ಅಮೆರಿಕದಿಂದ ವೆಸ್ಟ್ ಇಂಡೀಸ್ಗೆ ಹೊರಟಿರೋ ಟೀಮ್ ಇಂಡಿಯಾ
ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನ ಹೊಗೆಯಾಡ್ತಿದೆಯಾ?
ತಂಡದಿಂದ ಅಂತರ ಕಾಯ್ದುಕೊಂಡ ಪಂಜಾಬ್ ಪುತ್ತರ್ ಶುಭ್ಮನ್
ಟೀಮ್ ಇಂಡಿಯಾ ಸೂಪರ್- 8ಗೆ ಕಾಲಿಟ್ಟ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನ ಸ್ಪೋಟವಾಗಿದೆ. ಅಶಿಸ್ತಿನ ಕಾರಣಕ್ಕೆ ಶುಭಮನ್ ಗಿಲ್ ತಲೆದಂಡ ಎಂಬ ಸುದ್ದಿ ಸೆನ್ಸೇಷನ್ ಸೃಷ್ಟಿಸಿದೆ. ಎಲ್ಲ ಆಟಗಾರರು ಅಮೆರಿಕದಿಂದ ವೆಸ್ಟ್ ಇಂಡೀಸ್ಗೆ ಹೊರಟ್ರೆ, ಶುಭ್ಮನ್ ಗಿಲ್ ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ. ಅಷ್ಟಕ್ಕೂ ಗಿಲ್ಗೆ ಗೇಟ್ಪಾಸ್ ನೀಡಿರೋದ್ಯಾಕೆ?.
ಚುಟುಕು ವಿಶ್ವಕಪ್ ಸಮರದಲ್ಲಿ ಟೀಮ್ ಇಂಡಿಯಾದ ಅಬ್ಬರ ಜೋರಾಗಿದೆ. ಬ್ಯಾಕ್ ಟು ಬ್ಯಾಕ್ ಜಯದೊಂದಿಗೆ ಸೂಪರ್- 8 ಹಂತಕ್ಕೆ ಎಂಟ್ರಿ ಕೊಟ್ಟಾಗಿದೆ. ಅಮೆರಿಕದಲ್ಲಿ ಅಬ್ಬರಿಸಿರೋ ಟೀಮ್ ಇಂಡಿಯಾ, ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದೆ. ಜಯದ ಆತ್ಮವಿಶ್ವಾಸದಲ್ಲಿರೋ ಆಟಗಾರರು 17 ವರ್ಷಗಳ ಟಿ20 ವಿಶ್ವಕಪ್ ಗೆಲುವಿನ ಕೊರಗಿಗೆ ಬ್ರೇಕ್ ಹಾಕಲು ಪಣತೊಟ್ಟಿದ್ದಾರೆ.
ಟೀಮ್ ಇಂಡಿಯಾದಲ್ಲಿ ಮತ್ತೆ ಅಸಮಾಧಾನದ ಹೊಗೆ.?
ಬ್ಯಾಟಿಂಗ್ ವೈಫಲ್ಯದಂತ ದೊಡ್ಡ ವೀಕ್ನೆಸ್ನ ಹೊರತಾಗಿ ಟೀಮ್ ಇಂಡಿಯಾ ಸೂಪರ್- 8 ಹಂತಕ್ಕೆ ಕ್ವಾಲಿಫೈ ಆಗಿದೆ. ಅದೃಷ್ಟವೋ.. ದೇವರ ಆಶಿರ್ವಾದವೋ.. ಎಲ್ಲ ಸರಿಯಾಗಿ ಹೋಗ್ತಿದೆ. ಈ ಬಾರಿ ಟ್ರೋಫಿ ನಮ್ದಾಗುತ್ತೆ ಅಂತಾ ಫ್ಯಾನ್ಸ್ ಕನಸು ಕಾಣ್ತಿದ್ದಾರೆ. ಈ ನಡುವೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ.
ರಿಸರ್ವ್ ಪ್ಲೇಯರ್ ಶುಭ್ಮನ್ ಗಿಲ್ಗೆ ಶಾಕ್.?
15 ಜನ ಆಟಗಾರರ ಜೊತೆಗೆ ನಾಲ್ವರು ರಿಸರ್ವ್ ಪ್ಲೇಯರ್ಸ್ ಕೂಡ ಅಮೆರಿಕದಲ್ಲಿ ಟೀಮ್ ಇಂಡಿಯಾ ಜೊತೆಗಿದ್ದಾರೆ. ಅವ್ರಲ್ಲಿ ಶುಭಮನ್ ಗಿಲ್ ಕೂಡ ಒಬ್ಬರು. ಟೂರ್ನಿಯ ಅಂತ್ಯದವರೆಗೂ ಇವ್ರು ತಂಡದ ಜೊತೆಯಲ್ಲಿ ಇರ್ತಾರೆ ಅನ್ನೋದು ಮೊದಲೇ ಇದ್ದ ಪ್ಲಾನ್ ಆಗಿತ್ತು. ಆದ್ರೀಗ ಆ ಪ್ಲಾನ್ನಲ್ಲಿ ಸಡನ್ ಚೈಂಜ್ ಆಗಿದೆ. ಶುಭ್ಮನ್ ಗಿಲ್, ಆವೇಶ್ ಖಾನ್ರನ್ನ ವಾಪಾಸ್ ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಇಡೀ ತಂಡ ಅಮೆರಿಕಾದಿಂದ ವೆಸ್ಟ್ ಇಂಡಿಸ್ ಕಡೆಗೆ ಪ್ರಯಾಣ ಬೆಳೆಸಿದ್ರೆ, ಇವರಿಬ್ಬರು ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ.
ಅಶಿಸ್ತಿಗೆ ಯಂಗ್ ಬ್ಯಾಟರ್ ಶುಭ್ಮನ್ ಗಿಲ್ ತಲೆದಂಡ.?
ಇಬ್ಬರ ವಾಪಾಸ್ಸಾತಿಗೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಿವೆ. ಟ್ರಾವೆಲಿಂಗ್ ಸಮಸ್ಯೆ ಎಂಬ ಕಾರಣಗಳನ್ನ ಬಿಸಿಸಿಐ ಮೂಲಗಳು ನೀಡಿವೆ. ಇದು ಆವೇಶ್ ಖಾನ್ ವಿಚಾರದಲ್ಲಿ ನಿಜ ಇರಬಹುದು ಆದ್ರೆ, ಶುಭ್ಮನ್ ಗಿಲ್ ವಿಚಾರದಲ್ಲಿ ಅಲ್ಲ ಅಂತಿದೆ ಮತ್ತೊಂದು ಮೂಲ. ಅಶಸ್ತಿನ ನಡೆಯ ಕಾರಣಕ್ಕೆ ಶುಭ್ಮನ್ ಗಿಲ್ಗೆ ಗೇಟ್ಪಾಸ್ ನೀಡಲಾಗಿದ್ಯಂತೆ.
ಶುಭ್ಮನ್ ಗಿಲ್ಗೆ ಮ್ಯಾನೇಜ್ಮೆಂಟ್ ಮೇಲೆ ಮುನಿಸು.?
ಭಾರತ ತಂಡ ಅಮೆರಿಕಗೆ ತೆರಳಿದ ಬಳಿಕ ಶುಭ್ಮನ್ ಗಿಲ್ ನಡೆ ತುಂಬಾ ವಿಚಿತ್ರವಾಗಿತ್ತು. ತಂಡದಿಂದ ಅಂತರಕಾಯ್ದುಕೊಂಡಿದ್ದ ಗಿಲ್, ಆರಂಭದಲ್ಲಿ ನಡೆದ ಫೋಟೋಶೂಟ್, ಮೊದಲ ಪ್ರಾಕ್ಟಿಸ್ ಸೆಷನ್ ಹೊರತಾಗಿ ಹೆಚ್ಚು ತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ರಿಸರ್ವ್ ಪ್ಲೇಯರ್ಗಳಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್ ತಂಡಕ್ಕೆ ಚಿಯರ್ ಮಾಡ್ತಿದ್ರೆ, ಶುಭ್ಮನ್ ಅಡ್ರೆಸ್ಸೇ ಇರಲಿಲ್ಲ. ಗಿಲ್ ಮುಖ್ಯ ತಂಡಕ್ಕೆ ಸೆಲೆಕ್ಟ್ ಮಾಡಿಲ್ಲ ಅನ್ನೋ ಕಾರಣಕ್ಕೆ ಅಸಮಾಧಾನಗೊಂಡಿದ್ದಾರಂತೆ. ಈ ಕಾರಣಕ್ಕೆ ತಂಡದಿಂದ ಅಂತರ ಕಾಯ್ದುಕೊಂಡಿರೋದು ಎನ್ನಲಾಗ್ತಿದೆ.
ಇದನ್ನೂ ಓದಿ: ದರ್ಶನ್ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?
ತಂಡದಿಂದ ದೂರ.. ಬ್ಯುಸಿನೆಸ್ ಕಡೆಗೆ ಗಮನ.!
ತಂಡದಿಂದ ಅಂತರ ಕಾಯ್ದುಕೊಂಡ ಶುಭ್ಮನ್ ಗಿಲ್, ತಮ್ಮ ವೈಯಕ್ತಿಕ ಬ್ಯುಸಿನೆಸ್ ಕಡೆಗೆ ಹೆಚ್ಚಿನ ಟೈಮ್ ಸ್ಪೆಂಡ್ ಮಾಡಿದ್ರು. ವಿಶ್ವಕಪ್ಗೆಂದು ತಂಡದೊಂದಿಗೆ ತೆರಳಿ ಕೆಲ ಖಾಸಗಿ ಕಂಪನಿಗಳ ಮಾತುಕತೆಯಲ್ಲಿ ಬ್ಯುಸಿಯಾಗಿದ್ರು. ವೀಕಸ್ ವೆಂಚರ್ಸ್ ಎಂಬ ಕಂಪನಿ ಜೊತೆ ಟೈ ಅಪ್ ಆಗಿ ಹೂಡಿಕೆಯನ್ನೂ ಮಾಡಿದ್ರು. ರಿಸರ್ವ್ ಪ್ಲೇಯರ್ ಆಗಿದ್ದುಕೊಂಡು ತಂಡದೊಂದಿಗೆ ಇರದೇ, ವೈಯಕ್ತಿಕ ಕೆಲಸಗಳಲ್ಲಿ ಗಿಲ್ ಬ್ಯುಸಿಯಾಗಿದ್ರಿಂದ ಮ್ಯಾನೇಜ್ಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ರಂತೆ. ಹೀಗಾಗಿ ಅಶಿಸ್ತಿನ ವರ್ತನೆಯ ಕಾರಣ ನೀಡಿ ಗಿಲ್ ಗೇಟ್ಪಾಸ್ ನೀಡಲಾಗ್ತಿದೆ ಎಂಬ ಟಾಕ್ ಶುರುವಾಗಿದೆ.
ಕ್ಯಾಪ್ಟನ್ ರೋಹಿತ್ ವಿರುದ್ಧ ರೊಚ್ಚಿಗೆದ್ರಾ ಶುಭ್ಮನ್.?
ನಾಯಕ ರೋಹಿತ್ ಶರ್ಮಾ ಮೇಲೆ ಶುಭ್ಮನ್ ಗಿಲ್ ಅಸಮಾಧಾನಗೊಂಡಿದ್ದಾರಾ ಎಂಬ ಚರ್ಚೆ ಸದ್ಯ ನಡೀತಿದೆ. ಗಿಲ್ರನ್ನ ಭಾರತಕ್ಕೆ ವಾಪಾಸ್ ಕಳಿಸೋ ಸುದ್ದಿ ಹೊರಬಿದ್ದ ಬೆನ್ನಲ್ಲೆ, ಇನ್ಸ್ಸ್ಟಾಗ್ರಾಂನಲ್ಲಿ ರೋಹಿತ್ರನ್ನ ಅನ್ಫಾಲೋ ಮಾಡಿದ್ದಾರೆ. ಇದು, ಶುಭ್ಮನ್ ಗಿಲ್ ತಲೆದಂಡ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ವಿವಾದ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಅಮೆರಿಕದಿಂದ ವೆಸ್ಟ್ ಇಂಡೀಸ್ಗೆ ಹೊರಟಿರೋ ಟೀಮ್ ಇಂಡಿಯಾ
ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನ ಹೊಗೆಯಾಡ್ತಿದೆಯಾ?
ತಂಡದಿಂದ ಅಂತರ ಕಾಯ್ದುಕೊಂಡ ಪಂಜಾಬ್ ಪುತ್ತರ್ ಶುಭ್ಮನ್
ಟೀಮ್ ಇಂಡಿಯಾ ಸೂಪರ್- 8ಗೆ ಕಾಲಿಟ್ಟ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನ ಸ್ಪೋಟವಾಗಿದೆ. ಅಶಿಸ್ತಿನ ಕಾರಣಕ್ಕೆ ಶುಭಮನ್ ಗಿಲ್ ತಲೆದಂಡ ಎಂಬ ಸುದ್ದಿ ಸೆನ್ಸೇಷನ್ ಸೃಷ್ಟಿಸಿದೆ. ಎಲ್ಲ ಆಟಗಾರರು ಅಮೆರಿಕದಿಂದ ವೆಸ್ಟ್ ಇಂಡೀಸ್ಗೆ ಹೊರಟ್ರೆ, ಶುಭ್ಮನ್ ಗಿಲ್ ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ. ಅಷ್ಟಕ್ಕೂ ಗಿಲ್ಗೆ ಗೇಟ್ಪಾಸ್ ನೀಡಿರೋದ್ಯಾಕೆ?.
ಚುಟುಕು ವಿಶ್ವಕಪ್ ಸಮರದಲ್ಲಿ ಟೀಮ್ ಇಂಡಿಯಾದ ಅಬ್ಬರ ಜೋರಾಗಿದೆ. ಬ್ಯಾಕ್ ಟು ಬ್ಯಾಕ್ ಜಯದೊಂದಿಗೆ ಸೂಪರ್- 8 ಹಂತಕ್ಕೆ ಎಂಟ್ರಿ ಕೊಟ್ಟಾಗಿದೆ. ಅಮೆರಿಕದಲ್ಲಿ ಅಬ್ಬರಿಸಿರೋ ಟೀಮ್ ಇಂಡಿಯಾ, ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದೆ. ಜಯದ ಆತ್ಮವಿಶ್ವಾಸದಲ್ಲಿರೋ ಆಟಗಾರರು 17 ವರ್ಷಗಳ ಟಿ20 ವಿಶ್ವಕಪ್ ಗೆಲುವಿನ ಕೊರಗಿಗೆ ಬ್ರೇಕ್ ಹಾಕಲು ಪಣತೊಟ್ಟಿದ್ದಾರೆ.
ಟೀಮ್ ಇಂಡಿಯಾದಲ್ಲಿ ಮತ್ತೆ ಅಸಮಾಧಾನದ ಹೊಗೆ.?
ಬ್ಯಾಟಿಂಗ್ ವೈಫಲ್ಯದಂತ ದೊಡ್ಡ ವೀಕ್ನೆಸ್ನ ಹೊರತಾಗಿ ಟೀಮ್ ಇಂಡಿಯಾ ಸೂಪರ್- 8 ಹಂತಕ್ಕೆ ಕ್ವಾಲಿಫೈ ಆಗಿದೆ. ಅದೃಷ್ಟವೋ.. ದೇವರ ಆಶಿರ್ವಾದವೋ.. ಎಲ್ಲ ಸರಿಯಾಗಿ ಹೋಗ್ತಿದೆ. ಈ ಬಾರಿ ಟ್ರೋಫಿ ನಮ್ದಾಗುತ್ತೆ ಅಂತಾ ಫ್ಯಾನ್ಸ್ ಕನಸು ಕಾಣ್ತಿದ್ದಾರೆ. ಈ ನಡುವೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ.
ರಿಸರ್ವ್ ಪ್ಲೇಯರ್ ಶುಭ್ಮನ್ ಗಿಲ್ಗೆ ಶಾಕ್.?
15 ಜನ ಆಟಗಾರರ ಜೊತೆಗೆ ನಾಲ್ವರು ರಿಸರ್ವ್ ಪ್ಲೇಯರ್ಸ್ ಕೂಡ ಅಮೆರಿಕದಲ್ಲಿ ಟೀಮ್ ಇಂಡಿಯಾ ಜೊತೆಗಿದ್ದಾರೆ. ಅವ್ರಲ್ಲಿ ಶುಭಮನ್ ಗಿಲ್ ಕೂಡ ಒಬ್ಬರು. ಟೂರ್ನಿಯ ಅಂತ್ಯದವರೆಗೂ ಇವ್ರು ತಂಡದ ಜೊತೆಯಲ್ಲಿ ಇರ್ತಾರೆ ಅನ್ನೋದು ಮೊದಲೇ ಇದ್ದ ಪ್ಲಾನ್ ಆಗಿತ್ತು. ಆದ್ರೀಗ ಆ ಪ್ಲಾನ್ನಲ್ಲಿ ಸಡನ್ ಚೈಂಜ್ ಆಗಿದೆ. ಶುಭ್ಮನ್ ಗಿಲ್, ಆವೇಶ್ ಖಾನ್ರನ್ನ ವಾಪಾಸ್ ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಇಡೀ ತಂಡ ಅಮೆರಿಕಾದಿಂದ ವೆಸ್ಟ್ ಇಂಡಿಸ್ ಕಡೆಗೆ ಪ್ರಯಾಣ ಬೆಳೆಸಿದ್ರೆ, ಇವರಿಬ್ಬರು ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ.
ಅಶಿಸ್ತಿಗೆ ಯಂಗ್ ಬ್ಯಾಟರ್ ಶುಭ್ಮನ್ ಗಿಲ್ ತಲೆದಂಡ.?
ಇಬ್ಬರ ವಾಪಾಸ್ಸಾತಿಗೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಿವೆ. ಟ್ರಾವೆಲಿಂಗ್ ಸಮಸ್ಯೆ ಎಂಬ ಕಾರಣಗಳನ್ನ ಬಿಸಿಸಿಐ ಮೂಲಗಳು ನೀಡಿವೆ. ಇದು ಆವೇಶ್ ಖಾನ್ ವಿಚಾರದಲ್ಲಿ ನಿಜ ಇರಬಹುದು ಆದ್ರೆ, ಶುಭ್ಮನ್ ಗಿಲ್ ವಿಚಾರದಲ್ಲಿ ಅಲ್ಲ ಅಂತಿದೆ ಮತ್ತೊಂದು ಮೂಲ. ಅಶಸ್ತಿನ ನಡೆಯ ಕಾರಣಕ್ಕೆ ಶುಭ್ಮನ್ ಗಿಲ್ಗೆ ಗೇಟ್ಪಾಸ್ ನೀಡಲಾಗಿದ್ಯಂತೆ.
ಶುಭ್ಮನ್ ಗಿಲ್ಗೆ ಮ್ಯಾನೇಜ್ಮೆಂಟ್ ಮೇಲೆ ಮುನಿಸು.?
ಭಾರತ ತಂಡ ಅಮೆರಿಕಗೆ ತೆರಳಿದ ಬಳಿಕ ಶುಭ್ಮನ್ ಗಿಲ್ ನಡೆ ತುಂಬಾ ವಿಚಿತ್ರವಾಗಿತ್ತು. ತಂಡದಿಂದ ಅಂತರಕಾಯ್ದುಕೊಂಡಿದ್ದ ಗಿಲ್, ಆರಂಭದಲ್ಲಿ ನಡೆದ ಫೋಟೋಶೂಟ್, ಮೊದಲ ಪ್ರಾಕ್ಟಿಸ್ ಸೆಷನ್ ಹೊರತಾಗಿ ಹೆಚ್ಚು ತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ರಿಸರ್ವ್ ಪ್ಲೇಯರ್ಗಳಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್ ತಂಡಕ್ಕೆ ಚಿಯರ್ ಮಾಡ್ತಿದ್ರೆ, ಶುಭ್ಮನ್ ಅಡ್ರೆಸ್ಸೇ ಇರಲಿಲ್ಲ. ಗಿಲ್ ಮುಖ್ಯ ತಂಡಕ್ಕೆ ಸೆಲೆಕ್ಟ್ ಮಾಡಿಲ್ಲ ಅನ್ನೋ ಕಾರಣಕ್ಕೆ ಅಸಮಾಧಾನಗೊಂಡಿದ್ದಾರಂತೆ. ಈ ಕಾರಣಕ್ಕೆ ತಂಡದಿಂದ ಅಂತರ ಕಾಯ್ದುಕೊಂಡಿರೋದು ಎನ್ನಲಾಗ್ತಿದೆ.
ಇದನ್ನೂ ಓದಿ: ದರ್ಶನ್ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?
ತಂಡದಿಂದ ದೂರ.. ಬ್ಯುಸಿನೆಸ್ ಕಡೆಗೆ ಗಮನ.!
ತಂಡದಿಂದ ಅಂತರ ಕಾಯ್ದುಕೊಂಡ ಶುಭ್ಮನ್ ಗಿಲ್, ತಮ್ಮ ವೈಯಕ್ತಿಕ ಬ್ಯುಸಿನೆಸ್ ಕಡೆಗೆ ಹೆಚ್ಚಿನ ಟೈಮ್ ಸ್ಪೆಂಡ್ ಮಾಡಿದ್ರು. ವಿಶ್ವಕಪ್ಗೆಂದು ತಂಡದೊಂದಿಗೆ ತೆರಳಿ ಕೆಲ ಖಾಸಗಿ ಕಂಪನಿಗಳ ಮಾತುಕತೆಯಲ್ಲಿ ಬ್ಯುಸಿಯಾಗಿದ್ರು. ವೀಕಸ್ ವೆಂಚರ್ಸ್ ಎಂಬ ಕಂಪನಿ ಜೊತೆ ಟೈ ಅಪ್ ಆಗಿ ಹೂಡಿಕೆಯನ್ನೂ ಮಾಡಿದ್ರು. ರಿಸರ್ವ್ ಪ್ಲೇಯರ್ ಆಗಿದ್ದುಕೊಂಡು ತಂಡದೊಂದಿಗೆ ಇರದೇ, ವೈಯಕ್ತಿಕ ಕೆಲಸಗಳಲ್ಲಿ ಗಿಲ್ ಬ್ಯುಸಿಯಾಗಿದ್ರಿಂದ ಮ್ಯಾನೇಜ್ಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ರಂತೆ. ಹೀಗಾಗಿ ಅಶಿಸ್ತಿನ ವರ್ತನೆಯ ಕಾರಣ ನೀಡಿ ಗಿಲ್ ಗೇಟ್ಪಾಸ್ ನೀಡಲಾಗ್ತಿದೆ ಎಂಬ ಟಾಕ್ ಶುರುವಾಗಿದೆ.
ಕ್ಯಾಪ್ಟನ್ ರೋಹಿತ್ ವಿರುದ್ಧ ರೊಚ್ಚಿಗೆದ್ರಾ ಶುಭ್ಮನ್.?
ನಾಯಕ ರೋಹಿತ್ ಶರ್ಮಾ ಮೇಲೆ ಶುಭ್ಮನ್ ಗಿಲ್ ಅಸಮಾಧಾನಗೊಂಡಿದ್ದಾರಾ ಎಂಬ ಚರ್ಚೆ ಸದ್ಯ ನಡೀತಿದೆ. ಗಿಲ್ರನ್ನ ಭಾರತಕ್ಕೆ ವಾಪಾಸ್ ಕಳಿಸೋ ಸುದ್ದಿ ಹೊರಬಿದ್ದ ಬೆನ್ನಲ್ಲೆ, ಇನ್ಸ್ಸ್ಟಾಗ್ರಾಂನಲ್ಲಿ ರೋಹಿತ್ರನ್ನ ಅನ್ಫಾಲೋ ಮಾಡಿದ್ದಾರೆ. ಇದು, ಶುಭ್ಮನ್ ಗಿಲ್ ತಲೆದಂಡ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ವಿವಾದ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ