ಸೂಪರ್ 8ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
ಅಖಾಡದಲ್ಲಿ ‘ಸೈಲೆಂಟ್ ಕಿಲ್ಲರ್’ ವೈಲೆಂಟ್ ಪರ್ಫಾಮೆನ್ಸ್
ಬಿರುಗಾಳಿಯಂತಹ ದಾಳಿಗೆ ಎದುರಾಳಿಗಳು ತಬ್ಬಿಬ್ಬು
ಈ ಬಾರಿಯ ವಿಶ್ವಕಪ್ನಲ್ಲಿ ಸೈಲೆಂಟ್ ಸೂಪರ್ ಸ್ಟಾರ್ ಉದಯವಾಗಿದೆ. ಸೈಲೆಂಟ್ ಕಿಲ್ಲರ್ ನೀಡ್ತಿರೋ ವೈಲೆಂಟ್ ಪರ್ಫಾಮೆನ್ಸ್ಗೆ ಎದುರಾಳಿಗಳು ತಬ್ಬಿಬ್ಬಾಗಿದ್ದಾರೆ. ಟೀಮ್ ಇಂಡಿಯಾ ಸೂಪರ್ 8 ಹಂತಕ್ಕೂ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಯಶಸ್ಸಿನ ಹಿಂದಿರೋ ಸೈಲೆಂಟ್ ಸೂಪರ್ ಸ್ಟಾರ್ ವೇಗಿ ಆರ್ಷ್ದೀಪ್ ಸಿಂಗ್. ವಿಶ್ವಕಪ್ ಕದನದಲ್ಲಿ ಆರ್ಷ್ದೀಪ್ ಅಬ್ಬರ ಟೀಮ್ ಇಂಡಿಯಾಗೆ ಆನೆಬಲವನ್ನೇ ತಂದಿದೆ.
ಐಸಿಸಿ ಟ್ರೋಫಿಯ ಕೊರಗಿಗೆ ಬ್ರೇಕ್ ಹಾಕೋ ದೊಡ್ಡ ಕನಸು ಹೊತ್ತು ನ್ಯೂಯಾರ್ಕ್ಗೆ ಹಾರಿರುವ ಮೆನ್ ಇನ್ ಬ್ಲೂ ಪಡೆ ಆರಂಭದಲ್ಲೇ ಸಕ್ಸಸ್ ಕಂಡಿದೆ. ನ್ಯೂಯಾರ್ಕ್ನ ಅನ್ ಪ್ರೆಡಿಕ್ಟಬಲ್ ಪಿಚ್ನಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹ್ಯಾಟ್ರಿಕ್ ಗೆಲುವಿನ ಬಲದೊಂದಿಗೆ, ಸೂಪರ್ 8 ಸ್ಟೇಜ್ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ:‘ಕಾಂಗ್ರೆಸ್ನ ಅಚ್ಚರಿ ಅಭ್ಯರ್ಥಿ ಜೈಲು ಕಂಬಿ ಎಣಿಸ್ತಿದ್ದಾರೆ’ ಸಂಚಲನ ಸೃಷ್ಟಿಸಿದ ಯೋಗೇಶ್ವರ್ ಹೇಳಿಕೆ..!
ಅಖಾಡದಲ್ಲಿ ‘ಸೈಲೆಂಟ್ ಕಿಲ್ಲರ್’ ವೈಲೆಂಟ್ ಪರ್ಫಾಮೆನ್ಸ್
ಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ಸರ್ಕಲ್ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಯಾರಾಗ್ತಾರೆ ಅನ್ನೋ ಚರ್ಚೆ ನಡೆದಿತ್ತು. ಆಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್.. ಅಷ್ಟೇ ಯಾಕೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಹೆಸರನ್ನ ಕೂಡ ಬಹುತೇಕರು ಹೇಳಿದ್ರು. ಆದ್ರೆ, ಇವರೆಲ್ಲರನ್ನ ಈ ಯಂಗ್ಗನ್ ಇದೀಗ ಮೀರಿಸಿದ್ದಾರೆ. ವಿಶ್ವಕಪ್ ಅಖಾಡದಲ್ಲಿ ಈ ಸೈಲೆಂಟ್ ಕಿಲ್ಲರ್ ತನ್ನ ವೈಲೆಂಟ್ ಆಟದಿಂದ ಮಿಂಚಿದ್ದಾರೆ. ಅಂದ್ಹಾಗೆ ಆ ಸೈಲೆಂಟ್ ಸೂಪರ್ ಸ್ಟಾರ್ ಬೇರಾರೂ ಅಲ್ಲ. ಒನ್ ಅಂಡ್ ಒನ್ಲೀ ವೇಗಿ ಆರ್ಷ್ದೀಪ್ ಸಿಂಗ್.
ಆರ್ಷ್ದೀಪ್ ಅಬ್ಬರ.. ಸೂಪರ್ 8ಗೆ ಟೀಮ್ ಇಂಡಿಯಾ
ಯುಎಸ್ಎ ವಿರುದ್ಧದ ಪಂದ್ಯದ ರಿಯಲ್ ಮ್ಯಾಚ್ ವಿನ್ನರ್ ವೇಗಿ ಆರ್ಷ್ದೀಪ್ ಸಿಂಗ್. ಟಫ್ ಟ್ರ್ಯಾಕ್ನಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಮಿಂಚಿದ್ರು. ಆದ್ರೆ, ಅದಕ್ಕೂ ಮುನ್ನ ಆ ಪಿಚ್ನಲ್ಲಿ ಪಂಜಾಬ್ ಪುತ್ತರ್ ಆರ್ಷ್ದೀಪ್ ಧೂಳೆಬ್ಬಿಸಿದ್ರು. ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರ್ಷ್ದೀಪ್, ಬಿರುಗಾಳಿಯಂತಾ ದಾಳಿ ಸಂಘಟಿಸಿದ್ರು.
ಇದನ್ನೂ ಓದಿ:ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ.. ದರ್ಶನ್ ವಿರುದ್ಧ ಸಿಕ್ಕಿದೆ ಎನ್ನಲಾದ 16 ಸಾಕ್ಷಿಗಳ ಲಿಸ್ಟ್ ಇಲ್ಲಿದೆ..!
ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಆರ್ಷ್ದೀಪ್ ಸಿಂಗ್ ಬೆಂಕಿಯಂಥ ದಾಳಿ ನಡೆಸಿದ್ರು. ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರ್ಷ್ದೀಪ್, ಹಾಕಿದ 4 ಓವರ್ಗಳಲ್ಲಿ ಬಿಟ್ಟು ಕೊಟ್ಟಿದ್ದು ಕೇವಲ 4 ರನ್ ಮಾತ್ರ. 2.25ರ ಎಕಾನಮಿಯಲ್ಲಿ ಬೌಲಿಂಗ್ ದಾಳಿ ನಡೆಸಿದ ಆರ್ಷ್ದೀಪ್ 4 ವಿಕೆಟ್ ಉರುಳಿಸಿದ್ರು. ಈ ಸೂಪರ್ ಸ್ಪೆಲ್ ಟೀಮ್ ಇಂಡಿಯಾ ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡಿತು.
ಪಾಕ್ ವಿರುದ್ಧವೂ ಆರ್ಷ್ದೀಪ್ ಸಿಂಗ್ ದರ್ಬಾರ್
ಬದ್ಧವೈರಿ ಪಾಕ್ ವಿರುದ್ಧದ ಪಂದ್ಯದಲ್ಲಿ 96 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್ಗಿಳಿದ ಆರ್ಷ್ದೀಪ್ ಪಾಕಿಸ್ತಾನದ ಪ್ರಬಲ ಬೌಲಿಂಗ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ರು. ನಸೀಮ್ ಶಾ, ಮೊಹಮ್ಮದ್ ಅಮೀರ್, ಶಾಹೀನ್ ಅಫ್ರಿದಿಯ ಎಸೆತಗಳನ್ನು ಎದುರಿಸಿದ ಆರ್ಷ್ದೀಪ್, 13 ಎಸೆತಗಳಲ್ಲಿ 1 ಬೌಂಡರಿ ಸಹಿತ 9 ರನ್ಗಳ ಅಮೂಲ್ಯ ಕಾಣಿಕೆ ನೀಡಿದ್ರು. ಈ ಮೂಲಕ ಟೀಮ್ ಇಂಡಿಯಾದ 4ನೇ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.
ಇದನ್ನೂ ಓದಿ:ದರ್ಶನ್ ಮತ್ತು ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಅನುಮಾನ -ಉಮಾಪತಿ ಸ್ಫೋಟಕ ಹೇಳಿಕೆ
ಕೊನೆಯ ಓವರ್ ಬೌಲಿಂಗ್ನಲ್ಲೂ ಕಮಾಲ್
ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಕೊನೆಯ 6 ಎಸೆತಗಳಲ್ಲಿ 17 ರನ್ಗಳನ್ನ ಡಿಫೆಂಡ್ ಮಾಡಿಕೊಳ್ಳಬೇಕಿತ್ತು. ಈ ವೇಳೆ ದಾಳಿಗಿಳಿದ ಆರ್ಷ್ದೀಪ್ ಸಿಂಗ್ ಮೊದಲ ಎಸೆತದಲ್ಲೇ ಡೇಂಜರಸ್ ಇಮಾದ್ ವಾಸಿಮ್ಗೆ ಗೇಟ್ಪಾಸ್ ನೀಡಿದ್ರು. ಒಟ್ಟು 11 ರನ್ಗಳನ್ನು ಬಿಟ್ಟುಕೊಟ್ಟ ಪಂಜಾಬ್ ಪುತ್ತರ್ 6 ರನ್ಗಳ ಗೆಲುವಿಗೆ ಕಾರಣರಾದ್ರು.
ಬದ್ಧವೈರಿ ಪಾಕ್ ಎದುರಿನ ಗೆಲುವಿನ ಆರ್ಷ್ದೀಪ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಕ್ರೂಶಿಯಲ್ ರೋಲ್ ಪ್ಲೇ ಮಾಡ್ತು. ಈ ಪಂದ್ಯ ಮಾತ್ರವಲ್ಲ.. ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್ಷ್ದೀಪ್ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪರ್ಫಾಮೆನ್ಸ್ ನೀಡಿದ್ದಾರೆ. 12 ಓವರ್ ಬೌಲಿಂಗ್ ಮಾಡಿ 7 ವಿಕೆಟ್ ಕಬಳಿಸಿ ಕೇವಲ 6.25ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಸೈಲೆಂಟ್ ಆಗಿಯೇ ಟೀಮ್ ಇಂಡಿಯಾದ ಗೆಲುವಿನ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
ವಿಶೇಷ ವರದಿ: ವಸಂತ್ ಮಳವತ್ತಿ
ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸೂಪರ್ 8ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
ಅಖಾಡದಲ್ಲಿ ‘ಸೈಲೆಂಟ್ ಕಿಲ್ಲರ್’ ವೈಲೆಂಟ್ ಪರ್ಫಾಮೆನ್ಸ್
ಬಿರುಗಾಳಿಯಂತಹ ದಾಳಿಗೆ ಎದುರಾಳಿಗಳು ತಬ್ಬಿಬ್ಬು
ಈ ಬಾರಿಯ ವಿಶ್ವಕಪ್ನಲ್ಲಿ ಸೈಲೆಂಟ್ ಸೂಪರ್ ಸ್ಟಾರ್ ಉದಯವಾಗಿದೆ. ಸೈಲೆಂಟ್ ಕಿಲ್ಲರ್ ನೀಡ್ತಿರೋ ವೈಲೆಂಟ್ ಪರ್ಫಾಮೆನ್ಸ್ಗೆ ಎದುರಾಳಿಗಳು ತಬ್ಬಿಬ್ಬಾಗಿದ್ದಾರೆ. ಟೀಮ್ ಇಂಡಿಯಾ ಸೂಪರ್ 8 ಹಂತಕ್ಕೂ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಯಶಸ್ಸಿನ ಹಿಂದಿರೋ ಸೈಲೆಂಟ್ ಸೂಪರ್ ಸ್ಟಾರ್ ವೇಗಿ ಆರ್ಷ್ದೀಪ್ ಸಿಂಗ್. ವಿಶ್ವಕಪ್ ಕದನದಲ್ಲಿ ಆರ್ಷ್ದೀಪ್ ಅಬ್ಬರ ಟೀಮ್ ಇಂಡಿಯಾಗೆ ಆನೆಬಲವನ್ನೇ ತಂದಿದೆ.
ಐಸಿಸಿ ಟ್ರೋಫಿಯ ಕೊರಗಿಗೆ ಬ್ರೇಕ್ ಹಾಕೋ ದೊಡ್ಡ ಕನಸು ಹೊತ್ತು ನ್ಯೂಯಾರ್ಕ್ಗೆ ಹಾರಿರುವ ಮೆನ್ ಇನ್ ಬ್ಲೂ ಪಡೆ ಆರಂಭದಲ್ಲೇ ಸಕ್ಸಸ್ ಕಂಡಿದೆ. ನ್ಯೂಯಾರ್ಕ್ನ ಅನ್ ಪ್ರೆಡಿಕ್ಟಬಲ್ ಪಿಚ್ನಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹ್ಯಾಟ್ರಿಕ್ ಗೆಲುವಿನ ಬಲದೊಂದಿಗೆ, ಸೂಪರ್ 8 ಸ್ಟೇಜ್ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ:‘ಕಾಂಗ್ರೆಸ್ನ ಅಚ್ಚರಿ ಅಭ್ಯರ್ಥಿ ಜೈಲು ಕಂಬಿ ಎಣಿಸ್ತಿದ್ದಾರೆ’ ಸಂಚಲನ ಸೃಷ್ಟಿಸಿದ ಯೋಗೇಶ್ವರ್ ಹೇಳಿಕೆ..!
ಅಖಾಡದಲ್ಲಿ ‘ಸೈಲೆಂಟ್ ಕಿಲ್ಲರ್’ ವೈಲೆಂಟ್ ಪರ್ಫಾಮೆನ್ಸ್
ಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ಸರ್ಕಲ್ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಯಾರಾಗ್ತಾರೆ ಅನ್ನೋ ಚರ್ಚೆ ನಡೆದಿತ್ತು. ಆಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್.. ಅಷ್ಟೇ ಯಾಕೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಹೆಸರನ್ನ ಕೂಡ ಬಹುತೇಕರು ಹೇಳಿದ್ರು. ಆದ್ರೆ, ಇವರೆಲ್ಲರನ್ನ ಈ ಯಂಗ್ಗನ್ ಇದೀಗ ಮೀರಿಸಿದ್ದಾರೆ. ವಿಶ್ವಕಪ್ ಅಖಾಡದಲ್ಲಿ ಈ ಸೈಲೆಂಟ್ ಕಿಲ್ಲರ್ ತನ್ನ ವೈಲೆಂಟ್ ಆಟದಿಂದ ಮಿಂಚಿದ್ದಾರೆ. ಅಂದ್ಹಾಗೆ ಆ ಸೈಲೆಂಟ್ ಸೂಪರ್ ಸ್ಟಾರ್ ಬೇರಾರೂ ಅಲ್ಲ. ಒನ್ ಅಂಡ್ ಒನ್ಲೀ ವೇಗಿ ಆರ್ಷ್ದೀಪ್ ಸಿಂಗ್.
ಆರ್ಷ್ದೀಪ್ ಅಬ್ಬರ.. ಸೂಪರ್ 8ಗೆ ಟೀಮ್ ಇಂಡಿಯಾ
ಯುಎಸ್ಎ ವಿರುದ್ಧದ ಪಂದ್ಯದ ರಿಯಲ್ ಮ್ಯಾಚ್ ವಿನ್ನರ್ ವೇಗಿ ಆರ್ಷ್ದೀಪ್ ಸಿಂಗ್. ಟಫ್ ಟ್ರ್ಯಾಕ್ನಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಮಿಂಚಿದ್ರು. ಆದ್ರೆ, ಅದಕ್ಕೂ ಮುನ್ನ ಆ ಪಿಚ್ನಲ್ಲಿ ಪಂಜಾಬ್ ಪುತ್ತರ್ ಆರ್ಷ್ದೀಪ್ ಧೂಳೆಬ್ಬಿಸಿದ್ರು. ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರ್ಷ್ದೀಪ್, ಬಿರುಗಾಳಿಯಂತಾ ದಾಳಿ ಸಂಘಟಿಸಿದ್ರು.
ಇದನ್ನೂ ಓದಿ:ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ.. ದರ್ಶನ್ ವಿರುದ್ಧ ಸಿಕ್ಕಿದೆ ಎನ್ನಲಾದ 16 ಸಾಕ್ಷಿಗಳ ಲಿಸ್ಟ್ ಇಲ್ಲಿದೆ..!
ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಆರ್ಷ್ದೀಪ್ ಸಿಂಗ್ ಬೆಂಕಿಯಂಥ ದಾಳಿ ನಡೆಸಿದ್ರು. ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರ್ಷ್ದೀಪ್, ಹಾಕಿದ 4 ಓವರ್ಗಳಲ್ಲಿ ಬಿಟ್ಟು ಕೊಟ್ಟಿದ್ದು ಕೇವಲ 4 ರನ್ ಮಾತ್ರ. 2.25ರ ಎಕಾನಮಿಯಲ್ಲಿ ಬೌಲಿಂಗ್ ದಾಳಿ ನಡೆಸಿದ ಆರ್ಷ್ದೀಪ್ 4 ವಿಕೆಟ್ ಉರುಳಿಸಿದ್ರು. ಈ ಸೂಪರ್ ಸ್ಪೆಲ್ ಟೀಮ್ ಇಂಡಿಯಾ ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡಿತು.
ಪಾಕ್ ವಿರುದ್ಧವೂ ಆರ್ಷ್ದೀಪ್ ಸಿಂಗ್ ದರ್ಬಾರ್
ಬದ್ಧವೈರಿ ಪಾಕ್ ವಿರುದ್ಧದ ಪಂದ್ಯದಲ್ಲಿ 96 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್ಗಿಳಿದ ಆರ್ಷ್ದೀಪ್ ಪಾಕಿಸ್ತಾನದ ಪ್ರಬಲ ಬೌಲಿಂಗ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ರು. ನಸೀಮ್ ಶಾ, ಮೊಹಮ್ಮದ್ ಅಮೀರ್, ಶಾಹೀನ್ ಅಫ್ರಿದಿಯ ಎಸೆತಗಳನ್ನು ಎದುರಿಸಿದ ಆರ್ಷ್ದೀಪ್, 13 ಎಸೆತಗಳಲ್ಲಿ 1 ಬೌಂಡರಿ ಸಹಿತ 9 ರನ್ಗಳ ಅಮೂಲ್ಯ ಕಾಣಿಕೆ ನೀಡಿದ್ರು. ಈ ಮೂಲಕ ಟೀಮ್ ಇಂಡಿಯಾದ 4ನೇ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.
ಇದನ್ನೂ ಓದಿ:ದರ್ಶನ್ ಮತ್ತು ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಅನುಮಾನ -ಉಮಾಪತಿ ಸ್ಫೋಟಕ ಹೇಳಿಕೆ
ಕೊನೆಯ ಓವರ್ ಬೌಲಿಂಗ್ನಲ್ಲೂ ಕಮಾಲ್
ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಕೊನೆಯ 6 ಎಸೆತಗಳಲ್ಲಿ 17 ರನ್ಗಳನ್ನ ಡಿಫೆಂಡ್ ಮಾಡಿಕೊಳ್ಳಬೇಕಿತ್ತು. ಈ ವೇಳೆ ದಾಳಿಗಿಳಿದ ಆರ್ಷ್ದೀಪ್ ಸಿಂಗ್ ಮೊದಲ ಎಸೆತದಲ್ಲೇ ಡೇಂಜರಸ್ ಇಮಾದ್ ವಾಸಿಮ್ಗೆ ಗೇಟ್ಪಾಸ್ ನೀಡಿದ್ರು. ಒಟ್ಟು 11 ರನ್ಗಳನ್ನು ಬಿಟ್ಟುಕೊಟ್ಟ ಪಂಜಾಬ್ ಪುತ್ತರ್ 6 ರನ್ಗಳ ಗೆಲುವಿಗೆ ಕಾರಣರಾದ್ರು.
ಬದ್ಧವೈರಿ ಪಾಕ್ ಎದುರಿನ ಗೆಲುವಿನ ಆರ್ಷ್ದೀಪ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಕ್ರೂಶಿಯಲ್ ರೋಲ್ ಪ್ಲೇ ಮಾಡ್ತು. ಈ ಪಂದ್ಯ ಮಾತ್ರವಲ್ಲ.. ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್ಷ್ದೀಪ್ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪರ್ಫಾಮೆನ್ಸ್ ನೀಡಿದ್ದಾರೆ. 12 ಓವರ್ ಬೌಲಿಂಗ್ ಮಾಡಿ 7 ವಿಕೆಟ್ ಕಬಳಿಸಿ ಕೇವಲ 6.25ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಸೈಲೆಂಟ್ ಆಗಿಯೇ ಟೀಮ್ ಇಂಡಿಯಾದ ಗೆಲುವಿನ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
ವಿಶೇಷ ವರದಿ: ವಸಂತ್ ಮಳವತ್ತಿ
ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್