ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್ ಹೊಣೆಗಾರನಾಗಿಸಿದ ಅಮಿತ್ ಶಾ
ಫಯಾಜ್ನಿಂದ ಕಾಲೇಜ್ ಕ್ಯಾಂಪಸ್ನಲ್ಲೇ ಹತ್ಯೆಯಾದ ನೇಹಾ ಹಿರೇಮಠ
ಹುಬ್ಬಳ್ಳಿ ನೇಹಾ ನಿವಾಸಕ್ಕೂ ಭೇಟಿ ನೀಡ್ತಾರಾ ಗೃಹ ಸಚಿವ ಅಮಿತ್ ಶಾ.?
ರಾಜ್ಯದಲ್ಲಿ 2ನೇ ಹಂತದ ಮತಹಬ್ಬಕ್ಕೆ ಇನ್ನು 6 ದಿನ ಮಾತ್ರ ಬಾಕಿ ಉಳಿದಿದೆ. ಅಖಾಡದಲ್ಲಿ ಸೆಣಸಾಡಿ ವಿಜಯಲಕ್ಷ್ಮಿಯನ್ನ ಒಲಿಸಿಕೊಳ್ಳಲು ತವಕಿಸುತ್ತಿರೋ ಕೇಸರಿ ಕಲಿಗಳಿಗೆ ಇವತ್ತು ಅಮಿತ್ ಶಾ ಬಲ ನೀಡಲಿದ್ದಾರೆ. ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ನ ಪ್ರಜ್ವಲ್ ಪ್ರಕರಣದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಮಿತ್ ಶಾ ಆಗಮಿಸುತ್ತಿದ್ದಾರೆ.
ಪ್ರಜ್ವಲ್ ಪ್ರಕರಣವನ್ನ ಹಿಡಿದು ಎಳೆದಾಡ್ತಿರುವ ಕಾಂಗ್ರೆಸ್
ಅತ್ತ ಪ್ರಜ್ವಲ್ ಪ್ರಕರಣವನ್ನ ಕಾಂಗ್ರೆಸ್ ಎಳೆದಾಡ್ತಿದೆ. ಆದ್ರೆ, ಇದಕ್ಕೆ ಕೌಂಟರ್ ಎನ್ನುವಂತೆ ನೇಹಾ ಪ್ರಕರಣಕ್ಕೆ ಬಿಜೆಪಿ ಮರುಜೀವ ನೀಡುತ್ತಿದೆ. ರಾಜ್ಯದಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡ್ತಿರೋ ಹೊತ್ತಲ್ಲೇ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸ್ತಿದ್ದಾರೆ. ಫಯಾಜ್ ಎಂಬ ಕಿಡಿಗೇಡಿಯಿಂದ ಕಾಲೇಜ್ ಕ್ಯಾಂಪಸ್ನಲ್ಲೇ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್ಗೆ ಚೆಕ್ಮೇಟ್ ಇಡಲಿದ್ದಾರೆ ಎಂದು ಗೊತ್ತಾಗಿದೆ.
ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ಚುನಾವಣಾ ಚಾಣಕ್ಯ ಎಂಟ್ರಿ
ರಾಜ್ಯದಲ್ಲಿ ಎರಡು ದಿನ ಮೋದಿ ಮೂಲಕ ಮತಬೇಟೆಯಾಡಿಸಿದ್ದ ಕೇಸರಿ ಕಲಿಗಳು ಸದ್ಯ ಚುನಾವಣಾ ಚಾಣಕ್ಯ ಅಮಿತ್ ಶಾರನ್ನ ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ. ಮಧ್ಯಾಹ್ನ 3.20ಕ್ಕೆ ಹುಬ್ಬಳ್ಳಿಗೆ ಅಮಿತ್ ಶಾ ಎಂಟ್ರಿಕೊಡಲಿದ್ದಾರೆ. ಹುಬ್ಬಳಿಗೆ ಆಗಮಿಸಿ ಹಾವೇರಿಗೆ ಪ್ರಯಾಣ ಬೆಳೆಸಲಿರೋ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ರಾಣೆಬೆನ್ನೂರಿನಲ್ಲಿ ಅಮಿತ್ ಶಾ ಬೃಹತ್ ರೋಡ್ಶೋ ನಡೆಸಲಿದ್ದಾರೆ.
ಇದನ್ನೂ ಓದಿ: ಹೆಂಡತಿಯನ್ನೇ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾದ ಗಂಡ; ಅಸಲಿಗೆ ನಡೆದಿದ್ದೇನು?
ರೋಡ್ ಶೋ ಬಳಿಕ ಹುಬ್ಬಳ್ಳಿಗೆ ತೆರಳಲಿರುವ ಅಮಿತ್ ಶಾ ಸಂಜೆ 5.45ಕ್ಕೆ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಲ್ಹಾದ್ ಜೋಶಿ ಪರ ಮತಬೇಟೆ ನಡೆಸಲಿದ್ದಾರೆ.. ಈ ಕಾರ್ಯಕ್ರಮದ ಬಳಿಕ ರಾತ್ರಿ 7:30ಕ್ಕೆ ಅಮಿತ್ ಶಾ ಹೈದರಾಬಾದ್ಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ನೇಹಾ ಕುಟುಂಬಸ್ಥರನ್ನ ಅಮಿತ್ ಶಾ ಭೇಟಿ ಮಾಡ್ತಾರಾ ಅನ್ನೋ ನಿರೀಕ್ಷೆ ಇದೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ರಾಜ್ಯಕ್ಕೆ ಎಂಟ್ರಿಕೊಡಲಿರೋ ಅಮಿತ್ ಶಾ, ಹಾಸನ ಕೇಸ್ ಬಗ್ಗೆ ಮಾತಾಡ್ತಾರಾ ಅನ್ನೋ ಕುತೂಹಲ ಇದೆ.. ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್ನ್ನೇ ಹೊಣೆಗಾರನನ್ನಾಗಿಸಿದ್ದ ಅಮಿತ್ ಶಾ, ಇವತ್ತಿನ ಸಮಾವೇಶದಲ್ಲಿ ಪ್ರಸ್ತಾಪಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್ ಹೊಣೆಗಾರನಾಗಿಸಿದ ಅಮಿತ್ ಶಾ
ಫಯಾಜ್ನಿಂದ ಕಾಲೇಜ್ ಕ್ಯಾಂಪಸ್ನಲ್ಲೇ ಹತ್ಯೆಯಾದ ನೇಹಾ ಹಿರೇಮಠ
ಹುಬ್ಬಳ್ಳಿ ನೇಹಾ ನಿವಾಸಕ್ಕೂ ಭೇಟಿ ನೀಡ್ತಾರಾ ಗೃಹ ಸಚಿವ ಅಮಿತ್ ಶಾ.?
ರಾಜ್ಯದಲ್ಲಿ 2ನೇ ಹಂತದ ಮತಹಬ್ಬಕ್ಕೆ ಇನ್ನು 6 ದಿನ ಮಾತ್ರ ಬಾಕಿ ಉಳಿದಿದೆ. ಅಖಾಡದಲ್ಲಿ ಸೆಣಸಾಡಿ ವಿಜಯಲಕ್ಷ್ಮಿಯನ್ನ ಒಲಿಸಿಕೊಳ್ಳಲು ತವಕಿಸುತ್ತಿರೋ ಕೇಸರಿ ಕಲಿಗಳಿಗೆ ಇವತ್ತು ಅಮಿತ್ ಶಾ ಬಲ ನೀಡಲಿದ್ದಾರೆ. ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ನ ಪ್ರಜ್ವಲ್ ಪ್ರಕರಣದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಮಿತ್ ಶಾ ಆಗಮಿಸುತ್ತಿದ್ದಾರೆ.
ಪ್ರಜ್ವಲ್ ಪ್ರಕರಣವನ್ನ ಹಿಡಿದು ಎಳೆದಾಡ್ತಿರುವ ಕಾಂಗ್ರೆಸ್
ಅತ್ತ ಪ್ರಜ್ವಲ್ ಪ್ರಕರಣವನ್ನ ಕಾಂಗ್ರೆಸ್ ಎಳೆದಾಡ್ತಿದೆ. ಆದ್ರೆ, ಇದಕ್ಕೆ ಕೌಂಟರ್ ಎನ್ನುವಂತೆ ನೇಹಾ ಪ್ರಕರಣಕ್ಕೆ ಬಿಜೆಪಿ ಮರುಜೀವ ನೀಡುತ್ತಿದೆ. ರಾಜ್ಯದಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡ್ತಿರೋ ಹೊತ್ತಲ್ಲೇ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸ್ತಿದ್ದಾರೆ. ಫಯಾಜ್ ಎಂಬ ಕಿಡಿಗೇಡಿಯಿಂದ ಕಾಲೇಜ್ ಕ್ಯಾಂಪಸ್ನಲ್ಲೇ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್ಗೆ ಚೆಕ್ಮೇಟ್ ಇಡಲಿದ್ದಾರೆ ಎಂದು ಗೊತ್ತಾಗಿದೆ.
ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ಚುನಾವಣಾ ಚಾಣಕ್ಯ ಎಂಟ್ರಿ
ರಾಜ್ಯದಲ್ಲಿ ಎರಡು ದಿನ ಮೋದಿ ಮೂಲಕ ಮತಬೇಟೆಯಾಡಿಸಿದ್ದ ಕೇಸರಿ ಕಲಿಗಳು ಸದ್ಯ ಚುನಾವಣಾ ಚಾಣಕ್ಯ ಅಮಿತ್ ಶಾರನ್ನ ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ. ಮಧ್ಯಾಹ್ನ 3.20ಕ್ಕೆ ಹುಬ್ಬಳ್ಳಿಗೆ ಅಮಿತ್ ಶಾ ಎಂಟ್ರಿಕೊಡಲಿದ್ದಾರೆ. ಹುಬ್ಬಳಿಗೆ ಆಗಮಿಸಿ ಹಾವೇರಿಗೆ ಪ್ರಯಾಣ ಬೆಳೆಸಲಿರೋ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ರಾಣೆಬೆನ್ನೂರಿನಲ್ಲಿ ಅಮಿತ್ ಶಾ ಬೃಹತ್ ರೋಡ್ಶೋ ನಡೆಸಲಿದ್ದಾರೆ.
ಇದನ್ನೂ ಓದಿ: ಹೆಂಡತಿಯನ್ನೇ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾದ ಗಂಡ; ಅಸಲಿಗೆ ನಡೆದಿದ್ದೇನು?
ರೋಡ್ ಶೋ ಬಳಿಕ ಹುಬ್ಬಳ್ಳಿಗೆ ತೆರಳಲಿರುವ ಅಮಿತ್ ಶಾ ಸಂಜೆ 5.45ಕ್ಕೆ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಲ್ಹಾದ್ ಜೋಶಿ ಪರ ಮತಬೇಟೆ ನಡೆಸಲಿದ್ದಾರೆ.. ಈ ಕಾರ್ಯಕ್ರಮದ ಬಳಿಕ ರಾತ್ರಿ 7:30ಕ್ಕೆ ಅಮಿತ್ ಶಾ ಹೈದರಾಬಾದ್ಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ನೇಹಾ ಕುಟುಂಬಸ್ಥರನ್ನ ಅಮಿತ್ ಶಾ ಭೇಟಿ ಮಾಡ್ತಾರಾ ಅನ್ನೋ ನಿರೀಕ್ಷೆ ಇದೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ರಾಜ್ಯಕ್ಕೆ ಎಂಟ್ರಿಕೊಡಲಿರೋ ಅಮಿತ್ ಶಾ, ಹಾಸನ ಕೇಸ್ ಬಗ್ಗೆ ಮಾತಾಡ್ತಾರಾ ಅನ್ನೋ ಕುತೂಹಲ ಇದೆ.. ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್ನ್ನೇ ಹೊಣೆಗಾರನನ್ನಾಗಿಸಿದ್ದ ಅಮಿತ್ ಶಾ, ಇವತ್ತಿನ ಸಮಾವೇಶದಲ್ಲಿ ಪ್ರಸ್ತಾಪಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ