ಇಂದು 2024ರ ಬಹುನಿರೀಕ್ಷಿತ ಐಪಿಎಲ್ ಫೈನಲ್ ಪಂದ್ಯ
ಕೋಲ್ಕತ್ತಾ ಮತ್ತು ಹೈದರಾಬಾದ್ ನಡುವೆ ಇಂದು ನಡೆಯಲಿದೆ ಜಟಾಪಟಿ
ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ ಇತ್ತಂಡಗಳು.. ಆದ್ರೆ ಮಳೆಯ ಗೋಳು ಕೇಳುವವರ್ಯಾರು?
ಇಂದು 2024ರ ಐಪಿಎಲ್ ಪಂದ್ಯಕ್ಕೆ ತೆರೆ ಬೀಳಲಿದೆ. ಬಲಿಷ್ಠ ತಂಡಗಳಾದ ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡ ಇಂದು ಮುಖಾಮುಖಿಯಾಗುತ್ತಿದೆ. ಆ ಮೂಲಕ ಇಂದಿನ ಫೈನಲ್ ಪಂದ್ಯದ ಮೂಲಕ ಟ್ರೋಫಿ ಕಸಿದುಕೊಳ್ಳಲಿದೆ. ಆದರೆ ಬಹುನಿರೀಕ್ಷಿತ ಇಂದಿನ ಐಪಿಎಲ್ 2024ರ ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಕಾರಣ ಬಂಗಾಳಕೊಲ್ಲಿಯಲ್ಲಿ ರೆಮಲ್ ಸೈಕ್ಲೋನ್ ಹುಟ್ಟಿಕೊಂಡಿದ್ದು, ಇದರಿಂದಾಗಿ ಕೆಲವು ರಾಜ್ಯಗಳಿಗೆ ಇದರ ಭೀತಿ ಎದುರಾಗಿದೆ.
ಅಂದಹಾಗೆಯೇ ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಫೈನಲ್ ಟ್ರೋಫಿಗಾಗಿ ಕೋಲ್ಕತ್ತಾ ಮತ್ತು ಹೈದರಾಬಾದ್ ಸೆಣೆಸಾಡಲಿವೆ. ಆದರೆ ‘ರೆಮಲ್’ ಇದೀಗ ಕ್ರಿಕೆಟ್ ಫ್ಯಾನ್ಸ್ ನಿದ್ದೆಗೆಡಿಸಿದೆ.
ಮೂರು ಬಾರಿ ಪಂದ್ಯ ರದ್ದು
ಇನ್ನು ಈ ಬಾರಿಯ ಮೂರು ಐಪಿಎಲ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆ ಕಾರಣಕ್ಕೆ ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಗಿತ್ತು. ಆದರೆ ಹಮಾಮಾನ ಇಲಾಖೆ ನೀಡಿದ ಮುನ್ಸೂಚನೆ ಗಮನಿಸಿದರೆ ರೆಮಲ್ ಚಂಡ ಮಾರುತ ಬೀಸುವ ಲಕ್ಷಣ ಕಾಣುತ್ತಿದೆ. ಒಂದು ವೇಳೆ ಸೈಕ್ಲೋನ್ ಭೀತಿಯಿಂದ ಇಂದಿನ ಪಂದ್ಯ ರದ್ದಾದರೆ ಯಾರ ಮುಡಿಗೆ ಟ್ರೋಫಿ ಸೇರಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳ ತಲೆ ಕೆಡಿಸಿದೆ.
ಇಂದು ಮಳೆ ಬಂದರೆ ಗತಿ ಏನು?
ಇಂದು ಪಂದ್ಯದ ವೇಳೆ ಮಳೆ ಶಾಕ್ ಕೊಟ್ಟರೆ ಅದಕ್ಕಾಗಿ ದಿನವೊಂದನ್ನು ಮೀಸಲಿಟ್ಟು ಆಡಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದೂ ಸಹ ಮಳೆ ಬಂದರೆ 5 ಓವರ್ನಲ್ಲಿ ಪಂದ್ಯವಾಡಿಸಲು ಸಾಧ್ಯವಾಗುತ್ತದಾ ಎಂದು ನೋಡಲಾಗುತ್ತದೆ.
ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್; ಎಲ್ಲರ ಕಣ್ಣು ತಪ್ಪಿಸಲು ಅಪ್ರಾಪ್ತ ಬಾಲಕ ಮಾಡಿದ್ದ ಸಖತ್ ಪ್ಲಾನ್
ಐದು ಓವರ್ನ ಪಂದ್ಯ ಸಹ ಸಾಧ್ಯವಾಗದೆ ಹೋದರೆ ಸೂಪರ್ ಓವರ್ ಮೂಲಕ ಪಂದ್ಯ ನಡೆಸುವ ಸಾಧ್ಯತೆ ಇದೆ. ಇವೆಲ್ಲ ಅಡಚಣೆ ಎದುರಾದರೆ, ಧಾರಾಕಾರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದಾದರೆ ಪಾಯಿಂಟ್ ಟೇಬಲ್ ಪ್ರಕಾರ ಕೋಲ್ಕತ್ತಾ ಟ್ರೋಫಿ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಬಹುಪಾಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು 2024ರ ಬಹುನಿರೀಕ್ಷಿತ ಐಪಿಎಲ್ ಫೈನಲ್ ಪಂದ್ಯ
ಕೋಲ್ಕತ್ತಾ ಮತ್ತು ಹೈದರಾಬಾದ್ ನಡುವೆ ಇಂದು ನಡೆಯಲಿದೆ ಜಟಾಪಟಿ
ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ ಇತ್ತಂಡಗಳು.. ಆದ್ರೆ ಮಳೆಯ ಗೋಳು ಕೇಳುವವರ್ಯಾರು?
ಇಂದು 2024ರ ಐಪಿಎಲ್ ಪಂದ್ಯಕ್ಕೆ ತೆರೆ ಬೀಳಲಿದೆ. ಬಲಿಷ್ಠ ತಂಡಗಳಾದ ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡ ಇಂದು ಮುಖಾಮುಖಿಯಾಗುತ್ತಿದೆ. ಆ ಮೂಲಕ ಇಂದಿನ ಫೈನಲ್ ಪಂದ್ಯದ ಮೂಲಕ ಟ್ರೋಫಿ ಕಸಿದುಕೊಳ್ಳಲಿದೆ. ಆದರೆ ಬಹುನಿರೀಕ್ಷಿತ ಇಂದಿನ ಐಪಿಎಲ್ 2024ರ ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಕಾರಣ ಬಂಗಾಳಕೊಲ್ಲಿಯಲ್ಲಿ ರೆಮಲ್ ಸೈಕ್ಲೋನ್ ಹುಟ್ಟಿಕೊಂಡಿದ್ದು, ಇದರಿಂದಾಗಿ ಕೆಲವು ರಾಜ್ಯಗಳಿಗೆ ಇದರ ಭೀತಿ ಎದುರಾಗಿದೆ.
ಅಂದಹಾಗೆಯೇ ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಫೈನಲ್ ಟ್ರೋಫಿಗಾಗಿ ಕೋಲ್ಕತ್ತಾ ಮತ್ತು ಹೈದರಾಬಾದ್ ಸೆಣೆಸಾಡಲಿವೆ. ಆದರೆ ‘ರೆಮಲ್’ ಇದೀಗ ಕ್ರಿಕೆಟ್ ಫ್ಯಾನ್ಸ್ ನಿದ್ದೆಗೆಡಿಸಿದೆ.
ಮೂರು ಬಾರಿ ಪಂದ್ಯ ರದ್ದು
ಇನ್ನು ಈ ಬಾರಿಯ ಮೂರು ಐಪಿಎಲ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆ ಕಾರಣಕ್ಕೆ ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಗಿತ್ತು. ಆದರೆ ಹಮಾಮಾನ ಇಲಾಖೆ ನೀಡಿದ ಮುನ್ಸೂಚನೆ ಗಮನಿಸಿದರೆ ರೆಮಲ್ ಚಂಡ ಮಾರುತ ಬೀಸುವ ಲಕ್ಷಣ ಕಾಣುತ್ತಿದೆ. ಒಂದು ವೇಳೆ ಸೈಕ್ಲೋನ್ ಭೀತಿಯಿಂದ ಇಂದಿನ ಪಂದ್ಯ ರದ್ದಾದರೆ ಯಾರ ಮುಡಿಗೆ ಟ್ರೋಫಿ ಸೇರಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳ ತಲೆ ಕೆಡಿಸಿದೆ.
ಇಂದು ಮಳೆ ಬಂದರೆ ಗತಿ ಏನು?
ಇಂದು ಪಂದ್ಯದ ವೇಳೆ ಮಳೆ ಶಾಕ್ ಕೊಟ್ಟರೆ ಅದಕ್ಕಾಗಿ ದಿನವೊಂದನ್ನು ಮೀಸಲಿಟ್ಟು ಆಡಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದೂ ಸಹ ಮಳೆ ಬಂದರೆ 5 ಓವರ್ನಲ್ಲಿ ಪಂದ್ಯವಾಡಿಸಲು ಸಾಧ್ಯವಾಗುತ್ತದಾ ಎಂದು ನೋಡಲಾಗುತ್ತದೆ.
ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್; ಎಲ್ಲರ ಕಣ್ಣು ತಪ್ಪಿಸಲು ಅಪ್ರಾಪ್ತ ಬಾಲಕ ಮಾಡಿದ್ದ ಸಖತ್ ಪ್ಲಾನ್
ಐದು ಓವರ್ನ ಪಂದ್ಯ ಸಹ ಸಾಧ್ಯವಾಗದೆ ಹೋದರೆ ಸೂಪರ್ ಓವರ್ ಮೂಲಕ ಪಂದ್ಯ ನಡೆಸುವ ಸಾಧ್ಯತೆ ಇದೆ. ಇವೆಲ್ಲ ಅಡಚಣೆ ಎದುರಾದರೆ, ಧಾರಾಕಾರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದಾದರೆ ಪಾಯಿಂಟ್ ಟೇಬಲ್ ಪ್ರಕಾರ ಕೋಲ್ಕತ್ತಾ ಟ್ರೋಫಿ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಬಹುಪಾಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ