ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಸಮರ
ಇಂದು ಮಿನಿ ಸಮರದಲ್ಲಿ ಹೈದರಾಬಾದ್, ಕೆಕೆಆರ್ ತಂಡಗಳು ಸೆಣಸಾಟ!
ಕ್ವಾಲಿಫೈಯರ್ 1ರ ರೋಚಕ ಪಂದ್ಯಕ್ಕೆ ಮುನ್ನವೇ ಕೆಕೆಆರ್ಗೆ ಬಿಗ್ ಶಾಕ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ನೇ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಅಹಮದಾಬಾದಿನ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ರೋಚಕ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಇನ್ನು, ಇಂದು ಗೆದ್ದ ತಂಡ ನೇರ ಫೈನಲ್ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಬಳಿಕ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜತೆಗೆ ಸೋತ ಟೀಮ್ ಮತ್ತೆ ಕಣಕ್ಕಿಳಿಯಲಿದೆ.
ಸದ್ಯ ನಡೆಯುತ್ತಿರೋ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಮತ್ತು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದವು. ಇಂದು ಫೈನಲ್ಗಾಗಿ ಎರಡು ತಂಡಗಳು ಬಿಗ್ ಫೈಟ್ ಮಾಡಲಿದ್ದು, ಯಾರು ಸೋತ್ರೂ ಮತ್ತೊಂದು ಅವಕಾಶ ಇದೆ.
ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್ಗೆ ಆಘಾತ..!
ಯೆಸ್, ಇಂದು ಹೈದರಾಬಾದ್ ವಿರುದ್ಧ ಗೆದ್ದು ಫೈನಲ್ಗೆ ಹೋಗಬೇಕು ಅಂತಿರೋ ಕೆಕೆಆರ್ಗೆ ಶಾಕಿಂಗ್ ನ್ಯೂಸ್ ಇದೆ. ಕೆಕೆಆರ್ ಪರ ಸುನಿಲ್ ನರೈನ್ ಈ ವರ್ಷ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಇವರಿಗೆ ಸಾಥ್ ನೀಡುತ್ತಿದ್ದ ಸ್ಫೋಟಕ ಆರಂಭಿಕ ಬ್ಯಾಟರ್ ಕೈ ಕೊಟ್ಟಿದ್ದಾರೆ. ಕೆಕೆಆರ್ ಸುನಿಲ್ ನರೈನ್ ಅವರ ಆರಂಭಿಕ ಜೊತೆಗಾರ ಫಿಲಿಪ್ ಸಾಲ್ಟ್ ಅವರನ್ನು ಕಳೆದುಕೊಂಡಿದೆ. ಫಿಲಿಪ್ ಸಾಲ್ಟ್ ಅಂತಾರಾಷ್ಟ್ರೀಯ ಕರ್ತವ್ಯಕ್ಕಾಗಿ ತಮ್ಮ ತವರು ಇಂಗ್ಲೆಂಡ್ಗೆ ಮರಳಿದ್ದಾರೆ. ಇದು ಕೆಕೆಆರ್ಗೆ ಆಘಾತದ ಸುದ್ದಿಯಾದ್ರೆ, ಹೈದರಾಬಾದ್, ಆರ್ಆರ್, ಆರ್ಸಿಬಿಗೆ ಗುಡ್ನ್ಯೂಸ್ ಆಗಿದೆ. ಕಾರಣ ಕೆಕೆಆರ್ ಬ್ಯಾಟಿಂಗ್ ಮೇನ್ ಪಿಲ್ಲರ್ ಫಿಲಿಪ್ ಸಾಲ್ಟ್ ಆಗಿದ್ರು.
ಇದನ್ನೂ ಓದಿ: ಇಂದು KKR VS ಹೈದರಾಬಾದ್.. ಯಾರು ಗೆದ್ರೆ ಆರ್ಸಿಬಿಗೆ ಒಳ್ಳೆಯದು? ಬೆಂಗಳೂರಿಗೆ ಸುವರ್ಣಾವಕಾಶ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಸಮರ
ಇಂದು ಮಿನಿ ಸಮರದಲ್ಲಿ ಹೈದರಾಬಾದ್, ಕೆಕೆಆರ್ ತಂಡಗಳು ಸೆಣಸಾಟ!
ಕ್ವಾಲಿಫೈಯರ್ 1ರ ರೋಚಕ ಪಂದ್ಯಕ್ಕೆ ಮುನ್ನವೇ ಕೆಕೆಆರ್ಗೆ ಬಿಗ್ ಶಾಕ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ನೇ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಅಹಮದಾಬಾದಿನ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ರೋಚಕ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಇನ್ನು, ಇಂದು ಗೆದ್ದ ತಂಡ ನೇರ ಫೈನಲ್ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಬಳಿಕ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜತೆಗೆ ಸೋತ ಟೀಮ್ ಮತ್ತೆ ಕಣಕ್ಕಿಳಿಯಲಿದೆ.
ಸದ್ಯ ನಡೆಯುತ್ತಿರೋ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಮತ್ತು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದವು. ಇಂದು ಫೈನಲ್ಗಾಗಿ ಎರಡು ತಂಡಗಳು ಬಿಗ್ ಫೈಟ್ ಮಾಡಲಿದ್ದು, ಯಾರು ಸೋತ್ರೂ ಮತ್ತೊಂದು ಅವಕಾಶ ಇದೆ.
ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್ಗೆ ಆಘಾತ..!
ಯೆಸ್, ಇಂದು ಹೈದರಾಬಾದ್ ವಿರುದ್ಧ ಗೆದ್ದು ಫೈನಲ್ಗೆ ಹೋಗಬೇಕು ಅಂತಿರೋ ಕೆಕೆಆರ್ಗೆ ಶಾಕಿಂಗ್ ನ್ಯೂಸ್ ಇದೆ. ಕೆಕೆಆರ್ ಪರ ಸುನಿಲ್ ನರೈನ್ ಈ ವರ್ಷ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಇವರಿಗೆ ಸಾಥ್ ನೀಡುತ್ತಿದ್ದ ಸ್ಫೋಟಕ ಆರಂಭಿಕ ಬ್ಯಾಟರ್ ಕೈ ಕೊಟ್ಟಿದ್ದಾರೆ. ಕೆಕೆಆರ್ ಸುನಿಲ್ ನರೈನ್ ಅವರ ಆರಂಭಿಕ ಜೊತೆಗಾರ ಫಿಲಿಪ್ ಸಾಲ್ಟ್ ಅವರನ್ನು ಕಳೆದುಕೊಂಡಿದೆ. ಫಿಲಿಪ್ ಸಾಲ್ಟ್ ಅಂತಾರಾಷ್ಟ್ರೀಯ ಕರ್ತವ್ಯಕ್ಕಾಗಿ ತಮ್ಮ ತವರು ಇಂಗ್ಲೆಂಡ್ಗೆ ಮರಳಿದ್ದಾರೆ. ಇದು ಕೆಕೆಆರ್ಗೆ ಆಘಾತದ ಸುದ್ದಿಯಾದ್ರೆ, ಹೈದರಾಬಾದ್, ಆರ್ಆರ್, ಆರ್ಸಿಬಿಗೆ ಗುಡ್ನ್ಯೂಸ್ ಆಗಿದೆ. ಕಾರಣ ಕೆಕೆಆರ್ ಬ್ಯಾಟಿಂಗ್ ಮೇನ್ ಪಿಲ್ಲರ್ ಫಿಲಿಪ್ ಸಾಲ್ಟ್ ಆಗಿದ್ರು.
ಇದನ್ನೂ ಓದಿ: ಇಂದು KKR VS ಹೈದರಾಬಾದ್.. ಯಾರು ಗೆದ್ರೆ ಆರ್ಸಿಬಿಗೆ ಒಳ್ಳೆಯದು? ಬೆಂಗಳೂರಿಗೆ ಸುವರ್ಣಾವಕಾಶ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್