ಪ್ರೀತಿ, ಪ್ರೇಮ ವಿಚಾರದಲ್ಲಿ ಗೊಂದಲವಾಗಿ ಬೇಸರವಾಗಬಹುದು
ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.00 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆಯಿದೆ
- ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
- ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
- ಯಾರಿಗೆ ಬುದ್ದಿವಂತಿಕೆ ಚೆನ್ನಾಗಿದ್ಯೊ ಅಂತವರು ಇಲ್ಲಿ ಕೆಲಸ ಮಾಡಿ ಜಯಿಸಬಹುದು
- ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
- ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಗಣಪತಿಯನ್ನು ಪ್ರಾರ್ಥಿಸಿ
ವೃಷಭ
- ನಿಮ್ಮ ಸೇವೆ ಅಥವಾ ಸಹಾಯಕ್ಕಾಗಿ ಸಮಾಜದಲ್ಲಿ ಮನ್ನಣೆ ಸಿಗಲಿದೆ
- ಬೆಲೆ ಬಾಳುವ ವಸ್ತು ಖರೀದಿ ಮಾಡುವುದರಿಂದ ಖರ್ಚಾಗಲಿದೆ
- ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ
- ನಿಮ್ಮ ಬಗ್ಗೆಯೇ ಹೆಚ್ಚು ಗಮನಕೊಡಿ ಭದ್ರತೆ ಇರಲಿ
- ಯಶಸ್ಸಿದೆ ಗುರಿಯಿರಲಿ
- ಪ್ರೀತಿ ಪ್ರೇಮ ವಿಚಾರದಲ್ಲಿ ಗೊಂದಲವಾಗಿ ಬೇಸರವಾಗಬಹುದು
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ಆತ್ಮಾವಲೋಕನ ಮಾಡಿಕೊಳ್ಳಿ
- ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
- ಹಣದ ವಿಚಾರದಲ್ಲಿ ನಿರಾಸೆಯಾಗಬಹುದು
- ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
- ವಾದ-ವಿವಾದಗಳಲ್ಲಿ ಸಮಸ್ಯೆಯಾಗಬಹುದು
- ಆತಂಕ ಬೇಡ ಸಮಾಧಾನವನ್ನು ಕಾಪಾಡಿಕೊಳ್ಳಿ
- ಈಶ್ವರನ ಆರಾಧನೆ ಮಾಡಿ
ಕಟಕ
- ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ
- ಕುಟುಂಬದಲ್ಲಿ ನೆಮ್ಮದಿಯ ಶಾಂತಿಯ ವಾತಾವರಣ ಕಾಪಾಡಿಕೊಳ್ಳಿ
- ಜನರು ನಿಮ್ಮ ಸಲಹೆಯನ್ನು ಸ್ವೀಕರಿಸಬಹುದು
- ಕಠಿಣ ಶ್ರಮಕ್ಕೆ ತಕ್ಕ ಫಲವಿದೆ
- ಕೋಪದಿಂದ ಗಾಯವಾಗುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿ
- ತುಳಸಿಯಿಂದ ವಿಷ್ಣುವಿನ ಅರ್ಚನೆ ಮಾಡಿ
ಸಿಂಹ
- ಬೇಸರ ಕಡಿಮೆ ಮಾಡಿಕೊಳ್ಳಿ
- ಅನುಕೂಲದ ಸಮಯವನ್ನು ವಿನಿಯೋಗಿಸಿಕೊಳ್ಳಿ
- ಹೊಸ ಹೂಡಿಕೆಗೆ ಅನುಕೂಲವಾದ ದಿನ
- ಸ್ವೇಚ್ಛೆ ಇರುವವರು ಗುರಿಮುಟ್ಟಲು ಕಷ್ಟದ ದಿನ
- ಯಾವುದೇ ಬದಲಾವಣೆಗಳ ಬಗ್ಗೆ ಚಿಂತೆ ಬೇಡ
- ಸುಬ್ರಹ್ಮಣ್ಯಸ್ವಾಮಿಗೆ ಕ್ಷೀರಾಭಿಷೇಕ ಮಾಡಿಸಿ
ಕನ್ಯಾ
- ಧಾರ್ಮಿಕ ಅಥವಾ ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ
- ಸಮಾರಂಭಗಳಿಗೆ ಹಾಜರಾಗಬಹುದು
- ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಬರಬಹುದು
- ಹೊಸ ಉದ್ಯಮಕ್ಕೆ ಅಥವಾ ಸಾಧನೆಗೆ ಪ್ರಶಂಸೆಯಿದೆ
- ಆರ್ಥಿಕ ಬಿಕ್ಕಟ್ಟು ಕಾಡಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ತುಲಾ
- ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ
- ಇಂದು ನಿಮಗೆ ತಾಳ್ಮೆ ಬಹಳ ಮುಖ್ಯ
- ಹಾಸ್ಯಾಸ್ಪದ ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿ ಎದುರಿಸಬೇಕಾಗಬಹುದು
- ಜವಾಬ್ದಾರಿಗಳಿಂದ ಹೊರ ಬರಬೇಕು
- ಜನ ಸಂದಣಿಯಲ್ಲಿ ನಿಮಗೆ ತೊಂದರೆಯಾಗಬಹುದು
- ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ರಾಜಕೀಯ ಪ್ರಭಾವ ಕೆಲಸ ಮಾಡಬಹುದು
- ವೃತ್ತಿಯಲ್ಲಿ ಅನುಕೂಲ ಆದರೆ ತುಂಬಾ ಶ್ರಮ
- ಆರೋಗ್ಯದ ಬಗ್ಗೆ ಸುಧಾರಣೆಯಿದೆ
- ಪ್ರೇಮಿಗಳಿಗೆ ಶುಭ ಉತ್ತಮ ನಿರ್ಧಾರ
- ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆವಹಿಸಿ
- ವಿಕಲ ಚೇತನರಿಗೆ ಸಹಾಯ ಮಾಡಿ
ಧನುಸ್ಸು
- ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆಯಾಗಬಹುದು
- ವ್ಯವಹಾರದಲ್ಲಿ ಉತ್ತಮ ಲಾಭ ಶುಭವೂ ಇದೆ
- ಯಾರನ್ನಾದರು ಕ್ಷಮಿಸುವ ಪ್ರಸಂಗವಿದ್ದರೆ ಕ್ಷಮಿಸಿ
- ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
- ಏಕಾಗ್ರತೆಯು ಉತ್ತಮ ಫಲಿತಾಂಶ ನೀಡಬಹುದು
- ಜೀವನ ಶೈಲಿಯಲ್ಲಿ ಸುಧಾರಣೆ ಕಾಣುವ ದಿನವಾಗಿದೆ
- ವಿದ್ಯಾ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
ಮಕರ
- ಮನೆಯ ಜವಾಬ್ದಾರಿಯ ಬಗ್ಗೆ ಪೂರ್ಣ ಜವಾಬ್ದಾರಿವಹಿಸಿ
- ಏನೋ ಬದಲಾವಣೆಯ ಆಲೋಚನೆ ಬರುತ್ತದೆ ಆದರೆ ಸಧ್ಯಕ್ಕಿಲ್ಲ
- ಮದುವೆ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
- ಆರೋಗ್ಯದ ಬಗ್ಗೆ ಅದರಲ್ಲೂ ಬೆನ್ನು ನೋವಿನ ಬಗ್ಗೆ ಕಾಳಜಿವಹಿಸಿ
- ಆನಂದವಾಗಿರುತ್ತೀರಿ ಆದರೆ ಏನೋ ಮನಸ್ಸಿನಲ್ಲಿ ಕಳವಳ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಕುಂಭ
- ತೋರಿಕೆ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ
- ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
- ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿದೆ
- ನಿಮ್ಮ ಪ್ರಗತಿಯ ಬಗ್ಗೆ ಭಯವಿದೆ
- ವೃತ್ತಿ ಅಥವಾ ಉದ್ಯೋಗದ ಒತ್ತಡ ತೊಂದರೆಗೆ ಕಾರಣವಾಗಬಹುದು
- ಒಳ್ಳೆಯ ಸ್ನೇಹಿತರ ಅಥವಾ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿ
- ಶಿವನನ್ನು ಬಿಲ್ಪ ಪತ್ರೆಯಿಂದ ಅರ್ಚಿಸಿ
ಮೀನ
- ಕುಟುಂಬದಲ್ಲಿ ಶುಭಕಾರ್ಯದ ಚಿಂತನೆ ಇರಬಹುದು
- ಮಿತ್ರರ ಭೇಟಿ- ವಿರೋಧಿಗಳ ಬಗ್ಗೆ ಚರ್ಚೆಯಾಗಬಹುದು
- ಮೂಲ ಉದ್ದೇಶ ಮರೆತು ಕಾರ್ಯ ಪ್ರವೃತ್ತರಾಗಬಹುದು
- ಸಮಯಕ್ಕೆ ಆದ್ಯತೆ ನೀಡಿ ಧನಾತ್ಮಕ ಫಲಿತಾಂಶ ನಿಮ್ಮದಾಗುತ್ತದೆ
- ಮಾನಸಿಕ ನೆಮ್ಮದಿ ಕಡಿಮೆ ಇರಲಿದೆ
- ಕೋಪ ಆತಂಕಗಳಿರುವ ದಿನ
- ರಾಜರಾಜೇಶ್ವರಿಯನ್ನು ಪೂಜಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ