ಸಿರಿ ಸಂಪತ್ತು ಉಂಡ ಗೌಡರ ಕುಡಿಗೆ ಸಂಕಷ್ಟದ ಸರಮಾಲೆ
ಎಸ್ಐಟಿ ಕಸ್ಟಡಿ ಸಂಕಟದಿಂದ ನರಳುವಂತೆ ಮಾಡುತ್ತಿದೆ
ಇಲ್ಲಿ ಇರೋದು ಹೇಗೆ ಅನ್ನೋ ಚಿಂತೆ ಪ್ರಜ್ವಲ್ಗೆ ಕಾಡ್ತಿದೆಯಾ?
ಚಿಂತೆ ಅನ್ನೋದು ಯಾರಿಗೆ ಇರಲ್ಲ ಹೇಳಿ.. ಸಂತೆಯಲ್ಲಿ ಕೂತವನಿಗೂ ಚಿಂತೆ ಸಹಜ. ಎಸ್ಐಟಿ ಅಧೀನದಲ್ಲಿರುವ ಪ್ರಜ್ವಲ್ಗೆ ಕಾಡದೇ ಇರುತ್ತಾ? ಆದ್ರೆ, ಪ್ರಜ್ವಲ್ಗೆ ಕಾಡ್ತಿರೋದು ಒಂದೇ ಒಂದು ಚಿಂತೆಯಂತೆ. ಪಾಪಪ್ರಜ್ಞೆಗಿಂತ ಟಾಯ್ಲೆಟ್ನದ್ದೆ ದೊಡ್ಡ ಚಿಂತೆನಾ ಅಂತ ಎಸ್ಐಟಿ ಪರಾಮರ್ಶೆಗೆ ನಿಂತಿದೆ.
ಸುಪ್ಪತ್ತಿಗೆಯಲ್ಲಿ ಸಿರಿ ಸಂಪತ್ತು ಉಂಡ ಪ್ರಜ್ವಲ್ಗೆ ಸಂಕಷ್ಟದ ಸರಮಾಲೆಯೇ ಸುತ್ಕೊಂಡಿದೆ. ತಿಂಗಳುಗಳ ಕಾಲ ರೆಕ್ಕೆ ಬಿಚ್ಚಿ ಹಾಡಿದ ಈ ಹಕ್ಕಿ, ಈಗ ಎಸ್ಐಟಿಯ ಪಂಜರದ ಬಂಧಿ. ಜರ್ಮನಿಯಲ್ಲಿ ಜಗಮಗಿಸಿದ ರೇವಣ್ಣನ ಮಗ ಮೊನ್ನೆ ರಾತ್ರಿ ಬೆಂಗಳೂರಿನಲ್ಲಿ ಸೆರೆ ಸಿಕ್ಕು ಸಿರುಂಡೆ ಆಗಿದ್ದಾರೆ.
ಎಸ್ಐಟಿ ಕೊಟ್ಟ ಹಾಸಿಗೆಯಲ್ಲಿ ಸಂಕಟದ ನಿದ್ರೆ!
ಈ ಬಂಧನಕ್ಕೆ ಕಾರಣ ಏನು ಅನ್ನೋದು ಬಲ್ಲದವರೇ ಇಲ್ಲ ಬಿಡಿ. ಸಿಕ್ಕಲ್ಲೆಲ್ಲ ತನ್ನ ಕಬಂಧಬಾಹು ಚಾಚಿದ ಈ ಪ್ರಜ್ವಲ್, ಅಸಂಖ್ಯಾತ ಹೆಣ್ಣುಗಳ ಆರ್ಥನಾದಕ್ಕೆ ಕಾರಣಿಕರ್ತ ಅನ್ನೋ ಆರೋಪ ಹೊತ್ತಿದ್ದಾರೆ. ಆ ಕಂಟಕವೇ ಈಗ ಎಸ್ಐಟಿ ಕಸ್ಟಡಿಯಲ್ಲಿ ಸಂಕಟದಿಂದ ನರಳುವಂತೆ ಮಾಡ್ತಿದೆ. ತಳ್ಬಂದಿಯಲ್ಲಿ ಸುಖಾಸೀನ ಅನುಭವಿಸಿದ್ದ ರೇವಣ್ಣ ಪುತ್ರ, ಅಕ್ರಮ ನಂಟುಗಳೇ ಒಂಟಿ ಆಗಿದೆ. ಜಂಟಿ ಯಾರು ಇಲ್ಲದೇ ಗಂಟಲಿನ ಪಸೆ ಆರುವಂತೆ ಮಾಡಿದೆ.
ಲಕ್ಷುರಿಯಸ್ ಲೈಫ್ ಲೀಡ್ ಮಾಡ್ತಿದ್ದ ಪ್ರಜ್ವಲ್, ಪಂಜರದ ಪಕ್ಷಿಯಾದ ಬಳಿಕ ಎಸ್ಐಟಿ ಕಸ್ಟಡಿಯಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಎಸ್ಐಟಿ ಕಸ್ಟಡಿಯಲ್ಲಿ ಇರಲಾಗದೇ ವಿಲವಿಲ ಅಂತ ಒದ್ದಾಡಿದ್ದಾರೆ. ಇದಕ್ಕೆ ಕಾರಣ ಎಸ್ಐಟಿ ಕಚೇರಿಯಲ್ಲಿ ಶುಚಿತ್ವದ ಕೊರತೆ. ಇದೇ ವಿಚಾರವನ್ನ ಸ್ವತಃ ಜಡ್ಜ್ ಮುಂದೆನೇ ಅಳಲು ತೋಡ್ಕೊಂಡಿದ್ರು.
ಜಡ್ಜ್ : ನಿಮ್ಮ ಹೆಸರೇನು?
ಪ್ರಜ್ವಲ್ : ಪ್ರಜ್ವಲ್ ರೇವಣ್ಣ
ಜಡ್ಜ್ : ಎಲ್ಲಿ ನಿಮ್ಮನ್ನ ವಶಕ್ಕೆ ಪಡೆಯಲಾಯಿತು?
ಪ್ರಜ್ವಲ್ : ಕೆಂಪೇಗೌಡ ಏರ್ಪೋರ್ಟ್ನಲ್ಲಿ
ಜಡ್ಜ್ : ನಿಮ್ಮ ಮನೆಗೆ ತಿಳಿಸಿದ್ದಾರಾ?
ಪ್ರಜ್ವಲ್ : ನಮ್ಮ ತಂದೆಗೆ ಹೇಳಲು ಹೇಳಿದೆ
ಜಡ್ಜ್ : ಏನಾದ್ರೂ ಟಾರ್ಚರ್ ಆಯ್ತಾ?
ಪ್ರಜ್ವಲ್ : ಇಲ್ಲ ಟಾರ್ಚರ್ ಏನು ಆಗಿಲ್ಲ
ಜಡ್ಜ್ : ಏನಾದ್ರೂ ಹೇಳಕ್ಕಿದ್ಯಾ?
ಪ್ರಜ್ವಲ್ : ಎಸ್ಐಟಿ ಶೌಚಾಲಯದ ತುಂಬಾ ವಾಸನೆ
ಹೀಗೆ ನಿನ್ನೆ ಶೌಚಾಲಯ ಸಮಸ್ಯೆ ಹೇಳ್ಕೊಂಡಿದ್ದ ಪ್ರಜ್ವಲ್ಗೂ ಸಾಮಾನ್ಯ ಆರೋಪಿಗೆ ನೀಡುವ ಕನಿಷ್ಟ ಸೌಲಭ್ಯ ಸಿಕ್ಕಿದೆ.. ಹಾಗಾದ್ರೆ, ಇಲ್ಲಿ ಇರೋದು ಹೇಗೆ ಅನ್ನೋ ಚಿಂತೆ ಪ್ರಜ್ವಲ್ಗೆ ಇನ್ನಿಲ್ಲದಂತೆ ಕಾಡ್ತಿದೆ.. ಸೌಲಭ್ಯ ಕೊಡ್ತೀವಿ, ಆದ್ರೆ, ಕೆಲ ಅನುಮತಿ ಬೇಕಾಗುತ್ತೆ ಅನ್ನೋದು ಎಸ್ಐಟಿ ಹೇಳ್ತಿದೆ.
‘ನನಗೆ ಇಲ್ಲಿ ಇರೋಕ್ಕಾಗ್ತಿಲ್ಲ!’
ಎಸ್ಐಟಿ ಅಧಿಕಾರಿಗಳ ನಡೆಯಿಂದ ಕಂಗೆಟ್ಟ ಪ್ರಜ್ವಲ್ಗೆ ಗಂಟಲು ಬಿರಿಯುವಂತೆ ಮಾಡಿದೆ. ಇದು ಕೇವಲ ಒಂದು ದಿನದ ಮಾತಲ್ಲ, ಇನ್ನಷ್ಟು ದಿನ ಇಲ್ಲೇ ಕಾಲ ಕಳೆಯಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿರಿ ಸಂಪತ್ತು ಉಂಡ ಗೌಡರ ಕುಡಿಗೆ ಸಂಕಷ್ಟದ ಸರಮಾಲೆ
ಎಸ್ಐಟಿ ಕಸ್ಟಡಿ ಸಂಕಟದಿಂದ ನರಳುವಂತೆ ಮಾಡುತ್ತಿದೆ
ಇಲ್ಲಿ ಇರೋದು ಹೇಗೆ ಅನ್ನೋ ಚಿಂತೆ ಪ್ರಜ್ವಲ್ಗೆ ಕಾಡ್ತಿದೆಯಾ?
ಚಿಂತೆ ಅನ್ನೋದು ಯಾರಿಗೆ ಇರಲ್ಲ ಹೇಳಿ.. ಸಂತೆಯಲ್ಲಿ ಕೂತವನಿಗೂ ಚಿಂತೆ ಸಹಜ. ಎಸ್ಐಟಿ ಅಧೀನದಲ್ಲಿರುವ ಪ್ರಜ್ವಲ್ಗೆ ಕಾಡದೇ ಇರುತ್ತಾ? ಆದ್ರೆ, ಪ್ರಜ್ವಲ್ಗೆ ಕಾಡ್ತಿರೋದು ಒಂದೇ ಒಂದು ಚಿಂತೆಯಂತೆ. ಪಾಪಪ್ರಜ್ಞೆಗಿಂತ ಟಾಯ್ಲೆಟ್ನದ್ದೆ ದೊಡ್ಡ ಚಿಂತೆನಾ ಅಂತ ಎಸ್ಐಟಿ ಪರಾಮರ್ಶೆಗೆ ನಿಂತಿದೆ.
ಸುಪ್ಪತ್ತಿಗೆಯಲ್ಲಿ ಸಿರಿ ಸಂಪತ್ತು ಉಂಡ ಪ್ರಜ್ವಲ್ಗೆ ಸಂಕಷ್ಟದ ಸರಮಾಲೆಯೇ ಸುತ್ಕೊಂಡಿದೆ. ತಿಂಗಳುಗಳ ಕಾಲ ರೆಕ್ಕೆ ಬಿಚ್ಚಿ ಹಾಡಿದ ಈ ಹಕ್ಕಿ, ಈಗ ಎಸ್ಐಟಿಯ ಪಂಜರದ ಬಂಧಿ. ಜರ್ಮನಿಯಲ್ಲಿ ಜಗಮಗಿಸಿದ ರೇವಣ್ಣನ ಮಗ ಮೊನ್ನೆ ರಾತ್ರಿ ಬೆಂಗಳೂರಿನಲ್ಲಿ ಸೆರೆ ಸಿಕ್ಕು ಸಿರುಂಡೆ ಆಗಿದ್ದಾರೆ.
ಎಸ್ಐಟಿ ಕೊಟ್ಟ ಹಾಸಿಗೆಯಲ್ಲಿ ಸಂಕಟದ ನಿದ್ರೆ!
ಈ ಬಂಧನಕ್ಕೆ ಕಾರಣ ಏನು ಅನ್ನೋದು ಬಲ್ಲದವರೇ ಇಲ್ಲ ಬಿಡಿ. ಸಿಕ್ಕಲ್ಲೆಲ್ಲ ತನ್ನ ಕಬಂಧಬಾಹು ಚಾಚಿದ ಈ ಪ್ರಜ್ವಲ್, ಅಸಂಖ್ಯಾತ ಹೆಣ್ಣುಗಳ ಆರ್ಥನಾದಕ್ಕೆ ಕಾರಣಿಕರ್ತ ಅನ್ನೋ ಆರೋಪ ಹೊತ್ತಿದ್ದಾರೆ. ಆ ಕಂಟಕವೇ ಈಗ ಎಸ್ಐಟಿ ಕಸ್ಟಡಿಯಲ್ಲಿ ಸಂಕಟದಿಂದ ನರಳುವಂತೆ ಮಾಡ್ತಿದೆ. ತಳ್ಬಂದಿಯಲ್ಲಿ ಸುಖಾಸೀನ ಅನುಭವಿಸಿದ್ದ ರೇವಣ್ಣ ಪುತ್ರ, ಅಕ್ರಮ ನಂಟುಗಳೇ ಒಂಟಿ ಆಗಿದೆ. ಜಂಟಿ ಯಾರು ಇಲ್ಲದೇ ಗಂಟಲಿನ ಪಸೆ ಆರುವಂತೆ ಮಾಡಿದೆ.
ಲಕ್ಷುರಿಯಸ್ ಲೈಫ್ ಲೀಡ್ ಮಾಡ್ತಿದ್ದ ಪ್ರಜ್ವಲ್, ಪಂಜರದ ಪಕ್ಷಿಯಾದ ಬಳಿಕ ಎಸ್ಐಟಿ ಕಸ್ಟಡಿಯಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಎಸ್ಐಟಿ ಕಸ್ಟಡಿಯಲ್ಲಿ ಇರಲಾಗದೇ ವಿಲವಿಲ ಅಂತ ಒದ್ದಾಡಿದ್ದಾರೆ. ಇದಕ್ಕೆ ಕಾರಣ ಎಸ್ಐಟಿ ಕಚೇರಿಯಲ್ಲಿ ಶುಚಿತ್ವದ ಕೊರತೆ. ಇದೇ ವಿಚಾರವನ್ನ ಸ್ವತಃ ಜಡ್ಜ್ ಮುಂದೆನೇ ಅಳಲು ತೋಡ್ಕೊಂಡಿದ್ರು.
ಜಡ್ಜ್ : ನಿಮ್ಮ ಹೆಸರೇನು?
ಪ್ರಜ್ವಲ್ : ಪ್ರಜ್ವಲ್ ರೇವಣ್ಣ
ಜಡ್ಜ್ : ಎಲ್ಲಿ ನಿಮ್ಮನ್ನ ವಶಕ್ಕೆ ಪಡೆಯಲಾಯಿತು?
ಪ್ರಜ್ವಲ್ : ಕೆಂಪೇಗೌಡ ಏರ್ಪೋರ್ಟ್ನಲ್ಲಿ
ಜಡ್ಜ್ : ನಿಮ್ಮ ಮನೆಗೆ ತಿಳಿಸಿದ್ದಾರಾ?
ಪ್ರಜ್ವಲ್ : ನಮ್ಮ ತಂದೆಗೆ ಹೇಳಲು ಹೇಳಿದೆ
ಜಡ್ಜ್ : ಏನಾದ್ರೂ ಟಾರ್ಚರ್ ಆಯ್ತಾ?
ಪ್ರಜ್ವಲ್ : ಇಲ್ಲ ಟಾರ್ಚರ್ ಏನು ಆಗಿಲ್ಲ
ಜಡ್ಜ್ : ಏನಾದ್ರೂ ಹೇಳಕ್ಕಿದ್ಯಾ?
ಪ್ರಜ್ವಲ್ : ಎಸ್ಐಟಿ ಶೌಚಾಲಯದ ತುಂಬಾ ವಾಸನೆ
ಹೀಗೆ ನಿನ್ನೆ ಶೌಚಾಲಯ ಸಮಸ್ಯೆ ಹೇಳ್ಕೊಂಡಿದ್ದ ಪ್ರಜ್ವಲ್ಗೂ ಸಾಮಾನ್ಯ ಆರೋಪಿಗೆ ನೀಡುವ ಕನಿಷ್ಟ ಸೌಲಭ್ಯ ಸಿಕ್ಕಿದೆ.. ಹಾಗಾದ್ರೆ, ಇಲ್ಲಿ ಇರೋದು ಹೇಗೆ ಅನ್ನೋ ಚಿಂತೆ ಪ್ರಜ್ವಲ್ಗೆ ಇನ್ನಿಲ್ಲದಂತೆ ಕಾಡ್ತಿದೆ.. ಸೌಲಭ್ಯ ಕೊಡ್ತೀವಿ, ಆದ್ರೆ, ಕೆಲ ಅನುಮತಿ ಬೇಕಾಗುತ್ತೆ ಅನ್ನೋದು ಎಸ್ಐಟಿ ಹೇಳ್ತಿದೆ.
‘ನನಗೆ ಇಲ್ಲಿ ಇರೋಕ್ಕಾಗ್ತಿಲ್ಲ!’
ಎಸ್ಐಟಿ ಅಧಿಕಾರಿಗಳ ನಡೆಯಿಂದ ಕಂಗೆಟ್ಟ ಪ್ರಜ್ವಲ್ಗೆ ಗಂಟಲು ಬಿರಿಯುವಂತೆ ಮಾಡಿದೆ. ಇದು ಕೇವಲ ಒಂದು ದಿನದ ಮಾತಲ್ಲ, ಇನ್ನಷ್ಟು ದಿನ ಇಲ್ಲೇ ಕಾಲ ಕಳೆಯಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ