2 ತಂಡದಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ
ಎಂಎಸ್ ಧೋನಿಯ ಮುಂದಿನ ಹೆಜ್ಜೆ ಗೆಸ್ ಮಾಡೋದು ಅಸಾಧ್ಯನಾ?
ಈ ಖುಷಿಯ ನಡುವೆಯು ಒಂದು ಬೇಸರ ಅಭಿಮಾನಿಗಳನ್ನ ಕಾಡ್ತಿದೆ
ನಿನ್ನೆಯ ಪಂದ್ಯದಲ್ಲಿ ಒಂದೆಡೆ ಆರ್ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ಸಿಲುಕಿತ್ತು. ಇದಕ್ಕಾಗಿ ಇಡೀ ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಮಾಡಿದ ಪ್ರಾರ್ಥನೆ ಅಷ್ಟಿಷ್ಟಲ್ಲ. ಅರ್ಸಿಬಿ ಗೆಲುವಿಗಾಗಿ ಎಲ್ಲವನ್ನೂ ಬಿಟ್ಟು ಪ್ರಾರ್ಥಿಸಿದ ಇದೇ ಅಭಿಮಾನಿಗಳು, ಅಂತ್ಯದಲ್ಲೂ ಬೇಸರಗೊಂಡಿದ್ರು. ಆರ್ಸಿಬಿ ಗೆದ್ರೂ ಫ್ಯಾನ್ಸ್ ಬೇಸರಗೊಂಡಿದ್ದಕ್ಕೆ ಕಾರಣ ಎಮ್.ಎಸ್ ಧೋನಿ.
ಆರ್ಸಿಬಿ ವರ್ಸಸ್ ಚೆನ್ನೈ ನಡುವಿನ ರಣರೋಚಕ ಕಾದಾಟ ಅಂತ್ಯ ಕಂಡಿದೆ. ಕಳೆದ 1 ವಾರದಿಂದ ಕ್ರಿಕೆಟ್ ಲೋಕದ ಹಾಟ್ ಟಾಪಿಕ್ ಆಗಿದ್ದ, ಯಾರ್ ಗೆಲ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ. ಚೆನ್ನೈ ಎದುರು ಸೂಪರ್ ಜಯ ದಾಖಲಿಸಿ ಆರ್ಸಿಬಿ ಫ್ಲೇ ಆಫ್ಗೆ ಎಂಟ್ರಿ ಕೊಟ್ಟೇ ಬಿಟ್ಟಿದೆ.
ಇದನ್ನೂ ಓದಿ: ಅಭಿಮಾನಿಗಳ ಅಭಯ, ಹೆಂಡತಿಯ ಸಪೋರ್ಟ್.. ಹೋರಾಟದ ಹಾದಿ ನೆನೆದು ಕಣ್ಣೀರು ಹಾಕಿದ ಕೊಹ್ಲಿ
ಮೇ.18ರಂದು ಆರ್ಸಿಬಿ ಗೆಲ್ಲಲಿ ಅಂತಾ ಪ್ಯಾನ್ಸ್ ಮಾಡಿದ ಪ್ರಾರ್ಥನೆ ಅಷ್ಟಿಷ್ಟಲ್ಲ.. ರನ್ರೇಟ್ ಲೆಕ್ಕಾಚಾರದಲ್ಲಿ ದೊಡ್ಡ ಅಂತರದ ಜಯ ಬೇಕಿತ್ತು. ಮಳೆ ಭೀತಿ ಬೇರೆ ಪಂದ್ಯಕ್ಕಿತ್ತು. ಈ ಎಲ್ಲಾ ವಿಘ್ನಗಳನ್ನ ದಾಟಿ ಆರ್ಸಿಬಿ ಗೆಲ್ಲಲಿ ಎಂದು ಫ್ಯಾನ್ಸ್ ಪ್ರಾರ್ಥಿಸಿದ್ರು. ಕೊನೆಗೂ ಪ್ರಾರ್ಥನೆ ಫಲಿಸಿದೆ. ಫಲ ಸಿಕ್ಕಿದೆ. ಆರ್ಸಿಬಿ ಪ್ಲೇ ಆಫ್ ತಲುಪಿದ್ದೂ ಆಗಿದೆ. ಈ ಖುಷಿಯ ನಡುವೆಯೂ ಒಂದು ಬೇಸರ ಫ್ಯಾನ್ಸ್ನ ಕಾಡ್ತಿದೆ.
ಧೋನಿಯ ಕೊನೆ ಆಟ.. ಫ್ಯಾನ್ಸ್ ಕಂಬನಿ.!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆಲ್ತು. ಇದ್ರೊಂದಿಗೆ ಸೋತ ಚೆನ್ನೈನ ಐಪಿಎಲ್ ಅಭಿಯಾನ ಇದ್ರೊಂದಿಗೆ ಅಂತ್ಯವಾಯ್ತು. ಕೇವಲ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ, ಐಪಿಎಲ್ ಸೀಸನ್ 17ಕ್ಕೆ ಸೋಲಿನ ವಿದಾಯ ಹೇಳಲಿಲ್ಲ. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಟ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ಕಂಡ ಸಕ್ಸಸ್ಫುಲ್ ಕ್ಯಾಪ್ಟನ್ ಧೋನಿ ಕರಿಯರ್ ಕೂಡ ಬಹುತೇಕ ತೆರೆ ಬಿದ್ದಂತಾಯ್ತು.
ಚಿನ್ನಸ್ವಾಮಿಯಲ್ಲೇ ಧೋನಿ ಯುಗಾಂತ್ಯ.?
42 ವಯಸ್ಸಿನ ಧೋನಿ ಪಾಲಿಗೆ ಈ ಸೀಸನ್ ಐಪಿಎಲ್ ಟೂರ್ನಿಯೇ ಕೊನೆಯ ಟೂರ್ನಿ ಎಂದು ಹೇಳಲಾಗಿತ್ತು. ಇಂಜುರಿಯಿಂದ ಬಳಲುತ್ತಿರೋ ಧೋನಿ ಮುಂದಿನ ಸೀಸನ್ನಲ್ಲಿ ಆಡೋದು ಅನುಮಾನವೇ. ಹೀಗಾಗಿ ನಿನ್ನೆ ಚಿನ್ನಸ್ವಾಮಿಯಲ್ಲಿ ಆಡಿದ್ದೇ ಕೊನೆಯ ಪಂದ್ಯ ಎಂದು ಕ್ರಿಕೆಟ್ ಲೋಕದಲ್ಲಿ ಟಾಕ್ ಹಬ್ಬಿದೆ. ಆರ್ಸಿಬಿ ಫ್ಯಾನ್ಸ್ ಬೇಸರಗೊಂಡಿರೋದು ಇದೇ ಕಾರಣಕ್ಕೆ.
ಇದನ್ನೂ ಓದಿ: RCB ಮರೆಯದ ವಿಜಯ್ ಮಲ್ಯ.. ಪ್ಲೇ ಆಫ್ಗೆ ಬೆಂಗಳೂರು ರಾಯಲ್ ಎಂಟ್ರಿ ಕೊಟ್ಟಿದ್ದಕ್ಕೆ ಏನಂದ್ರು?
ಗುರುಶಿಷ್ಯರ ಕಾದಾಟ, ಭಾವನಾತ್ಮಕ ಪಂದ್ಯ..!
ಎಮ್ಎಸ್ ಧೋನಿ – ವಿರಾಟ್ ಕೊಹ್ಲಿ.. ಭಾರತೀಯ ಕ್ರಿಕೆಟ್ ಕಂಡ ಒನ್ ಆಫ್ ದ ಬೆಸ್ಟ್ ಗುರು ಶಿಷ್ಯರ ಜೋಡಿ. ಈ ಜೋಡಿಯ ಮುಖಾಮುಖಿ ಫ್ಯಾನ್ಸ್ ವಲಯದಲ್ಲಿ ಕಿಚ್ಚು ಹಚ್ಚಿತ್ತು. ಚಿನ್ನಸ್ವಾಮಿ ಮೈದಾನ ವಿರಾಟ್ ಕೊಹ್ಲಿಯ ಕಿಂಗ್ಡಮ್. ಆದ್ರೆ, ನಿನ್ನೆ ನಡೆದಿದ್ದು ಮಾತ್ರ ಧೋನಿಯ ಜಾತ್ರೆ. ಧೋನಿ ಕ್ರೇಜ್ ನಿನ್ನೆ ಮುಗಿಲು ಮುಟ್ಟಿತ್ತು. ವಿಶ್ವ ಗೆದ್ದ ವೀರನಿಗೆ ಫ್ಯಾನ್ಸ್ ರಾಯಲ್ ಸೆಲ್ಯೂಟ್ ಹೊಡೆದ ಪರಿ ಹಂಗಿತ್ತು.
ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್
ಧೋನಿ ಅಂದ್ರೆನೆ ಅನ್ಪ್ರಿಡಿಕ್ಟ್ಬಲ್.. ಧೋನಿಯ ಮುಂದಿನ ಹೆಜ್ಜೆ ಏನು ಅನ್ನೋದನ್ನ ಯಾರಿಂದಲೂ ಗೆಸ್ ಮಾಡೋಕೆ ಸಾಧ್ಯಾನೆ ಇಲ್ಲ. ಹೀಗಾಗಿ ಇದನ್ನೇ ಧೋನಿಯ ಕೊನೆ ಸೀಸನ್ ಅಂತಾ ಹೇಳೋಕೆ ಸಾಧ್ಯವಿಲ್ಲ ಅನ್ನೋ ಮಾತೂ ಚಾಲ್ತಿಯಲ್ಲಿದೆ. ಆದ್ರೆ, ಇಂಜುರಿ, ವಯಸ್ಸು ಎರಡೂ ಧೋನಿಗೆ ಅಡ್ಡವಾಗಿದೆ. ಮಾಹಿಯ ಮುಂದಿನ ನಿರ್ಧಾರ ಏನು ಅನ್ನೋದು ಸದ್ಯಕ್ಕಂತೂ ಮಿಲಿಯನ್ ಡಾಲರ್ ಪ್ರಶ್ನೆಯಾಗೇ ಉಳಿದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
2 ತಂಡದಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ
ಎಂಎಸ್ ಧೋನಿಯ ಮುಂದಿನ ಹೆಜ್ಜೆ ಗೆಸ್ ಮಾಡೋದು ಅಸಾಧ್ಯನಾ?
ಈ ಖುಷಿಯ ನಡುವೆಯು ಒಂದು ಬೇಸರ ಅಭಿಮಾನಿಗಳನ್ನ ಕಾಡ್ತಿದೆ
ನಿನ್ನೆಯ ಪಂದ್ಯದಲ್ಲಿ ಒಂದೆಡೆ ಆರ್ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ಸಿಲುಕಿತ್ತು. ಇದಕ್ಕಾಗಿ ಇಡೀ ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಮಾಡಿದ ಪ್ರಾರ್ಥನೆ ಅಷ್ಟಿಷ್ಟಲ್ಲ. ಅರ್ಸಿಬಿ ಗೆಲುವಿಗಾಗಿ ಎಲ್ಲವನ್ನೂ ಬಿಟ್ಟು ಪ್ರಾರ್ಥಿಸಿದ ಇದೇ ಅಭಿಮಾನಿಗಳು, ಅಂತ್ಯದಲ್ಲೂ ಬೇಸರಗೊಂಡಿದ್ರು. ಆರ್ಸಿಬಿ ಗೆದ್ರೂ ಫ್ಯಾನ್ಸ್ ಬೇಸರಗೊಂಡಿದ್ದಕ್ಕೆ ಕಾರಣ ಎಮ್.ಎಸ್ ಧೋನಿ.
ಆರ್ಸಿಬಿ ವರ್ಸಸ್ ಚೆನ್ನೈ ನಡುವಿನ ರಣರೋಚಕ ಕಾದಾಟ ಅಂತ್ಯ ಕಂಡಿದೆ. ಕಳೆದ 1 ವಾರದಿಂದ ಕ್ರಿಕೆಟ್ ಲೋಕದ ಹಾಟ್ ಟಾಪಿಕ್ ಆಗಿದ್ದ, ಯಾರ್ ಗೆಲ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ. ಚೆನ್ನೈ ಎದುರು ಸೂಪರ್ ಜಯ ದಾಖಲಿಸಿ ಆರ್ಸಿಬಿ ಫ್ಲೇ ಆಫ್ಗೆ ಎಂಟ್ರಿ ಕೊಟ್ಟೇ ಬಿಟ್ಟಿದೆ.
ಇದನ್ನೂ ಓದಿ: ಅಭಿಮಾನಿಗಳ ಅಭಯ, ಹೆಂಡತಿಯ ಸಪೋರ್ಟ್.. ಹೋರಾಟದ ಹಾದಿ ನೆನೆದು ಕಣ್ಣೀರು ಹಾಕಿದ ಕೊಹ್ಲಿ
ಮೇ.18ರಂದು ಆರ್ಸಿಬಿ ಗೆಲ್ಲಲಿ ಅಂತಾ ಪ್ಯಾನ್ಸ್ ಮಾಡಿದ ಪ್ರಾರ್ಥನೆ ಅಷ್ಟಿಷ್ಟಲ್ಲ.. ರನ್ರೇಟ್ ಲೆಕ್ಕಾಚಾರದಲ್ಲಿ ದೊಡ್ಡ ಅಂತರದ ಜಯ ಬೇಕಿತ್ತು. ಮಳೆ ಭೀತಿ ಬೇರೆ ಪಂದ್ಯಕ್ಕಿತ್ತು. ಈ ಎಲ್ಲಾ ವಿಘ್ನಗಳನ್ನ ದಾಟಿ ಆರ್ಸಿಬಿ ಗೆಲ್ಲಲಿ ಎಂದು ಫ್ಯಾನ್ಸ್ ಪ್ರಾರ್ಥಿಸಿದ್ರು. ಕೊನೆಗೂ ಪ್ರಾರ್ಥನೆ ಫಲಿಸಿದೆ. ಫಲ ಸಿಕ್ಕಿದೆ. ಆರ್ಸಿಬಿ ಪ್ಲೇ ಆಫ್ ತಲುಪಿದ್ದೂ ಆಗಿದೆ. ಈ ಖುಷಿಯ ನಡುವೆಯೂ ಒಂದು ಬೇಸರ ಫ್ಯಾನ್ಸ್ನ ಕಾಡ್ತಿದೆ.
ಧೋನಿಯ ಕೊನೆ ಆಟ.. ಫ್ಯಾನ್ಸ್ ಕಂಬನಿ.!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆಲ್ತು. ಇದ್ರೊಂದಿಗೆ ಸೋತ ಚೆನ್ನೈನ ಐಪಿಎಲ್ ಅಭಿಯಾನ ಇದ್ರೊಂದಿಗೆ ಅಂತ್ಯವಾಯ್ತು. ಕೇವಲ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ, ಐಪಿಎಲ್ ಸೀಸನ್ 17ಕ್ಕೆ ಸೋಲಿನ ವಿದಾಯ ಹೇಳಲಿಲ್ಲ. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಟ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ಕಂಡ ಸಕ್ಸಸ್ಫುಲ್ ಕ್ಯಾಪ್ಟನ್ ಧೋನಿ ಕರಿಯರ್ ಕೂಡ ಬಹುತೇಕ ತೆರೆ ಬಿದ್ದಂತಾಯ್ತು.
ಚಿನ್ನಸ್ವಾಮಿಯಲ್ಲೇ ಧೋನಿ ಯುಗಾಂತ್ಯ.?
42 ವಯಸ್ಸಿನ ಧೋನಿ ಪಾಲಿಗೆ ಈ ಸೀಸನ್ ಐಪಿಎಲ್ ಟೂರ್ನಿಯೇ ಕೊನೆಯ ಟೂರ್ನಿ ಎಂದು ಹೇಳಲಾಗಿತ್ತು. ಇಂಜುರಿಯಿಂದ ಬಳಲುತ್ತಿರೋ ಧೋನಿ ಮುಂದಿನ ಸೀಸನ್ನಲ್ಲಿ ಆಡೋದು ಅನುಮಾನವೇ. ಹೀಗಾಗಿ ನಿನ್ನೆ ಚಿನ್ನಸ್ವಾಮಿಯಲ್ಲಿ ಆಡಿದ್ದೇ ಕೊನೆಯ ಪಂದ್ಯ ಎಂದು ಕ್ರಿಕೆಟ್ ಲೋಕದಲ್ಲಿ ಟಾಕ್ ಹಬ್ಬಿದೆ. ಆರ್ಸಿಬಿ ಫ್ಯಾನ್ಸ್ ಬೇಸರಗೊಂಡಿರೋದು ಇದೇ ಕಾರಣಕ್ಕೆ.
ಇದನ್ನೂ ಓದಿ: RCB ಮರೆಯದ ವಿಜಯ್ ಮಲ್ಯ.. ಪ್ಲೇ ಆಫ್ಗೆ ಬೆಂಗಳೂರು ರಾಯಲ್ ಎಂಟ್ರಿ ಕೊಟ್ಟಿದ್ದಕ್ಕೆ ಏನಂದ್ರು?
ಗುರುಶಿಷ್ಯರ ಕಾದಾಟ, ಭಾವನಾತ್ಮಕ ಪಂದ್ಯ..!
ಎಮ್ಎಸ್ ಧೋನಿ – ವಿರಾಟ್ ಕೊಹ್ಲಿ.. ಭಾರತೀಯ ಕ್ರಿಕೆಟ್ ಕಂಡ ಒನ್ ಆಫ್ ದ ಬೆಸ್ಟ್ ಗುರು ಶಿಷ್ಯರ ಜೋಡಿ. ಈ ಜೋಡಿಯ ಮುಖಾಮುಖಿ ಫ್ಯಾನ್ಸ್ ವಲಯದಲ್ಲಿ ಕಿಚ್ಚು ಹಚ್ಚಿತ್ತು. ಚಿನ್ನಸ್ವಾಮಿ ಮೈದಾನ ವಿರಾಟ್ ಕೊಹ್ಲಿಯ ಕಿಂಗ್ಡಮ್. ಆದ್ರೆ, ನಿನ್ನೆ ನಡೆದಿದ್ದು ಮಾತ್ರ ಧೋನಿಯ ಜಾತ್ರೆ. ಧೋನಿ ಕ್ರೇಜ್ ನಿನ್ನೆ ಮುಗಿಲು ಮುಟ್ಟಿತ್ತು. ವಿಶ್ವ ಗೆದ್ದ ವೀರನಿಗೆ ಫ್ಯಾನ್ಸ್ ರಾಯಲ್ ಸೆಲ್ಯೂಟ್ ಹೊಡೆದ ಪರಿ ಹಂಗಿತ್ತು.
ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್
ಧೋನಿ ಅಂದ್ರೆನೆ ಅನ್ಪ್ರಿಡಿಕ್ಟ್ಬಲ್.. ಧೋನಿಯ ಮುಂದಿನ ಹೆಜ್ಜೆ ಏನು ಅನ್ನೋದನ್ನ ಯಾರಿಂದಲೂ ಗೆಸ್ ಮಾಡೋಕೆ ಸಾಧ್ಯಾನೆ ಇಲ್ಲ. ಹೀಗಾಗಿ ಇದನ್ನೇ ಧೋನಿಯ ಕೊನೆ ಸೀಸನ್ ಅಂತಾ ಹೇಳೋಕೆ ಸಾಧ್ಯವಿಲ್ಲ ಅನ್ನೋ ಮಾತೂ ಚಾಲ್ತಿಯಲ್ಲಿದೆ. ಆದ್ರೆ, ಇಂಜುರಿ, ವಯಸ್ಸು ಎರಡೂ ಧೋನಿಗೆ ಅಡ್ಡವಾಗಿದೆ. ಮಾಹಿಯ ಮುಂದಿನ ನಿರ್ಧಾರ ಏನು ಅನ್ನೋದು ಸದ್ಯಕ್ಕಂತೂ ಮಿಲಿಯನ್ ಡಾಲರ್ ಪ್ರಶ್ನೆಯಾಗೇ ಉಳಿದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ