ಅಮ್ಮನ ಸ್ಕೂಟಿಯಲ್ಲಿ ಕಾಲೇಜಿಗೆ ಬಂದಿದ್ದ ಫಯಾಜ್ ಮಾಡಿದ್ದೇನು?
ಧಾರವಾಡದಲ್ಲಿ ಖರೀದಿಸಿದ್ದ ಚಾಕುವನ್ನು ಬ್ಯಾಗ್ನಲ್ಲೇ ಇಟ್ಕೊಂಡಿದ್ದ
ಫಯಾಜ್ ಕ್ರೌರ್ಯಕ್ಕೆ ಬಾಳಬೇಕಿದ್ದ ಹೂವೊಂದು ಮಸಣ ಸೇರಿದೆ
ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ಕಿಚ್ಚು, ಆಕ್ರೋಶಕ್ಕೆ ಕಾರಣವಾಗಿದ್ದ ನೇಹಾ ಹತ್ಯೆಯ ಆರೋಪಿಯನ್ನ ಸಿಐಡಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಆದ್ರೆ ಹೃದಯಹೀನನಾಗಿ ನೇಹಾ ಹೃದಯವನ್ನೇ ಸೀಳಿದ್ದ ಫಯಾಜ್ ಪೊಲೀಸರ ಮುಂದೆ ಬೆಚ್ಚಿ ಬೀಳಿಸುವ ಅಂಶಗಳನ್ನ ಬಾಯ್ಬಿಟ್ಟಿದ್ದಾನೆ. ನೇಹಾ ಹತ್ಯೆಗೆ ಪಾಪಿ ಫಯಾಜ್ ರೂಪಿಸಿದ್ದ ಪ್ಲಾನ್ ಬಗ್ಗೆ ಗೊತ್ತಾದ್ರೆ ನಿಮ್ಮ ಎದೆ ಝಲ್ ಅನ್ನೋದ್ರೆ ಅನುಮಾನವೇ ಇಲ್ಲ
ನೇಹಾ ಹತ್ಯೆ ಪ್ರಕರಣ.. ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ಕಿಚ್ಚು, ಆಕ್ರೋಶ ಕಾರಣವಾಗಿತ್ತು, ಜನಸಾಮಾನ್ಯರಲ್ಲದೇ ಗಣ್ಯ ವ್ಯಕ್ತಿಗಳು ನೇಹಾ ಹತ್ಯೆ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಆಗ್ರಹಿಸಿದ್ದರು.. ಸದ್ಯ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹತ್ವದ ಬೆಳವಣಿಗೆ ಕಂಡು ಬಂದಿದ್ದು, ನೇಹಾ ಹತ್ಯೆ ಆರೋಪಿ ಫಯಾಜ್ನನ್ನ 6 ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದೆ.
ಇದನ್ನೂ ಓದಿ: ನಗರದ ರೈಲ್ವೆ ನಿಲ್ದಾಣ ಬಳಿ ಭಾರೀ ಅಗ್ನಿ ಅವಘಡ.. 6 ಜನರು ಸಜೀವ ದಹನ.. ಹಲವರು ಗಂಭೀರ
ಧಾರವಾಡ ಕೇಂದ್ರಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್ನನ್ನ ಕೋರ್ಟ್ನ ಆದೇಶದಂತೆ ವಶಕ್ಕೆ ಪಡೆದ ಸಿಐಡಿ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿದ್ರು. ನಂತರ ಬಿಗಿ ಬಂದೋಬಸ್ತ್ ಮೂಲಕ ಆರೋಪಿಯನ್ನ ನೇಹಾ ಹತ್ಯೆ ನಡೆದ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಇದಾದ ಬಳಿಕ ಹತ್ಯೆ ಬಗ್ಗೆ ಫಯಾಜ್ನನ್ನ ವಿಚಾರಣೆ ನಡೆಸಿದ್ದು, ಪಾಪಿ ಫಯಾಜ್ ಪೊಲೀಸರ ಮುಂದೆ ಬೆಚ್ಚಿ ಬೀಳಿಸುವ ವಿಚಾರಗಳನ್ನ ಹೇಳಿದ್ದಾನೆ.
ನೇಹಾ ಕೊಲೆಗೆ ಹೇಗಿತ್ತು ಪ್ಲಾನ್? ಫಯಾಜ್ ಬಾಯ್ಬಿಟ್ಟ ಸತ್ಯವೇನು?
ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ನಲ್ಲಿ ನಡೆದ ನೇಹಾ ಹಿರೇಮಠ್ ಬರ್ಬರ ಹತ್ಯೆ ಕೇಸ್ನ ರೋಚಕ ಅಂಶಗಳು ಬಯಲಾಗಿದ್ದು, ಆರೋಪಿ ಫಯಾಜ್ ಪೊಲೀಸರೆದುರು ಯಾವ ರೀತಿ ಪ್ಲಾನ್ ಮಾಡಿದ್ದ, ಮತ್ತು ನೇಹಾ ಹಿರೇಮಠ್ ಹತ್ಯೆಗೆ ಮೊದಲೇ ಸ್ಕೆಚ್ ಹಾಕಿದ್ದ ಸತ್ಯವನ್ನು ಎಳೆ ಎಳೆಯಾಗಿ ಬಾಯ್ಬಿಟ್ಟಿದ್ದಾನೆ.
ಐದು ದಿನದ ಮೊದಲೇ ಹಾಕಿದ್ದ ಸ್ಕೆಚ್! ಹತ್ಯೆಗಾಗಿ 2 ಗಂಟೆ ಕಾದು ಕೂತಿದ್ದ
ಏ.18 ನೇಹಾ ಎಕ್ಸಾಂ ಬರೆದು ಇನ್ನೇನು ಹೊರಗಡೆ ಹೊರಟಿದ್ಳು.. ಆದ್ರೆ ಪಾಪಿ ಫಯಾಜ್ ನೇಹಾಳ ಉಸಿರು ನಿಲ್ಲಿಸೋದಕ್ಕೆ ಅಂತ ಈ ಎಕ್ಸಾಂ ಹಾಲ್ ಮುಂದೆನೇ ಕಾದು ಕೂತಿದ್ದ. ಬರೋಬ್ಬರಿ 2 ಗಂಟೆಗಳ ಕಾಲ ಎಕ್ಸಾಂ ಹಾಲ್ ಮುಂದೆ ಫಯಾಜ್ ಹೊಂಚು ಹಾಕಿ ಕಾಯ್ತಿದ್ದ. ಅದ್ಯಾವಾಗ ನೇಹಾ ಎಕ್ಸಾ ಹಾಲ್ನಿಂದ ಹೊರಗೆ ಬಂದ್ಳು. ರಾಕ್ಷಸನಂತೆ ನುಗ್ಗಿ ನೇಹಾಳಿಗೆ ಚಾಕು ಇರಿದಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 14 ಬಾರಿ ಚಾಕು ಚುಚ್ಚಿ ನೇಹಾ ದೇಹ ರಕ್ತಮಯ ಮಾಡಿದ್ದ.
ಪೊಲೀಸರ ವಿಚಾರಣೆಯಲ್ಲಿ ಬೆಚ್ಚಿ ಬೀಳಿಸುವ ಸತ್ಯಗಳನ್ನ ಬಾಯ್ಬಿಟ್ಟಿರುವ ಫಯಾಜ್ ಹತ್ಯೆಯ 5 ದಿನಗಳ ಮುಂಚೆ ಚಾಕು ಖರೀದಿ ಮಾಡಿರೋದಾಗಿ ಹೇಳಿದ್ದಾನೆ. 5 ದಿನದ ಹಿಂದೆ ಖರೀದಿ ಮಾಡಿದ್ದ ಚಾಕುವನ್ನು ಬ್ಯಾಗ್ನಲ್ಲಿ ಇಟ್ಕೊಂಡು ಓಡಾಡ್ತಿದ್ನಂತೆ. ನೇಹಾ ತನಗೆ ದಕ್ಕದೆ ಇರೋದು ಫಯಾಜ್ ದ್ವೇಷಕ್ಕೆ ಕಾರಣವಾಗಿತ್ತು. ಹೀಗಾಗಿ ತನಗೆ ಸಿಗದ ನೇಹಾ ಯಾರಿಗೂ ಸಿಗಬಾರದು ಅನ್ನೋ ಹಗೆ ಫಯಾಜ್ ಮನಸ್ಸಲ್ಲಿ ಜ್ವಾಲೆಯನ್ನ ಹೊತ್ತಿಸಿತ್ತು. ಹೀಗಾಗಿ ಧಾರವಾಡದಲ್ಲಿ ಖರೀದಿ ಮಾಡಿದ್ದ ಚಾಕುವನ್ನು ಬ್ಯಾಗ್ನಲ್ಲೇ ಇಟ್ಕೊಂಡು ಓಡಾಡ್ತಿದ್ದೆ ಅಂತ ವಿಚಾರಣೆಯಲ್ಲಿ ಹೇಳಿದ್ದಾನೆ.
ಅಮ್ಮನ ಸ್ಕೂಟಿಯಲ್ಲಿ ಕಾಲೇಜಿಗೆ ಬಂದಿದ್ದ ಪಾಪಿ ಫಯಾಜ್
ನೇಹಾಳ ಬದುಕಿಗೆ ಕೊನೆಗಾಣಿಸಿಬೇಕು ಅಂತ ಮೊದಲೇ ಡಿಸೈಡ್ ಆಗಿ ಬಂದಿದ್ದ ಫಯಾಜ್, ತನ್ನ ತಾಯಿ ಸ್ಕೂಟಿ ತೆಗೆದುಕೊಂಡು ಬಂದಿದ್ದ. ಅದೆಷ್ಟು ಪರ್ಫೆಕ್ಟ್ ಆಗಿ ಪ್ಲಾನ್ ಮಾಡಿದ್ದ ಅಂದ್ರೆ ಕೊಲೆ ಮಾಡಿದ ತಕ್ಷಣ ತಪ್ಪಿಸಿಕೊಂಡು ಹೋಗ್ಬೇಕು ಅಂತ ಸ್ಕೂಟಿ ಹ್ಯಾಂಡಲ್ ಲಾಕ್ ಕೂಡ ಮಾಡಿರಲಿಲ್ಲ. ಪರಾರಿಯಾಗಬೇಕು ಅಂತ ರೋಡ್ನತ್ತ ಸ್ಕೂಟಿ ಮುಖ ಮಾಡಿ ನಿಲ್ಲಿಸಿದ್ದ. ಆದ್ರೆ ಕೊಲೆ ಮಾಡಿದ ತಕ್ಷಣ ಸ್ಕೂಟಿ ಬಳಿ ಓಡೋದಕ್ಕೆ ಸಾಧ್ಯವಾಗದೇ ಮೇನ್ಗೇಟ್ನಿಂದ ಓಡೋಗಿ ರಾಜಕಾಲುವೆಯಲ್ಲಿ ಅಡಗಿ ಕೂತಿದ್ದ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ‘ಹೃದಯ’ ಕೊಟ್ಟ ಭಾರತೀಯ.. ಯುವತಿಗೆ ಮರುಜನ್ಮ; ಇದು ಹಾರ್ಟ್ ಟಚ್ಚಿಂಗ್ ಸ್ಟೋರಿ!
ಇದನ್ನೂ ಓದಿ: ಭಯಾನಕವಾಗಿ ಮರಕ್ಕೆ ಡಿಕ್ಕಿಯಾದ ಕಾರು.. ಸ್ಥಳದಲ್ಲೇ ಸಾವನ್ನಪ್ಪಿದ ಡ್ರೈವರ್
ಆರೋಪಿ ಫಯಾಜ್, ನೇಹಾಳ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಮೊದಲೇ ಸ್ಕೆಚ್ ಹಾಕಿದ್ದಂತೆ ಏಪ್ರಿಲ್ 18ರಂದು ಎರಡೂವರೆ ಗಂಟೆಗಳ ಕಾಲ ಕಾದು ಕುಳಿತು ಕೊಲೆ ಮಾಡಿದ್ದಾನೆ. ಅಂದು ಕೊಲೆ ಮಾಡಲು ನಿರ್ಧರಿಸಿದ್ದ ಫಯಾಜ್, ತಾಯಿಯ ಸ್ಕೂಟಿ ತೆಗೆದುಕೊಂಡು ಧಾರವಾಡಕ್ಕೆ ಬಂದಿದ್ದ. ಪರೀಕ್ಷಾ ಕೇಂದ್ರದ ಎದುರೇ ಕಾದು ಕುಳಿತಿದ್ದ ಫಯಾಜ್ ಕೊನೆಗೆ ಅಟ್ಯಾಕ್ ಮಾಡಿ ನೇಹಾ ಹೃದಯವನ್ನ ಸೀಳಿದ್ದ. ನೂರಾರು ಕನಸು ಕಂಡಿದ್ದ ನೇಹಾ ರಕ್ತದ ಮಡುವಿನಲ್ಲಿ ನರಳಾಡಿ ನರಳಾಡಿ ಕೊನೆಯುಸಿರು ಎಳೆದಿದ್ಳು.
ಪ್ರೇಮದ ಅಮಲು.. ಅಥವಾ ನಿರಾಶೆಯ ಅತಿರೇಕವೂ.. ಪಾಪಿ ಫಯಾಜ್ ಕ್ರೌರ್ಯಕ್ಕೆ ಬಾಳಬೇಕಿದ್ದ ಹೂವೊಂದು ಮಸಣ ಸೇರಿತ್ತು. ಜೀವ ತೆಗೆದ ಕೊಲೆಗಾರ ಅರೆಸ್ಟ್ ಆಗಿದ್ದಾನೆ. ಆದ್ರೆ ಹೋದ ಜೀವವಂತೂ ವಾಪಸ್ ಬರೋದಿಲ್ಲ. ನೇಹಾ ಹತ್ಯೆ ಪ್ರಕರಣದ ಶೇ 60 ರಷ್ಟು ತನಿಖೆ ಮುಗಿದಿದೆ. ಹೀಗಾಗಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದೆ. ಆದ್ರೆ ಹಾಡ ಹಗಲೇ ನೆತ್ತರ ಹರಿಸಿದಿ ಪಾಪಿ ಫಯಾಜ್ಗೆ ಯಾವ ಶಿಕ್ಷೆಯಾಗುತ್ತಾ? ನೇಹಾ ಸಾವಿಗೆ ನ್ಯಾಯ ಸಿಗುತ್ತಾ ಅನ್ನೋದನ್ನೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಮ್ಮನ ಸ್ಕೂಟಿಯಲ್ಲಿ ಕಾಲೇಜಿಗೆ ಬಂದಿದ್ದ ಫಯಾಜ್ ಮಾಡಿದ್ದೇನು?
ಧಾರವಾಡದಲ್ಲಿ ಖರೀದಿಸಿದ್ದ ಚಾಕುವನ್ನು ಬ್ಯಾಗ್ನಲ್ಲೇ ಇಟ್ಕೊಂಡಿದ್ದ
ಫಯಾಜ್ ಕ್ರೌರ್ಯಕ್ಕೆ ಬಾಳಬೇಕಿದ್ದ ಹೂವೊಂದು ಮಸಣ ಸೇರಿದೆ
ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ಕಿಚ್ಚು, ಆಕ್ರೋಶಕ್ಕೆ ಕಾರಣವಾಗಿದ್ದ ನೇಹಾ ಹತ್ಯೆಯ ಆರೋಪಿಯನ್ನ ಸಿಐಡಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಆದ್ರೆ ಹೃದಯಹೀನನಾಗಿ ನೇಹಾ ಹೃದಯವನ್ನೇ ಸೀಳಿದ್ದ ಫಯಾಜ್ ಪೊಲೀಸರ ಮುಂದೆ ಬೆಚ್ಚಿ ಬೀಳಿಸುವ ಅಂಶಗಳನ್ನ ಬಾಯ್ಬಿಟ್ಟಿದ್ದಾನೆ. ನೇಹಾ ಹತ್ಯೆಗೆ ಪಾಪಿ ಫಯಾಜ್ ರೂಪಿಸಿದ್ದ ಪ್ಲಾನ್ ಬಗ್ಗೆ ಗೊತ್ತಾದ್ರೆ ನಿಮ್ಮ ಎದೆ ಝಲ್ ಅನ್ನೋದ್ರೆ ಅನುಮಾನವೇ ಇಲ್ಲ
ನೇಹಾ ಹತ್ಯೆ ಪ್ರಕರಣ.. ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ಕಿಚ್ಚು, ಆಕ್ರೋಶ ಕಾರಣವಾಗಿತ್ತು, ಜನಸಾಮಾನ್ಯರಲ್ಲದೇ ಗಣ್ಯ ವ್ಯಕ್ತಿಗಳು ನೇಹಾ ಹತ್ಯೆ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಆಗ್ರಹಿಸಿದ್ದರು.. ಸದ್ಯ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹತ್ವದ ಬೆಳವಣಿಗೆ ಕಂಡು ಬಂದಿದ್ದು, ನೇಹಾ ಹತ್ಯೆ ಆರೋಪಿ ಫಯಾಜ್ನನ್ನ 6 ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದೆ.
ಇದನ್ನೂ ಓದಿ: ನಗರದ ರೈಲ್ವೆ ನಿಲ್ದಾಣ ಬಳಿ ಭಾರೀ ಅಗ್ನಿ ಅವಘಡ.. 6 ಜನರು ಸಜೀವ ದಹನ.. ಹಲವರು ಗಂಭೀರ
ಧಾರವಾಡ ಕೇಂದ್ರಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್ನನ್ನ ಕೋರ್ಟ್ನ ಆದೇಶದಂತೆ ವಶಕ್ಕೆ ಪಡೆದ ಸಿಐಡಿ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿದ್ರು. ನಂತರ ಬಿಗಿ ಬಂದೋಬಸ್ತ್ ಮೂಲಕ ಆರೋಪಿಯನ್ನ ನೇಹಾ ಹತ್ಯೆ ನಡೆದ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಇದಾದ ಬಳಿಕ ಹತ್ಯೆ ಬಗ್ಗೆ ಫಯಾಜ್ನನ್ನ ವಿಚಾರಣೆ ನಡೆಸಿದ್ದು, ಪಾಪಿ ಫಯಾಜ್ ಪೊಲೀಸರ ಮುಂದೆ ಬೆಚ್ಚಿ ಬೀಳಿಸುವ ವಿಚಾರಗಳನ್ನ ಹೇಳಿದ್ದಾನೆ.
ನೇಹಾ ಕೊಲೆಗೆ ಹೇಗಿತ್ತು ಪ್ಲಾನ್? ಫಯಾಜ್ ಬಾಯ್ಬಿಟ್ಟ ಸತ್ಯವೇನು?
ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ನಲ್ಲಿ ನಡೆದ ನೇಹಾ ಹಿರೇಮಠ್ ಬರ್ಬರ ಹತ್ಯೆ ಕೇಸ್ನ ರೋಚಕ ಅಂಶಗಳು ಬಯಲಾಗಿದ್ದು, ಆರೋಪಿ ಫಯಾಜ್ ಪೊಲೀಸರೆದುರು ಯಾವ ರೀತಿ ಪ್ಲಾನ್ ಮಾಡಿದ್ದ, ಮತ್ತು ನೇಹಾ ಹಿರೇಮಠ್ ಹತ್ಯೆಗೆ ಮೊದಲೇ ಸ್ಕೆಚ್ ಹಾಕಿದ್ದ ಸತ್ಯವನ್ನು ಎಳೆ ಎಳೆಯಾಗಿ ಬಾಯ್ಬಿಟ್ಟಿದ್ದಾನೆ.
ಐದು ದಿನದ ಮೊದಲೇ ಹಾಕಿದ್ದ ಸ್ಕೆಚ್! ಹತ್ಯೆಗಾಗಿ 2 ಗಂಟೆ ಕಾದು ಕೂತಿದ್ದ
ಏ.18 ನೇಹಾ ಎಕ್ಸಾಂ ಬರೆದು ಇನ್ನೇನು ಹೊರಗಡೆ ಹೊರಟಿದ್ಳು.. ಆದ್ರೆ ಪಾಪಿ ಫಯಾಜ್ ನೇಹಾಳ ಉಸಿರು ನಿಲ್ಲಿಸೋದಕ್ಕೆ ಅಂತ ಈ ಎಕ್ಸಾಂ ಹಾಲ್ ಮುಂದೆನೇ ಕಾದು ಕೂತಿದ್ದ. ಬರೋಬ್ಬರಿ 2 ಗಂಟೆಗಳ ಕಾಲ ಎಕ್ಸಾಂ ಹಾಲ್ ಮುಂದೆ ಫಯಾಜ್ ಹೊಂಚು ಹಾಕಿ ಕಾಯ್ತಿದ್ದ. ಅದ್ಯಾವಾಗ ನೇಹಾ ಎಕ್ಸಾ ಹಾಲ್ನಿಂದ ಹೊರಗೆ ಬಂದ್ಳು. ರಾಕ್ಷಸನಂತೆ ನುಗ್ಗಿ ನೇಹಾಳಿಗೆ ಚಾಕು ಇರಿದಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 14 ಬಾರಿ ಚಾಕು ಚುಚ್ಚಿ ನೇಹಾ ದೇಹ ರಕ್ತಮಯ ಮಾಡಿದ್ದ.
ಪೊಲೀಸರ ವಿಚಾರಣೆಯಲ್ಲಿ ಬೆಚ್ಚಿ ಬೀಳಿಸುವ ಸತ್ಯಗಳನ್ನ ಬಾಯ್ಬಿಟ್ಟಿರುವ ಫಯಾಜ್ ಹತ್ಯೆಯ 5 ದಿನಗಳ ಮುಂಚೆ ಚಾಕು ಖರೀದಿ ಮಾಡಿರೋದಾಗಿ ಹೇಳಿದ್ದಾನೆ. 5 ದಿನದ ಹಿಂದೆ ಖರೀದಿ ಮಾಡಿದ್ದ ಚಾಕುವನ್ನು ಬ್ಯಾಗ್ನಲ್ಲಿ ಇಟ್ಕೊಂಡು ಓಡಾಡ್ತಿದ್ನಂತೆ. ನೇಹಾ ತನಗೆ ದಕ್ಕದೆ ಇರೋದು ಫಯಾಜ್ ದ್ವೇಷಕ್ಕೆ ಕಾರಣವಾಗಿತ್ತು. ಹೀಗಾಗಿ ತನಗೆ ಸಿಗದ ನೇಹಾ ಯಾರಿಗೂ ಸಿಗಬಾರದು ಅನ್ನೋ ಹಗೆ ಫಯಾಜ್ ಮನಸ್ಸಲ್ಲಿ ಜ್ವಾಲೆಯನ್ನ ಹೊತ್ತಿಸಿತ್ತು. ಹೀಗಾಗಿ ಧಾರವಾಡದಲ್ಲಿ ಖರೀದಿ ಮಾಡಿದ್ದ ಚಾಕುವನ್ನು ಬ್ಯಾಗ್ನಲ್ಲೇ ಇಟ್ಕೊಂಡು ಓಡಾಡ್ತಿದ್ದೆ ಅಂತ ವಿಚಾರಣೆಯಲ್ಲಿ ಹೇಳಿದ್ದಾನೆ.
ಅಮ್ಮನ ಸ್ಕೂಟಿಯಲ್ಲಿ ಕಾಲೇಜಿಗೆ ಬಂದಿದ್ದ ಪಾಪಿ ಫಯಾಜ್
ನೇಹಾಳ ಬದುಕಿಗೆ ಕೊನೆಗಾಣಿಸಿಬೇಕು ಅಂತ ಮೊದಲೇ ಡಿಸೈಡ್ ಆಗಿ ಬಂದಿದ್ದ ಫಯಾಜ್, ತನ್ನ ತಾಯಿ ಸ್ಕೂಟಿ ತೆಗೆದುಕೊಂಡು ಬಂದಿದ್ದ. ಅದೆಷ್ಟು ಪರ್ಫೆಕ್ಟ್ ಆಗಿ ಪ್ಲಾನ್ ಮಾಡಿದ್ದ ಅಂದ್ರೆ ಕೊಲೆ ಮಾಡಿದ ತಕ್ಷಣ ತಪ್ಪಿಸಿಕೊಂಡು ಹೋಗ್ಬೇಕು ಅಂತ ಸ್ಕೂಟಿ ಹ್ಯಾಂಡಲ್ ಲಾಕ್ ಕೂಡ ಮಾಡಿರಲಿಲ್ಲ. ಪರಾರಿಯಾಗಬೇಕು ಅಂತ ರೋಡ್ನತ್ತ ಸ್ಕೂಟಿ ಮುಖ ಮಾಡಿ ನಿಲ್ಲಿಸಿದ್ದ. ಆದ್ರೆ ಕೊಲೆ ಮಾಡಿದ ತಕ್ಷಣ ಸ್ಕೂಟಿ ಬಳಿ ಓಡೋದಕ್ಕೆ ಸಾಧ್ಯವಾಗದೇ ಮೇನ್ಗೇಟ್ನಿಂದ ಓಡೋಗಿ ರಾಜಕಾಲುವೆಯಲ್ಲಿ ಅಡಗಿ ಕೂತಿದ್ದ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ‘ಹೃದಯ’ ಕೊಟ್ಟ ಭಾರತೀಯ.. ಯುವತಿಗೆ ಮರುಜನ್ಮ; ಇದು ಹಾರ್ಟ್ ಟಚ್ಚಿಂಗ್ ಸ್ಟೋರಿ!
ಇದನ್ನೂ ಓದಿ: ಭಯಾನಕವಾಗಿ ಮರಕ್ಕೆ ಡಿಕ್ಕಿಯಾದ ಕಾರು.. ಸ್ಥಳದಲ್ಲೇ ಸಾವನ್ನಪ್ಪಿದ ಡ್ರೈವರ್
ಆರೋಪಿ ಫಯಾಜ್, ನೇಹಾಳ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಮೊದಲೇ ಸ್ಕೆಚ್ ಹಾಕಿದ್ದಂತೆ ಏಪ್ರಿಲ್ 18ರಂದು ಎರಡೂವರೆ ಗಂಟೆಗಳ ಕಾಲ ಕಾದು ಕುಳಿತು ಕೊಲೆ ಮಾಡಿದ್ದಾನೆ. ಅಂದು ಕೊಲೆ ಮಾಡಲು ನಿರ್ಧರಿಸಿದ್ದ ಫಯಾಜ್, ತಾಯಿಯ ಸ್ಕೂಟಿ ತೆಗೆದುಕೊಂಡು ಧಾರವಾಡಕ್ಕೆ ಬಂದಿದ್ದ. ಪರೀಕ್ಷಾ ಕೇಂದ್ರದ ಎದುರೇ ಕಾದು ಕುಳಿತಿದ್ದ ಫಯಾಜ್ ಕೊನೆಗೆ ಅಟ್ಯಾಕ್ ಮಾಡಿ ನೇಹಾ ಹೃದಯವನ್ನ ಸೀಳಿದ್ದ. ನೂರಾರು ಕನಸು ಕಂಡಿದ್ದ ನೇಹಾ ರಕ್ತದ ಮಡುವಿನಲ್ಲಿ ನರಳಾಡಿ ನರಳಾಡಿ ಕೊನೆಯುಸಿರು ಎಳೆದಿದ್ಳು.
ಪ್ರೇಮದ ಅಮಲು.. ಅಥವಾ ನಿರಾಶೆಯ ಅತಿರೇಕವೂ.. ಪಾಪಿ ಫಯಾಜ್ ಕ್ರೌರ್ಯಕ್ಕೆ ಬಾಳಬೇಕಿದ್ದ ಹೂವೊಂದು ಮಸಣ ಸೇರಿತ್ತು. ಜೀವ ತೆಗೆದ ಕೊಲೆಗಾರ ಅರೆಸ್ಟ್ ಆಗಿದ್ದಾನೆ. ಆದ್ರೆ ಹೋದ ಜೀವವಂತೂ ವಾಪಸ್ ಬರೋದಿಲ್ಲ. ನೇಹಾ ಹತ್ಯೆ ಪ್ರಕರಣದ ಶೇ 60 ರಷ್ಟು ತನಿಖೆ ಮುಗಿದಿದೆ. ಹೀಗಾಗಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದೆ. ಆದ್ರೆ ಹಾಡ ಹಗಲೇ ನೆತ್ತರ ಹರಿಸಿದಿ ಪಾಪಿ ಫಯಾಜ್ಗೆ ಯಾವ ಶಿಕ್ಷೆಯಾಗುತ್ತಾ? ನೇಹಾ ಸಾವಿಗೆ ನ್ಯಾಯ ಸಿಗುತ್ತಾ ಅನ್ನೋದನ್ನೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ