ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ವಶಕ್ಕೆ
ಮತ್ತೊಂದೆಡೆ ರೇವಣ್ಣಗಾಗಿ ಕಾದು ಕುಳಿತಿದ್ದ ಎಸ್ಐಟಿ
ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರೇವಣ್ಣಗೆ ಶಾಕ್
ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸುತ್ತಿದ್ದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣರನ್ನ ಎಸ್ಐಟಿ ವಶಕ್ಕೆ ಪಡೆದಿದೆ. ಸಂಜೆ ಹೆಚ್.ಡಿ ರೇವಣ್ಣರನ್ನ ಎಸ್ಐಟಿ ವಶಕ್ಕೆ ಪಡೆಯುವವರೆಗೂ ಬೆಳಗ್ಗೆಯಿಂದಲೂ ಭಾರೀ ಹಂಗಾಮ ನಡೆಯಿತು.
ಪ್ರಜ್ವಲ್ ರೇವಣ್ಣ ಅವರಿಂದ ದೌರ್ಜನ್ಯಕ್ಕೊಳಗಾದ ಪ್ರಕರಣದಲ್ಲಿ ಸಂತ್ರಸ್ಥೆಯಾಗಿರುವ ಮಹಿಳೆ ಕಿಡ್ನ್ಯಾಪ್ ಕೇಸ್ನಿಂದ ಇವತ್ತು ಇಡೀ ದಿನ ನಡೆದಿದ್ದು ಹಂಗಾಮ. ಒಂದು ಕಡೆ ಈಗಾಗಲೇ ಈ ಪ್ರಕರಣದ ಎ2 ಆರೋಪಿ ಬಂಧನವಾಗಿತ್ತು. ಮತ್ತೊಂದೆಡೆ ಪ್ರಕರಣದ ಎ1 ಆರೋಪಿ ಹೆಚ್.ಡಿ ರೇವಣ್ಣ ಅವರ ಬಂಧನವಾಗುವ ಸಾಧ್ಯತೆ ಇತ್ತು. ವಿಚಾರಣಗೆ ಇವತ್ತು ಸಂಜೆ 5.30ರ ಒಳಗೆ ಎಸ್ಐಟಿ ಮುಂದೆ ಅವರು ಹಾಜರಾಗಲೇ ಬೇಕಿತ್ತು. ಆದರೆ, ಇವೆಲ್ಲದರ ನಡುವೆ ರೇವಣ್ಣ ಅವರ ನಿರೀಕ್ಷಣಾ ಜಾಮೀನು ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿತ್ತು. ಬೆಳಗ್ಗೆ ಆರಂಭವಾದ ವಿಚಾರಣೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದರು. ಇದರಿಂದಾಗಿ ವಿಚಾರಣೆ ಮಧ್ಯಾಹ್ನದ ವರೆಗೂ ಮುಂದೂಡಲಾಗಿತ್ತು.
ಕೋರ್ಟ್ನಲ್ಲಿ ಆಗಿದ್ದೇನು?
ಮಧ್ಯಾಹ್ನ ಮತ್ತೆ ಆರಂಭವಾದ ವಿಚಾರಣೆಯಲ್ಲಿ ಎರೆಡು ಕಡೆಯ ವಕೀಲರು ಅತ್ಯಂತ ಪ್ರಬಲವಾಗಿ ತಮ್ಮ ವಾದಗಳನ್ನ ಮಂಡಿಸಿದರು. ಎಲ್ಲವನ್ನೂ ಆಲಿಸಿದಿ ನ್ಯಾಯಾಧೀಶರಾದ ಅವರು ಹೆಚ್.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಇದಕ್ಕಾಗಿಯೇ ಕಾದು ಕುಳಿತಿದ್ದ ಎಸ್ಐಟಿ ಅಧಿಕಾರಿಗಳು ಸೀದಾ ತೆರಳಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮನೆಗೆ. ಅಲ್ಲಿ ಮತ್ತೊಂದು ರೀತಿಯ ಹಂಗಾಮ ನಡೆಯಿತು. ಅಧಿಕಾರಿಗಳಿಗೆ ಹೆಚ್.ಡಿ ರೇವಣ್ಣ ಅಲ್ಲಿಯೇ ಇರುವುದು ಖಾತ್ರಿಯಾಗಿತ್ತು. ಹಾಗಾಗಿ ಮಾಜಿ ಪ್ರಧಾನಿಗಳ ಮನೆ ಆವರಣ ಪ್ರವೇಶಿಸಿ ಬಾಗಿಲು ಬಡಿದರು. ಮನೆಯೊಳಗೆ ಇದ್ದ ರೇವಣ್ಣ ಹೊರ ಬರಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೂ, ಇವತ್ತು ವಶಕ್ಕೆ ತೆಗೆದಕೊಂಡ ಬಳಿಕವೇ ತೆರಳುವುದಾಗಿ ತೀರ್ಮಾನಿಸಿದ್ದ ಎಸ್ಐಟಿ ಅಧಿಕಾರಿಗಳು ರೇವಣ್ಣ ಹೊರ ಬರುವವರೆಗೂ ಕಾದರು.
ಕೊನೆಗೂ ವಿಧಿಯಿಲ್ಲದೇ ಮಾಜಿ ಸಚಿವ ರೇವಣ್ಣ ಮಾಜಿ ಪ್ರಧಾನಿಯವರು ಪದ್ಮನಾಭನಗರದ ಮನೆಯಿಂದ ಹೊರಬರಲೇ ಬೇಕಾಯಿತು. ಕೂಡಲೇ ರೇವಣ್ಣ ಅವರನ್ನು ವಶಕ್ಕೆ ತೆಗೆದುಕೊಂಡ ಎಸ್ಐಟಿ ಅಧಿಕಾರಿಗಳು ಅವರನ್ನ ಸಿಐಡಿ ಕಚೇರಿಗೆ ವಿಚಾರಣೆಗಾಗಿ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋದರು.
ಇದನ್ನೂ ಓದಿ: ಹೆಚ್.ಡಿ ರೇವಣ್ಣ ಅರೆಸ್ಟ್ ಬೆನ್ನಲ್ಲೇ ಆಪ್ತರ ಜೊತೆ ಕುಮಾರಸ್ವಾಮಿ ರಹಸ್ಯ ಮಾತುಕತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ವಶಕ್ಕೆ
ಮತ್ತೊಂದೆಡೆ ರೇವಣ್ಣಗಾಗಿ ಕಾದು ಕುಳಿತಿದ್ದ ಎಸ್ಐಟಿ
ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರೇವಣ್ಣಗೆ ಶಾಕ್
ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸುತ್ತಿದ್ದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣರನ್ನ ಎಸ್ಐಟಿ ವಶಕ್ಕೆ ಪಡೆದಿದೆ. ಸಂಜೆ ಹೆಚ್.ಡಿ ರೇವಣ್ಣರನ್ನ ಎಸ್ಐಟಿ ವಶಕ್ಕೆ ಪಡೆಯುವವರೆಗೂ ಬೆಳಗ್ಗೆಯಿಂದಲೂ ಭಾರೀ ಹಂಗಾಮ ನಡೆಯಿತು.
ಪ್ರಜ್ವಲ್ ರೇವಣ್ಣ ಅವರಿಂದ ದೌರ್ಜನ್ಯಕ್ಕೊಳಗಾದ ಪ್ರಕರಣದಲ್ಲಿ ಸಂತ್ರಸ್ಥೆಯಾಗಿರುವ ಮಹಿಳೆ ಕಿಡ್ನ್ಯಾಪ್ ಕೇಸ್ನಿಂದ ಇವತ್ತು ಇಡೀ ದಿನ ನಡೆದಿದ್ದು ಹಂಗಾಮ. ಒಂದು ಕಡೆ ಈಗಾಗಲೇ ಈ ಪ್ರಕರಣದ ಎ2 ಆರೋಪಿ ಬಂಧನವಾಗಿತ್ತು. ಮತ್ತೊಂದೆಡೆ ಪ್ರಕರಣದ ಎ1 ಆರೋಪಿ ಹೆಚ್.ಡಿ ರೇವಣ್ಣ ಅವರ ಬಂಧನವಾಗುವ ಸಾಧ್ಯತೆ ಇತ್ತು. ವಿಚಾರಣಗೆ ಇವತ್ತು ಸಂಜೆ 5.30ರ ಒಳಗೆ ಎಸ್ಐಟಿ ಮುಂದೆ ಅವರು ಹಾಜರಾಗಲೇ ಬೇಕಿತ್ತು. ಆದರೆ, ಇವೆಲ್ಲದರ ನಡುವೆ ರೇವಣ್ಣ ಅವರ ನಿರೀಕ್ಷಣಾ ಜಾಮೀನು ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿತ್ತು. ಬೆಳಗ್ಗೆ ಆರಂಭವಾದ ವಿಚಾರಣೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದರು. ಇದರಿಂದಾಗಿ ವಿಚಾರಣೆ ಮಧ್ಯಾಹ್ನದ ವರೆಗೂ ಮುಂದೂಡಲಾಗಿತ್ತು.
ಕೋರ್ಟ್ನಲ್ಲಿ ಆಗಿದ್ದೇನು?
ಮಧ್ಯಾಹ್ನ ಮತ್ತೆ ಆರಂಭವಾದ ವಿಚಾರಣೆಯಲ್ಲಿ ಎರೆಡು ಕಡೆಯ ವಕೀಲರು ಅತ್ಯಂತ ಪ್ರಬಲವಾಗಿ ತಮ್ಮ ವಾದಗಳನ್ನ ಮಂಡಿಸಿದರು. ಎಲ್ಲವನ್ನೂ ಆಲಿಸಿದಿ ನ್ಯಾಯಾಧೀಶರಾದ ಅವರು ಹೆಚ್.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಇದಕ್ಕಾಗಿಯೇ ಕಾದು ಕುಳಿತಿದ್ದ ಎಸ್ಐಟಿ ಅಧಿಕಾರಿಗಳು ಸೀದಾ ತೆರಳಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮನೆಗೆ. ಅಲ್ಲಿ ಮತ್ತೊಂದು ರೀತಿಯ ಹಂಗಾಮ ನಡೆಯಿತು. ಅಧಿಕಾರಿಗಳಿಗೆ ಹೆಚ್.ಡಿ ರೇವಣ್ಣ ಅಲ್ಲಿಯೇ ಇರುವುದು ಖಾತ್ರಿಯಾಗಿತ್ತು. ಹಾಗಾಗಿ ಮಾಜಿ ಪ್ರಧಾನಿಗಳ ಮನೆ ಆವರಣ ಪ್ರವೇಶಿಸಿ ಬಾಗಿಲು ಬಡಿದರು. ಮನೆಯೊಳಗೆ ಇದ್ದ ರೇವಣ್ಣ ಹೊರ ಬರಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೂ, ಇವತ್ತು ವಶಕ್ಕೆ ತೆಗೆದಕೊಂಡ ಬಳಿಕವೇ ತೆರಳುವುದಾಗಿ ತೀರ್ಮಾನಿಸಿದ್ದ ಎಸ್ಐಟಿ ಅಧಿಕಾರಿಗಳು ರೇವಣ್ಣ ಹೊರ ಬರುವವರೆಗೂ ಕಾದರು.
ಕೊನೆಗೂ ವಿಧಿಯಿಲ್ಲದೇ ಮಾಜಿ ಸಚಿವ ರೇವಣ್ಣ ಮಾಜಿ ಪ್ರಧಾನಿಯವರು ಪದ್ಮನಾಭನಗರದ ಮನೆಯಿಂದ ಹೊರಬರಲೇ ಬೇಕಾಯಿತು. ಕೂಡಲೇ ರೇವಣ್ಣ ಅವರನ್ನು ವಶಕ್ಕೆ ತೆಗೆದುಕೊಂಡ ಎಸ್ಐಟಿ ಅಧಿಕಾರಿಗಳು ಅವರನ್ನ ಸಿಐಡಿ ಕಚೇರಿಗೆ ವಿಚಾರಣೆಗಾಗಿ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋದರು.
ಇದನ್ನೂ ಓದಿ: ಹೆಚ್.ಡಿ ರೇವಣ್ಣ ಅರೆಸ್ಟ್ ಬೆನ್ನಲ್ಲೇ ಆಪ್ತರ ಜೊತೆ ಕುಮಾರಸ್ವಾಮಿ ರಹಸ್ಯ ಮಾತುಕತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ