ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ನಿಮಗೆ ಗೌರವ ದೊರೆಯಲಿದೆ
ತಾಳ್ಮೆ ಬಹಳ ಮುಖ್ಯ ಇಲ್ಲದೆ ಇದ್ದರೆ ಗೌರವನ್ನು ಕಳೆದುಕೊಳ್ಳುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಸೇವೆ, ಸಮಾಜಮುಖಿ ಕೆಲಸ, ಸಾರ್ವಜನಿಕ ಒಡನಾಟದಿಂದ ಸಮಾಜದಲ್ಲಿ ಮನ್ನಣೆ ಸಿಗಲಿದೆ
- ಬೆಲೆ ಬಾಳುವ ವಸ್ತುವಿನ ಖರೀದಿಯ ವಿಚಾರ ಮಾಡುತ್ತೀರಿ
- ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ
- ನಿಮ್ಮ ಬಗ್ಗೆ ಹಾಗೂ ನಿಮ್ಮ ಭದ್ರತೆಯ ಬಗ್ಗೆ ಹೆಚ್ಚು ಗಮನ ಕೊಡಿ
- ನಿಮಗೆ ಯಶಸ್ಸಿದೆ ಹಾಗೆ ಗುರಿಯಿದ್ದರೆ ಮಾತ್ರ ಸಾಧಕರಾಗುತ್ತೀರಿ
- ಪ್ರೀತಿ-ಪ್ರೇಮದ ವಿಷಯದಲ್ಲಿ ಗೊಂದಲವಾಗಿ ಬೇಸರವಾಗಬಹುದು
- ಅದೃಷ್ಟ ಚೆನ್ನಾಗಿದೆ ಎಂದು ಸಂತೋಷ ಪಡುವುದರಲ್ಲಿ ಸಮಯ ಹೋಗುತ್ತದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತೀರಿ
- ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
- ಹಣದ ವಿಚಾರವಾಗಿ ನಿರಾಸೆಯಾಗಬಹುದು
- ಅನಗತ್ಯವಾದ, ಅನುಪಯುಕ್ತವಾದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುತ್ತೀರಿ
- ವಾದ-ವಿವಾದಗಳಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ
- ಇಂದು ಆತಂಕ ಬೇಡ, ಸಮಾಧಾನವಾಗಿರಿ
- ಈಶ್ವರನ ಆರಾಧನೆ ಮಾಡಿ
ಮಿಥುನ
- ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
- ಕುಟುಂಬದಲ್ಲಿ ನೆಮ್ಮದಿ, ಶಾಂತಿಯ ವಾತವರಣವಿದೆ
- ಜನ ನಿಮ್ಮ ಸಲಹೆಯನ್ನು ಸ್ವೀಕಾರ ಮಾಡಬಹುದು
- ಬಂಧುಗಳ ಜೊತೆಯಲ್ಲಿ ಸಂತೋಷದಿಂದಿರುತ್ತೀರಿ
- ಕಠಿಣ ಪರಿಶ್ರಮಕ್ಕೆ ಪ್ರತಿಫಲವಿರಲಿದೆ
- ಕೋಪದಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
- ತುಳಸಿಯಿಂದ ವಿಷ್ಣುವನ್ನು ಅರ್ಚನೆ ಮಾಡಿ
ಕಟಕ
- ಹಳೆಯ ವಿಚಾರವನ್ನು ದೂರ ಮಾಡಿ, ಬೇಸರವನ್ನು ಕಡಿಮೆ ಮಾಡಿಕೊಳ್ಳಿ
- ಅನುಕೂಲವಾದ ಸಮಯವನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗ ಮಾಡಿಕೊಳ್ಳಿ
- ಹೊಸ ಹೂಡಿಕೆಗೆ ಅನುಕೂಲವಾದ ದಿನ
- ಸ್ವೇಚ್ಛೆಯಿರುವವರು ಗುರಿ ಮುಟ್ಟಲು ಬಹಳ ಕಷ್ಟವಾಗಬಹುದು
- ಜನರಿಗೆ ನೀವು ಬಹಳ ಸ್ಫೂರ್ತಿಯಾಗಿರುತ್ತೀರಿ
- ಈ ದಿನ ಬದಲಾವಣೆಯ ಚಿಂತೆ ಮಾಡಬೇಡಿ
- ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿಸಿ
ಸಿಂಹ
- ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
- ಇಂದು ನೀವು ಸಮಾರಂಭಗಳಿಗೆ ಹಾಜರಾಗುತ್ತೀರಿ
- ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ನಿಮಗೆ ಗೌರವ ದೊರೆಯಲಿದೆ
- ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯವಾಗಬಹುದು
- ನಿಮ್ಮ ಕೆಲಸ, ಸಾಧನೆಗೆ ಕುಟುಂಬದಲ್ಲಿ ಪ್ರಶಂಸೆಯಿದೆ
- ಆರ್ಥಿಕವಾದ ಬಿಕ್ಕಟ್ಟು ಕಾಡಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
- ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರ ಸಲಹೆ ಬೇಡ
- ತಾಳ್ಮೆ ಬಹಳ ಮುಖ್ಯ ಇಲ್ಲದೆ ಇದ್ದರೆ ಗೌರವನ್ನು ಕಳೆದುಕೊಳ್ಳುತ್ತೀರಿ
- ಹಾಸ್ಯಾಸ್ಪದ, ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು
- ಸಮಾಜಕ್ಕೆ ಅಂಜಿ, ಹಿರಿಯರಿಗೆ ತಲೆಯನ್ನು ಬಾಗಿ ನಡೆಯುವುದರಿಂದ ನಮ್ಮ ಗೌರವ ಹೆಚ್ಚಾಗಲಿದೆ
- ಕೆಲವು ಜವಾಬ್ದಾರಿಯಿಂದ ಹೊರಗೆ ಬರಬೇಕಾಗಲಿದೆ
- ಜನಸಂದಣಿಯಲ್ಲಿ ನಿಮಗೆ ತೊಂದರೆಯಾಗಬಹುದು
- ಮಕ್ಕಳ ವರ್ತನೆ ನಿಮಗೆ ಬೇಸರವಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
- ರಾಜಕೀಯ,ರಾಜಕಾರಣಿಗಳ ಪ್ರಭಾವ ಕೆಲಸ ಮಾಡಬಹುದು
- ಇಂದು ನಿಮ್ಮ ಮಾತಿಗೆ ಬೆಲೆ ಸಿಗಲಿದೆ
- ವೃತ್ತಿಯಲ್ಲಿ ಅನುಕೂಲವಿದೆ ಶ್ರಮವಹಿಸಿ
- ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
- ಕಾಲಿಗೆ ಪೆಟ್ಟಾಗಬಹುದು ಜಾಗ್ರತೆವಹಿಸಿ
- ವಿಕಲಚೇತನರಿಗೆ ಸಹಾಯ ಮಾಡಿ
ವೃಶ್ಚಿಕ
- ವಿದ್ಯಾರ್ಥಿಗಳಿಗೆ ನಿಮ್ಮ ಮಿತ್ರರಿಂದ ತೊಂದರೆಯಾಗಬಹುದು
- ಈ ದಿನ ವ್ಯವಹಾರದಲ್ಲಿ ಲಾಭ ಶುಭವಿದೆ
- ಯಾರನ್ನಾದರು ಕ್ಷಮಿಸಬೇಕು ಅಂದರೆ ಈ ದಿನ ಉತ್ತಮವಾದ ದಿನ
- ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
- ಏಕಾಗ್ರತೆ ಉತ್ತಮವಾದ ಫಲಿತಾಂಶ ನೀಡಲಿದೆ
- ಜೀವನ ಶೈಲಿಯಲ್ಲಿ ಸುಧಾರಣೆ ಕಾಣಲಿದೆ
- ವಿದ್ಯಾ ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಮನೆಯ ಜವಾಬ್ದಾರಿಯ ಕಡೆ ಗಮನಕೊಡಿ
- ಮದುವೆ ವಿಚಾರದಲ್ಲಿ ತಲೆ ಕೆಡಿಸಿಕೊಂಡರೆ ಉಪಯೋಗವಾಗುವುದಿಲ್ಲ
- ಬೆನ್ನು ನೋವಿನ ಸಮಸ್ಯೆ ಕಾಡಬಹುದು
- ಆನಂದವಾಗಿರುತ್ತೀರಿ ಆದರೆ ಮನಸ್ಸಲ್ಲಿ ಕಳವಳ ಇರಲಿದೆ
- ಇಂದು ನೀವು ಆಹಾರದ ಬಗ್ಗೆ ಗಮನಿಸಿ
- ಸಾಯಂಕಾಲ ಮಹತ್ತರ ವಿಚಾರಗಳನ್ನು ಚರ್ಚೆ ಮಾಡುತ್ತೀರಿ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮಕರ
- ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುತ್ತೀರಿ
- ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ ಉಳಿಸಿಕೊಳ್ಳಿ
- ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳನ್ನು ಮಾಡುತ್ತೀರಿ
- ನಿಮ್ಮ ಪ್ರಗತಿಯ ಬಗ್ಗೆ ಭಯ ಹುಟ್ಟಬಹುದು
- ವೃತ್ತಿ, ಉದ್ಯೋಗದ ಬಗ್ಗೆ ಇರುವ ಒತ್ತಡ ನಿವಾರಣೆಯಾಗಲಿದೆ
- ಒಳ್ಳೆಯ ಸ್ನೇಹಿತರ, ಹಿತೈಷಿಗಳ ಮಾರ್ಗದರ್ಶನ ಪಡೆದುಕೊಳ್ಳಿ
- ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ
ಕುಂಭ
- ಮಕ್ಕಳ ವಿದ್ಯಾಭ್ಯಾಸ, ಪ್ರಗತಿ, ಸಾಧನೆ, ಜೀವನ ಶೈಲಿಯಿಂದ ನಿಮ್ಮ ಹೆಸರು ಹೆಚ್ಚಾಗಲಿದೆ
- ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ಅನ್ನೋ ರೀತಿ ಇರುವ ದಿನ
- ವ್ಯಾಪಾರ, ವ್ಯವಹಾರದ ಪ್ರಗತಿಯಾಗುವುದರಿಂದ ಲಾಭವಿದೆ
- ಸಂಬಂಧಿಕರ ಆಗಮನವಾಗಲಿದೆ ಹಾಗೆ ನಿಮ್ಮ ಯೋಜನೆಯ ಬಗ್ಗೆ ಹೇಳಿಕೊಳ್ಳುವುದರಿಂದ ಖುಷಿ ಸಿಗಲಿದೆ
- ನಿಮಗೆ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ
- ಅನಾರೋಗ್ಯದಿಂದ ಮುಕ್ತರಾಗುತ್ತೀರಿ
- ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ
ಮೀನ
- ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಸುತ್ತೀರಿ
- ಮಿತ್ರರನ್ನು ಭೇಟಿ ಮಾಡಿ ನಿಮ್ಮ ಶತ್ರುಗಳ ಬಗ್ಗೆ ಚರ್ಚೆ ಮಾಡುತ್ತೀರಿ
- ಮೂಲ ಉದ್ದೇಶವನ್ನು ಮರೆತು ಕಾರ್ಯ ಪ್ರವೃತ್ತರಾಗಬಹುದು
- ಸಮಯಕ್ಕೆ ಆದ್ಯತೆ ಕೊಡಿ ಧನಾತ್ಮಕವಾದ ಫಲವನ್ನು ಪಡೆದುಕೊಳ್ಳಿ
- ಮಾನಸಿಕವಾದ ನೆಮ್ಮದಿ ಕಡಿಮೆಯಾಗಬಹುದು
- ಕೋಪ-ಆತಂಕಗಳು ಹೆಚ್ಚಾಗಬಹುದು
- ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ