newsfirstkannada.com

ದರ್ಶನ್​ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ಸಂಕಷ್ಟ? ನೋಟಿಸ್​ ಕಳುಹಿಸಿ ತನಿಖೆಗೆ ಹಾಜರಾಗಿ ಎಂದ ಪೊಲೀಸರು!

Share :

Published June 17, 2024 at 1:34pm

    ಹಾಸ್ಯ ನಟ ಚಿಕ್ಕಣ್ಣನಿಗೂ ಈ ಕೊಲೆ ಕೇಸ್​ಗೂ ಸಂಬಂಧವಿದೆಯಾ?

    ಚಿಕ್ಕಣ್ಣನಿಗೆ ಪೊಲೀಸರು ನೋಟಿಸ್​ ಕಳುಹಿಸಿದ್ಯಾಕೆ ಗೊತ್ತಾ?

    ರೇಣುಕಾಸ್ವಾಮಿ ಹತ್ಯೆ ದಿನ ಏನಾಯ್ತು ಅಂದ್ರೆ.. ಈ ಸ್ಟೋರಿ ಓದಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್, ನಟಿ ಪವಿತ್ರ ಗೌಡ ಮತ್ತು ತಂಡವನ್ನು ಅರೆಸ್ಟ್​ ಮಾಡಿದ್ದಾರೆ. ಇದೀಗ ಪ್ರಕರಣ ತನಿಖೆ ತೀವ್ರಗೊಂಡಿದ್ದು ಹಾಸ್ಯ ನಟ ಚಿಕ್ಕಣ್ಣಗೂ ಪೊಲೀಸರು ​ನೋಟಿಸ್ ಕಳುಹಿಸಿದ್ದಾರೆ.

ಚಿತ್ರದುರ್ಗದ ಮೂಲದ ರೇಣುಕಾಸ್ವಾನಿಯನ್ನು ದರ್ಶನ್​ ಆ್ಯಂಡ್​ ಗ್ಯಾಂಗ್​ ಬರ್ಬರವಾಗಿ ಕೊಲೆ ಮಾಡಿದ್ರು. ಈ ಪ್ರಕರಣದಲ್ಲಿ 19 ಜನರು ಅರೆಸ್ಟ್​ ಆಗಿದ್ದಾರೆ. ಇದೀಗ ಕನ್ನಡದ ಹಾಸ್ಯ ನಟ ಚಿಕ್ಕಣ್ಣನಿಗೂ ಪಶ್ಚಿಮ ವಿಭಾಗ ಪೊಲೀಸರು ನೋಟಿಸ್​ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಅಷ್ಟಕ್ಕೂ ಚಿಕ್ಕಣ್ಣ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ರಾ?. ಪೊಲೀಸರು ಹಾಸ್ಯ ನಟನಿಗೆ ಯಾಕೆ ನೋಟಿಸ್​ ಕಳುಹಿಸಿದ್ರು? ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಸುದೀಪ್​ ಬೆನ್ನಲ್ಲೇ ದರ್ಶನ್​ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್​ ಸ್ಟಾರ್​! ಏನಂದ್ರು?

ಚಿಕ್ಕಣ್ಣನಿಗೆ ಯಾಕೆ ನೋಟಿಸ್​?

ದರ್ಶನ್ ಅಂಡ್ ಟೀಂ ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿಬ್ರೂಕ್ ನಲ್ಲಿ ಪಾರ್ಟಿ ಮಾಡ್ತಿದ್ದರು. ಈ ವೇಳೆ ದರ್ಶನ್ ಜೊತೆ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

ಸದ್ಯ ಹಾಸ್ಯ ನಟನಿಗೆ ನೋಟಿಸ್​​ ಕಳುಹಿಸಿರುವ ಪೊಲೀಸರು  ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್ ನಲ್ಲಿ ಏನಾದ್ರು ಚರ್ಚೆಯಾಗಿತ್ತಾ? ಅಂತಾ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಹಾಸ್ಯ ನಟನ ಜೊತೆಗೆ ಓರ್ವ ನಿರ್ಮಾಪಕರು ಕೂಡ ಇದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ಸಂಕಷ್ಟ? ನೋಟಿಸ್​ ಕಳುಹಿಸಿ ತನಿಖೆಗೆ ಹಾಜರಾಗಿ ಎಂದ ಪೊಲೀಸರು!

https://newsfirstlive.com/wp-content/uploads/2024/06/Chikkanna.jpg

    ಹಾಸ್ಯ ನಟ ಚಿಕ್ಕಣ್ಣನಿಗೂ ಈ ಕೊಲೆ ಕೇಸ್​ಗೂ ಸಂಬಂಧವಿದೆಯಾ?

    ಚಿಕ್ಕಣ್ಣನಿಗೆ ಪೊಲೀಸರು ನೋಟಿಸ್​ ಕಳುಹಿಸಿದ್ಯಾಕೆ ಗೊತ್ತಾ?

    ರೇಣುಕಾಸ್ವಾಮಿ ಹತ್ಯೆ ದಿನ ಏನಾಯ್ತು ಅಂದ್ರೆ.. ಈ ಸ್ಟೋರಿ ಓದಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್, ನಟಿ ಪವಿತ್ರ ಗೌಡ ಮತ್ತು ತಂಡವನ್ನು ಅರೆಸ್ಟ್​ ಮಾಡಿದ್ದಾರೆ. ಇದೀಗ ಪ್ರಕರಣ ತನಿಖೆ ತೀವ್ರಗೊಂಡಿದ್ದು ಹಾಸ್ಯ ನಟ ಚಿಕ್ಕಣ್ಣಗೂ ಪೊಲೀಸರು ​ನೋಟಿಸ್ ಕಳುಹಿಸಿದ್ದಾರೆ.

ಚಿತ್ರದುರ್ಗದ ಮೂಲದ ರೇಣುಕಾಸ್ವಾನಿಯನ್ನು ದರ್ಶನ್​ ಆ್ಯಂಡ್​ ಗ್ಯಾಂಗ್​ ಬರ್ಬರವಾಗಿ ಕೊಲೆ ಮಾಡಿದ್ರು. ಈ ಪ್ರಕರಣದಲ್ಲಿ 19 ಜನರು ಅರೆಸ್ಟ್​ ಆಗಿದ್ದಾರೆ. ಇದೀಗ ಕನ್ನಡದ ಹಾಸ್ಯ ನಟ ಚಿಕ್ಕಣ್ಣನಿಗೂ ಪಶ್ಚಿಮ ವಿಭಾಗ ಪೊಲೀಸರು ನೋಟಿಸ್​ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಅಷ್ಟಕ್ಕೂ ಚಿಕ್ಕಣ್ಣ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ರಾ?. ಪೊಲೀಸರು ಹಾಸ್ಯ ನಟನಿಗೆ ಯಾಕೆ ನೋಟಿಸ್​ ಕಳುಹಿಸಿದ್ರು? ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಸುದೀಪ್​ ಬೆನ್ನಲ್ಲೇ ದರ್ಶನ್​ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್​ ಸ್ಟಾರ್​! ಏನಂದ್ರು?

ಚಿಕ್ಕಣ್ಣನಿಗೆ ಯಾಕೆ ನೋಟಿಸ್​?

ದರ್ಶನ್ ಅಂಡ್ ಟೀಂ ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿಬ್ರೂಕ್ ನಲ್ಲಿ ಪಾರ್ಟಿ ಮಾಡ್ತಿದ್ದರು. ಈ ವೇಳೆ ದರ್ಶನ್ ಜೊತೆ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

ಸದ್ಯ ಹಾಸ್ಯ ನಟನಿಗೆ ನೋಟಿಸ್​​ ಕಳುಹಿಸಿರುವ ಪೊಲೀಸರು  ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್ ನಲ್ಲಿ ಏನಾದ್ರು ಚರ್ಚೆಯಾಗಿತ್ತಾ? ಅಂತಾ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಹಾಸ್ಯ ನಟನ ಜೊತೆಗೆ ಓರ್ವ ನಿರ್ಮಾಪಕರು ಕೂಡ ಇದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More