newsfirstkannada.com

×

ದರ್ಶನ್​ ಸಂಸಾರದಲ್ಲಿ ಮೊದಲು ಹುಳಿ ಹಿಂಡಿದ್ದೇ ಆ ನಟಿ; ಸ್ಫೋಟಕ ಹೇಳಿಕೆ ನೀಡಿದ ನಿರ್ಮಾಪಕ ಓಂ ಪ್ರಕಾಶ್

Share :

Published June 23, 2024 at 5:44pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಸೇರಿ 17 ಮಂದಿ ಜೈಲಿಗೆ

    ಸಮಾಧಾನದಿಂದ ನಡೆದುಕೊಂಡಿದ್ರೆ ಇಂಥಹ ಘಟನೆ ಆಗುತ್ತಿರಲಿಲ್ಲ!

    ನಾನು ಹತ್ತು ವರ್ಷದಿಂದ ದರ್ಶನ್ ಜೊತೆಯಲ್ಲಿ‌ ಇಲ್ಲ- ನಟ ಓಂ ಪ್ರಕಾಶ್

ಬೆಂಗಳೂರು: ದರ್ಶನ್ ಅವರನ್ನ ಈ ಸ್ಥಿತಿಯಲ್ಲಿ ನೋಡಿ ತುಂಬಾ ಬೇಸರ ಆಗುತ್ತಿದೆ. ದರ್ಶನ್ ಅವರ ಪರ್ಸನಾಲಿಟಿಗೆ ಕರೆದು ಬುದ್ದಿ ಹೇಳಬಹುದಿತ್ತು. ಅಲ್ಲೇ ಪೊಲೀಸರಿಗೆ ಹೇಳಿದ್ರೆ ಕರೆದು ವಾರ್ನ್ ಮಾಡ್ತಿದ್ರು. ಆದರೆ ಈ ಥರಾ ನಡೆಯಬಾರದಿತ್ತು ಎಂದು ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು, ಈ ಬಗ್ಗೆ ಮಾತಾಡಿದ ಅವರು, ದರ್ಶನ್ ಅವರನ್ನ ಈ ಸ್ಥಿತಿಯಲ್ಲಿ ನೋಡಿದ್ದು ತುಂಬಾ ನೋವಾಗ್ತಿದೆ. ದರ್ಶನ್ ಅವರ ಪರ್ಸನಾಲಿಟಿಗೆ ಕರೆದು ಬುದ್ದಿ ಹೇಳಬಹುದಿತ್ತು. ಅಲ್ಲೇ ಪೊಲೀಸರಿಗೆ ಹೇಳಿದ್ರೆ ಕರೆದು ವಾರ್ನ್ ಮಾಡ್ತಿದ್ರು. ಆದರೆ ಈ ಥರಾ ನಡೆಯಬಾರದಿತ್ತು. ಸಮಾಧಾನದಿಂದ ನಡೆದುಕೊಂಡಿದ್ರೆ ಇಂಥಹ ಘಟನೆ ಆಗ್ತಿರಲಿಲ್ಲ. ರೇಣುಕಾಸ್ವಾಮಿ ತಪ್ಪಿಗೆ ಇದು ಶಿಕ್ಷೆಯಾಗಿರಲಿಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ದರ್ಶನ್ ವಿಜಯಲಕ್ಷ್ಮಿ ಹಾಗೂ ಮಗನಿಗೆ ಒಳ್ಳೆಯದಾಗಬೇಕು.

ನಟಿ ನಿಕಿತಾ ತುಕ್ರಾಲ್ ಬಗ್ಗೆ ನಿರ್ಮಾಪಕ ಓಂ ಪ್ರಕಾಶ್ ರಾವ್ ಹೇಳಿದ್ದೇನು?

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ತುಂಬಾ ಒಳ್ಳೆವರಾಗಿದ್ದರು. ಹಾಗೇ ಅವರಿಬ್ಬರು ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಈ ಇಬ್ಬರ ಸಂಸಾರದಲ್ಲಿ ಹುಳಿ ಹಿಂಡಬೇಡ ಅಂತ ನಾನೇ ನಿಕಿತಾ ಅವರಿಗೆ ಹೇಳಿದ್ದೇ. ನೀವು ಜಾಸ್ತಿ ಮುಂದೆ ಹೋಗುತ್ತಿದ್ದೀರಿ ಅಂತ ನಾನು ಅವತ್ತೆ ಹೇಳಿದ್ದೇ. ನಿಖಿತಾಗೆ ನಾನು ತುಂಬಾ ಸಲ ಹೇಳಿದ್ದೇ. ಅವರು ತಂಟೆಗೆ ಹೋಗ್ಬೇಡ, ಹೋಗ್ಬೇಡ ಅಂತ. ಆದರೆ ಅವರು ಕೇಳಲಿಲ್ಲ. ನಿಖಿತಾ ಕಾರಣದಿಂದ‌ ನಾನು ದೂರ ಆದೆ. ಅವಳಿಂದನೇ ನನ್ನ ದೂರ ಮಾಡ್ಕೊಂಡ್ರು. ಬೇರೆಯವರ ಮಾತು ಯಾಕೆ ಕೇಳ್ಬೇಕಿತ್ತು? ನಾನು ಹತ್ತು ವರ್ಷದಿಂದ ದರ್ಶನ್ ಜೊತೆಯಲ್ಲಿ‌ ಇಲ್ಲ. ಪುನೀತ್ ಹೋದ್ಮೇಲೆ ಅರ್ಧ ಇಂಡಸ್ಟ್ರಿ ಸತ್ತೋಯ್ತ. ಈಗ ದರ್ಶನ್ ಈ ಥರಾ ಮಾಡ್ಕೊಂಡ್ರೆ ಹೇಗೆ? ಪವಿತ್ರಾ ಗೌಡ ಯಾರು ಅಂತ ನಿಜವಾಗಲೂ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಸಂಸಾರದಲ್ಲಿ ಮೊದಲು ಹುಳಿ ಹಿಂಡಿದ್ದೇ ಆ ನಟಿ; ಸ್ಫೋಟಕ ಹೇಳಿಕೆ ನೀಡಿದ ನಿರ್ಮಾಪಕ ಓಂ ಪ್ರಕಾಶ್

https://newsfirstlive.com/wp-content/uploads/2024/06/darshan48.jpg

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಸೇರಿ 17 ಮಂದಿ ಜೈಲಿಗೆ

    ಸಮಾಧಾನದಿಂದ ನಡೆದುಕೊಂಡಿದ್ರೆ ಇಂಥಹ ಘಟನೆ ಆಗುತ್ತಿರಲಿಲ್ಲ!

    ನಾನು ಹತ್ತು ವರ್ಷದಿಂದ ದರ್ಶನ್ ಜೊತೆಯಲ್ಲಿ‌ ಇಲ್ಲ- ನಟ ಓಂ ಪ್ರಕಾಶ್

ಬೆಂಗಳೂರು: ದರ್ಶನ್ ಅವರನ್ನ ಈ ಸ್ಥಿತಿಯಲ್ಲಿ ನೋಡಿ ತುಂಬಾ ಬೇಸರ ಆಗುತ್ತಿದೆ. ದರ್ಶನ್ ಅವರ ಪರ್ಸನಾಲಿಟಿಗೆ ಕರೆದು ಬುದ್ದಿ ಹೇಳಬಹುದಿತ್ತು. ಅಲ್ಲೇ ಪೊಲೀಸರಿಗೆ ಹೇಳಿದ್ರೆ ಕರೆದು ವಾರ್ನ್ ಮಾಡ್ತಿದ್ರು. ಆದರೆ ಈ ಥರಾ ನಡೆಯಬಾರದಿತ್ತು ಎಂದು ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು, ಈ ಬಗ್ಗೆ ಮಾತಾಡಿದ ಅವರು, ದರ್ಶನ್ ಅವರನ್ನ ಈ ಸ್ಥಿತಿಯಲ್ಲಿ ನೋಡಿದ್ದು ತುಂಬಾ ನೋವಾಗ್ತಿದೆ. ದರ್ಶನ್ ಅವರ ಪರ್ಸನಾಲಿಟಿಗೆ ಕರೆದು ಬುದ್ದಿ ಹೇಳಬಹುದಿತ್ತು. ಅಲ್ಲೇ ಪೊಲೀಸರಿಗೆ ಹೇಳಿದ್ರೆ ಕರೆದು ವಾರ್ನ್ ಮಾಡ್ತಿದ್ರು. ಆದರೆ ಈ ಥರಾ ನಡೆಯಬಾರದಿತ್ತು. ಸಮಾಧಾನದಿಂದ ನಡೆದುಕೊಂಡಿದ್ರೆ ಇಂಥಹ ಘಟನೆ ಆಗ್ತಿರಲಿಲ್ಲ. ರೇಣುಕಾಸ್ವಾಮಿ ತಪ್ಪಿಗೆ ಇದು ಶಿಕ್ಷೆಯಾಗಿರಲಿಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ದರ್ಶನ್ ವಿಜಯಲಕ್ಷ್ಮಿ ಹಾಗೂ ಮಗನಿಗೆ ಒಳ್ಳೆಯದಾಗಬೇಕು.

ನಟಿ ನಿಕಿತಾ ತುಕ್ರಾಲ್ ಬಗ್ಗೆ ನಿರ್ಮಾಪಕ ಓಂ ಪ್ರಕಾಶ್ ರಾವ್ ಹೇಳಿದ್ದೇನು?

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ತುಂಬಾ ಒಳ್ಳೆವರಾಗಿದ್ದರು. ಹಾಗೇ ಅವರಿಬ್ಬರು ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಈ ಇಬ್ಬರ ಸಂಸಾರದಲ್ಲಿ ಹುಳಿ ಹಿಂಡಬೇಡ ಅಂತ ನಾನೇ ನಿಕಿತಾ ಅವರಿಗೆ ಹೇಳಿದ್ದೇ. ನೀವು ಜಾಸ್ತಿ ಮುಂದೆ ಹೋಗುತ್ತಿದ್ದೀರಿ ಅಂತ ನಾನು ಅವತ್ತೆ ಹೇಳಿದ್ದೇ. ನಿಖಿತಾಗೆ ನಾನು ತುಂಬಾ ಸಲ ಹೇಳಿದ್ದೇ. ಅವರು ತಂಟೆಗೆ ಹೋಗ್ಬೇಡ, ಹೋಗ್ಬೇಡ ಅಂತ. ಆದರೆ ಅವರು ಕೇಳಲಿಲ್ಲ. ನಿಖಿತಾ ಕಾರಣದಿಂದ‌ ನಾನು ದೂರ ಆದೆ. ಅವಳಿಂದನೇ ನನ್ನ ದೂರ ಮಾಡ್ಕೊಂಡ್ರು. ಬೇರೆಯವರ ಮಾತು ಯಾಕೆ ಕೇಳ್ಬೇಕಿತ್ತು? ನಾನು ಹತ್ತು ವರ್ಷದಿಂದ ದರ್ಶನ್ ಜೊತೆಯಲ್ಲಿ‌ ಇಲ್ಲ. ಪುನೀತ್ ಹೋದ್ಮೇಲೆ ಅರ್ಧ ಇಂಡಸ್ಟ್ರಿ ಸತ್ತೋಯ್ತ. ಈಗ ದರ್ಶನ್ ಈ ಥರಾ ಮಾಡ್ಕೊಂಡ್ರೆ ಹೇಗೆ? ಪವಿತ್ರಾ ಗೌಡ ಯಾರು ಅಂತ ನಿಜವಾಗಲೂ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More