ದಾನ ಮಾಡಬೇಕು ಅಥವಾ ಯಾರಿಗಾದರೂ ಸಹಾಯ ಮಾಡಿ
ಮಧುಮೇಹಿಗಳಿಗೆ ತುಂಬಾ ತೊಂದರೆಯಾಗುವ ಸಂಭವವಿದೆ
ನೀವು ಆದಾಯವನ್ನ ನೋಡಿಕೊಂಡು ಖರ್ಚಿಗೆ ಮುಂದಾಗಬೇಕು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮಗೆ ಖ್ಯಾತಿ ಹೆಚ್ಚಾಗಬಹುದು
- ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಒಳ್ಳೆಯದಲ್ಲ
- ಇಂದು ನಿಮ್ಮ ನ್ಯೂನ್ಯತೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ
- ಮನೆಯ ವಿಚಾರದಲ್ಲಿ ಬೇರೆಯವರ ಸಲಹೆ ಬೇಡ
- ಹೊಟ್ಟೆಗೆ ಸಂಬಂಧಿಸಿದ ತೊಂದರೆ ಎದುರಾಗಬಹುದು
- ಸಂಚಾರಿ ನಿಯಮಗಳನ್ನು ಪಾಲಿಸಿ
- ಹರಿದ್ರಾ ಗಣಪತಿಯನ್ನು ಆರಾಧನೆ ಮಾಡಿ
ವೃಷಭ
- ಜನರು ನಿಮ್ಮ ಚಂಚಲ ಸ್ವಭಾವವನ್ನು ಟೀಕಿಸುತ್ತಾರೆ
- ವ್ಯವಹಾರದಲ್ಲಿ ಕೆಲವು ತೊಂದರೆಗಳಾಗಬಹುದು ಎಚ್ಚರವಹಿಸಿ
- ಇಂದು ನಿಮ್ಮ ಕೆಲಸ ಅರ್ಧಕ್ಕೆ ನಿಂತು ಹೋಗಬಹುದು
- ತರಕಾರಿ ವ್ಯಾಪಾರ ಮಾಡುವವರಿಗೆ ಅನುಕೂಲವಿದೆ
- ಯಾವುದೇ ಕೆಲಸಕ್ಕೆ ಹಣ ಖರ್ಚು ಮಾಡುವವರಿದ್ದರೆ ಮಧ್ಯಾಹ್ನದ ನಂತರ ಮಾಡಿ
- ವೀರಭದ್ರ ಸ್ವಾಮಿಯನ್ನು ಆರಾಧನೆ ಮಾಡಿ
ಮಿಥುನ
- ಮಕ್ಕಳ ಸಾಧನೆಯಿಂದ ಸಂತೋಷ ಸಿಗುತ್ತದೆ
- ಹೊಸ ಆದಾಯದ ಮೂಲ ಸಿಗಬಹುದು
- ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು, ದೇವಾಲಯಾದಿಗಳ ದರ್ಶನ ಹೆಚ್ಚಾಗಬಹುದು
- ಇಂದು ನಿಮ್ಮ ವ್ಯಾಪಾರ ವೇಗವಾಗಿ ನಡೆಯುತ್ತದೆ
- ದೂರದ ಸಂಬಂಧಿಕರ ಮನೆಯಲ್ಲಿ ವಿವಾಹ ಮಂಗಳ ಕಾರ್ಯದ ವಿಚಾರ ಕೇಳಿ ಸಂತೋಷವಾಗುತ್ತದೆ
- ಸಾಯಂಕಾಲ ಯಾವುದೋ ಪದಾರ್ಥ ಅಥವಾ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಚ್ಚರಿಕೆವಹಿಸಿ
- ರುದ್ರವಟುಕನನ್ನು ಆರಾಧನೆ ಮಾಡಿ
ಕಟಕ
- ತಾಯಿಯ ಅಥವಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಬಹುದು
- ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರಗಳಿಂದ ಹಾನಿಯಾಗಬಹುದು
- ದೊಡ್ಡ ಉದ್ದಿಮೆದಾರರಿಂದ ನೀವು ಕೆಲಸ ಮಾಡುವ ಸ್ಥಳಕ್ಕೆ ಉಡುಗೊರೆಗಳು ಬರಬಹುದು
- ಆಲೋಚಿಸಿದ ಕಾರ್ಯ ಮತ್ತೆ ಆರಂಭವಾಗಬಹುದು
- ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು
- ದಂಡ ಕಟ್ಟುವ ಸಂದರ್ಭ ಬರಬಹುದು
- ಪುಸ್ತಕ ವ್ಯಾಪಾರಿಗಳಿಗೆ ಅನುಕೂಲವಿದೆ
- ಸ್ಕಂದನನ್ನು ಆರಾಧನೆ ಮಾಡಿ
ಸಿಂಹ
- ಕೆಲಸ ಹುಡುಕುತ್ತಿರುವವರಿಗೆ ಈ ದಿನ ಅನುಕೂಲವಿದೆ
- ಮನೆಗೆ ದುಬಾರಿ ವಸ್ತುವನ್ನು ತರುವ ಬಗ್ಗೆ ಚಿಂತಿಸುವಿರಿ
- ಕುಟುಂಬದ ಸದಸ್ಯರ ಬೆಂಬಲ ನಿಮಗಿರುತ್ತದೆ
- ವಿದ್ಯುತ್ ಉಪಕರಣಗಳಿಂದ ಹಾನಿಯಾಗಬಹುದು ಎಚ್ಚರಿಕೆವಹಿಸಿ
- ಕಷ್ಟಪಟ್ಟು ಸಂಪಾದಿಸಿದ ಅಲ್ಪ ಸ್ವಲ್ಪ ಹಣವು ಈ ದಿನ ಖರ್ಚಾಗಿ ಹೋಗುತ್ತದೆ
- ಆರ್ಥಿಕ ಸಂಕಷ್ಟ ಎದುರಾಗುತ್ತದೆಂದು ಗೊತ್ತಿದ್ದರೂ ಹಣ ಸಂಪಾದಿಸುತ್ತೇನೆಂಬ ಧೈರ್ಯ ನಿಮ್ಮನ್ನು ಸಮಾಧಾನ ಪಡಿಸುತ್ತದೆ
- ಸಂಕಷ್ಟಹರ ಗಣಪತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಜವಾಬ್ದಾರಿಗಿಂತ ಹೆಚ್ಚಾಗಿ ಬೇರೆ ಬೇರೆ ಕೆಲಸಗಳಲ್ಲಿ ನಿಮ್ಮ ಆಸಕ್ತಿ ತೋರಿ ನಿಮಗಿರುವ ಗೌರವ ಹಾಳು ಮಾಡಿಕೊಳ್ಳುತ್ತೀರಿ
- ವಿರೋಧಿಗಳು ಸಹೋದ್ಯೋಗಿಗಳು ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾರೆ
- ಏನೇ ಆತ್ಮವಿಶ್ವಾಸವಿದ್ದರೂ ಬೇಸರವಾಗಿ ಹಿಂದಿನ ಅನುಭವಗಳನ್ನು ಜ್ಞಾಪಿಸಿಕೊಳ್ಳುತ್ತೀರಿ
- ಇಂದು ಪ್ರೇಮಿಗಳಿಗೆ ಶುಭದಿನ
- ಪ್ರಸನ್ನ ಗಣಪತಿಯನ್ನು ಸ್ಮರಿಸಿ ಶುಭವಾಗಲಿ
ತುಲಾ
- ತಂದೆಯವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು
- ನೀವು ಏನೇ ಬೆಳೆದಿದ್ದರೂ ಅವರಿಗೆ ಪ್ರತ್ಯುತ್ತರ ಕೊಡಬಾರದು
- ಆದಾಯದಲ್ಲಿ ಹೆಚ್ಚಳವಿದೆ ಮನೆಯವರ ಬೆಂಬಲವೂ ಇಂದು ಸಿಗುತ್ತದೆ
- ಹಿರಿಯ ಅಧಿಕಾರಿಗಳು ನಿಮ್ಮ ವಿಚಾರದಲ್ಲಿ ಸೌಹಾರ್ದಯುತರಾಗಿ ವರ್ತಿಸುತ್ತಾರೆ
- ಏನಾದರೂ ತಪ್ಪು ಮಾಡಿದ್ದರೆ ಆ ವಿಷಯವನ್ನು ಹೇಳಿಕೊಳ್ಳಿ ಮುಚ್ಚಿಟ್ಟರೆ ಪ್ರಯೋಜನವಿಲ್ಲ
- ಭಗವತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಇಂದು ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲಕರವಾದ ದಿನ
- ಬೇಸರವಾದ ಸ್ಥಳದಲ್ಲಿ ಇಂದು ಹೊಸ ಹುರುಪು ನಿಮ್ಮನ್ನು ಉತ್ತೇಜಿಸುತ್ತದೆ
- ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ
- ಗಂಭೀರ ಸಮಸ್ಯೆಗಳಿದ್ದರೂ ಇಂದು ನಿವಾರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣಲಿದೆ
- ನಿಮ್ಮ ಕಾರ್ಯ ಕೆಲಸಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ
- ಪ್ರತಾಪ ಆಂಜನೇಯ ಸ್ವಾಮಿಯನ್ನು ಉಪಾಸನೆ ಮಾಡಿ
ಧನುಸ್ಸು
- ಕುಟುಂಬದಲ್ಲಿ ಉತ್ತಮ ವಾತಾವರಣವಿರುತ್ತದೆ
- ಇಂದು ರಾಜಕೀಯ ವ್ಯಕ್ತಿಗಳಿಗೆ ಲಾಭ
- ಬಾಕಿ ಇರುವ ಕೆಲಸಗಳೆಲ್ಲ ಪೂರ್ಣವಾಗುತ್ತದೆ
- ಆಲಸ್ಯ ಉತ್ತಮ ಭೋಜನ ಸಮಯಕ್ಕೆ ಬೆಲೆ ಕೊಡುವುದಿಲ್ಲ ಇದರಿಂದ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
- ಕಾಲ ಒಮ್ಮೆ ಹೋದರೆ ಮತ್ತೆ ಸಿಗುವುದಿಲ್ಲ ಸಮಯಕ್ಕೆ ಬೆಲೆ ಕೊಡಿ
- ವಿಂಜಾ ಮಂತ್ರ ಶವಣ ಮಾಡಿ
ಮಕರ
- ಇಂದು ಹಣಕಾಸಿನ ತೊಂದರೆಯಾಗಬಹುದು
- ಆದಾಯವನ್ನು ನೋಡಿಕೊಂಡು ಖರ್ಚಿಗೆ ಮುಂದಾಗಬೇಕು
- ಕೆಲಸಗಳಲ್ಲಿ ಅಡ್ಡಿ ಆತಂಕಗಳು ಇರುತ್ತದೆ
- ಕೋಪ ಮತ್ತು ಆತುರದಿಂದ ಮಾಡಬೇಕಾದ ಕೆಲಸ ಕೆಡಲಿದೆ
- ಲೆಕ್ಕ ಪರಿಶೋಧಕರಿಗೆ ಇಂದು ಉತ್ತಮ ದಿನ
- ಸಿಎ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇದೆ
- ತಮ್ಮ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲೇ ಕೆಲಸದ ಸೂಚನೆ ಅವಕಾಶಗಳು ಬರುತ್ತವೆ
- ನವಗ್ರಹರನ್ನು ಪ್ರಾರ್ಥನೆ ಮಾಡಿ
ಕುಂಭ
- ಅಪರೂಪದ ಬಂಧುಗಳು ಅಥವಾ ಹಳೆಯ ಸ್ನೇಹಿತರ ಭೇಟಿಯಿಂದ ತುಂಬಾ ಸಂತೋಷವಾಗುತ್ತದೆ
- ಪರಸ್ಪರ ಕುಶಲೋಪರಿ ಮಾತನಾಡುವಾಗ ಹಲವು ವಿಚಾರಗಳು ಪ್ರಸ್ತಾಪವಾಗಿ ಆಶ್ಚರ್ಯವಾಗುತ್ತದೆ
- ಪರಿಚಿತರ ಮೂಲಕ ಹೊಸ ಸಂಬಂಧ ಮಾಡುವ ಪ್ರಯತ್ನಗಳಿಗೆ ಶುಭ
- ಕಾಲು ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಮಧುಮೇಹಿಗಳಿಗೆ ತುಂಬಾ ತೊಂದರೆಯಾಗುವ ಸಂಭವವಿದೆ
- ಅಪಸ್ಮಾರ ದಕ್ಷಿಣಾ ಮೂರ್ತಿಯನ್ನು ಆರಾಧನೆ ಮಾಡಿ
ಮೀನ
- ದಾನ ಮಾಡಬೇಕು ಅಥವಾ ಯಾರಿಗಾದರೂ ಸಹಾಯ ಮಾಡಿ
- ದಾನ ಅಥವಾ ಸಹಾಯದಿಂದ ಏನನ್ನು ಹಿಂದಿರುಗಿ ಪಡೆಯಬೇಡಿ ಮತ್ತು ಪ್ರತಿಫಲ ನಿರೀಕ್ಷಿಸಬೇಡಿ
- ಒಳ್ಳೆಯ ಕಾರ್ಯಕ್ಕೆ ಯೋಗ್ಯ ವ್ಯಕ್ತಿಗಳಿಗೆ ಅಗತ್ಯ ಇರುವವರಿಗೆ ದಾನ ಸಹಾಯ ಮಾಡಿ
- ಇಂದು ನಿಮಗೆ ಎರಡು ಪಟ್ಟು ಅನುಕೂಲವಾಗಬಹುದು
- ಮಾತಾ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ