ಯಾವುದೇ ಅಪೇಕ್ಷೆ ಇಲ್ಲದೆ ಸಹಾಯ ಮಾಡುವ ಸ್ವಭಾವ ನಿಮ್ಮದಾಗಿರಬೇಕು
ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ, ಮನೆಯಲ್ಲಿ ಅಶಾಂತಿ
ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುತ್ತದೆ, ಸ್ಥಿರ ನಿರ್ಧಾರ ಬೇಕು
- ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
- ನಿಮ್ಮ ಮಹತ್ತರವಾದ ಆಲೋಚನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
- ಜನರು ನಿಮ್ಮ ವ್ಯವಹಾರಗಳನ್ನು ಗೇಲಿ ಮಾಡಬಹುದು
- ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
- ಮುತ್ತುರಾಯಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಕಣ್ಣಿನ ತೊಂದರೆ ಕಾಣಬಹುದು ಜಾಗ್ರತೆವಹಿಸಿ
- ಕಬ್ಬಿಣ ವ್ಯಾಪಾರಿಗಳಿಗೆ ಕಟ್ಟಡ ಸಾಮಾಗ್ರಿ ಮಾರುವವರಿಗೆ ಶುಭ ದಿನ
- ದೂರದ ಸಂಬಂಧಿಕರನ್ನ ಭೇಟಿ ಮಾಡಿ ವಿವಾಹ ವಿಚಾರ ಮಾತಾಡಬಹುದು
- ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
- ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
- ದೇವಿಯ ಆರಾಧನೆ ಮಾಡಿ
ಮಿಥುನ
- ಮನಸ್ಸಿನಲ್ಲಿ ಹಲವಾರು ಗೊಂದಲಗಳು ಬರುತ್ತವೆ
- ಕೆಲಸದಿಂದ ನಿಮಗೆ ತೃಪ್ತಿ ಇರುವುದಿಲ್ಲ ಹೆಚ್ಚು ಪರಿಶ್ರಮ ಪಡುತ್ತೀರಿ
- ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ, ಮನೆಯಲ್ಲಿ ಅಶಾಂತಿ
- ಹಿರಿಯರ ಅನಾರೋಗ್ಯ ನಿಮ್ಮ ಮನಸ್ಸನ್ನು ವಿಕೃತಗೊಳಿಸಬಹುದು
- ಕುಲದೇವತಾ ಸ್ಮರಣೆ ಮಾಡಿ
ಕಟಕ
- ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗುತ್ತದೆ
- ನಿಮ್ಮ ನಡವಳಿಕೆ ಗಮನಿಸುತ್ತಿರುವ ಮನೆಯವರು ನಿಮಗೆ ಏನು ಹೇಳಿದರು ಕೇಳುವುದಿಲ್ಲ
- ಮನೆಯಲ್ಲಿ ಹಲವು ಜಟಿಲ ಸಮಸ್ಯೆಗಳಿರುತ್ತವೆ
- ಇಂದು ನೀವು ನಿಮ್ಮ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
- ಮಾಂತ್ರಿಕ ವಿಚಾರಗಳನ್ನು ದೂರ ಉಳಿಯಬೇಕು
- ಆಸೆಗೆ ಕಟ್ಟಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬಹುದು
- ರಕ್ಷಾ ಸುದರ್ಶನನ್ನು ಆರಾಧನೆ ಮಾಡಿ
ಸಿಂಹ
- ಆರ್ಥಿಕ ದೃಷ್ಟಿಯಿಂದ ದಿನ ಚೆನ್ನಾಗಿರುವುದಿಲ್ಲ
- ಇಂದು ನೀವು ಆಲೋಚನೆ ಮಾಡುವುದೇ ಬೇರೆ ಅದು ನಡೆಯುವುದೇ ಬೇರೆ
- ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇರುವ ಸಂದರ್ಭ
- ಪದವಿ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಸಮಯ ಅವಕಾಶ ಇರುವುದಿಲ್ಲ
- ಇಂದು ಮಾನಸಿಕ ಭಯ ಹೆಚ್ಚಾಗುತ್ತದೆ
- ಇಂದು ಕೆಟ್ಟ ಕೆಟ್ಟ ಶಕುನಗಳು ನಿಮ್ಮ ಧೈರ್ಯಗೆಡಿಸಬಹುದು
- ನೀಲಿ ಹೂವಿನಿಂದ ಶನೈಶ್ಚರನನ್ನು ಅರ್ಚಿಸಿ
ಕನ್ಯಾ
- ನವವಿವಾಹಿತ ದಂಪತಿಗಳಿಗೆ ಸಂತೋಷವಿರುತ್ತದೆ
- ಎರಡನೇ ಮದುವೆಯಾದವರಿಗೆ ಅನುಮಾನ, ವಾದ – ವಿವಾದಗಳು ಬರಬಹುದು
- ಅಕಸ್ಮಾತಾಗಿ ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆವಹಿಸಿ
- ಮಕ್ಕಳ ವಿಚಾರದಲ್ಲಿ ನಿಮ್ಮ ತಾತ್ಸಾರ ಎದ್ದು ಕಾಣುತ್ತದೆ
- ನೆರೆಹೊರೆಯವರು ಸಹಾಯ ಮಾಡುವ ರೂಪದಲ್ಲಿ ಬಂದು ಮೋಸ ಮಾಡಬಹುದು
- ಹಿರಿಯರನ್ನ, ಪೋಷಕರನ್ನು ನೋಡುವ ತನಕ ಹೆಚ್ಚಾಗಬಹುದು
- ಸ್ವಂಯವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತೀರಿ, ಕಲಿಕೆಯಲ್ಲಿ ಶುಭವಿದೆ
- ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯ ಇರುತ್ತದೆ
- ತಮ್ಮ ಶಕ್ತಿ ಸಾಮರ್ಥ್ಯದಿಂದ ಹಣ ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ ದಿನ
- ನ್ಯಾಯಾಲಯದಲ್ಲಿ ಕೆಲಸಗಳಿದ್ದರೆ ಅದು ಇತ್ಯರ್ಥವಾಗದ ಸಮಸ್ಯೆಯಾಗಬಹುದು
- ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
- ಹಾವಿನಿಂದ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಅಷ್ಟಕುಲ ನಾಗೇಂದ್ರನನ್ನು ಸ್ಮರಣೆ ಮಾಡಿ
ವೃಶ್ಚಿಕ
- ಪುಸ್ತಕ ಪ್ರೇಮಿಗಳಿಗೆ ಶುಭದಿನ ಪುಸ್ತಕ ಪ್ರಭಾವ ನಿಮ್ಮನ್ನು ಆವರಿಸುತ್ತದೆ
- ದೇಶ ಹಾಗೂ ಜಗತ್ತಿನ ಆಗು-ಹೋಗುಗಳ ಬಗ್ಗೆ ಚರ್ಚಿಸುತ್ತೀರಿ
- ಮನೆಯ ಹತ್ತಿರದಲ್ಲಿ ಬೆಂಕಿ ಅವಗಡ ಸಂಭವಿಸಬಹುದು
- ಯಾವುದೇ ಅಪೇಕ್ಷೆ ಇಲ್ಲದೆ ಸಹಾಯ ಮಾಡುವ ಸ್ವಭಾವ ನಿಮ್ಮದಾಗಿರಬೇಕು
- ಜೀವನದಲ್ಲಿ ಜಿಗುಪ್ಸೆ, ವೈರಾಗ್ಯ ಕಾಣಲು ಆರಂಭವಾಗುತ್ತದೆ
- ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಸಗಟು ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ದಂಡ ವಿಧಿಸುವ ಸಂದರ್ಭ ಬರಬಹುದು
- ಕಳ್ಳರು ತಮ್ಮ ಕೈಚಳಕ ಫಲಿಸಲಿಲ್ಲವೆಂದು ಯೋಚಿಸುವಾಗ ಸಿಕ್ಕಿಬೀಳಬಹುದು
- ಸ್ತ್ರೀಯರು ಬೆನ್ನು ನೋವಿನಿಂದ ಆಸ್ಪತ್ರೆಯಲ್ಲಿ ದಾಖಲಾಗಬಹುದು
- ಮನಸ್ಸಿನ ಮೇಲೆ ಬೀರುವ ಪ್ರಭಾವ ಶರೀರಕ್ಕೆ ಆವರಿಸಿ ಆರೋಗ್ಯ ಹದಗೆಡಬಹುದು
- ಸಾಯಂಕಾಲ ಸುಖವಾದ ಮಾತು, ಭೋಜನ
- ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ
ಮಕರ
- ಈ ರಾಶಿಯ ಹಲವರಿಗೆ ಈ ದಿನ ಶುಭವಿಲ್ಲ
- ಹುಚ್ಚು ಧೈರ್ಯ ಇರುವ ಪ್ರೇಮಿಗಳು ಅಪಘಾತಕ್ಕೆ ಈಡಾಗಬಹುದು
- ತಮ್ಮ ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿದಿರುವುದಿಲ್ಲ, ತೊಂದರೆಯಾಗಬಹುದು
- ನಿಮ್ಮ ನಡವಳಿಕೆ ತೆಗೆದುಕೊಳ್ಳುವ ನಿರ್ಧಾರ, ಮಾತಿನ ಬರದಿಂದ ನೀವು ಪೊಲೀಸರ ಅತಿಥಿ ಆಗಬಹುದು
- ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ನೀಡಿ
ಕುಂಭ
- ನಿಮ್ಮ ಆತುರದ ನಿರ್ಧಾರ ತುಂಬಾ ನಷ್ಟಕ್ಕೆ ಗುರಿಯಾಗಬಹುದು
- ಕಾಲು ನೋವಿನಿಂದ ತುಂಬಾ ದಿನಗಳಿಂದ ಬಳಲುತ್ತಿದ್ದರೆ ಈ ದಿನ ಶುಭ
- ಬಟ್ಟೆ ವ್ಯಾಪಾರಿಗಳು ನಷ್ಟ ಅಥವಾ ಮೋಸ ಅನುಭವಿಸಬಹುದು
- ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
- ವಿದ್ಯಾರ್ಥಿಗಳ, ಮಕ್ಕಳ ತಾಳ್ಮೆಯ ಪರೀಕ್ಷೆಯ ದಿನ, ಏಕಾಗ್ರತೆಯಿಂದ ಜಯಶೀಲರಾಗಿ
- ದುಂದುವೆಚ್ಚಕ್ಕೆ ಕಡಿವಾಣ ಹಾಕಿ
- ನವಗ್ರಹರ ಅರ್ಚನೆ ಮಾಡಿ ಸ್ತೋತ್ರ ಪಠಿಸಿ
ಮೀನ
- ಚಿತ್ರರಂಗದಲ್ಲಿರುವವರಿಗೆ ಶುಭದಿನ
- ನಿಮ್ಮ ಜೊತೆ ಕೆಲಸ ಮಾಡುವವರು ಅನಾರೋಗ್ಯದಿಂದ ತುಂಬಾ ಹಿಂಸೆ ಅನುಭವಿಸುತ್ತಾರೆ
- ಇಂದು ನಿಮಗೆ ತುಂಬಾ ನೋವು ಉಂಟಾಗಬಹುದು
- ಸಂಪಾದನೆ ನಿಮ್ಮ ಗುರಿ ಆಗಿರುತ್ತದೆ
- ಮಾನಸಿಕ ವಿರಾಮದಿಂದ ಸಾಯಂಕಾಲ ಎಲ್ಲ ಸರಿ ಹೋಗಬಹುದು
- ಈಶ್ವರ ಆರಾಧನೆ ಮಾಡಿ, ಈಶ್ವರನಿಗೆ ಮೊಸರನ್ನ ನೈವೇದ್ಯ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ