ಪ್ರತಿನಿತ್ಯ ಆಗುವ ಕೆಲಸಗಳು ಬಹಳ ಬೇಸರದಿಂದ ಮುಕ್ತಾಯವಾಗಲಿದೆ
ಬೇರೆಯವರನ್ನೂ ಅವಲಂಬಿಸಬೇಕಾದ ಸಂದರ್ಭಗಳು ಹೆಚ್ಚು ಆಗಲಿದೆ
ಅನುಭವಿಗಳ ಉಚಿತವಾದ ಸಲಹೆಗಳು ಮನಸ್ಸಿಗೆ ಧೈರ್ಯವನ್ನ ಕೊಡಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲಪಕ್ಷ, ಪಂಚಮಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಈ ದಿವಸ ಸಾಂಸಾರಿಕವಾಗಿ, ವ್ಯಾವಹಾರಿಕವಾಗಿ ಸಂತೋಷವಾಗಿರುತ್ತೀರಿ
- ಆತ್ಮವಿಶ್ವಾಸವು ಕೂಡ ನಿಮ್ಮಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ
- ಮುಂದಿನ ಯೋಜನೆಗಳು ಯಶಸ್ವಿಯಾಗುವ ಸೂಚನೆ ಇದೆ
- ಸ್ನೇಹಿತರ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ಹೋಗುತ್ತೀರಿ
- ಆಕಸ್ಮಿಕವಾಗಿ ನಿಮ್ಮ ವಾಹನಕ್ಕೆ ಹಾನಿಯಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಹಲವಾರು ಒತ್ತಡಗಳಿಂದ ಮನಸ್ಸು ವಿಚಲಿತವಾಗುವಂತಹದ್ದು ಸಹಜ ಆದರೆ ನಿಮ್ಮ ಕಾರ್ಯದಲ್ಲಿ ಮನಸ್ಸನ್ನು ಕೇಂದ್ರೀಕರಣ ಮಾಡಿಯೇ ಕೆಲಸವನ್ನು ಮಾಡಬೇಕಾಗುತ್ತದೆ
- ಈ ದಿನ ಬಹಳ ಒಳ್ಳೆಯ ದಿವಸ ಅನ್ನೋ ದೃಢವಾದ ನಂಬಿಕೆ ಮಾತ್ರ ಕೆಲಸ ಮಾಡಲಿದೆ
- ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ
- ಅಸಂಬದ್ಧವಾದಂತಹ ಚಟುವಟಿಕೆಗಳಲ್ಲಿ ಮನಸ್ಸು ಹೋಗುವುದು ಕೆಲವರ ಸ್ವಭಾವ ಅದನ್ನು ಹಿಡಿದಿಟ್ಟುಕೊಳ್ಳುವುದು ಬುದ್ದಿವಂತರ ಲಕ್ಷಣ
- ದುಡ್ಡು ಎಲ್ಲದಕ್ಕೂ ಮುಖ್ಯ ಅಂತ ಹೇಳಿ ಭಾವಿಸುವಂತಹವರು ಯಾವುದೇ ರೀತಿಯ ತಪ್ಪು ದಾರಿಯನ್ನು ತುಳಿಯಬಾರದು
- ಹಳೆಯ ವಾಹನದಿಂದ ತೊಂದರೆಯಾಗಬಹುದು
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಹಣಕಾಸಿನ ವಿಚಾರ ಪ್ರತಿನಿತ್ಯವೂ ಕೂಡ ನಮ್ಮಲ್ಲಿ ಒಂದಲ್ಲ ಒಂದು ಗೊಂದಲವನ್ನು ಸೃಷ್ಟಿ ಮಾಡುತ್ತಲೆ ಇರುತ್ತದೆ
- ಆರ್ಥಿಕವಾಗಿ ತೊಂದರೆಯಿಲ್ಲ, ನಮ್ಮ ಶಕ್ತಿ, ಪರಿಮಿತಿ,ಪರಿಧಿ, ಸಾಮರ್ಥ್ಯವನ್ನು ಮೀರಿ ನಡೆದುಕೊಂಡಾಗ ವಿರುದ್ಧವಾದ ಫಲವನ್ನು, ಫಲಿತಾಂಶವನ್ನು, ವಾತಾವರಣವನ್ನು ನೋಡಬೇಕಾಗುತ್ತದೆ
- ಮಕ್ಕಳಿಗೆ,ವಿದ್ಯಾರ್ಥಿಗಳಿಗೆ ನಿಮ್ಮ ಅಗತ್ಯತೆ ಏನಿದೆ ಅದು ಪೂರೈಕೆ ಆಗುವಂತಹ ದಿನ
- ಉದ್ಯೋಗಿಗಳಿಗೆ ಒಂದಷ್ಟು ಲಾಭದ ಅವಕಾಶವಿದೆ
- ಉದ್ಯೋಗದ ಜೊತೆಗೆ ಸಣ್ಣ ಪುಟ್ಟ ವ್ಯವಹಾರಗಳನ್ನು ಕೂಡ ಮಾಡುವುದಕ್ಕೆ ಅವಕಾಶಗಳು ಸೂಚ್ಯವಾಗಿ ಕಾಣುತ್ತಿದೆ
- ಸ್ನೇಹಿತರನ್ನು ಭೇಟಿ ಮಾಡಿ ವಿಚಾರ, ಕೆಲವು ಮಾಹಿತಿ ಸಂಗ್ರಹ ಮಾಡುತ್ತೀರಿ ಹಾಗೆ ಹಣವನ್ನು ಖರ್ಚು ಮಾಡುತ್ತೀರಿ
- ಪ್ರಭಾವಿ ವ್ಯಕ್ತಿ ಗಳ ಭೇಟಿ, ಪರಿಚಯವಾಗುವುದರಿಂದ ಸಂತೋಷವಾಗಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ
- ವಿದ್ಯಾರ್ಥಿಗಳು ಮತ್ತೆ ನೌಕರರು ಸವಾಲುಗಳನ್ನು ಎದುರಿಸಬೇಕಾಗಬಹುದು
- ನಿಮ್ಮ ಹತ್ತಿರದ ಸಂಬಂಧಿಗಳು ನಿಮಗೆ ದ್ರೋಹವನ್ನು ಮಾಡಬಹುದು
- ಅನಗತ್ಯವಾದಂತಹ ವಿಚಾರಗಳಿಗೆ ಜಗಳವನ್ನು ಮಾಡಿಕೊಳ್ಳುತ್ತೀರಿ
- ಕುಟುಂಬದಲ್ಲಿ ಮಾತೆಯರ ಆರೋಗ್ಯ ಹದಗೆಡಬಹುದು ಎಚ್ಚರಿಕೆವಹಿಸಿ
- ದಾಂಪತ್ಯದಲ್ಲಿ ಕಲಹ ಅಸಮಾಧಾನವಿರಲಿದೆ
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ಸಿಂಹ
- ಉದ್ದೇಶದಿಂದ ಕೆಲಸಗಳನ್ನು ಮಾಡಬೇಕೆಂಬ ಯೋಜನೆ ಹಾಕಿಕೊಂಡಿರುವ ಹಾಗೆ ಅದೇ ರೀತಿ ಕೆಲಸಗಳು ನಡೆಯಲಿದೆ
- ಹೊಸ ಕಾರ್ಯಾರಂಭಕ್ಕೆ ಉತ್ತಮವಾದ ದಿನ
- ಪ್ರೇಮಿಗಳಿಗೆ ಅಪಾಯಕಾರಿಯಾದ ದಿನ ಎಚ್ಚರಿಕೆವಹಿಸಿ
- ಶರಬೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮಹಿಳೆಯರು ಆರೋಗ್ಯದ ಬಗ್ಗೆ ತುಂಬಾ ಆತಂಕ ಪಡಬೇಕಾದಂತಹ ದಿನ
- ಕೂಡಿಟ್ಟಿದ್ದಂತಹ ಹಣ ಆರೋಗ್ಯದ ಔಷಧಿಗೋಸ್ಕರ ಖರ್ಚಾಗುವುದು ಬೇಸರದ ಸಂಗತಿ
- ಹಣದ ಖರ್ಚು, ಅನಾರೋಗ್ಯ, ಮಾನಸಿಕ ನೆಮ್ಮದಿ, ಆತಂಕ, ಮನಸ್ಸನ್ನು ಹಾಗೂ ಶರೀರವನ್ನು ಬಹಳವಾಗಿ ಕಾಡಬಹುದು
- ಕಷ್ಟ ಪಟ್ಟು ಕೆಲಸ ಮಾಡಿದಂತಹ ಹಳೆಯ ದಿವಸಗಳು ಜ್ಞಾಪಕಕ್ಕೆ ಬರಲಿದೆ
- ಕುಟುಂಬದವರ ಜೊತೆಯಲ್ಲಿ ನಂಬಿಕೆ ಕಡಿಮೆ ಆಗ್ತಾ ಹೋಗಬಹುದು
- ನಿಮ್ಮ ಸಹಾಯಕ್ಕೆ ಯಾರೂ ಆಗೋದಿಲ್ಲ ನಿಮ್ಮ ಕೂಡ ಜೊತೆಯಲ್ಲಿ ಇರುವುದಿಲ್ಲ ಅನ್ನುವಂತಹ ವಿಚಾರವನ್ನು ತಿಳಿದು ವ್ಯವಹರಿಸಬೇಕಾದಂತಹ ದಿನ ಇದಾಗಿದೆ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಯಾವುದೊ ಸಾಧನೆಯಿಂದ, ಫಲಿತಾಂಶದಿಂದ ಇಡೀ ಕುಟುಂಬದ ಸದಸ್ಯರು ಸಂತೋಷವಾಗಿರುವ ವಾತಾವರಣ ನೋಡಬೇಕಾಲಿದೆ
- ಹಣ, ಬಂಧುಗಳು, ಜನ, ವಿಶ್ವಾಸ ನೀವು ಅಂದುಕೊಂಡ ಹಾಗೆ ಸಿಗಲಿದೆ
- ಧನಾತ್ಮಕವಾದ ಚಿಂತನೆಗಳು ಮನಸ್ಸಿನಲ್ಲಿ ಗಟ್ಟಿಯಾಗಲಿದೆ
- ಪ್ರೇಮಿಗಳು ಅಡ್ಡಿಯನ್ನು ಸಂಕಷ್ಟಗಳನ್ನು ಎದುರಿಸಬೇಕಾದ ದಿನ
- ಸಾಯಂಕಾಲಕ್ಕೆ ನಿಮ್ಮ ಅದೃಷ್ಟ ನಿಮ್ಮ ವಿರುದ್ಧವಾಗಿರಲಿದೆ
- ಭಗವತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಏನೆ ಒಳ್ಳೆಯದು ಆಗುತ್ತಿದ್ದರೂ ಮನಸ್ಸಿನಲ್ಲಿ ಆತಂಕ ಅನ್ನುವುದು ಕಾಡುವಂತಹದ್ದು
- ವಿನಾಕಾರನ ಮನಸ್ಸನ್ನು ಕೆಡಿಸಿಕೊಳ್ಳುತ್ತೀರಿ
- ಋಣಾತ್ಮಕವಾದಂತಹ ಫಲವನ್ನು ನಿಮಗೆ ನೀಡಲಿದೆ
- ನಿಮ್ಮ ಗುರಿ ಸಾಧನೆಗೆ ಖಚಿತ ಪಡಿಸಿಕೊಳ್ಳಿ
- ಸಂಬಂಧಿಕರು ಅಥವಾ ಸ್ನೇಹಿತರು ಆತಂಕಕ್ಕೆ ಒಳಗಾಗುವುದರಿಂದ ಬೇಸರವಾಗಲಿದೆ
- ಇಡೀ ದಿನ ತಾಳ್ಮೆಯಿಂದ ಕಳೆಯಬೇಕು
- ದಾಂಪತ್ಯದಲ್ಲಿ ವೈಮನಸ್ಯ ಬರದ ಹಾಗೆ ನೋಡಿಕೊಳ್ಳಿ
- ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ, ಹಳೆಯ ಲೆಕ್ಕದಿಂದ ಗೊಂದಲ ಮಾಡಿಕೊಳ್ಳುತ್ತೀರಿ
- ಐಶ್ವರ್ಯಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ಸಂಬಳ, ಸವಲತ್ತುಗಳ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡಿರುತ್ತೀರಿ
- ಆತ್ಮವಿಶ್ವಾಸದ ಜೊತೆಗೆ ವ್ಯಾವಹಾರಿಕ ಲಕ್ಷಣವನ್ನು ಗಮನಿಸಿ ಮುಂದುವರೆಯಿರಿ
- ವ್ಯವಹಾರದಲ್ಲಿ, ಒಪ್ಪಂದಗಳು, ಮಾತುಕತೆ, ನಡೆಯಬಹುದು ಅಲ್ಲಿ ನೀವು ನೆಪ ಮಾತ್ರ
- ವಸ್ತುಗಳ ವಿತರಣೆ ಮಾಡುವವರಿಗೆ ಲಾಭವಿದೆ
- ಮನೆಗೆ ಬಂದ ಅತಿಥಿಗಳು ನಿಮ್ಮ ವೈಯಕ್ತಿಕವಾದ ಕೆಲಸಕ್ಕೆ ಸಹಾಯ ಮಾಡುತ್ತಾರೆ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
- ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡಲು ಮುಂದಾಗುತ್ತೀರಿ
- ಅನುಭವಿಗಳ ಉಚಿತವಾದ ಸಲಹೆಗಳು ಮನಸ್ಸಿಗೆ ಧೈರ್ಯವನ್ನು ಕೊಡಲಿದೆ
- ಕುಟುಂಬದಲ್ಲಿ ಒಳ್ಳೆಯ ವಾತಾವರಣವಿದ್ದರೂ ಮನಸ್ಸಿನಲ್ಲಿ ಏನೋ ಅತಂಕ ಕಾಡಲಿದೆ
- ವಿದೇಶದಲ್ಲಿರುವವರಿಂದ ಒಳ್ಳೆಯ ಸುದ್ದಿ ಬರಲಿದೆ
- ಆಸ್ತಿ ಖರೀದಿಗೆ ಸಹಾಯಕವಾದ ಹಣ ನಿಮ್ಮ ಕೈ ಸೇರಲಿದೆ
- ಮನೆಯಲ್ಲಿ ಎಲ್ಲವೂ ಶುಭ ಅನಿಸುತ್ತದೆ ಆದರೆ ಮನಸ್ಸಿನ ಅಧೈರ್ಯ ಎಲ್ಲವನ್ನು ಮೆಟ್ಟಿ ನಿಲ್ಲುತ್ತದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
- ಯಾವ ಕೆಲಸ ಆಗಲಿದೆ, ಹಣ ಬರಲಿದೆ ಅನ್ನುವ ನಿರೀಕ್ಷೆಗೆ ವಿರುದ್ಧವಾದ ಫಲ ಸಿಗಲಿದೆ
- ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
- ಉತ್ತಮವಾದ ಅಧಿಕಾರಿಗಳು ಯೋಗ್ಯರಾದವರು ನಿಮ್ಮ ಬಗ್ಗೆ ಸಿಟ್ಟನ್ನು ಮಾಡಿಕೊಳ್ಳುತ್ತಾರೆ
- ಇಂದು ಪ್ರಯಾಣ, ಪ್ರವಾಸ ರದ್ದಾಗಲಿದೆ
- ಬೇರೆಯವರನ್ನು ಅವಲಂಬಿಸಬೇಕಾದ ಸಂದರ್ಭಗಳು ಹೆಚ್ಚಾಗಲಿದೆ
- ದೈನಂದಿನ ಶಿಸ್ತು ಅಸ್ತವ್ಯಸ್ಯ ಆಗಲಿದೆ
- ಮನಸ್ಸಿನಲ್ಲಿ ಗಾಬರಿ, ಆತಂಕ ಮನಸ್ಸಿನಲ್ಲಿ ಕಾಡಲಿದೆ
- ತ್ರಯಂಬಕ ರುದ್ರನನ್ನು ಪ್ರಾರ್ಥನೆ ಮಾಡಿ
ಮೀನ
- ಪ್ರತಿನಿತ್ಯ ಆಗುವ ಕೆಲಸಗಳು ಬಹಳ ಬೇಸರದಿಂದ ಮುಕ್ತಾಯವಾಗಲಿದೆ
- ಸಹೋದ್ಯೋಗಿಗಳು, ಮಿತ್ರರು, ಬಂಧುಗಳು ನಿಮ್ಮ ಸಹವಾಸದಲ್ಲಿ ಅನೇಕ ತಪ್ಪುಗಳನ್ನು ಹುಡುಕುತ್ತಾರೆ
- ಸಣ್ಣ ಪುಟ್ಟ ವಿಚಾರಗಳಿಗೆ ಮಿತಿಮೀರಿ ಮಾತನಾಡಬಾರದು
- ಕೆಲವು ಕಾನೂನಿನ ತೊಡಕುಗಳು ನೌಕರಿಯಲ್ಲಿ,ಉದ್ಯೋಗದಲ್ಲಿ,ವ್ಯವಹಾರದಲ್ಲಿ ತೊಂದರೆ ಮಾಡಲಿದೆ
- ಆರೋಗ್ಯದ ಬಗ್ಗೆ ಗಮನವಿರಲಿ ಬೆನ್ನು ನೋವು ಕಾಡಬಹುದು
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ