ಬರೋಬ್ಬರಿ 14 ಬಾರಿ ಬಜೆಟ್ ಮಂಡಿಸ್ತಿರುವ ಸಿದ್ದರಾಮಯ್ಯ
ಬಿಜೆಪಿ ಸರ್ಕಾರದ ಯೋಜನೆಗಳಿಗೆ ಬೀಳಲಿದ್ಯಾ ಕೊಕ್..?
ಅನಗತ್ಯ ವೆಚ್ಚ ಕಡಿತ, ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಕರ್ನಾಟಕದ ದೂರದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸುತ್ತಿದ್ದಾರೆ. ಬರೋಬ್ಬರಿ 14ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯರ ಮೇಲೆ ಜನರ ನಿರೀಕ್ಷೆ ದುಪ್ಪಟ್ಟಾಗಿದೆ. ಗ್ಯಾರಂಟಿ ಯೋಜನೆಗಳು, ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು, ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಯೋಜನೆಗಳು, ಶಾಸಕರ ಅನುದಾನ ಸೇರಿದಂತೆ ಸಿದ್ದರಾಮಯ್ಯಗೆ ಹಲವು ಸವಾಲ್ಗಳು ಇವೆ. ಹೀಗಾಗಿ ಸಿದ್ದು ಲೆಕ್ಕ ಹೇಗಿರುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಹೇಗಿದೆ ಸಿದ್ದು ಲೆಕ್ಕ..!
- ಸಿದ್ದರಾಮಯ್ಯರ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ
- 2,50,933 ಕೋಟಿ ರಾಜಸ್ವ ವೆಚ್ಚ, 54,374 ಕೋಟಿ ಬಂಡವಾಳ ವೆಚ್ಚ
- ಸಾಲ ಮರುಪಾವತಿಗೆ 22,441 ಕೋಟಿ, ಶಕ್ತಿ ಯೋಜನೆಗೆ 4 ಸಾವಿರ ಕೋಟಿ ವೆಚ್ಚದ ನಿರೀಕ್ಷೆ
ತೆರಿಗೆ ಸಂಗ್ರಹದ ಗುರಿ
- ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 9 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿ
- ತೆರಿಗೆಯೇತರ ಮೂಲಗಳಿಂದ 12,500 ಕೋಟಿ ಸಂಗ್ರಹ ನಿರೀಕ್ಷೆ
- ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 37,252 ಕೋಟಿ ನಿರೀಕ್ಷೆ
- ಅಬಕಾರಿ ತೆರಿಗೆ ಹಾಲಿ ದರಗಳ ಶೇಕಡ 20ರಷ್ಟು ಹೆಚ್ಚಳ
- ಬಿಯರ್ ಮೇಲಿನ ಅಬಕಾರಿ ಸುಂಕ ಶೇ.175-185ಕ್ಕೆ ಹೆಚ್ಚಳ
- ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
- ವಾಣಿಜ್ಯ ತೆರಿಗೆ ಇಲಾಖೆಗೆ 1 ಲಕ್ಷ 1 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
- ಕೇಂದ್ರದಿಂದ ಸಹಾಯಧನದ ರೂಪದಲ್ಲಿ 13,005 ಕೋಟಿ ನಿರೀಕ್ಷೆ
5 ಗ್ಯಾರಂಟಿ ಯೋಜನೆಗಳು
- 5 ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ವೆಚ್ಚ
- ಪ್ರತಿ ಕುಟುಂಬಕ್ಕೆ ಮಾಸಿಕ 4-5 ಸಾವಿರ ರೂಪಾಯಿ ಹಣ ನೀಡಿಕೆ
- ವಾರ್ಷಿಕ 48 ಸಾವಿರದಿಂದ 60 ಸಾವಿರ ರೂಪಾಯಿ ಆರ್ಥಿಕ ನೆರವು
- ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ತೆರಿಗೆ ಸೋರಿಗೆ ತಡೆಗಟ್ಟುವುದು
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗ್ಯಾರಂಟಿಗೆ ಹಣ ಸಂಗ್ರಹ
- ಜುಲೈ ತಿಂಗಳಿನಿಂದಲೇ ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ
- ಅನ್ನಭಾಗ್ಯ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ರೂ. ವೆಚ್ಚ
ಬೆಂಗಳೂರಿಗೆ ಸಿದ್ದು ಲೆಕ್ಕ
- ಬೆಂಗಳೂರಲ್ಲಿ 1 ಲಕ್ಷ ಮನೆ ಯೋಜನೆ ಪೂರ್ಣಗೊಳಿಸಲು ಬದ್ಧ
- ಬೆಂಗಳೂರು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಹಂಚಿಕೆ
- ಹಲಸೂರಿನ ಗುರುದ್ವಾರ ಅಭಿವೃದ್ಧಿಗೆ 25 ಕೋಟಿ ರೂ.
- ಸಂಚಾರ ದಟ್ಟಣೆ ನಿವಾರಣೆಗೆ 30 ಸಾವಿರ ಕೋಟಿಯಲ್ಲಿ ಮೆಟ್ರೋ, ಸಬರ್ಬನ್ ರೈಲು ಜಾರಿ
- ಬಯ್ಯಪ್ಪನಹಳ್ಳಿ ಟರ್ಮಿನಲ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 236 ಕೋಟಿ
- ಬೆಂಗಳೂರು ನಗರದಲ್ಲಿ 83 ಕಿ.ಮೀ. ಉದ್ದದ ರಸ್ತೆ 273 ಕೋಟಿ ವೆಚ್ಚ
- ನೋಂದಣಿ, ಮುದ್ರಾಂಕ ಇಲಾಖೆಗೆ 25 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
- ಇಂದಿರಾ ಕ್ಯಾಂಟೀನ್ ಕಾಯಕಲ್ಪಕ್ಕೆ 100 ಕೋಟಿ ರೂಪಾಯಿ
- ಅನುಗ್ರಹ ಯೋಜನೆ ಮರು ಜಾರಿ
- ಹಸು, ಕರು, ಎಮ್ಮೆಗಳು ಮೃತಪಟ್ಟರೆ 10 ಸಾವಿರ ಸಹಾಯ ಧನ
- ಪರಿಶಿಷ್ಟ ಜಾತಿ ಉಪಯೋಜನೆಯಡಿ 34,294 ಕೋಟಿ
- ಪರಿಶಿಷ್ಟ ಜಾತಿ ಪಂಗಡದ ಕ್ರೈಸ್ಟ್ ವಸತಿ ಶಾಲೆಗಳಿಗೆ 20 ಕೋಟಿ
- ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ವಿದೇಶ ವ್ಯಾಸಂಗಕ್ಕೆ 36 ಕೋಟಿ ಅನುದಾನ
- ಸ್ವಾವಲಂಬಿ ಸಾರಥಿ ಯೋಜನೆಯಡಿಗೆ ಕಾರು ಖರೀದಿಗೆ 4 ಲಕ್ಷ ಸಹಾಯಧನ
- ಎಸ್ಸಿಎಸ್ಟಿ ನಿರುದ್ಯೋಗಿಗಳ ಬ್ಯಾಂಕ್ ಸಾಲಕ್ಕೆ ಶೇ.20ರಷ್ಟು ಸಹಾಯಧನ
- ಹಿಂದುಳಿದ ವರ್ಗಕ್ಕೆ ಸ್ವಾವಲಂಬಿ ಯೋಜನೆಯಡಿ 3 ಲಕ್ಷ ರೂ. ಸಹಾಯಧನ
- 126 ಶಾದಿಮಹಲ್, ಸಮುದಾಯ ಭವನ ನಿರ್ಮಾಣಕ್ಕೆ 54 ಕೋಟಿ ವೆಚ್ಚ
- ಜೈನ ಪುಣ್ಯ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲು
- ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 100 ಕೋಟಿ ಅನುದಾನ
- ವಕ್ಫ್ ಆಸ್ತಿ ಸಂರಕ್ಷಣೆಗೆ 50 ಕೋಟಿ ಅನುದಾನ
- 3 ಲಕ್ಷ ಮನೆ ನಿರ್ಮಾಣ ಪೂರ್ಣಕ್ಕೆ 2,450 ಕೋಟಿ ಅನುದಾನ
- ನಾನು ಮಂಡಿಸುತ್ತಿರುವ 14ನೇ ಬಜೆಟ್ ಆಗಿದೆ -ಸಿದ್ದರಾಮಯ್ಯ
- ಗಿಗ್ ವರ್ಕರ್ಸ್ಗೆ 4 ಲಕ್ಷ ರುಪಾಯಿಯ ವಿಮಾ ಸೌಲಭ್ಯ
- ಇ-ಕಾಮರ್ಸ್ ವಲಯದ ಎಲ್ಲಾ ಗಿಗ್ ನೌಕರರಿಗೆ ವಿಮೆ
- ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಿಕೆ
- ಜಲಜೀವನ ಮಿಷನ್ಗೆ ರಾಜ್ಯದಿಂದ ಶೇ.55ರಷ್ಟು ಹಣ ನೀಡಿಕೆ
- 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ
- 25 ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸುವ ಗುರಿ
- ಬೆಂಗಳೂರಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಮೇಲ್ದರ್ಜೆಗೆ 1,411 ಕೋಟಿ
- ಮೆಟ್ರೋ 3ನೇ ಹಂತದ ಡಿಪಿಆರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ
- 3ನೇ ಹಂತದ ಯೋಜನೆಗೆ 16,328 ಕೋಟಿ ರೂಪಾಯಿ ವೆಚ್ಚ
- 27,903 ಗ್ರಾಮಗಳಲ್ಲಿ ಸ್ಮಶಾನಗಳು, ಶಾಂತಿ ಧಾಮವಾಗಿ ಅಭಿವೃದ್ಧಿ
- ಕಲ್ಯಾಣ ಕರ್ನಾಟಕ ರಸ್ತೆಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು
- ರಾಯಚೂರು ಕಲ್ಮಲಾ ಜಂಕ್ಷನ್ನಿಂದ ಸಿಂಧನೂರುವರೆಗೆ ರಸ್ತೆ ಅಭಿವೃದ್ಧಿ
ಕೃಷಿ
- ರೈತರ ದೀರ್ಘಾವಧಿ ಸಾಲದ ಮಿತಿ 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ
- ಶೂನ್ಯ ಬಡ್ಡಿದರದ ಸಾಲದ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ
- ಕೃಷಿ ಜಮೀನು, ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಗೆ ಅವಕಾಶ
- ಸ್ವಯಂ ಘೋಷಣೆ ಮೂಲಕ ಕೃಷಿ ಭೂಮಿ ಪರಿವರ್ತನೆಗೆ ಅವಕಾಶ
- ಆನ್ಲೈನ್ ಮೂಲಕ ವಿವಾಹ ನೋಂದಣಿ ಮಾಡುವುದಕ್ಕೆ ಅವಕಾಶ
- ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಆರಂಭ
- ಕೃಷಿ ಜಮೀನು, ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಗೆ ಅವಕಾಶ
- ಸ್ವಯಂ ಘೋಷಣೆ ಮೂಲಕ ಕೃಷಿ ಭೂಮಿ ಪರಿವರ್ತನೆಗೆ ಅವಕಾಶ
- ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಆರಂಭ
- ಪತ್ರಕರ್ತರ ಮಾಸಾಶನ 10ರಿಂದ 12 ಸಾವಿರ ರೂಪಾಯಿಗೆ ಏರಿಕೆ
- RTOದಿಂದ 11,500 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ
NEP
- ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದು
- ಹೊಸ ಶಿಕ್ಷಣ ನೀತಿ ರೂಪಿಸಲಿರುವ ರಾಜ್ಯ ಸರ್ಕಾರ
- ನಕಲಿ ಅಂಕಪಟ್ಟಿ ಹಾವಳಿ ತಪ್ಪಿಸಲು
ಹೊಸ ಏರ್ಸ್ಟ್ರಿಪ್
- ದೇವನಹಳ್ಳಿ-ತಮಿಳುನಾಡು ಗಡಿವರೆಗೆ 4, 6 ಪಥದ ಹೆದ್ದಾರಿ ನಿರ್ಮಾಣ
- 123 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ 1,826 ಕೋಟಿ ವೆಚ್ಚ
- ಆಸ್ತಿ ನಗದೀಕರಣದ ಮೂಲಕ ರಾಜ್ಯ ಬೊಕ್ಕಸಕ್ಕೆ ಆದಾಯದ ಸೃಷ್ಟಿ
- ಈ ವರ್ಷದಲ್ಲೇ ವಿಜಯಪುರ ವಿಮಾನ ನಿಲ್ದಾಣ ಕಾರ್ಯ ಆರಂಭ
- ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಲ್ಲಿ ಹೊಸ ಏರ್ಸ್ಟ್ರಿಪ್ ನಿರ್ಮಾಣ
- ಬೆಂಗಳೂರಿನಲ್ಲಿ 100 ಎಕರೆಯಲ್ಲಿ ಟೆಕ್ನಾಲಜಿ ಇನೋವೇಷನ್ ಪಾರ್ಕ್
- 2 ಎಕರೆವರೆಗಿನ ಕೃಷಿ ಭೂಮಿ ಪರಿವರ್ತಿಸದೇ ಕೈಗಾರಿಕಾ ಉದ್ದೇಶಕ್ಕೆ ಬಳಕೆಗೆ ಅವಕಾಶ
- ರಾಜ್ಯದ 7 ಸ್ಥಳಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಇಂಡಸ್ಟ್ರಿಯಲ್ ಏರಿಯಾ ಸ್ಥಾಪನೆ
- ರಾಜ್ಯವನ್ನ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿಸುವ ಗುರಿ
- ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನನ್ನ ಬಜೆಟ್ ಆಗಿದೆ
- ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯ ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಕರ್ನಾಟಕ ಯಶಸ್ವಿ
- ಬಸವಣ್ಣರಿಂದ, ನಾಲ್ವಡಿ ಕೃಷ್ಣ ರಾಜ ಒಡೆಯರ್ವರೆಗೆ ತೇರನ್ನ ಜೊತೆಗೆ ಎಳೆಯಲಾಗಿದೆ
- ಈ ಘನ ಪರಂಪರೆಯನ್ನ ಮುಂದುವರಿಸಲು ಶ್ರಮಿಸಿದ್ದೇನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ