ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
ಪ್ರಕರಣದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಿರುವ ಪೊಲೀಸರು
ನಟ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟ 13 ಆರೋಪಿಗಳು ಅರೆಸ್ಟ್
ಬೆಂಗಳೂರು: ನಗರದ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ನಟ ದರ್ಶನ್ಗೆ ಸಿಗರೇಟ್ ಸೇರಿದಂತೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೆಲವು ವಕೀಲರು ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಡೆದ 48 ಗಂಟೆಗಳ ದೃಶ್ಯ ಒದಗಿಸುವಂತೆ ಮಾಹಿತಿ ಕೇಳಲಾಗಿದೆ. ವಕೀಲರಾದ ಸುಧಾ ಕಾಟ್ವ, ನರಸಿಂಹಮೂರ್ತಿ ಹಾಗೂ ಉಮಾಪತಿ ಎಂಬುವವರಿಂದ ಸಿಸಿಟಿವಿ ಒದಗಿಸುವಂತೆ ಆರ್ಟಿಐನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಮಗೆ ಠಾಣೆಯ 48 ಗಂಟೆಯಲ್ಲಿ ರೆಕಾರ್ಡ್ ಆದ ಸಿಸಿಟಿವಿ ಒದಗಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?
ಈ ಸಂಬಂಧ ವಕೀಲರಾದ ಉಮಾಪತಿ ಮಾತನಾಡಿ.. ಇಲ್ಲಿ ಆರೋಪಿಗಳಾದ ದರ್ಶನ್ ಮತ್ತೆ ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡ್ತಿದಾರೆ ಎಂಬ ವರದಿ ಇದೆ. ಇದ್ರ ಬಗ್ಗೆ ನಮಗೂ ಪೊಲೀಸರ ಮೇಲೆ ಅನುಮಾನ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಳಗಡೆ ಸಿಸಿಟಿವಿ ಅಳವಡಿಸಿರಬೇಕು. ಅವ್ರು ಠಾಣೆಯೊಳಗಡೆ ಏನೆಲ್ಲಾ ನಡೆದಿದೆ ಎಲ್ಲಾ ಸಿಸಿಟಿವಿ ಕೇಳಿದ್ದೀವಿ. ಆರ್ ಟಿಐ ಹಾಕಿ ನಾವು ಡೀಟೆಲ್ಸ್ ಕೇಳಿದ್ದೀವಿ ಎಂದರು.
ಇದನ್ನೂ ಓದಿ:‘ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತಿಯಾ ಎಂದು ಹೊಡೆದ್ವಿ..’ ಇಂಚಿಂಚು ಮಾಹಿತಿ ಬಿಚ್ಚಿಟ್ನಂತೆ ರಾಘವೇಂದ್ರ
ಒಟ್ಟು ಮೂರು ವಿಚಾರಕ್ಕೆ ನಾವು ಮಾಹಿತಿ ಕೇಳಿದ್ದೀವಿ. ಒಳಗಡೆಯ ಕಂಪ್ಲೀಟ್ ಸಿಸಿಟಿವಿ ದೃಶ್ಯಕ್ಕೆ ಮನವಿ ಮಾಡಿದ್ದೇವೆ. ಶಾಮಿಯಾನ ಕಟ್ಟಿರೋದಕ್ಕೆ ನಾವು ಮಾಹಿತಿ ಕೇಳಿದ್ದೀವಿ. ಅಲ್ಲದೇ ಒಂದೇ ಕೇಸ್ಗೆ 144 ಸೆಕ್ಷನ್ ಜಾರಿ ಮಾಡೋ ಅವಶ್ಯಕತೆ ಇಲ್ಲ. ಈ ಎಲ್ಲದರ ಬಗ್ಗೆಯೂ ನಾವು ಆರ್ಟಿಐ ಹಾಕಿ ಮಾಹಿತಿ ಕೇಳಿದ್ದೀವಿ ಎಂದು ಉಮಾಪತಿ ತಿಳಿಸಿದ್ದಾರೆ.
ಇದನ್ನೂ ಓದಿ:‘ಮೂರ್ಛೆ ಹೋದ ಅನ್ಕೊಂಡ್ವಿ, ಆದರೆ..’ ಅಸಲಿ ಸತ್ಯ ಕಕ್ಕಿದ್ನಾ ಆರೋಪಿ ಪವನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
ಪ್ರಕರಣದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಿರುವ ಪೊಲೀಸರು
ನಟ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟ 13 ಆರೋಪಿಗಳು ಅರೆಸ್ಟ್
ಬೆಂಗಳೂರು: ನಗರದ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ನಟ ದರ್ಶನ್ಗೆ ಸಿಗರೇಟ್ ಸೇರಿದಂತೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೆಲವು ವಕೀಲರು ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಡೆದ 48 ಗಂಟೆಗಳ ದೃಶ್ಯ ಒದಗಿಸುವಂತೆ ಮಾಹಿತಿ ಕೇಳಲಾಗಿದೆ. ವಕೀಲರಾದ ಸುಧಾ ಕಾಟ್ವ, ನರಸಿಂಹಮೂರ್ತಿ ಹಾಗೂ ಉಮಾಪತಿ ಎಂಬುವವರಿಂದ ಸಿಸಿಟಿವಿ ಒದಗಿಸುವಂತೆ ಆರ್ಟಿಐನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಮಗೆ ಠಾಣೆಯ 48 ಗಂಟೆಯಲ್ಲಿ ರೆಕಾರ್ಡ್ ಆದ ಸಿಸಿಟಿವಿ ಒದಗಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?
ಈ ಸಂಬಂಧ ವಕೀಲರಾದ ಉಮಾಪತಿ ಮಾತನಾಡಿ.. ಇಲ್ಲಿ ಆರೋಪಿಗಳಾದ ದರ್ಶನ್ ಮತ್ತೆ ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡ್ತಿದಾರೆ ಎಂಬ ವರದಿ ಇದೆ. ಇದ್ರ ಬಗ್ಗೆ ನಮಗೂ ಪೊಲೀಸರ ಮೇಲೆ ಅನುಮಾನ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಳಗಡೆ ಸಿಸಿಟಿವಿ ಅಳವಡಿಸಿರಬೇಕು. ಅವ್ರು ಠಾಣೆಯೊಳಗಡೆ ಏನೆಲ್ಲಾ ನಡೆದಿದೆ ಎಲ್ಲಾ ಸಿಸಿಟಿವಿ ಕೇಳಿದ್ದೀವಿ. ಆರ್ ಟಿಐ ಹಾಕಿ ನಾವು ಡೀಟೆಲ್ಸ್ ಕೇಳಿದ್ದೀವಿ ಎಂದರು.
ಇದನ್ನೂ ಓದಿ:‘ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತಿಯಾ ಎಂದು ಹೊಡೆದ್ವಿ..’ ಇಂಚಿಂಚು ಮಾಹಿತಿ ಬಿಚ್ಚಿಟ್ನಂತೆ ರಾಘವೇಂದ್ರ
ಒಟ್ಟು ಮೂರು ವಿಚಾರಕ್ಕೆ ನಾವು ಮಾಹಿತಿ ಕೇಳಿದ್ದೀವಿ. ಒಳಗಡೆಯ ಕಂಪ್ಲೀಟ್ ಸಿಸಿಟಿವಿ ದೃಶ್ಯಕ್ಕೆ ಮನವಿ ಮಾಡಿದ್ದೇವೆ. ಶಾಮಿಯಾನ ಕಟ್ಟಿರೋದಕ್ಕೆ ನಾವು ಮಾಹಿತಿ ಕೇಳಿದ್ದೀವಿ. ಅಲ್ಲದೇ ಒಂದೇ ಕೇಸ್ಗೆ 144 ಸೆಕ್ಷನ್ ಜಾರಿ ಮಾಡೋ ಅವಶ್ಯಕತೆ ಇಲ್ಲ. ಈ ಎಲ್ಲದರ ಬಗ್ಗೆಯೂ ನಾವು ಆರ್ಟಿಐ ಹಾಕಿ ಮಾಹಿತಿ ಕೇಳಿದ್ದೀವಿ ಎಂದು ಉಮಾಪತಿ ತಿಳಿಸಿದ್ದಾರೆ.
ಇದನ್ನೂ ಓದಿ:‘ಮೂರ್ಛೆ ಹೋದ ಅನ್ಕೊಂಡ್ವಿ, ಆದರೆ..’ ಅಸಲಿ ಸತ್ಯ ಕಕ್ಕಿದ್ನಾ ಆರೋಪಿ ಪವನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ