ನಾಲ್ಕು ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿಯಾಗಿದ್ದ ಮಾಜಿ ಸೈನಿಕ
ಢವಳಗಿಯ ಸಮೀಪ ಪಲ್ಟಿಯಾಗಿ ಜಮೀನಿಗೆ ನುಗ್ಗಿರುವ ಕಾರು
ಕಾರಿನಲ್ಲಿದ್ದ 5 ಜನರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು, 3 ಗಂಭೀರ
ವಿಜಯಪುರ: ವೇಗವಾಗಿ ಹೋಗುತ್ತಿದ್ದ ಕಾರು ಭಯಾನಕವಾಗಿ ಪಲ್ಟಿಯಾಗಿದ್ದರಿಂದ ಮಾಜಿ ಸೈನಿಕ ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮ ಬಳಿ ನಡೆದಿದೆ.
ಜಿಲ್ಲೆಯ ಮಸಬನಾಳ ಗ್ರಾಮದ ಮಾಜಿ ಸೈನಿಕ ದೊಡ್ಡಯ್ಯ ಪುರಾಣಿಕಮಠ (37) ಇವರ ಅತ್ತೆ ಪುಷ್ಪಾವತಿ (55) ಮೃತ ದುರ್ದೈವಿಗಳು. ಕಳೆದ 4 ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಹೊಂದಿ ದೊಡ್ಡಯ್ಯ ಮನೆಗೆ ಬಂದಿದ್ದರು. ಆದರೆ ಕೆಲಸದ ನಿಮಿತ್ತ ಢವಳಗಿ ಗ್ರಾಮದಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಕಾರು ರಸ್ತೆಯಲ್ಲಿ ಪಲ್ಟಿಯಾಗಿದೆ. ಬಳಿಕ ಹಾಗೇ ಕಾರು ಉರುಳಿಕೊಂಡು ಜಮೀನಿಗೆ ನುಗ್ಗಿದೆ.
ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಲ್ಟಿಯಾದ ರಭಸಕ್ಕೆ ಕಾರು ಎಲ್ಲ ನಜ್ಜುಗುಜ್ಜಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಲ್ಕು ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿಯಾಗಿದ್ದ ಮಾಜಿ ಸೈನಿಕ
ಢವಳಗಿಯ ಸಮೀಪ ಪಲ್ಟಿಯಾಗಿ ಜಮೀನಿಗೆ ನುಗ್ಗಿರುವ ಕಾರು
ಕಾರಿನಲ್ಲಿದ್ದ 5 ಜನರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು, 3 ಗಂಭೀರ
ವಿಜಯಪುರ: ವೇಗವಾಗಿ ಹೋಗುತ್ತಿದ್ದ ಕಾರು ಭಯಾನಕವಾಗಿ ಪಲ್ಟಿಯಾಗಿದ್ದರಿಂದ ಮಾಜಿ ಸೈನಿಕ ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮ ಬಳಿ ನಡೆದಿದೆ.
ಜಿಲ್ಲೆಯ ಮಸಬನಾಳ ಗ್ರಾಮದ ಮಾಜಿ ಸೈನಿಕ ದೊಡ್ಡಯ್ಯ ಪುರಾಣಿಕಮಠ (37) ಇವರ ಅತ್ತೆ ಪುಷ್ಪಾವತಿ (55) ಮೃತ ದುರ್ದೈವಿಗಳು. ಕಳೆದ 4 ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಹೊಂದಿ ದೊಡ್ಡಯ್ಯ ಮನೆಗೆ ಬಂದಿದ್ದರು. ಆದರೆ ಕೆಲಸದ ನಿಮಿತ್ತ ಢವಳಗಿ ಗ್ರಾಮದಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಕಾರು ರಸ್ತೆಯಲ್ಲಿ ಪಲ್ಟಿಯಾಗಿದೆ. ಬಳಿಕ ಹಾಗೇ ಕಾರು ಉರುಳಿಕೊಂಡು ಜಮೀನಿಗೆ ನುಗ್ಗಿದೆ.
ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಲ್ಟಿಯಾದ ರಭಸಕ್ಕೆ ಕಾರು ಎಲ್ಲ ನಜ್ಜುಗುಜ್ಜಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ