ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿದ
ಓರ್ವ ಸಹಚರ ಪಾರಿ, ತೀವ್ರ ಶೋಧಕಾರ್ಯ ಶುರು
ಎನ್ಕೌಂಟರ್ ವೇಳೆ ಇನ್ಸ್ಪೆಕ್ಟರ್ಗೆ ಗಂಭೀರ ಗಾಯ
ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಟಾಟಾ ಸ್ಟೀಲ್ನ ಬ್ಯುಸಿನೆಸ್ ಹೆಡ್ ವಿನಯ್ ತ್ಯಾಗಿಯ ಹತ್ಯೆಯಾಗಿತ್ತು. ಸಾಹಿಬಾಬಾದ್ ಪ್ರದೇಶದ ರಾಜೇಂದ್ರ ನಗರದ ಚರಂಡಿಯಲ್ಲಿ ವಿನಯ್ ತ್ಯಾಗಿಯ ಶವ ಪತ್ತೆಯಾಗಿತ್ತು. ಇದೀಗ ವಿನಯ್ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರು ಘಾಜಿಯಾಬಾದ್ನಲ್ಲಿ ಎನ್ಕೌಂಟರ್ ಮಾಡಿ ಬೀಸಾಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಕ್ರಿಮಿನಲ್ ಆರೋಪಿ ಅಕ್ಕಿ ಅಲಿಯಾಸ್ ದಕ್ಷ್ನನ್ನು ಎನ್ಕೌಂಟರ್ ಮಾಡಿ ಕೊಲ್ಲಲಾಗಿದೆ. ಈತ ಮೇ 3 ರಂದು ಟಾಟಾ ಸ್ಟೀಲ್ನ ಬ್ಯಿಸಿನೆಸ್ ಹೆಡ್ ವಿನಯ್ ತ್ಯಾಗಿಯನ್ನು ದರೋಡೆ ಮಾಡಿ, ಕೊಲೆ ಮಾಡಿದ್ದ. ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಇಂದು ಬೆಳಗ್ಗೆ ಎನ್ಕೌಂಟರ್ ಮಾಡಿ ಬೀಸಾಡಿದ್ದಾರೆ.
ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್ ಟೇಬಲ್ ಏನಾಯ್ತು..?
ಆಗಿದ್ದೇನು..?
ಘಾಜಿಯಾಬಾದ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಸಹಚರನೊಂದಿಗೆ ಬೈಕ್ನಲ್ಲಿ ಹೋಗ್ತಿದ್ದಾಗ ಅಕ್ಕಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಇಬ್ಬರು ಪೊಲೀಸರ ಮೇಲೆರಗಲು ಬಂದಿದ್ದಾರೆ, ನಂತರ ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿದ್ದು, ಅಕ್ಕಿಗೆ ತಾಗಿದೆ. ಆದರೆ ಸುಲಭವಾಗಿ ಸಹಚರ ಪರಾರಿಯಾಗಿದ್ದಾನೆ.
ಓರ್ವ ಸಬ್ ಇನ್ಸ್ಪೆಕ್ಟರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ನಲ್ಲಿದ್ದ ಮತ್ತೋರ್ವ ಆರೋಪಿ ಪರಾರಿ ಆಗಿದ್ದಾನೆ. ಹತ್ಯೆಯಾದ ಅಕ್ಕಿ ಅಲಿಯಾಸ್ ದಕ್ಷ ದೆಹಲಿಯ ಸೀಲಂಪುರ ನಿವಾಸಿ ಎಂದು ತಿಳಿದುಬಂದಿದೆ. ಈತನಿಂದ ಲೂಟಿ ಮಾಡಿದ್ದ ಫೋನ್, ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಮೇ 3 ರಂದು ಟಾಟಾ ಸ್ಟೀಲ್ ಬ್ಯುಸಿನೆಸ್ ಹೆಡ್ ವಿನಯ್ ತ್ಯಾಗಿಯನ್ನು ಸಾಯಿಸಿ ದರೋಡೆ ಮಾಡಿದ್ದರು. ವಿನಯ್ ತ್ಯಾಗಿ ಶುಕ್ರವಾರ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಳಿಗೆ ಒಳಗಾದರು. ವಿನಯ್ ದೆಹಲಿಯ ಟಾಟಾ ಸ್ಟೀಲ್ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವಾರದ ಹಿಂದಷ್ಟೇ ಕೋಲ್ಕತ್ತಾದಿಂದ ದೆಹಲಿಗೆ ವರ್ಗಾವಣೆಯಾಗಿದ್ದರು.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿದ
ಓರ್ವ ಸಹಚರ ಪಾರಿ, ತೀವ್ರ ಶೋಧಕಾರ್ಯ ಶುರು
ಎನ್ಕೌಂಟರ್ ವೇಳೆ ಇನ್ಸ್ಪೆಕ್ಟರ್ಗೆ ಗಂಭೀರ ಗಾಯ
ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಟಾಟಾ ಸ್ಟೀಲ್ನ ಬ್ಯುಸಿನೆಸ್ ಹೆಡ್ ವಿನಯ್ ತ್ಯಾಗಿಯ ಹತ್ಯೆಯಾಗಿತ್ತು. ಸಾಹಿಬಾಬಾದ್ ಪ್ರದೇಶದ ರಾಜೇಂದ್ರ ನಗರದ ಚರಂಡಿಯಲ್ಲಿ ವಿನಯ್ ತ್ಯಾಗಿಯ ಶವ ಪತ್ತೆಯಾಗಿತ್ತು. ಇದೀಗ ವಿನಯ್ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರು ಘಾಜಿಯಾಬಾದ್ನಲ್ಲಿ ಎನ್ಕೌಂಟರ್ ಮಾಡಿ ಬೀಸಾಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಕ್ರಿಮಿನಲ್ ಆರೋಪಿ ಅಕ್ಕಿ ಅಲಿಯಾಸ್ ದಕ್ಷ್ನನ್ನು ಎನ್ಕೌಂಟರ್ ಮಾಡಿ ಕೊಲ್ಲಲಾಗಿದೆ. ಈತ ಮೇ 3 ರಂದು ಟಾಟಾ ಸ್ಟೀಲ್ನ ಬ್ಯಿಸಿನೆಸ್ ಹೆಡ್ ವಿನಯ್ ತ್ಯಾಗಿಯನ್ನು ದರೋಡೆ ಮಾಡಿ, ಕೊಲೆ ಮಾಡಿದ್ದ. ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಇಂದು ಬೆಳಗ್ಗೆ ಎನ್ಕೌಂಟರ್ ಮಾಡಿ ಬೀಸಾಡಿದ್ದಾರೆ.
ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್ ಟೇಬಲ್ ಏನಾಯ್ತು..?
ಆಗಿದ್ದೇನು..?
ಘಾಜಿಯಾಬಾದ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಸಹಚರನೊಂದಿಗೆ ಬೈಕ್ನಲ್ಲಿ ಹೋಗ್ತಿದ್ದಾಗ ಅಕ್ಕಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಇಬ್ಬರು ಪೊಲೀಸರ ಮೇಲೆರಗಲು ಬಂದಿದ್ದಾರೆ, ನಂತರ ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿದ್ದು, ಅಕ್ಕಿಗೆ ತಾಗಿದೆ. ಆದರೆ ಸುಲಭವಾಗಿ ಸಹಚರ ಪರಾರಿಯಾಗಿದ್ದಾನೆ.
ಓರ್ವ ಸಬ್ ಇನ್ಸ್ಪೆಕ್ಟರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ನಲ್ಲಿದ್ದ ಮತ್ತೋರ್ವ ಆರೋಪಿ ಪರಾರಿ ಆಗಿದ್ದಾನೆ. ಹತ್ಯೆಯಾದ ಅಕ್ಕಿ ಅಲಿಯಾಸ್ ದಕ್ಷ ದೆಹಲಿಯ ಸೀಲಂಪುರ ನಿವಾಸಿ ಎಂದು ತಿಳಿದುಬಂದಿದೆ. ಈತನಿಂದ ಲೂಟಿ ಮಾಡಿದ್ದ ಫೋನ್, ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಮೇ 3 ರಂದು ಟಾಟಾ ಸ್ಟೀಲ್ ಬ್ಯುಸಿನೆಸ್ ಹೆಡ್ ವಿನಯ್ ತ್ಯಾಗಿಯನ್ನು ಸಾಯಿಸಿ ದರೋಡೆ ಮಾಡಿದ್ದರು. ವಿನಯ್ ತ್ಯಾಗಿ ಶುಕ್ರವಾರ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಳಿಗೆ ಒಳಗಾದರು. ವಿನಯ್ ದೆಹಲಿಯ ಟಾಟಾ ಸ್ಟೀಲ್ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವಾರದ ಹಿಂದಷ್ಟೇ ಕೋಲ್ಕತ್ತಾದಿಂದ ದೆಹಲಿಗೆ ವರ್ಗಾವಣೆಯಾಗಿದ್ದರು.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ