ದೂರದ ಸಂಬಂಧಿಕರನ್ನ ಭೇಟಿ ಮಾಡಿ ವಿವಾಹ ವಿಚಾರ ಮಾತಾಡಬಹುದು
ಇಂದು ನೀವು ಆಲೋಚನೆ ಮಾಡುವುದೇ ಬೇರೆ ಅದು ನಡೆಯುವುದೇ ಬೇರೆ
ಪದವಿ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಸಮಯ ಅವಕಾಶ ಇರುವುದಿಲ್ಲ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಗ್ರಹಗತಿ ದೃಷ್ಟಿಯಿಂದ ನೆಮ್ಮದಿಯಿರುವ ವಾತಾವರಣ
- ಇಂದು ಆತ್ಮವಿಶ್ವಾಸ ಹೆಚ್ಚಾಗುವ ದಿನ
- ನಿಮ್ಮ ಹಿಂದಿನ ಯೋಜನೆಗಳಿಗೆ ಯಶಸ್ಸಿನ ದಿನವಾಗಿರುತ್ತದೆ
- ಅಂದುಕೊಂಡ ಕೆಲಸಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಪ್ರಯತ್ನ ಸಾದ್ಯವಾಗುವುದಿಲ್ಲ
- ಸ್ನೇಹಿತರ ಜೊತೆ ಮಾಡುವ ವ್ಯವಹಾರ, ಮಂಗಳ ಕಾರ್ಯದಲ್ಲಾಗುವ ಜಗಳ ಭಿನ್ನಾಭಿಪ್ರಾಯದ ಮಾತು ಹಿನ್ನಡೆಯನ್ನು ತರಲಿದೆ
- ಆಕಸ್ಮಿಕವಾಗಿ ವಾಹನ ಕೂಡ ಹಾನಿಯಾಗುವ ಸಾಧ್ಯತೆ ಹೆಚ್ಚು ಕಾಣುತ್ತದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಕರ್ತವ್ಯ ಪ್ರಜ್ಞೆ ಬಹಳ ಮುಖ್ಯವಾಗಲಿದೆ
- ಈ ದಿನ ಉತ್ತಮವಾದ ದಿನ
- ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿಗಳಾಗಬಹುದು
- ನಿಮ್ಮ ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳಬಾರದು
- ಅಸಂಬದ್ದ ಚಟುವಟಿಕೆಗಳಲ್ಲಿ ನಿಮ್ಮ ಯೋಗ್ಯತೆಯನ್ನು ಮೀರಿದ ಕೆಲಸಗಳಲ್ಲಿ ಮನಸ್ಸು ವಾಲಬಹುದು
- ಹಣ ಗಳಿಸುವ ಭರದಲ್ಲಿ ತಪ್ಪು ದಾರಿಯನ್ನು ತುಳಿಯುತ್ತೀರಿ
- ಹಳೆಯ ವಾಹನದಲ್ಲಿ ಪ್ರಯಾಣ ಮಾಡಬೇಕಾದರೆ ಎಚ್ಚರಿಕೆವಹಿಸಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಿಥುನ
- ಇಂದು ಆರ್ಥಿಕವಾಗಿ ಅನುಕೂಲವಾಗಲಿದೆ
- ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯವಾದಂತಹ ವ್ಯವಸ್ಥೆಯಾಗಲಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಹಿರಿಯರಿಗೆ ವಿರುದ್ಧವಾಗಿ ನಡೆದುಕೊಳ್ಳುದು ಬೇಡ
- ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿದೆ
- ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ ಆದರೆ ನಿಮ್ಮ ತಪ್ಪನ್ನು ತಿದ್ದು ಕೊಳ್ಳುವ ಪ್ರಯತ್ನ ಮಾಡುವುದಿಲ್ಲ
- ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಸರ್ಕಾರಿ ನೌಕರರು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗಬಹುದು
- ಹತ್ತಿರದ ಸಂಬಂಧಿಕರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ
- ಆತುರವಾಗಿ ಮಾಡಿದ ನಿರ್ಧಾರದಿಂದ ತೊಂದರೆಯಾಗಲಿದೆ
- ಅನಗತ್ಯವಾದ ವಿಚಾರಕ್ಕೆ ಜಗಳವಾಗಬಹುದು
- ಕುಟುಂಬದಲ್ಲಿ ಮಾತೆಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು
- ದಾಂಪತ್ಯದಲ್ಲಿ ಕಲಹವಾಗಬಹುದು
- ಇಂದು ಕಹಿಯ ಅನುಭವವಾಗುವ ದಿನ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಸಿಂಹ
- ಅಂದುಕೊಂಡ ಕೆಲಸಗಳು ಪೂರ್ಣವಾಗಬೇಕೆಂಬ ಒತ್ತಡದಲ್ಲಿರುತ್ತೀರಿ
- ಕೆಲಸವನ್ನು ಅಲ್ಪವೆಂದು ಭಾವಿಸಿ ಶ್ರದ್ದೆಯಿಂದ ಮಾಡಬೇಕಾಗುತ್ತದೆ
- ಹೊಸದಾಗಿ ಪ್ರಾರಂಭ ಮಾಡುವುದಕ್ಕೆ ಶುಭದಿನ
- ನಿಮಗೋಸ್ಕರ ಸಮಯವನ್ನು ಮುಡುಪಾಗಿಡಿ
- ಕೆಲಸದ ನಿಮಿತ್ತ, ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ಮಾಡುವ ಪ್ರಯತ್ನ ಫಲ ನೀಡಲಿದೆ
- ಯಾವುದೊ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದರೆ, ವೈಮನಸ್ಯ ಇರುವವರನ್ನು ಒಟ್ಟಿಗೆ ಸೇರಿಸುತ್ತೀರಿ
- ಪ್ರೇಮಿಗಳಗೆ ಅಪಾಯಕಾರಿಯಾದ ದಿನ ಎಚ್ಚರಿಕೆವಹಿಸಿ
- ಪರಮೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮಹಿಳೆಯರಿಗೆ ಆರೋಗ್ಯದ ವಿಚಾರಕ್ಕೆ ಆತಂಕವಾಗುವ ದಿನ
- ಕೂಡಿಟ್ಟ ಹಣ ಔಷಧಿಗೆ ಖರ್ಚಾಗುತ್ತದೆ
- ಹಣ ಖರ್ಚು, ಆರೋಗ್ಯ ಸರಿಯಿಲ್ಲದೆ ಇರುವುದು, ಮಾನಸಿಕವಾಗಿ ಹಿಂಸೆ, ಮನೆಯಲ್ಲಿ ಕಿರಿಕಿರಿ ಮಕ್ಕಳಿಂದ ನೆಮ್ಮದಿಯಿಲ್ಲದೆ ಇರುವುದು ಈ ದಿನ ನಿಮ್ಮ
- ಪರವಾಗಿರಲಿದೆ
- ಕಷ್ಟಪಟ್ಟು ಕೆಲಸ ಮಾಡಿದ ಹಳೆಯ ದಿನಗಳು ನೆನಪಾಗುತ್ತದೆ
- ಕುಟುಂಬದವರ ನಂಬಿಕೆಯೂ ಕೂಡ ನಿಮ್ಮ ಬಗ್ಗೆ ಕಡಿಮೆಯಾಗಲಿದೆ
- ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ
- ಶುಭವಾಗಲಿ
ತುಲಾ
- ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ
- ಹಣ ಬಂಧುತ್ವ ವಿಶೇಷವಾದ ಸಂಪರ್ಕ ಎಲ್ಲವೂ ನೀವು ಅಂದುಕೊಂಡ ಹಾಗೆ ಆಗಲಿದೆ
- ಧನಾತ್ಮಕವಾದ ಚಿಂತನೆಗಳು ನಿಮಗೆ ಬರಲಿದೆ
- ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಸಿಗಲಿದೆ
- ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
- ಕಾನೂನಾತ್ಮಕವಾದ ಹೋರಾಟಕ್ಕೆ ಮುಂದಾಗಬೇಕಾಗಲಿದೆ
- ಸಾಯಂಕಾಲಕ್ಕೆ ವಿರುದ್ಧವಾಗಿರುತ್ತದೆ
- ನಾರಾಯಣನನ್ನು ಸ್ಮರಣೆ ಮಾಡಿ
ವೃಶ್ಚಿಕ
- ಈ ದಿನ ನಕಾರಾತ್ಮಕವಾದ ವಿಚಾರಗಳೇ ನಿಮ್ಮ ಮನಸ್ಸಿಗೆ ಬರಲಿದೆ
- ನಿಮ್ಮ ಗುರಿಯನ್ನು ಸಾಧಿಸಲು ಪ್ರಯತ್ನ ಮಾಡುತ್ತೀರಿ
- ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಗೌರವದಿಂದ ನಡೆಸಿಕೊಳ್ಳಬೇಕಾದ ದಿನ
- ದಾಂಪತ್ಯದಲ್ಲಿ ವೈಮನಸ್ಯ ಬರದ ಹಾಗೆ ನೋಡಿಕೊಳ್ಳಿ
- ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ,ಮಾತು,ಕಥೆ, ಜಗಳಗಳಿಗೆ ಅವಕಾಶವಿದೆ ಆದರೆ ಯಾವುದು ಬೇಡ
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚಾಗಲಿದೆ
- ಆತ್ಮವಿಶ್ವಾಸವಿದ್ದರೂ ಕೂಡ ಖರ್ಚನ್ನು ನೋಡಿ ದಿಗ್ಭ್ರಾಂತರಾಗುತ್ತೀರಿ
- ವ್ಯವಹಾರದಲ್ಲಿ ಒಪ್ಪಂದಗಳಲ್ಲಿ ಹೊಸ ಮಾತುಗಳು ಬೇಡ
- ವಸ್ತಗಳನ್ನು ಬೇರೆಯವರಿಗೆ ಕೊಟ್ಟು ನಷ್ಟಕ್ಕೆ ಗುರಿಯಾಗುತ್ತೀರಿ
- ಮನೆಗೆ ಬಂದ ಅತಿಥಿಗಳು ನಿಮ್ಮ ವೈಯಕ್ತಿಕ ವಿಚಾರಗಳನ್ನು ಮಾತನಾಡಿ ಜಗಳಕ್ಕೆ ಕಾರಣರಾಗುತ್ತಾರೆ
- ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ರಾಹು-ಕೇತುವನ್ನು ಪ್ರಾರ್ಥನೆ ಮಾಡಿ
ಮಕರ
- ಮನೆಯವರ ಒತ್ತಡಕ್ಕೆ ಕಟ್ಟು ಬಿದ್ದು ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡುತ್ತೀರಿ
- ಅನುಭವಿಗಳ ಉಚಿತವಾದ ಸಲಹೆ ಧೈರ್ಯವನ್ನು ತರುತ್ತದೆ ಆದರೆ ಪರಿಪೂರ್ಣವಾಗಿ ಕೇಳಿ ನಡೆಯುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ
- ಕುಟುಂಬದಲ್ಲಿ ಒಳ್ಳೆಯ ವಾತಾವರಣವಿದ್ದರೂ ಕೂಡ ಸಣ್ಣಪುಟ್ಟ ತಪ್ಪುಗಳನ್ನು ಮಾಡಿಕೊಳ್ಳುತ್ತೀರಿ
- ವಿದೇಶದಲ್ಲಿ ಸಂಬಂಧಿಕರಿದ್ದರೆ ಶುಭ ವಾರ್ತೆ ಕೇಳಿ ಸಮಾಧಾನ ಪಟ್ಟುಕೊಳ್ಳುತ್ತೀರಿ
- ಆಸ್ತಿಯನ್ನು ಖರೀದಿ ಮಾಡುವ ಒತ್ತಡ ಇರಲಿದೆ
- ಮನೆಯಲ್ಲಿ ಎಲ್ಲವೂ ಶುಭವಾಗಿದೆ ಆದರೆ ಮನಸ್ಸು ಸರಿಯಿರುವುದಿಲ್ಲ
- ಶಕ್ತಿ ದೇವಾತಾ ಪ್ರಾರ್ಥನೆ ಮಾಡಿ
ಕುಂಭ
- ನೀವು ಯಾವ ಕೆಲಸವನ್ನು ನಿರೀಕ್ಷೆ ಮಾಡುತ್ತಿರೋ ಅದು ವಿರುದ್ಧವಾದ ಫಲ ಕೊಡಲಿದೆ
- ಸ್ವಾಭಾವಿಕವಾಗಿ ಸಿಟ್ಟು ಮಾಡಿಕೊಳ್ಳುತ್ತೀರಿ ಅಸಮಾಧಾನವಾಗಲಿದೆ
- ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
- ಉತ್ತಮವಾದ ಅಧಿಕಾರಿಗಳು, ಮೇಲಾಧಿಕಾರಿಗಳು, ಹಿರಿಯರು ನಿಮ್ಮ ಬಗ್ಗೆ ಒಳ್ಳೆಯ ಮಾತು ಆಡಲು ಮನಸ್ಸು ಬರುವುದಿಲ್ಲ
- ಈ ದಿನ ಪ್ರಯಾಣ ಅಥವಾ ಪ್ರವಾಸ ರದ್ದಾಗಬಹುದು
- ಬೇರೆಯವರನ್ನು ಅವಲಂಬನೆ ಮಾಡಿಕೊಂಡು ಸಂದರ್ಭಗಳು ಕೆಟ್ಟದಾಗಿ ಪರಿವರ್ತನೆಯಾಗಬಹುದು
- ಧೈನಂದಿನ ಶಿಸ್ತು ಅಸ್ತವ್ಯಸ್ತವಾಗಬಹುದು
- ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು
- ಕುಲದೇವರನ್ನು ಆರಾಧನೆ ಮಾಡಿ
ಮೀನ
- ಪ್ರತಿನಿತ್ಯ ಮಾಡುವ ಕೆಲಸಗಳು ಬೇಸರದಿಂದ ಮುಕ್ತಾಯವಾಗಲಿದೆ
- ಮನಸ್ಸಿನ ಅಧೈರ್ಯ ನಿಮೆಲ್ಲ ಕೆಲಸದಲ್ಲಿ ಹಿನ್ನಡೆಯನ್ನುಂಟು ಮಾಡಲಿದೆ
- ಸಹೋದ್ಯೋಗಿಗಳು, ಮಿತ್ರರು ನಿಮ್ಮ ಬಂಧುತ್ವದಲ್ಲಿ ದ್ವೇಷದ ಭಾವನೆ ಇಟ್ಟುಕೊಳ್ಳುತ್ತಾರೆ
- ಸಣ್ಣ ಸಣ್ಣ ವಿಚಾರಕ್ಕೆ ಮಿತಿ ಮೀರಿ ಯೋಚನೆಯನ್ನು ಮಾಡಬಾರದು
- ಕೆಲವು ವಿಚಾರಗಳಲ್ಲಿ ಕಾನೂನಿನಿಂದ ತೊಡಕುಗಳಾಗಬಹುದು
- ಆರೋಗ್ಯದ ಬಗ್ಗೆ ಗಮನಸಿ ಅದರಲ್ಲೂ ಬೆನ್ನು ಮೂಳೆಗೆ ಸಮಸ್ಯೆಯಾಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ