ಇಂದು ಆರ್ಸಿಬಿಗೆ 250ನೇ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ
ರೋಚಕ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಆರ್ಸಿಬಿ ಭರ್ಜರಿ ಸವಾಲ್
ಹೈದರಾಬಾದ್ ವಿರುದ್ಧ ಗೆಲ್ಲಲು ಆರ್ಸಿಬಿ ತಂಡದಿಂದ ಮಾಸ್ಟರ್ ಪ್ಲಾನ್!
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ 250ನೇ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡ ವಿರುದ್ಧ ಸೆಣಸುತ್ತಿದೆ. ಈ ಐತಿಹಾಸಿಕ ಪಂದ್ಯಕ್ಕೆ ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಮ್ ಸಜ್ಜಾಗಿದೆ.
ಕಳೆದ ಬಾರಿ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಆರ್ಸಿಬಿ ಸೋತಿತ್ತು. ಆದರೆ, ಈ ಬಾರಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಸ್ಟ್ರಾಟಜಿ ಮಾಡಿರೋ ಆರ್ಸಿಬಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಪಂದ್ಯ ಗೆಲ್ಲೋಕೆ ಮುನ್ನ ಆರ್ಸಿಬಿ ಟಾಸ್ ಗೆಲ್ಲಬೇಕು. ಟಾಸ್ ಗೆದ್ದು ಆರ್ಸಿಬಿ ಬ್ಯಾಟಿಂಗ್ ಮಾಡಬೇಕು. ಹೈದರಾಬಾದ್ ತಂಡಕ್ಕೆ ಬರೋಬ್ಬರಿ 300 ರನ್ ಬಿಗ್ ಟಾರ್ಗೆಟ್ ಕೊಡಬೇಕು. ಆಗ ಮಾತ್ರ ಆರ್ಸಿಬಿಗೆ ಗೆಲ್ಲೋ ಅವಕಾಶಗಳು ಇವೆ.
ಸಂಘಟಿತ ಹೋರಾಟ ಅಗತ್ಯ
ಬಿಗ್ ಟಾರ್ಗೆಟ್ ಕೊಡಲು ಕೇವಲ ಕೊಹ್ಲಿ ಆಡಿದ್ರೆ ಸಾಲದು. ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕು. ಮ್ಯಾಕ್ಸ್ವೆಲ್ ಅಥವಾ ವಿಲ್ ಜಾಕ್ಸ್ ಯಾರೇ ಆರ್ಸಿಬಿ ಪರ ಆಡಿದ್ರೂ ಒಳ್ಳೆ ಸ್ಕೋರ್ ಮಾಡಬೇಕು. ರಜತ್ ಪಾಟಿದಾರ್, ಮಹಿಪಾಲ್ ಲೋಮ್ರೋರ್ ನೋಡಿಕೊಂಡು ಬ್ಯಾಟ್ ಬೀಸಬೇಕು. ದಿನೇಶ್ ಕಾರ್ತಿಕ್ ಮೇಲೆ ಎಲ್ಲರು ಒತ್ತಡ ಕಡಿಮೆ ಮಾಡಬೇಕು. ಆಗ ಹೈದರಾಬಾದ್ಗೆ ಆರ್ಸಿಬಿ ಹೆಚ್ಚು ಟಾರ್ಗೆಟ್ ನೀಡಲು ಸಾಧ್ಯ. ಜತೆಗೆ ಹೈದರಾಬಾದ್ ಎದುರು ಕರಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನ ನೀಡಬೇಕು.
ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಸುಮಲತಾ ಅಂಬರೀಶ್; ಮತದಾನಕ್ಕೂ ಮುನ್ನ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಆರ್ಸಿಬಿಗೆ 250ನೇ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ
ರೋಚಕ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಆರ್ಸಿಬಿ ಭರ್ಜರಿ ಸವಾಲ್
ಹೈದರಾಬಾದ್ ವಿರುದ್ಧ ಗೆಲ್ಲಲು ಆರ್ಸಿಬಿ ತಂಡದಿಂದ ಮಾಸ್ಟರ್ ಪ್ಲಾನ್!
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ 250ನೇ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡ ವಿರುದ್ಧ ಸೆಣಸುತ್ತಿದೆ. ಈ ಐತಿಹಾಸಿಕ ಪಂದ್ಯಕ್ಕೆ ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಮ್ ಸಜ್ಜಾಗಿದೆ.
ಕಳೆದ ಬಾರಿ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಆರ್ಸಿಬಿ ಸೋತಿತ್ತು. ಆದರೆ, ಈ ಬಾರಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಸ್ಟ್ರಾಟಜಿ ಮಾಡಿರೋ ಆರ್ಸಿಬಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಪಂದ್ಯ ಗೆಲ್ಲೋಕೆ ಮುನ್ನ ಆರ್ಸಿಬಿ ಟಾಸ್ ಗೆಲ್ಲಬೇಕು. ಟಾಸ್ ಗೆದ್ದು ಆರ್ಸಿಬಿ ಬ್ಯಾಟಿಂಗ್ ಮಾಡಬೇಕು. ಹೈದರಾಬಾದ್ ತಂಡಕ್ಕೆ ಬರೋಬ್ಬರಿ 300 ರನ್ ಬಿಗ್ ಟಾರ್ಗೆಟ್ ಕೊಡಬೇಕು. ಆಗ ಮಾತ್ರ ಆರ್ಸಿಬಿಗೆ ಗೆಲ್ಲೋ ಅವಕಾಶಗಳು ಇವೆ.
ಸಂಘಟಿತ ಹೋರಾಟ ಅಗತ್ಯ
ಬಿಗ್ ಟಾರ್ಗೆಟ್ ಕೊಡಲು ಕೇವಲ ಕೊಹ್ಲಿ ಆಡಿದ್ರೆ ಸಾಲದು. ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕು. ಮ್ಯಾಕ್ಸ್ವೆಲ್ ಅಥವಾ ವಿಲ್ ಜಾಕ್ಸ್ ಯಾರೇ ಆರ್ಸಿಬಿ ಪರ ಆಡಿದ್ರೂ ಒಳ್ಳೆ ಸ್ಕೋರ್ ಮಾಡಬೇಕು. ರಜತ್ ಪಾಟಿದಾರ್, ಮಹಿಪಾಲ್ ಲೋಮ್ರೋರ್ ನೋಡಿಕೊಂಡು ಬ್ಯಾಟ್ ಬೀಸಬೇಕು. ದಿನೇಶ್ ಕಾರ್ತಿಕ್ ಮೇಲೆ ಎಲ್ಲರು ಒತ್ತಡ ಕಡಿಮೆ ಮಾಡಬೇಕು. ಆಗ ಹೈದರಾಬಾದ್ಗೆ ಆರ್ಸಿಬಿ ಹೆಚ್ಚು ಟಾರ್ಗೆಟ್ ನೀಡಲು ಸಾಧ್ಯ. ಜತೆಗೆ ಹೈದರಾಬಾದ್ ಎದುರು ಕರಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನ ನೀಡಬೇಕು.
ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಸುಮಲತಾ ಅಂಬರೀಶ್; ಮತದಾನಕ್ಕೂ ಮುನ್ನ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ