ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ಆರ್ಸಿಬಿ
ಬರೋಬ್ಬರಿ 35 ರನ್ಗಳಿಂದ ಆರ್ಸಿಬಿ ಗೆಲುವು ದಾಖಲು
ಸೋತ ಬಳಿಕ ಸಹ ತಂಡಕ್ಕೆ ಸ್ಫೂರ್ತಿಯ ಮಾತನಾಡಿದ ಕಮ್ಮಿನ್ಸ್
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆರ್ಸಿಬಿ 35 ರನ್ಗಳ ಅಂತರದಿಂದ ಸೋಲಿಸಿ ಹಳೆಯ ಸೇಡನ್ನು ತೀರಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: IPL ಇತಿಹಾಸದಲ್ಲೇ ಕೆಟ್ಟ ಬೌಲಿಂಗ್; ಮೋಹಿತ್ ಶರ್ಮಾ ಹೊಡಿಸಿಕೊಂಡ ರನ್ ಎಷ್ಟು..
ಪಂದ್ಯ ಸೋಲುತ್ತಿದ್ದಂತೆ ಕಮ್ಮಿನ್ಸ್ ಕೋಪದಿಂದ ಇರುವಂತೆ ಕಂಡು ಬಂದರು. ನಂತರ ಮಾತನಾಡಿದ ಕಮ್ಮಿನ್ಸ್ ಸಹ ಆಟಗಾರರಿಗೆ ಹಿತನುಡಿ ನುಡಿದರು. ಇಂದು ನಮಗೆ ಒಳ್ಳೆಯ ರಾತ್ರಿ ಅಲ್ಲ. ದುರಾದೃಷ್ಟವಶಾತ್ ನಮ್ಮ ಇನ್ನಿಂಗ್ಸ್ನಲ್ಲಿ ಕೆಲವು ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ. ನಾವು ಮೊದಲು ಬ್ಯಾಟ್ ಮಾಡಬೇಕಾಗಿತ್ತು. ಗೆಲ್ಲುವ ಮೊದಲು ನಾವು ನಮ್ಮ ಪರವಾಗಿ ಕೆಲಸ ಮಾಡಬೇಕು. ನಿನ್ನೆಯ ದಿನ ಗೆಲುವು ನಮ್ಮ ಪರವಾಗಿ ಇರಲಿಲ್ಲ ಎಂದು ಭಾವಿಸುತ್ತೇನೆ ಎಂದರು.
ಗೆದ್ದಾಗ ನಾನು ಮಾತನಾಡುತ್ತೇನೆ, ಸೋತಾಗ ಕೋಚ್ ಡೇನಿಯಲ್ ವೆಟ್ಟೋರಿ ಮಾತನಾಡುತ್ತಾರೆ. ಆದರೆ ನಮ್ಮ ಹುಡುಗರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ಟಿ20 ಕ್ರಿಕೆಟ್! ನೀವು ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ. ಸೋಲಿನ ಬಗ್ಗೆ ಹೆಚ್ಚು ಗಮನ ಕೊಡಬೇಡಿ. ನಮ್ಮದು ಬಲಿಷ್ಠ ತಂಡ. ಬ್ಯಾಟಿಂಗ್ ಲೈನಪ್ ತುಂಬಾನೇ ಚೆನ್ನಾಗಿದೆ. ಆದರೂ ಇದು ಪ್ರತಿ ಪಂದ್ಯದಲ್ಲೂ ಕೆಲಸ ಮಾಡಲ್ಲ ಎಂದು ಬೇಸರದಿಂದ ಹೇಳಿದ್ದಾರೆ.
ಇದನ್ನೂ ಓದಿ:ಅರ್ಧ ಶತಕ ಬಾರಿಸಿಯೂ ಸಂಭ್ರಮಿಸಿದ ಕೊಹ್ಲಿ; ಬೇರೆಯದ್ದೇ ಮಾತಾಡಿಕೊಂಡ ಅಭಿಮಾನಿಗಳು..!
ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 206 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಎಸ್ಆರ್ಹೆಚ್ 171 ರನ್ಗಳಿಸಿ ಸೋಲನ್ನು ಕಂಡಿತು. ಈ ಮೂಲಕ ಆರ್ಸಿಬಿ 35 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ಆರ್ಸಿಬಿ
ಬರೋಬ್ಬರಿ 35 ರನ್ಗಳಿಂದ ಆರ್ಸಿಬಿ ಗೆಲುವು ದಾಖಲು
ಸೋತ ಬಳಿಕ ಸಹ ತಂಡಕ್ಕೆ ಸ್ಫೂರ್ತಿಯ ಮಾತನಾಡಿದ ಕಮ್ಮಿನ್ಸ್
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆರ್ಸಿಬಿ 35 ರನ್ಗಳ ಅಂತರದಿಂದ ಸೋಲಿಸಿ ಹಳೆಯ ಸೇಡನ್ನು ತೀರಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: IPL ಇತಿಹಾಸದಲ್ಲೇ ಕೆಟ್ಟ ಬೌಲಿಂಗ್; ಮೋಹಿತ್ ಶರ್ಮಾ ಹೊಡಿಸಿಕೊಂಡ ರನ್ ಎಷ್ಟು..
ಪಂದ್ಯ ಸೋಲುತ್ತಿದ್ದಂತೆ ಕಮ್ಮಿನ್ಸ್ ಕೋಪದಿಂದ ಇರುವಂತೆ ಕಂಡು ಬಂದರು. ನಂತರ ಮಾತನಾಡಿದ ಕಮ್ಮಿನ್ಸ್ ಸಹ ಆಟಗಾರರಿಗೆ ಹಿತನುಡಿ ನುಡಿದರು. ಇಂದು ನಮಗೆ ಒಳ್ಳೆಯ ರಾತ್ರಿ ಅಲ್ಲ. ದುರಾದೃಷ್ಟವಶಾತ್ ನಮ್ಮ ಇನ್ನಿಂಗ್ಸ್ನಲ್ಲಿ ಕೆಲವು ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ. ನಾವು ಮೊದಲು ಬ್ಯಾಟ್ ಮಾಡಬೇಕಾಗಿತ್ತು. ಗೆಲ್ಲುವ ಮೊದಲು ನಾವು ನಮ್ಮ ಪರವಾಗಿ ಕೆಲಸ ಮಾಡಬೇಕು. ನಿನ್ನೆಯ ದಿನ ಗೆಲುವು ನಮ್ಮ ಪರವಾಗಿ ಇರಲಿಲ್ಲ ಎಂದು ಭಾವಿಸುತ್ತೇನೆ ಎಂದರು.
ಗೆದ್ದಾಗ ನಾನು ಮಾತನಾಡುತ್ತೇನೆ, ಸೋತಾಗ ಕೋಚ್ ಡೇನಿಯಲ್ ವೆಟ್ಟೋರಿ ಮಾತನಾಡುತ್ತಾರೆ. ಆದರೆ ನಮ್ಮ ಹುಡುಗರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ಟಿ20 ಕ್ರಿಕೆಟ್! ನೀವು ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ. ಸೋಲಿನ ಬಗ್ಗೆ ಹೆಚ್ಚು ಗಮನ ಕೊಡಬೇಡಿ. ನಮ್ಮದು ಬಲಿಷ್ಠ ತಂಡ. ಬ್ಯಾಟಿಂಗ್ ಲೈನಪ್ ತುಂಬಾನೇ ಚೆನ್ನಾಗಿದೆ. ಆದರೂ ಇದು ಪ್ರತಿ ಪಂದ್ಯದಲ್ಲೂ ಕೆಲಸ ಮಾಡಲ್ಲ ಎಂದು ಬೇಸರದಿಂದ ಹೇಳಿದ್ದಾರೆ.
ಇದನ್ನೂ ಓದಿ:ಅರ್ಧ ಶತಕ ಬಾರಿಸಿಯೂ ಸಂಭ್ರಮಿಸಿದ ಕೊಹ್ಲಿ; ಬೇರೆಯದ್ದೇ ಮಾತಾಡಿಕೊಂಡ ಅಭಿಮಾನಿಗಳು..!
ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 206 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಎಸ್ಆರ್ಹೆಚ್ 171 ರನ್ಗಳಿಸಿ ಸೋಲನ್ನು ಕಂಡಿತು. ಈ ಮೂಲಕ ಆರ್ಸಿಬಿ 35 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ