು. ಆ ಟೀಕೆಗೆಲ್ಲಾ ಇದೀಗ ಫಲಿತಾಂಶದ ಉತ್ತರ ನೀಡ್ತಿದ್ದಾರೆ.
ಸನ್ ರೈಸರ್ಸ್ ಎದುರು ಮುಂಬೈ ಮಕಾಡೆ.. ಚೆನ್ನೈ ಚಿಂದಿ..!
ಐಪಿಎಲ್ನಲ್ಲಿ ಮುಂಬೈ ಹಾಗೂ ಚೆನ್ನೈ ತಂಡಗಳನ್ನ ಬಗ್ಗು ಬಡೆಯೋದು ಬಿಗೆಸ್ಟ್ ಚಾಲೆಂಜ್. ಈ ತಂಡಗಳ ಎದುರು ಗೆಲ್ಲೋದು ಎದುರಾಳಿ ನಾಯಕರ ಡ್ರೀಮ್ ಕೂಡ ಆಗಿರುತ್ತೆ. ಅಂಥ ಬಿಗ್ ಡ್ರೀಮ್ನ ಮೊದಲ ಬಾರಿಯೇ ಈಡೇರಿಸಿಕೊಂಡರವರು ಈ ಪ್ಯಾಟ್ ಕಮಿನ್ಸ್.
ಇದನ್ನೂ ಓದಿ:ಐಪಿಎಲ್ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್ಕೆ ಫ್ಯಾನ್ಸ್ಗೆ ಇದು ನೋವಿನ ಸುದ್ದಿ
ಹೈದ್ರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಸನ್ ರೈಸರ್ಸ್, ಬಲಾಢ್ಯ ಮುಂಬೈ ಎದುರು ದಾಖಲೆಯ 277 ರನ್ ಪೇರಿಸಿತ್ತು. ಆ ಬಳಿಕ ಮುಂಬೈ ಇಂಡಿಯನ್ಸ್ನ ಕಟ್ಟಿ ಹಾಕಿ ವಿಜಯ ಪತಾಕೆ ಹಾರಿಸಿತ್ತು. ಹಾಲಿ ಚಾಂಪಿಯನ್ಸ್ ಚೆನ್ನೈ ತಂಡವನ್ನ ಚೆಪಾಕ್ನಲ್ಲೇ 165 ರನ್ಗಳಿಗೆ ಕಟ್ಟಿಹಾಕಿದ್ದ ಸನ್ ರೈಸರ್ಸ್, ಈ ಟಾರ್ಗೆಟ್ನ 18.1 ಓವರ್ನಲ್ಲಿ ಚೇಸ್ ಮಾಡಿತ್ತು.
ಮುಂಬೈ, ಚೆನ್ನೈ ಬಳಿಕ ಆರ್ಸಿಬಿಗೆ ಸೋಲಿನ ರುಚಿ
ಮುಂಬೈ ಹಾಗೂ ಚೆನ್ನೈ ತಂಡಗಳನ್ನ ಬಗ್ಗುಬಡೆದಿದ್ದ ಸನ್ ರೈಸರ್ಸ್ಗೆ, ಸಹಜವಾಗೇ ಆರ್ಸಿಬಿ ಎದುರು ಗೆಲ್ಲೋ ಚಾಲೆಂಜ್ ಇತ್ತು. ಈ ಚಾಲೆಂಜ್ನಲ್ಲಿ ಆಕ್ಷರಶಃ ವಿಶ್ವರೂಪವನ್ನೇ ಪ್ರದರ್ಶಿಸಿದ ಸನ್ ರೈಸರ್ಸ್, ಚಿನ್ನಸ್ವಾಮಿಯಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ ಧೋನಿ, ರೋಹಿತ್ , ವಿರಾಟ್ ಕೊಹ್ಲಿಯವರನ್ನ ಒಳಗೊಂಡ ದಿಗ್ಗಜ ತಂಡಗಳನ್ನ ಬಗ್ಗು ಬಡೆದ ಸಾಧನೆ ಮಾಡಿತು.
ಇದನ್ನೂ ಓದಿ:ಧೋನಿ, ಕಾರ್ತಿಕ್ ಟಿ-20 ವಿಶ್ವಕಪ್ಗೆ ಎಂಟ್ರಿ..? ಅಚ್ಚರಿಯ ಹೇಳಿಕೆ ಕೊಟ್ಟ ಕ್ಯಾಪ್ಟನ್ ರೋಹಿತ್..!
ಸನ್ ರೈಸರ್ಸ್ ಸಕ್ಸಸ್ ಹಿಂದೆ ಕಮಿನ್ಸ್ ಪಾತ್ರ ದೊಡ್ಡದು..!
2021 ರಿಂದ 2023ರ ಅವಧಿ.. ಈ ಅವಧಿಯಲ್ಲಿ ಸನ್ ರೈಸರ್ಸ್ ನಿಜಕ್ಕೂ ಮಕಾಡೆ ಮಲಗಿತ್ತು. 2021ರಲ್ಲಿ ಕೊನೆ ಸ್ಥಾನಕ್ಕೆ ಜಾರಿದ್ದ ಹೈದ್ರಾಬಾದ್, 2022ರಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಕಳೆದ ಸೀಸನ್ನಲ್ಲೂ ಹೀನಾಯ ಪ್ರದರ್ಶನ ನೀಡಿ ಕೊನೆ ಸ್ಥಾನಕ್ಕೆ ಸಿಮೀತವಾಗಿತ್ತು. ಹೀಗಾಗಿ ನಾಯಕತ್ವ ವಹಿಸಿಕೊಂಡ ಪ್ಯಾಟ್ ಕಮಿನ್ಸ್, ಬಿಗ್ ಚಾಲೆಂಜ್ ಇತ್ತು. ಇದನ್ನ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.
ತಂಡದ ಚುಕ್ಕಾಣಿ ಹಿಡಿದ ಬಳಿಕ ಅಗ್ರೆಸ್ಸಿವ್ ಅಪ್ರೋಚ್ ಅಸ್ತ್ರ ಪ್ರಯೋಗಿಸಿದ ಕಮಿನ್ಸ್, ಆನ್ಫೀಲ್ಡ್ನಲ್ಲಿ ಹೆಜ್ಜೆ ಹೆಜ್ಜೆಗೂ ತಂತ್ರಕ್ಕೆ ಪ್ರತಿತಂತ್ರ ರೂಪಿಸ್ತಿದ್ದಾರೆ. ಕ್ರೂಶಿಯಲ್ ಟೈಮ್ನಲ್ಲಿ ತಾವೇ ದಾಳಿಗೆ ಇಳಿದು ವಿಕೆಟ್ ಬೇಟೆಯಾಡಿದ್ದಾರೆ. ಈ ಮೂಲಕ ಸಹ ಆಟಗಾರರ ಮೇಲಿನ ಫ್ರೆಶರ್ ರಿಲೀಫ್ ಮಾಡಿ, ಪರ್ಫಾಮೆನ್ಸ್ ಹೊರ ತೆಗಿತಿದ್ದಾರೆ. ನಾಯಕನಾಗಿ ಟೆಸ್ಟ್ ಚಾಂಪಿಯನ್ ಶಿಪ್, ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿರುವ ಕಮಿನ್ಸ್, ಈಗ ಐಪಿಎಲ್ ಟ್ರೋಫಿ ಗೆಲ್ಲಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಐಪಿಎಲ್ ಟ್ರೋಫಿ ಗೆಲ್ಲಿಸುವತ್ತ ಪ್ಯಾಟ್ ಕಮಿನ್ಸ್ ಹೆಜ್ಜೆ
ದಾಖಲೆ ಮೊತ್ತಕ್ಕೆ ಖರೀದಿ.. ನಾಯಕತ್ವ.. ಟೀಕೆಗೆ ಉತ್ತರ
ಮಂಕಾಗಿದ್ದ ಎಸ್ಆರ್ಹೆಚ್ನಲ್ಲಿ ಅಟ್ಯಾಕಿಂಗ್ ಅಪ್ರೋಚ್
ಒಬ್ಬ ಸರಿಯಾದ ಲೀಡರ್ ಸಿಕ್ರೆ ಪಾತಾಳಕ್ಕೆ ಕುಸಿದ ತಂಡ ಕೂಡ ಪುಟಿದೇಳುತ್ತೆ ಅನ್ನೋ ಮಾತಿಗೆ ಸನ್ರೈಸರ್ಸ್ ಹೈದ್ರಾಬಾದ್ ಬೆಸ್ಟ್ ಎಕ್ಸಾಂಪಲ್. ಈ ಸಕ್ಸಸ್ ಹಿಂದಿನ ಸೂತ್ರದಾರ ಪ್ಯಾಟ್ ಕಮಿನ್ಸ್. ಹಳಿ ತಪ್ಪಿ ಹೋಗಿದ್ದ ಸನ್ ರೈಸರ್ಸ್ಗೆ ಹೊಸ ದಾರಿ ತೋರಿಸಿರುವ ಕಮಿನ್ಸ್, ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡುವ ಭರವಸೆ ಹುಟ್ಟು ಹಾಕಿದ್ದಾರೆ. ದಂಡನಾಯಕ ಕಮಿನ್ಸ್ ಸಕ್ಸಸ್ ಕಂಡಿದ್ದೇಗೆ?
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅದೆಷ್ಟೋ ನಾಯಕರು ಬಂದಿದ್ದಾರೆ. ಹೋಗಿದ್ದಾರೆ. ಆದ್ರೆ ಕೆಲವೇ ಕೆಲ ನಾಯಕರಷ್ಟೇ ನೆನಪಿನಲ್ಲಿ ಇರ್ತಾರೆ. ಈ ಪೈಕಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹಿಟ್ಮ್ಯಾನ್ ರೋಹಿತ್ ಶರ್ಮಾ ಮೊದಲ ಪಂಕ್ತಿಯಲ್ಲಿ ಇದ್ದಾರೆ. ಐದು ಬಾರಿ ತಂಡವನ್ನ ಚಾಂಪಿಯನ್ ಮಾಡಿರೋ ಹೆಗ್ಗಳಿಕೆ ಇವ್ರದ್ದು. ಐಪಿಎಲ್ನಲ್ಲಿ ಮೊದಲ ಬಾರಿಗೆ ತಂಡವನ್ನ ಮುನ್ನಡೆಸ್ತಿರೋ ಪ್ಯಾಟ್ ಕಮಿನ್ಸ್ ಇವ್ರ ಸಾಲು ಸೇರಿದ್ದಾರೆ.
ಇದನ್ನೂ ಓದಿ: ಇವರು ಆಡಿದ್ದು ಕೇವಲ ಎರಡು ಟಿ-20I ಪಂದ್ಯ ಮಾತ್ರ..! RCBಯಲ್ಲಿ ಕೊಹ್ಲಿ, ಮ್ಯಾಕ್ಸಿಗೆ ಏನ್ ಟಿಪ್ಸ್ ಕೊಟ್ಟಾರು..?
ದಾಖಲೆ ಮೊತ್ತಕ್ಕೆ ಖರೀದಿ.. ನಾಯಕತ್ವ.. ಟೀಕೆಗೆ ಉತ್ತರ
ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2023ರ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಬೆನ್ನಲ್ಲೇ ಐಪಿಎಲ್ ಹರಾಜಿನಲ್ಲಿ ದಾಖಲೆಯ 20.5 ಕೋಟಿಗೆ ಪ್ಯಾಟ್ ಕಮಿನ್ಸ್ನ ಸನ್ ರೈಸರ್ಸ್ ಹೈದ್ರಾಬಾದ್ ಖರೀದಿಸಿತು. ಆಗ ಕೋಟಿ ಕೋಟಿ ಹಣವನ್ನ ಸುರಿದ ಬಗ್ಗೆ ಭಾರೀ ಟೀಕೆಗಳೇ ವ್ಯಕ್ತವಾಗಿತ್ತು. ಸೀಸನ್ಗೂ ಮುನ್ನ ನಾಯಕನ ಪಟ್ಟವನ್ನು ಕಟ್ಟಿತು. ಆಗ ಟೀಕೆಗಳು ಮತ್ತಷ್ಟು ಹೆಚ್ಚಾಗಿದ್ವು. ಆ ಟೀಕೆಗೆಲ್ಲಾ ಇದೀಗ ಫಲಿತಾಂಶದ ಉತ್ತರ ನೀಡ್ತಿದ್ದಾರೆ.
ಸನ್ ರೈಸರ್ಸ್ ಎದುರು ಮುಂಬೈ ಮಕಾಡೆ.. ಚೆನ್ನೈ ಚಿಂದಿ..!
ಐಪಿಎಲ್ನಲ್ಲಿ ಮುಂಬೈ ಹಾಗೂ ಚೆನ್ನೈ ತಂಡಗಳನ್ನ ಬಗ್ಗು ಬಡೆಯೋದು ಬಿಗೆಸ್ಟ್ ಚಾಲೆಂಜ್. ಈ ತಂಡಗಳ ಎದುರು ಗೆಲ್ಲೋದು ಎದುರಾಳಿ ನಾಯಕರ ಡ್ರೀಮ್ ಕೂಡ ಆಗಿರುತ್ತೆ. ಅಂಥ ಬಿಗ್ ಡ್ರೀಮ್ನ ಮೊದಲ ಬಾರಿಯೇ ಈಡೇರಿಸಿಕೊಂಡರವರು ಈ ಪ್ಯಾಟ್ ಕಮಿನ್ಸ್.
ಇದನ್ನೂ ಓದಿ:ಐಪಿಎಲ್ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್ಕೆ ಫ್ಯಾನ್ಸ್ಗೆ ಇದು ನೋವಿನ ಸುದ್ದಿ
ಹೈದ್ರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಸನ್ ರೈಸರ್ಸ್, ಬಲಾಢ್ಯ ಮುಂಬೈ ಎದುರು ದಾಖಲೆಯ 277 ರನ್ ಪೇರಿಸಿತ್ತು. ಆ ಬಳಿಕ ಮುಂಬೈ ಇಂಡಿಯನ್ಸ್ನ ಕಟ್ಟಿ ಹಾಕಿ ವಿಜಯ ಪತಾಕೆ ಹಾರಿಸಿತ್ತು. ಹಾಲಿ ಚಾಂಪಿಯನ್ಸ್ ಚೆನ್ನೈ ತಂಡವನ್ನ ಚೆಪಾಕ್ನಲ್ಲೇ 165 ರನ್ಗಳಿಗೆ ಕಟ್ಟಿಹಾಕಿದ್ದ ಸನ್ ರೈಸರ್ಸ್, ಈ ಟಾರ್ಗೆಟ್ನ 18.1 ಓವರ್ನಲ್ಲಿ ಚೇಸ್ ಮಾಡಿತ್ತು.
ಮುಂಬೈ, ಚೆನ್ನೈ ಬಳಿಕ ಆರ್ಸಿಬಿಗೆ ಸೋಲಿನ ರುಚಿ
ಮುಂಬೈ ಹಾಗೂ ಚೆನ್ನೈ ತಂಡಗಳನ್ನ ಬಗ್ಗುಬಡೆದಿದ್ದ ಸನ್ ರೈಸರ್ಸ್ಗೆ, ಸಹಜವಾಗೇ ಆರ್ಸಿಬಿ ಎದುರು ಗೆಲ್ಲೋ ಚಾಲೆಂಜ್ ಇತ್ತು. ಈ ಚಾಲೆಂಜ್ನಲ್ಲಿ ಆಕ್ಷರಶಃ ವಿಶ್ವರೂಪವನ್ನೇ ಪ್ರದರ್ಶಿಸಿದ ಸನ್ ರೈಸರ್ಸ್, ಚಿನ್ನಸ್ವಾಮಿಯಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ ಧೋನಿ, ರೋಹಿತ್ , ವಿರಾಟ್ ಕೊಹ್ಲಿಯವರನ್ನ ಒಳಗೊಂಡ ದಿಗ್ಗಜ ತಂಡಗಳನ್ನ ಬಗ್ಗು ಬಡೆದ ಸಾಧನೆ ಮಾಡಿತು.
ಇದನ್ನೂ ಓದಿ:ಧೋನಿ, ಕಾರ್ತಿಕ್ ಟಿ-20 ವಿಶ್ವಕಪ್ಗೆ ಎಂಟ್ರಿ..? ಅಚ್ಚರಿಯ ಹೇಳಿಕೆ ಕೊಟ್ಟ ಕ್ಯಾಪ್ಟನ್ ರೋಹಿತ್..!
ಸನ್ ರೈಸರ್ಸ್ ಸಕ್ಸಸ್ ಹಿಂದೆ ಕಮಿನ್ಸ್ ಪಾತ್ರ ದೊಡ್ಡದು..!
2021 ರಿಂದ 2023ರ ಅವಧಿ.. ಈ ಅವಧಿಯಲ್ಲಿ ಸನ್ ರೈಸರ್ಸ್ ನಿಜಕ್ಕೂ ಮಕಾಡೆ ಮಲಗಿತ್ತು. 2021ರಲ್ಲಿ ಕೊನೆ ಸ್ಥಾನಕ್ಕೆ ಜಾರಿದ್ದ ಹೈದ್ರಾಬಾದ್, 2022ರಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಕಳೆದ ಸೀಸನ್ನಲ್ಲೂ ಹೀನಾಯ ಪ್ರದರ್ಶನ ನೀಡಿ ಕೊನೆ ಸ್ಥಾನಕ್ಕೆ ಸಿಮೀತವಾಗಿತ್ತು. ಹೀಗಾಗಿ ನಾಯಕತ್ವ ವಹಿಸಿಕೊಂಡ ಪ್ಯಾಟ್ ಕಮಿನ್ಸ್, ಬಿಗ್ ಚಾಲೆಂಜ್ ಇತ್ತು. ಇದನ್ನ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.
ತಂಡದ ಚುಕ್ಕಾಣಿ ಹಿಡಿದ ಬಳಿಕ ಅಗ್ರೆಸ್ಸಿವ್ ಅಪ್ರೋಚ್ ಅಸ್ತ್ರ ಪ್ರಯೋಗಿಸಿದ ಕಮಿನ್ಸ್, ಆನ್ಫೀಲ್ಡ್ನಲ್ಲಿ ಹೆಜ್ಜೆ ಹೆಜ್ಜೆಗೂ ತಂತ್ರಕ್ಕೆ ಪ್ರತಿತಂತ್ರ ರೂಪಿಸ್ತಿದ್ದಾರೆ. ಕ್ರೂಶಿಯಲ್ ಟೈಮ್ನಲ್ಲಿ ತಾವೇ ದಾಳಿಗೆ ಇಳಿದು ವಿಕೆಟ್ ಬೇಟೆಯಾಡಿದ್ದಾರೆ. ಈ ಮೂಲಕ ಸಹ ಆಟಗಾರರ ಮೇಲಿನ ಫ್ರೆಶರ್ ರಿಲೀಫ್ ಮಾಡಿ, ಪರ್ಫಾಮೆನ್ಸ್ ಹೊರ ತೆಗಿತಿದ್ದಾರೆ. ನಾಯಕನಾಗಿ ಟೆಸ್ಟ್ ಚಾಂಪಿಯನ್ ಶಿಪ್, ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿರುವ ಕಮಿನ್ಸ್, ಈಗ ಐಪಿಎಲ್ ಟ್ರೋಫಿ ಗೆಲ್ಲಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್